AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಜೀವನವನ್ನು ಉತ್ತಮವಾಗಿ ಪರಿವರ್ತಿಸಿಕೊಳ್ಳಲು 4 ಜಪಾನೀಸ್ ತಂತ್ರಗಳು ಇಲ್ಲಿವೆ

ಜಪಾನಿನ ಜನರು ತಂತ್ರಜ್ಞಾನ, ಪ್ರಗತಿಗಳು ಮತ್ತು ತಮ್ಮ ಜೀವನ ವಿಧಾನದಿಂದ ಬಹಳ ಹೆಸರುವಾಸಿಯಾಗಿದ್ದಾರೆ. ಜಪಾನೀಸ್ ಸಂಸ್ಕೃತಿಯು ಅವರ ಜೀವನಶೈಲಿ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಪರಿಣಾಮಕಾರಿ ಮಾನದಂಡವಾಗಿದೆ. ಅಂತಹ 4 ಜಪಾನೀ ತಂತ್ರಗಳು ಇಲ್ಲಿವೆ.

ನಿಮ್ಮ ಜೀವನವನ್ನು ಉತ್ತಮವಾಗಿ ಪರಿವರ್ತಿಸಿಕೊಳ್ಳಲು 4 ಜಪಾನೀಸ್ ತಂತ್ರಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Oct 11, 2023 | 4:00 PM

Share

ನೀವು ಜಪಾನೀಸ್ ಸಂಸ್ಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಸೌಂದರ್ಯದ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹಾಗೇ, ತಮ್ಮ ಸಂಪ್ರದಾಯಗಳಿಗೆ ಗೌರವ ನೀಡುತ್ತಾರೆ. ಪಾರಂಪರಿಕವಾಗಿ ಬಂದ ಸಂಪ್ರದಾಯಗಳನ್ನು ತಮ್ಮ ಜೀವನ ಮತ್ತು ಸೌಂದರ್ಯದಲ್ಲಿ ಅಳವಡಿಸಿಕೊಳ್ಳುತ್ತಾರೆ. ಜಪಾನಿನ ಜನರು ತಂತ್ರಜ್ಞಾನ, ಪ್ರಗತಿಗಳು ಮತ್ತು ತಮ್ಮ ಜೀವನ ವಿಧಾನದಿಂದ ಬಹಳ ಹೆಸರುವಾಸಿಯಾಗಿದ್ದಾರೆ. ಕೈಜೆನ್‌ನಿಂದ ಇಕಿಗೈವರೆಗೆ ಜಪಾನೀಸ್ ಸಂಸ್ಕೃತಿಯು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇವು ಅವರ ಜೀವನಶೈಲಿ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಪರಿಣಾಮಕಾರಿ ಮಾನದಂಡವಾಗಿದೆ. ಅಂತಹ 4 ಜಪಾನೀ ತಂತ್ರಗಳು ಇಲ್ಲಿವೆ. ಇವುಗಳನ್ನು ಅಳವಡಿಸಿಕೊಂಡರೆ ನಿಮ್ಮ ಜೀವನ ಖಂಡಿತವಾಗಿ ಬದಲಾಗುತ್ತದೆ.

ಜೀವನವನ್ನು ಪರಿವರ್ತಿಸಲು 4 ಜಪಾನೀಸ್ ತಂತ್ರಗಳು ಇಲ್ಲಿವೆ:

1. ಜಪಾನೀಸ್ ವಾಟರ್ ಥೆರಪಿ:

ನಿಮಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇದ್ದರೆ ಈ ಜಪಾನೀಸ್ ವಾಟರ್ ಥೆರಪಿ ಬಗ್ಗೆ ತಿಳಿದುಕೊಳ್ಳಲೇಬೇಕು. ನಿಮ್ಮ ರೂಮಿನ ತಾಪಮಾನದಲ್ಲಿರುವ (ಜಾಸ್ತಿ ಬಿಸಿಯೂ ಅಲ್ಲ, ತಣ್ಣಗೂ ಅಲ್ಲ) ನೀರನ್ನು ದಿನವೂ ಬೆಳಗ್ಗೆ ಎದ್ದ ಕೂಡಲೆ ನಾಲ್ಕೈದು ಗ್ಲಾಸ್ ಕುಡಿಯುವ ಮೂಲಕ ಆರಂಭಿಸುವುದು ಜಪಾನೀಸ್ ವಾಟರ್ ಥೆರಪಿ. ಇದು ನಿಮ್ಮ ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ, ಜೀರ್ಣಕಾರಿ ಕಾರ್ಯಗಳನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಬೆಳಗ್ಗೆ ಎದ್ದ ನಂತರ ಮತ್ತು ನಿಮ್ಮ ಹಲ್ಲುಗಳನ್ನು ಹಲ್ಲುಜ್ಜುವ ಮೊದಲು ಖಾಲಿ ಹೊಟ್ಟೆಯಲ್ಲಿ 4-5 ಗ್ಲಾಸ್ ನಿಮ್ಮ ರೂಮಿನಲ್ಲಿಟ್ಟ ನೀರನ್ನು ಕುಡಿಯಬೇಕು. ನಂತರ 45 ನಿಮಿಷ ಬಿಟ್ಟು ಉಪಾಹಾರ ಬಿಟ್ಟು ಸೇವಿಸಬೇಕು. ಒಮ್ಮೆ ತಿಂಡಿ ತಿಂದ ಬಳಿಕ ಬೇರೆ ಯಾವುದನ್ನಾದರೂ ತಿನ್ನುವ ಅಥವಾ ಕುಡಿಯುವ ಮೊದಲು ಕನಿಷ್ಠ 2 ಗಂಟೆಗಳ ಕಾಲ ಅಂತರ ನೀಡಿ.

