AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಮಿಯ ತಾಪಮಾನ ಏರುತ್ತಿದ್ದಂತೆ ಜೀವ ಪಡೆಯುತ್ತಿವೆ 50,000 ವರ್ಷದ ಹಿಂದಿನ ಜೋಂಬಿ ವೈರಸ್

ಹವಾಮಾನ ಬದಲಾವಣೆ ಮನುಷ್ಯನ ಪಾಲಿಗೆ ಅತಿದೊಡ್ಡ ಆತಂಕವನ್ನು ತಂದಿಟ್ಟಿದೆ. ತಾಪಮಾನ ಜಾಸ್ತಿಯಾಗುತ್ತಿದ್ದಂತೆ ಹಿಮ ಕರಗಲಾರಂಭಿಸುತ್ತದೆ. ಆಗ ಹಿಮದಿಂದ ಹೆಪ್ಪುಗಟ್ಟಿದ್ದ ವೈರಸ್​ಗಳಿಗೆ ಮತ್ತೆ ಜೀವ ಬರುತ್ತದೆ. ಹೀಗಾಗಿ, ಭೂಮಿಯ ತಾಪ ಹೆಚ್ಚಾಗುತ್ತಿರುವುದು ಜೀವ ಸಂಕುಲಕ್ಕೆ ಆತಂಕ ಸೃಷ್ಟಿಸಿದೆ.

ಭೂಮಿಯ ತಾಪಮಾನ ಏರುತ್ತಿದ್ದಂತೆ ಜೀವ ಪಡೆಯುತ್ತಿವೆ 50,000 ವರ್ಷದ ಹಿಂದಿನ ಜೋಂಬಿ ವೈರಸ್
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 11, 2023 | 2:10 PM

ಕೊರೊನಾ ವೈರಸ್ ಉಂಟುಮಾಡಿದ ಸಾವು, ನೋವುಗಳಿಂದ ಜಗತ್ತು ಇನ್ನೂ ಚೇತರಿಸಿಕೊಂಡಿಲ್ಲ. ಇದರ ನಡುವೆ ಇನ್ನೊಂದು ಕೊವಿಡ್ ರೀತಿಯದ್ದೇ ಮಾರಣಾಂತಿಕ ವೈರಸ್ ವಿಶ್ವವನ್ನು ಪ್ರವೇಶಿಸುವ ಆತಂಕ ಎದುರಾಗಿದೆ. ರಷ್ಯಾದ ಕೊಲಿಮಾ ಹಿಮನದಿಯ ದಡದಲ್ಲಿ ಸುಮಾರು 50,000 ವರ್ಷಗಳಿಂದ ಹೂತುಹೋಗಿದ್ದ ವೈರಸ್​ಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದಂತೆ ಹಿಮನದಿ ಕರಗಿ, ಈ ವೈರಸ್​ಗಳು ಮರುಜೀವ ಪಡೆಯಲಾರಂಭಿಸುತ್ತವೆ. ಇವು ಕೊವಿಡ್​ಗಿಂತಲೂ ಭೀಕರವಾಗಿರುತ್ತವೆ ಎನ್ನಲಾಗಿದೆ. ಈ ವೈರಸ್​ಗಳಿಗೆ ಜೋಂಬಿ ವೈರಸ್ ಎಂದು ಹೆಸರಿಡಲಾಗಿದೆ.

ಹೀಗಾಗಿ, ಹವಾಮಾನ ಬದಲಾವಣೆ ಮನುಷ್ಯನ ಪಾಲಿಗೆ ಅತಿದೊಡ್ಡ ಆತಂಕವನ್ನು ತಂದಿಟ್ಟಿದೆ. ತಾಪಮಾನ ಜಾಸ್ತಿಯಾಗುತ್ತಿದ್ದಂತೆ ಹಿಮ ಕರಗಲಾರಂಭಿಸುತ್ತದೆ. ಆಗ ಹಿಮದಿಂದ ಹೆಪ್ಪುಗಟ್ಟಿದ್ದ ವೈರಸ್​ಗಳಿಗೆ ಮತ್ತೆ ಜೀವ ಬರುತ್ತದೆ. ಸೈಬೀರಿಯಾದ 73 ವರ್ಷದ ಕ್ಲಾವೆರಿ, ಹಿಮದ ಪದರಗಳ ಆಳದಲ್ಲಿ ಕಂಡುಬರುವ ಸುಮಾರು 50,000 ವರ್ಷಗಳಷ್ಟು ಹಳೆಯದಾದ ದೈತ್ಯ ವೈರಸ್‌ಗಳನ್ನು ಅಧ್ಯಯನ ಮಾಡಲು 10 ವರ್ಷಗಳಿಗೂ ಹೆಚ್ಚು ಕಾಲ ಕಾಲ ಕಳೆದಿದ್ದಾರೆ. ಭೂಮಿ ಬೆಚ್ಚಗಾಗುತ್ತಿದ್ದಂತೆ ಹೊಸ ಸೋಂಕು ಭೂಮಿಗೆ ಅಪ್ಪಳಿಸುವುದು ಖಚಿತವಾಗಿದೆ.

