AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರಿಯುತ್ತಿರುವ ಭಾರೀ ಮಳೆಗೆ ಭೋರ್ಗೆರೆಯುತ್ತಿದೆ ಶತಮಾನದ ಸುಂದರಿ ಗೋಕಾಕ್‌ ಫಾಲ್ಸ್‌

ಬೆಳಗಾವಿ: ರಾಜ್ಯ ಉತ್ತರ ಭಾಗದ ಬೆಳಗಾವಿ ಜಿಲ್ಲೆ ಮತ್ತು ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಹಳ್ಳಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಹೀಗಾಗಿ ಘಟಪ್ರಭಾ ನದಿಯೂ ಕೂಡಾ ತುಂಬಿ ಹರಿಯುತ್ತಿದ್ದು, ಇದರ ಪರಿಣಾಮ ಪ್ರಖ್ಯಾತ ಗೋಕಾಕ್‌ ಫಾಲ್ಸ್‌ ಮೇಲಾಗಿದೆ. ಹೌದು ಸತತ ಮಳೆ ಸುರಿಯುತ್ತಿರೋದ್ರಿಂದ ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್‌ ಫಾಲ್ಸ್‌ಗೆ ಈಗ ಎಲ್ಲಿಲ್ಲದ ಕಳೆ ಬಂದಿದೆ. ಇದುವರೆಗೆ ಸೈಲೆಂಟ್‌ ಆಗಿದ್ದ ಗೋಕಾಕ್‌ ಫಾಲ್ಸ್‌ ಈಗ ವೈಲೆಂಟ್‌ ಆಗಿದೆ. ಹರಿಯುತ್ತಿರುವ ನೀರಿನ ರಭಸಕ್ಕೆ ಭೋರ್ಗೆರೆಯುತ್ತಿದೆ. ನೀರು ಫಾಲ್ಸ್‌ನಲ್ಲಿ ದುಮುಕಿ ಬೀಳುತ್ತಿದ್ದರೆ […]

ಸುರಿಯುತ್ತಿರುವ ಭಾರೀ ಮಳೆಗೆ ಭೋರ್ಗೆರೆಯುತ್ತಿದೆ ಶತಮಾನದ ಸುಂದರಿ ಗೋಕಾಕ್‌ ಫಾಲ್ಸ್‌
Guru
|

Updated on: Aug 06, 2020 | 7:12 PM

Share

ಬೆಳಗಾವಿ: ರಾಜ್ಯ ಉತ್ತರ ಭಾಗದ ಬೆಳಗಾವಿ ಜಿಲ್ಲೆ ಮತ್ತು ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಹಳ್ಳಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಹೀಗಾಗಿ ಘಟಪ್ರಭಾ ನದಿಯೂ ಕೂಡಾ ತುಂಬಿ ಹರಿಯುತ್ತಿದ್ದು, ಇದರ ಪರಿಣಾಮ ಪ್ರಖ್ಯಾತ ಗೋಕಾಕ್‌ ಫಾಲ್ಸ್‌ ಮೇಲಾಗಿದೆ. ಹೌದು ಸತತ ಮಳೆ ಸುರಿಯುತ್ತಿರೋದ್ರಿಂದ ಬೆಳಗಾವಿ ಜಿಲ್ಲೆಯಲ್ಲಿರುವ ಗೋಕಾಕ್‌ ಫಾಲ್ಸ್‌ಗೆ ಈಗ ಎಲ್ಲಿಲ್ಲದ ಕಳೆ ಬಂದಿದೆ. ಇದುವರೆಗೆ ಸೈಲೆಂಟ್‌ ಆಗಿದ್ದ ಗೋಕಾಕ್‌ ಫಾಲ್ಸ್‌ ಈಗ ವೈಲೆಂಟ್‌ ಆಗಿದೆ. ಹರಿಯುತ್ತಿರುವ ನೀರಿನ ರಭಸಕ್ಕೆ ಭೋರ್ಗೆರೆಯುತ್ತಿದೆ. ನೀರು ಫಾಲ್ಸ್‌ನಲ್ಲಿ ದುಮುಕಿ ಬೀಳುತ್ತಿದ್ದರೆ ನೋಡುವವರ ಎದೆ ಝಲ್‌ ಎನಿಸುವಂತಿದೆ. ಹಾಗೇನೆ ದೂರದಿಂದ ನೋಡಿದ್ರೆ ಎರಡು ಕಣ್ಣುಗಳ ಸಾಲದು. ಹಾಲಿನ ಹೊಳೆಯೇ ಹರಿಯುತ್ತಿದೆಯಾ ಎನ್ನುವಂತಿದೆ ಫಾಲ್ಸ್‌ನಿಂದ ದುಮುಕಿ ಬೀಳುತ್ತಿರುವ ನೀರು. ಈ ರೀತಿ ಫಾಲ್ಸ್‌ನಲ್ಲಿ ನೀರು ಹರಿಯುತ್ತಿರೋದು ಗೊತ್ತಾಗುತ್ತಿದ್ದಂತೆ ಜನರು ಕೂಡಾ ನೋಡಿ ಕಣ್ತುಂಬಿಕೊಳ್ಳಲು ಗೋಕಾಕ್‌ ಫಾಲ್ಸ್‌ನತ್ತ ಬರುತ್ತಿದ್ದಾರೆ. ಆದ್ರೆ ಸರ್ಕಾರ ಮಾತ್ರ ಇಲ್ಲಿ ಯಾವುದೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಶತಮಾನದ ಇತಿಹಾಸ ವಿರುವ ಹಾಗೂ ಭಾರತದ ನಯಾಗಾರ ಎಂದೇ ಖ್ಯಾತಿಯಾಗಿರುವ ಗೋಕಾಕ್‌ ಫಾಲ್ಸ್‌ನಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ರೆ ಇದು ಈಗಿನ ಮಟ್ಟಕ್ಕಿಂತ ದೊಡ್ಡ ಪ್ರಮಾಣ ಟೂರಿಸಮ್‌ ಕೇಂದ್ರವಾಗೋದ್ರಲ್ಲಿ ಅನುಮಾನವೇ ಇಲ್ಲ.

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