AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರಿಯುತ್ತಿರುವ ಭಾರೀ ಮಳೆಗೆ ಭೋರ್ಗೆರೆಯುತ್ತಿದೆ ಶತಮಾನದ ಸುಂದರಿ ಗೋಕಾಕ್‌ ಫಾಲ್ಸ್‌

ಬೆಳಗಾವಿ: ರಾಜ್ಯ ಉತ್ತರ ಭಾಗದ ಬೆಳಗಾವಿ ಜಿಲ್ಲೆ ಮತ್ತು ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಹಳ್ಳಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಹೀಗಾಗಿ ಘಟಪ್ರಭಾ ನದಿಯೂ ಕೂಡಾ ತುಂಬಿ ಹರಿಯುತ್ತಿದ್ದು, ಇದರ ಪರಿಣಾಮ ಪ್ರಖ್ಯಾತ ಗೋಕಾಕ್‌ ಫಾಲ್ಸ್‌ ಮೇಲಾಗಿದೆ. ಹೌದು ಸತತ ಮಳೆ ಸುರಿಯುತ್ತಿರೋದ್ರಿಂದ ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್‌ ಫಾಲ್ಸ್‌ಗೆ ಈಗ ಎಲ್ಲಿಲ್ಲದ ಕಳೆ ಬಂದಿದೆ. ಇದುವರೆಗೆ ಸೈಲೆಂಟ್‌ ಆಗಿದ್ದ ಗೋಕಾಕ್‌ ಫಾಲ್ಸ್‌ ಈಗ ವೈಲೆಂಟ್‌ ಆಗಿದೆ. ಹರಿಯುತ್ತಿರುವ ನೀರಿನ ರಭಸಕ್ಕೆ ಭೋರ್ಗೆರೆಯುತ್ತಿದೆ. ನೀರು ಫಾಲ್ಸ್‌ನಲ್ಲಿ ದುಮುಕಿ ಬೀಳುತ್ತಿದ್ದರೆ […]

ಸುರಿಯುತ್ತಿರುವ ಭಾರೀ ಮಳೆಗೆ ಭೋರ್ಗೆರೆಯುತ್ತಿದೆ ಶತಮಾನದ ಸುಂದರಿ ಗೋಕಾಕ್‌ ಫಾಲ್ಸ್‌
Guru
|

Updated on: Aug 06, 2020 | 7:12 PM

Share

ಬೆಳಗಾವಿ: ರಾಜ್ಯ ಉತ್ತರ ಭಾಗದ ಬೆಳಗಾವಿ ಜಿಲ್ಲೆ ಮತ್ತು ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಹಳ್ಳಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಹೀಗಾಗಿ ಘಟಪ್ರಭಾ ನದಿಯೂ ಕೂಡಾ ತುಂಬಿ ಹರಿಯುತ್ತಿದ್ದು, ಇದರ ಪರಿಣಾಮ ಪ್ರಖ್ಯಾತ ಗೋಕಾಕ್‌ ಫಾಲ್ಸ್‌ ಮೇಲಾಗಿದೆ. ಹೌದು ಸತತ ಮಳೆ ಸುರಿಯುತ್ತಿರೋದ್ರಿಂದ ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್‌ ಫಾಲ್ಸ್‌ಗೆ ಈಗ ಎಲ್ಲಿಲ್ಲದ ಕಳೆ ಬಂದಿದೆ. ಇದುವರೆಗೆ ಸೈಲೆಂಟ್‌ ಆಗಿದ್ದ ಗೋಕಾಕ್‌ ಫಾಲ್ಸ್‌ ಈಗ ವೈಲೆಂಟ್‌ ಆಗಿದೆ. ಹರಿಯುತ್ತಿರುವ ನೀರಿನ ರಭಸಕ್ಕೆ ಭೋರ್ಗೆರೆಯುತ್ತಿದೆ. ನೀರು ಫಾಲ್ಸ್‌ನಲ್ಲಿ ದುಮುಕಿ ಬೀಳುತ್ತಿದ್ದರೆ ನೋಡುವವರ ಎದೆ ಝಲ್‌ ಎನಿಸುವಂತಿದೆ. ಹಾಗೇನೆ ದೂರದಿಂದ ನೋಡಿದ್ರೆ ಎರಡು ಕಣ್ಣುಗಳ ಸಾಲದು. ಹಾಲಿನ ಹೊಳೆಯೇ ಹರಿಯುತ್ತಿದೆಯಾ ಎನ್ನುವಂತಿದೆ ಫಾಲ್ಸ್‌ನಿಂದ ದುಮುಕಿ ಬೀಳುತ್ತಿರುವ ನೀರು. ಈ ರೀತಿ ಫಾಲ್ಸ್‌ನಲ್ಲಿ ನೀರು ಹರಿಯುತ್ತಿರೋದು ಗೊತ್ತಾಗುತ್ತಿದ್ದಂತೆ ಜನರು ಕೂಡಾ ನೋಡಿ ಕಣ್ತುಂಬಿಕೊಳ್ಳಲು ಗೋಕಾಕ್‌ ಫಾಲ್ಸ್‌ನತ್ತ ಬರುತ್ತಿದ್ದಾರೆ. ಆದ್ರೆ ಸರ್ಕಾರ ಮಾತ್ರ ಇಲ್ಲಿ ಯಾವುದೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಶತಮಾನದ ಇತಿಹಾಸ ವಿರುವ ಹಾಗೂ ಭಾರತದ ನಯಾಗಾರ ಎಂದೇ ಖ್ಯಾತಿಯಾಗಿರುವ ಗೋಕಾಕ್‌ ಫಾಲ್ಸ್‌ನಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ರೆ ಇದು ಈಗಿನ ಮಟ್ಟಕ್ಕಿಂತ ದೊಡ್ಡ ಪ್ರಮಾಣ ಟೂರಿಸಮ್‌ ಕೇಂದ್ರವಾಗೋದ್ರಲ್ಲಿ ಅನುಮಾನವೇ ಇಲ್ಲ.

ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’