ಇದನ್ನೂ ಓದಿ: ಒಡಿಶಾದಲ್ಲಿ ಹೊಸ ವೈರಸ್​​​​​​​​​ ‘ಸ್ಕ್ರಬ್ ಟೈಫಸ್’ ಪ್ರಕರಣ 200ಕ್ಕೆ ಏರಿಕೆ; ಬೆಂಗಳೂರಿನಲ್ಲೂ ಸೋಂಕಿನ ಭೀತಿ

ಪುರಾತನವಾದ ಹಿಮದ ಪದರಗಳು ಕರಗಿಹೋಗುತ್ತಿದ್ದಂತೆ ಜೋಂಬಿ ವೈರಸ್​ಗಳು ಮೇಲಕ್ಕೇಳುವ ಸಾಧ್ಯತೆಗಳು ಹೆಚ್ಚಾಗಿವೆ. ವಿಜ್ಞಾನಿಗಳು ಈ ಜೋಂಬಿ ವೈರಸ್ 2030ರ ಹೊತ್ತಿಗೆ ಬೇಸಿಗೆಯಲ್ಲಿ ಮಂಜುಗಡ್ಡೆಯಿಂದ ಹೊರಬರಬಹುದು ಎಂದು ಊಹಿಸುತ್ತಿದ್ದಾರೆ. ಪ್ರದೇಶದ ಪರ್ಮಾಫ್ರಾಸ್ಟ್ ಕರಗಿದಂತೆ ಬಿಸಿ ವಾತಾವರಣವು ಮೀಥೇನ್ ನಂತಹ ಅನಿಲಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ.

ಈಗಾಗಲೇ ಕಳೆದ ವರ್ಷ ರಷ್ಯಾ, ಜರ್ಮನಿ, ಫ್ರಾನ್ಸ್ ದೇಶಗಳ ಸಂಶೋಧಕರು ಜೋಂಬಿ ವೈರಸ್‌ಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಈ ವೈರಸ್​ಗಳು ಮನುಷ್ಯ, ಪ್ರಾಣಿಗಳು, ಸಸ್ಯಗಳ ಮೇಲೂ ಅಪಾಯಕಾರಿ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.

2016ರ ಬೇಸಿಗೆಯಲ್ಲಿ ಸೈಬೀರಿಯಾದಲ್ಲಿ ಶಾಖದ ಅಲೆಯು ಆಂಥ್ರಾಕ್ಸ್ ಬೀಜಕಗಳನ್ನು ಸಕ್ರಿಯಗೊಳಿಸಿತ್ತು. ಇದು ಡಜನ್​ಗಟ್ಟಲೆ ಸೋಂಕುಗಳಿಗೆ ಕಾರಣವಾಯಿತು. ಇದರಿಂದ ಮಕ್ಕಳು ಮತ್ತು ಸಾವಿರಾರು ಹಿಮಸಾರಂಗಗಳು ಸಾವನ್ನಪ್ಪಿದವು. ಈ ವರ್ಷದ ಜುಲೈನಲ್ಲಿ ವಿಜ್ಞಾನಿಗಳ ತಂಡವು ಕ್ರಿಪ್ಟೋಬಯೋಸಿಸ್ ಎಂದು ಕರೆಯಲ್ಪಡುವ ನಿಷ್ಕ್ರಿಯ ಚಯಾಪಚಯ ಸ್ಥಿತಿಯಲ್ಲಿ ಬಹುಕೋಶೀಯ ಜೀವಿಗಳು ಸಹ ಪರ್ಮಾಫ್ರಾಸ್ಟ್ ಪರಿಸ್ಥಿತಿಗಳನ್ನು ಬದುಕಬಲ್ಲವು ಎಂದು ತೋರಿಸುವ ಸಂಶೋಧನೆಗಳನ್ನು ಪ್ರಕಟಿಸಿತು.

ಇದನ್ನೂ ಓದಿ: Nipah Virus: ನಿಫಾ ವೈರಸ್ ಮಕ್ಕಳನ್ನೇ ಹೆಚ್ಚು ಕಾಡುವುದೇಕೆ?