ಇದನ್ನೂ ಓದಿ: ಪಾಲಕ್ ಸೊಪ್ಪನ್ನು ಸೂಪರ್ ಫುಡ್ ಎಂದು ಕರೆಯೋದೇಕೆ?

2. ಕಾಕೀಬೋ:

ಜಪಾನೀ ಪದ Kakeibo ನಿಮ್ಮ ಮನೆಯ ಹಣಕಾಸು ವ್ಯವಹಾರವನ್ನು ನಿಭಾಯಿಸುವ ರೀತಿಯನ್ನು ತಿಳಿಸುತ್ತದೆ. ಇದು ನಿಮ್ಮ ಖರ್ಚು ಮತ್ತು ಉಳಿತಾಯವನ್ನು ಉತ್ತೇಜಿಸಲು ನಿಮಗೆ ಅವಕಾಶ ನೀಡುವ ಬಜೆಟ್ ವಿಧಾನವಾಗಿದೆ. ಈ ತಂತ್ರವು ಬಜೆಟ್ ಜರ್ನಲ್ ಆಗಿದ್ದು, ಉಳಿತಾಯ ಮತ್ತು ಖರ್ಚು ಮಾಡುವ ಗುರಿಗಳನ್ನು ಬುದ್ಧಿವಂತಿಕೆಯಿಂದ ಹೊಂದಿಸಲು ಬಳಸಲಾಗುತ್ತದೆ.

3. ಕೈಜೆನ್:

ಕೈಜೆನ್ ಎಂಬುದು ಜಪಾನೀಸ್ ಪರಿಕಲ್ಪನೆಯಾಗಿದ್ದು ಅದು ನಿಮ್ಮ ಸುತ್ತಲಿನ ಅಭಿವೃದ್ಧಿ ಮತ್ತು ಸಾಧಾರಣ ಹೊಂದಾಣಿಕೆಗಳನ್ನು ಒತ್ತಿಹೇಳುತ್ತದೆ. ಈ ಕಲ್ಪನೆಯು ವಿವಿಧ ಪರಿಕಲ್ಪನೆಗಳ ಮೇಲೆ ಕೇಂದ್ರೀಕರಿಸುತ್ತದೆ. ಇನ್ವೆಸ್ಟೋಪೀಡಿಯಾದ ಪ್ರಕಾರ, ಕೈಜೆನ್‌ನ ಕಲ್ಪನೆಯು ಕೆಲಸದ ಸ್ಥಳದಲ್ಲಿ ಉತ್ಪಾದಕತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಮೂಲಕ ಟೀಮ್‌ವರ್ಕ್‌ನ ಪ್ರಜ್ಞೆಯನ್ನು ಉತ್ತೇಜಿಸುತ್ತದೆ. ಕೆಲಸದಲ್ಲಿ ಉದ್ಯೋಗಿ ಯಾವ ರೀತಿ ಭಾಗವಹಿಸಬೇಕೆಂಬುದನ್ನು ತಿಳಿಸುತ್ತದೆ.

ಇದನ್ನೂ ಓದಿ: ಭಾರತದಲ್ಲಿ 10 ಕೋಟಿ ಜನರಿಗೆ ನಿದ್ರಾಹೀನತೆ ಸಮಸ್ಯೆ; ನಿಮಗೂ ಈ ಲಕ್ಷಣಗಳಿವೆಯೇ?

4. ಇಕಿಗೈ:

ಈ ತಂತ್ರವು ಪ್ರಸಿದ್ಧ ಜಪಾನೀ ಪದವಾಗಿದ್ದು, ಇದರ ಅರ್ಥ ‘ಜೀವನದ ಉದ್ದೇಶ’ ಎಂಬುದಾಗಿದೆ. ನಿಮ್ಮ ಸಾಮರ್ಥ್ಯಗಳು, ಹವ್ಯಾಸಗಳು ಮತ್ತು ಉದ್ಯೋಗದ ಕ್ಷೇತ್ರದಲ್ಲಿ ನಿಮ್ಮ ವೈಯಕ್ತಿಕ ಜೀವನದ ಉದ್ದೇಶವನ್ನು ಕಂಡುಹಿಡಿಯುವುದನ್ನು ಇದು ಸೂಚಿಸುತ್ತದೆ. ನೀವು ಏನು ಪ್ರೀತಿಸುತ್ತೀರಿ, ನೀವು ಯಾವುದರಲ್ಲಿ ಉತ್ತಮರು ಎಂಬುದನ್ನು ಇದು ತಿಳಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಅಹಮದಾಬಾದ್‌ನಲ್ಲೂ ಆರ್‌ಸಿಬಿ ಅಲೆ!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