AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರಿಯುತ್ತಿರುವ ಭಾರೀ ಮಳೆಗೆ ಭೋರ್ಗೆರೆಯುತ್ತಿದೆ ಶತಮಾನದ ಸುಂದರಿ ಗೋಕಾಕ್‌ ಫಾಲ್ಸ್‌

ಬೆಳಗಾವಿ: ರಾಜ್ಯ ಉತ್ತರ ಭಾಗದ ಬೆಳಗಾವಿ ಜಿಲ್ಲೆ ಮತ್ತು ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಹಳ್ಳಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಹೀಗಾಗಿ ಘಟಪ್ರಭಾ ನದಿಯೂ ಕೂಡಾ ತುಂಬಿ ಹರಿಯುತ್ತಿದ್ದು, ಇದರ ಪರಿಣಾಮ ಪ್ರಖ್ಯಾತ ಗೋಕಾಕ್‌ ಫಾಲ್ಸ್‌ ಮೇಲಾಗಿದೆ. ಹೌದು ಸತತ ಮಳೆ ಸುರಿಯುತ್ತಿರೋದ್ರಿಂದ ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್‌ ಫಾಲ್ಸ್‌ಗೆ ಈಗ ಎಲ್ಲಿಲ್ಲದ ಕಳೆ ಬಂದಿದೆ. ಇದುವರೆಗೆ ಸೈಲೆಂಟ್‌ ಆಗಿದ್ದ ಗೋಕಾಕ್‌ ಫಾಲ್ಸ್‌ ಈಗ ವೈಲೆಂಟ್‌ ಆಗಿದೆ. ಹರಿಯುತ್ತಿರುವ ನೀರಿನ ರಭಸಕ್ಕೆ ಭೋರ್ಗೆರೆಯುತ್ತಿದೆ. ನೀರು ಫಾಲ್ಸ್‌ನಲ್ಲಿ ದುಮುಕಿ ಬೀಳುತ್ತಿದ್ದರೆ […]

ಸುರಿಯುತ್ತಿರುವ ಭಾರೀ ಮಳೆಗೆ ಭೋರ್ಗೆರೆಯುತ್ತಿದೆ ಶತಮಾನದ ಸುಂದರಿ ಗೋಕಾಕ್‌ ಫಾಲ್ಸ್‌
Guru
Guru|

Updated on: Aug 06, 2020 | 7:12 PM

Share

ಬೆಳಗಾವಿ: ರಾಜ್ಯ ಉತ್ತರ ಭಾಗದ ಬೆಳಗಾವಿ ಜಿಲ್ಲೆ ಮತ್ತು ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಹಳ್ಳಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಹೀಗಾಗಿ ಘಟಪ್ರಭಾ ನದಿಯೂ ಕೂಡಾ ತುಂಬಿ ಹರಿಯುತ್ತಿದ್ದು, ಇದರ ಪರಿಣಾಮ ಪ್ರಖ್ಯಾತ ಗೋಕಾಕ್‌ ಫಾಲ್ಸ್‌ ಮೇಲಾಗಿದೆ. ಹೌದು ಸತತ ಮಳೆ ಸುರಿಯುತ್ತಿರೋದ್ರಿಂದ ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್‌ ಫಾಲ್ಸ್‌ಗೆ ಈಗ ಎಲ್ಲಿಲ್ಲದ ಕಳೆ ಬಂದಿದೆ. ಇದುವರೆಗೆ ಸೈಲೆಂಟ್‌ ಆಗಿದ್ದ ಗೋಕಾಕ್‌ ಫಾಲ್ಸ್‌ ಈಗ ವೈಲೆಂಟ್‌ ಆಗಿದೆ. ಹರಿಯುತ್ತಿರುವ ನೀರಿನ ರಭಸಕ್ಕೆ ಭೋರ್ಗೆರೆಯುತ್ತಿದೆ. ನೀರು ಫಾಲ್ಸ್‌ನಲ್ಲಿ ದುಮುಕಿ ಬೀಳುತ್ತಿದ್ದರೆ ನೋಡುವವರ ಎದೆ ಝಲ್‌ ಎನಿಸುವಂತಿದೆ. ಹಾಗೇನೆ ದೂರದಿಂದ ನೋಡಿದ್ರೆ ಎರಡು ಕಣ್ಣುಗಳ ಸಾಲದು. ಹಾಲಿನ ಹೊಳೆಯೇ ಹರಿಯುತ್ತಿದೆಯಾ ಎನ್ನುವಂತಿದೆ ಫಾಲ್ಸ್‌ನಿಂದ ದುಮುಕಿ ಬೀಳುತ್ತಿರುವ ನೀರು. ಈ ರೀತಿ ಫಾಲ್ಸ್‌ನಲ್ಲಿ ನೀರು ಹರಿಯುತ್ತಿರೋದು ಗೊತ್ತಾಗುತ್ತಿದ್ದಂತೆ ಜನರು ಕೂಡಾ ನೋಡಿ ಕಣ್ತುಂಬಿಕೊಳ್ಳಲು ಗೋಕಾಕ್‌ ಫಾಲ್ಸ್‌ನತ್ತ ಬರುತ್ತಿದ್ದಾರೆ. ಆದ್ರೆ ಸರ್ಕಾರ ಮಾತ್ರ ಇಲ್ಲಿ ಯಾವುದೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಶತಮಾನದ ಇತಿಹಾಸ ವಿರುವ ಹಾಗೂ ಭಾರತದ ನಯಾಗಾರ ಎಂದೇ ಖ್ಯಾತಿಯಾಗಿರುವ ಗೋಕಾಕ್‌ ಫಾಲ್ಸ್‌ನಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ರೆ ಇದು ಈಗಿನ ಮಟ್ಟಕ್ಕಿಂತ ದೊಡ್ಡ ಪ್ರಮಾಣ ಟೂರಿಸಮ್‌ ಕೇಂದ್ರವಾಗೋದ್ರಲ್ಲಿ ಅನುಮಾನವೇ ಇಲ್ಲ.

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು