AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾಹಕ್ಕೆ ಮುಳುಗಿ ಹೋದ ಬದುಕು: ಜಿಲ್ಲಾಡಳಿತ, ಜನಪ್ರತಿನಿಧಿಗಳ ಮೇಲೆ ಮಹಿಳೆ ಆಕ್ರೋಶ

ಗದಗ: ಮಲಪ್ರಭಾ ಪ್ರತಾಪಕ್ಕೆ ಪತಿ ಕಳೆದುಕೊಂಡ ಮಹಿಳೆ ಕಣ್ಣೀರು ಹಾಕಿರುವ ಘಟನೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ. ಮನೆಯ ಆಧಾರಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ತಾಯಿ, ಮಗಳು ಮಲಪ್ರಭಾ ಪ್ರತಾಪಕ್ಕೆ ಕಣ್ಣೀರು ಸುರಿಸುವ ಕರುಣಾಜನಕ ದೃಶ್ಯ ಕಂಡು ಬಂದಿದೆ. ಮುಳುಗಿದ ಮನೆ‌, ಮಗಳ ಜೊತೆ ಗೊಡೌನ್ ನಲ್ಲಿ ಮಹಿಳೆ ಮೂರು ದಿನ ಕಳೆದಿದ್ದಾರೆ. ಪತಿ ಇಲ್ಲ ದುಡಿದು ಹಾಕ್ತಾನೆ ಅಂದ್ರೆ, ಮಗ ಕೂಡ ಇಲ್ಲ ನಾವ್ ಏನ್ ಮಾಡ್ಬೆಕ್ರೀ ಈಗ ಅಂತ ತಮ್ಮ ಈ ಪರಿಸ್ಥಿತಿ ನೆನೆದು […]

ಪ್ರವಾಹಕ್ಕೆ ಮುಳುಗಿ ಹೋದ ಬದುಕು: ಜಿಲ್ಲಾಡಳಿತ, ಜನಪ್ರತಿನಿಧಿಗಳ ಮೇಲೆ ಮಹಿಳೆ ಆಕ್ರೋಶ
ಆಯೇಷಾ ಬಾನು
|

Updated on:Aug 20, 2020 | 9:18 AM

Share

ಗದಗ: ಮಲಪ್ರಭಾ ಪ್ರತಾಪಕ್ಕೆ ಪತಿ ಕಳೆದುಕೊಂಡ ಮಹಿಳೆ ಕಣ್ಣೀರು ಹಾಕಿರುವ ಘಟನೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.

ಮನೆಯ ಆಧಾರಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ತಾಯಿ, ಮಗಳು ಮಲಪ್ರಭಾ ಪ್ರತಾಪಕ್ಕೆ ಕಣ್ಣೀರು ಸುರಿಸುವ ಕರುಣಾಜನಕ ದೃಶ್ಯ ಕಂಡು ಬಂದಿದೆ. ಮುಳುಗಿದ ಮನೆ‌, ಮಗಳ ಜೊತೆ ಗೊಡೌನ್ ನಲ್ಲಿ ಮಹಿಳೆ ಮೂರು ದಿನ ಕಳೆದಿದ್ದಾರೆ. ಪತಿ ಇಲ್ಲ ದುಡಿದು ಹಾಕ್ತಾನೆ ಅಂದ್ರೆ, ಮಗ ಕೂಡ ಇಲ್ಲ ನಾವ್ ಏನ್ ಮಾಡ್ಬೆಕ್ರೀ ಈಗ ಅಂತ ತಮ್ಮ ಈ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ.

ತವರು ಮನೆಯವರು ಕರೆದ್ರೂ ಹೋಗುವ ಸ್ಥಿತಿಯಲ್ಲಿ ಇಲ್ಲ. ನಮಗೂ ತಾಯಿ ಇಲ್ಲ. ತಂದೆ ಇಲ್ಲ ಎಲ್ಲಿ ಹೋಗಬೇಕ್ರಿ. ಪದೇ ಪದೇ ಪ್ರವಾಹಕ್ಕೆ ತುತ್ತಾಗಿ ತವರು ಮನೆಗೆ ಹೋದ್ರೆ ಜನ್ರು ಏನಂತಾರೇ. ಇಲ್ಲೇ ಯಾರಿಗಾದ್ರೂ ಕೈ ಕಾಲು ಹಿಡಿದು ಜೀವನ ಮಾಡ್ತೀವಿ. ಪತಿ ಇದ್ರೆ ಚೆನ್ನಾಗಿ ನೋಡುಕೊಳ್ಳುತ್ತಿದ್ರು.

ಆದರೆ ಮೂರು ವರ್ಷದ ಹಿಂದೆ ತೀರಿಕೊಂಡಿದ್ದಾರೆ. ನಮಗೆ ಊಟ ಬೇಡ, ಪರಿಹಾರ ಬೇಡ. ನಮಗೆ ಬೇಕಿರೋದು ಶಾಶ್ವತ ಪರಿಹಾರ. ಪ್ರವಾಹದಲ್ಲಿ ಮನೆ ಮುಳುಗಿದೆ ಈಗ‌ ಮಗಳ ಜೊತೆ ಎಲ್ಲೋ ಬದುಕುವಂತಾಗಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಏನ್ ಮಾಡ್ತಿದ್ದಾರೆ. ಬಡವರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 9:16 am, Thu, 20 August 20

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್