ರಷ್ಯಾದ ಪರ್ಮಾಫ್ರಾಸ್ಟ್ ಒಂದು ಕಾಲದಲ್ಲಿ ಪ್ರಾಣಿಗಳ ಜೀವನದಿಂದ ತುಂಬಿರುವ ಮಣ್ಣು, ಸಾವಯವ ಪದಾರ್ಥಗಳನ್ನು ಸಂರಕ್ಷಿಸಲು ಪರಿಪೂರ್ಣ ಪರಿಸ್ಥಿತಿಗಳನ್ನು ಒದಗಿಸುತ್ತದೆ. ಇದು ನೈಸರ್ಗಿಕ, ಗಾಢವಾದ, ಆಮ್ಲಜನಕದ ರಹಿತ ಮತ್ತು ಕಡಿಮೆ ರಾಸಾಯನಿಕ ಚಟುವಟಿಕೆಗೆ ಯೋಗ್ಯವಾಗಿದೆ. ಪರ್ಮಾಫ್ರಾಸ್ಟ್ ರಷ್ಯಾದ ಪ್ರದೇಶದ ಮೂರನೇ ಎರಡರಷ್ಟು ಭಾಗವನ್ನು ಆವರಿಸುತ್ತದೆ. 400,000 ವರ್ಷಗಳವರೆಗೆ ಸೂಕ್ಷ್ಮಜೀವಿಗಳಿಗೆ ಆಧಾರವಾಗಿರುವ ಪರ್ಮಾಫ್ರಾಸ್ಟ್ ಪದರಗಳು ಬಹುಮಟ್ಟಿಗೆ ಸ್ಥಿರವಾಗಿವೆ.

ಸೈಬೀರಿಯಾದ ಮೇಲೆ ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು ರಷ್ಯಾದ ಆರ್ಥಿಕತೆಗೆ ಅಪಾಯಗಳು ಮತ್ತು ಪ್ರತಿಫಲಗಳನ್ನು ಉಂಟುಮಾಡುತ್ತವೆ. ಥಾವಿಂಗ್ ಪರ್ಮಾಫ್ರಾಸ್ಟ್ ಸುಮಾರು 250 ಶತಕೋಟಿ ರೂ. ಮೌಲ್ಯದ ಮೂಲಸೌಕರ್ಯವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಅಂದಾಜಿಸಲಾಗಿದೆ.

ರಷ್ಯಾದ ಸೈಬೀರಿಯನ್ ಪ್ರದೇಶದಲ್ಲಿ ಪರ್ಮಾಫ್ರಾಸ್ಟ್‌ನಿಂದ 13 ಹೊಸ ಸೋಂಕುಕಾರಕ ವೈರಸ್​ಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಜೋಂಬಿ ವೈರಸ್‌ಗಳು ಎಂದು ಹೆಸರಿಸಲಾಗಿರುವ ಇವು ಸುಮಾರು 50 ಸಾವಿರ ವರ್ಷಗಳ ಕಾಲ ಹೆಪ್ಪುಗಟ್ಟಿದ ನೆಲದಲ್ಲಿ ಸಿಕ್ಕಿಹಾಕಿಕೊಂಡಿದ್ದರೂ ಇನ್ನೂ ತಮ್ಮ ಶಕ್ತಿಯನ್ನು ಮತ್ತು ರೋಗ ಹರಡುವ ಸಾಮರ್ಥ್ಯವನ್ನು ಕಳೆದುಕೊಂಡಿಲ್ಲ ಎನ್ನಲಾಗಿದೆ.

ಸೈಬೀರಿಯಾದಲ್ಲಿ 2013ರಲ್ಲಿ ವಿಜ್ಞಾನಿಗಳ ತಂಡ ಗುರುತಿಸಿದ್ದ 30,000 ವರ್ಷಗಳ ಹಿಂದಿನ ವೈರಸ್‌ನ ದಾಖಲೆಯನ್ನು ಈ ಜೋಂಬಿ ವೈರಸ್ ಮುರಿದಿದೆ. ಈ ವೈರಸ್ ಅಧ್ಯಯನದಲ್ಲಿ ವಿಜ್ಞಾನಿಗಳ ತಂಡ ಪತ್ತೆಹಚ್ಚಿದ 13 ವೈರಸ್‌ಗಳಲ್ಲಿ ಒಂದಾಗಿದೆ. ಪ್ರತಿಯೊಂದೂ ತನ್ನದೇ ಆದ ಜೀನೋಮ್ ಅನ್ನು ಹೊಂದಿದೆ. ಬೇರೆ ವೈರಸ್​ಗಳಿಗಿಂತ ಜೋಂಬಿ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿವೆ ಎನ್ನಲಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್