ತನ್ನ ಗಲ್​ಫ್ರೆಂಡ್​ಗೆ ಖರ್ಚಿಲ್ಲದೇ ನೆಕ್ಲೇಸ್​​​​​ ಗಿಫ್ಟ್ ಕೊಟ್ಟ ಹುಡುಗ, ಇಲ್ಲಿದೆ ನೋಡಿ ಫೋಟೋ

ನಿಮ್ಮ ಸಂಗಾತಿಯನ್ನು ಖುಷಿಯಿಂದಿರಿಸಲು ಬರೀ ದುಡ್ಡು, ದುಬಾರಿ ಗಿಫ್ಟ್​​ಗಳು ಮಾತ್ರ ಮುಖ್ಯ ಆಗಲ್ಲ. ಬದಲಾಗಿ ನಿಮ್ಮ ಕ್ರಿಯೇಟಿವ್​​ ಯೋಚನೆಗಳ ಮೂಲಕ ನಿಮ್ಮವರನ್ನು ಖುಷಿಯಾಗಿರಿಸಬಹುದು.

ತನ್ನ ಗಲ್​ಫ್ರೆಂಡ್​ಗೆ ಖರ್ಚಿಲ್ಲದೇ ನೆಕ್ಲೇಸ್​​​​​ ಗಿಫ್ಟ್ ಕೊಟ್ಟ ಹುಡುಗ, ಇಲ್ಲಿದೆ ನೋಡಿ ಫೋಟೋ
ಬೆಳಕಿನ ಪ್ರತಿಬಿಂಬದಲ್ಲಿ ಕಾಣುವ ನೆಕ್ಲೇಸ್ Image Credit source: thestar.com
Follow us
|

Updated on:Mar 02, 2023 | 11:15 AM

ಸಂಗಾತಿಗೆ ಡೈಮಂಡ್​ ನೆಕ್ಲೇಸ್ ಗಿಫ್ಟ್​ ಕೊಡಬೇಕು ಎಂದು ಸಾಕಷ್ಟು ಮಂದಿಗೆ ಕನಸಿರುತ್ತದೆ. ಅದರೆ ಆ ಕನಸು ಸಕಾರಗೊಳ್ಳಲು ಅಷ್ಟೊಂದು ದುಡ್ಡು ಇಲ್ಲದಿರುವುದರಿಂದ, ಸಾಕಷ್ಟು ಕನಸುಗಳು ಕನಸಾಗಿಯೇ ಉಳಿಯುತ್ತದೆ. ಆದರೆ ಇಲ್ಲೊಬ್ಬ ಒಂದು ರೂಪಾಯಿಯ ಖರ್ಚಿಲ್ಲದೇ ತನ್ನ ಸಂಗಾತಿಗೆ ಆಕರ್ಷಕ ಹೊಳೆಯುವ ನೆಕ್ಲೇಸ್ ಒಂದನ್ನು ಗಿಫ್ಟ್​​ ಮಾಡಿದ್ದಾನೆ. ಅರೇ…. ಇದು ಹೇಗಪ್ಪ ಅಂತಾ ಅನ್ಕೊಂತ್ತಿದ್ದೀರಾ ಈ ಸ್ಟೋರಿ ಓದಿ.

ನಿಮ್ಮ ಸಂಗಾತಿಯನ್ನು ಖುಷಿಯಿಂದಿರಿಸಲು ಬರೀ ದುಡ್ಡು, ದುಬಾರಿ ಗಿಫ್ಟ್​​ಗಳು ಮಾತ್ರ ಮುಖ್ಯ ಆಗಲ್ಲ. ಬದಲಾಗಿ ನಿಮ್ಮ ಕ್ರಿಯೇಟಿವ್​​ ಯೋಚನೆಗಳ ಮೂಲಕ ನಿಮ್ಮವರನ್ನು ಖುಷಿಯಾಗಿರಿಸಬಹುದು. ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಜಾಂಗ್ ಎಂಬಾತ ತನ್ನ ಗೆಳತಿ ಬೆಳಕಿನ ಮೂಲಕ ಪ್ರತಿಬಿಂಬದಲ್ಲಿ ಕಾಣುವ ಸುಂದರ ವಿನ್ಯಾಸದ ನೆಕ್ಲೇಸ್ ಗಿಫ್ಟ್​​ ಮಾಡಿದ್ದು, ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಟ್ಟಿಗೆ ವೈರಲ್​ ಆಗಿದೆ. ತನ್ನ ಸಂಗಾತಿಗೆ ಒಂದು ಪೆಟ್ಟಿಗೆಯಲ್ಲಿ ಬಿಳಿ ಕಾಗದದ ತುಂಡನ್ನು ಇಟ್ಟು ಉಡುಗೊರೆಯಾಗಿ ನೀಡಿದ್ದಾನೆ. ಇದಾದ ಬಳಿಕ ಆಕೆಯನ್ನು ಹೊರಗಡೆ ಸೂರ್ಯನ ಬೆಳಕಿಗೆ ಕರೆದುಕೊಂಡು ಹೋಗಿ ತಾನು ಕ್ರಿಯಾತ್ಮಕವಾಗಿ ವಿನ್ಯಾಸಗಗೊಳಿಸಿದ ಬೆಳಕಿನ ಹಾರವನ್ನು ಬಿಳಿ ಕಾಗದದ ಪ್ರತಿಬಿಂಬದ ಮೂಲಕ ಆಕೆಗೆ ತೊಡಿಸಿದ್ದಾನೆ.

A Chinese man who used stencilling and light to make a necklace for his girlfriend

ಇದನ್ನೂ ಓದಿ: ತನಗೆ ಕಿಡ್ನಿ ದಾನ ಮಾಡುತ್ತಿರುವವರನ್ನು ಕಂಡು ಕಣ್ಣೀರಿಟ್ಟ ವ್ಯಕ್ತಿ, ಅಷ್ಟಕ್ಕೂ ಕಿಡ್ನಿ ದಾನ ಮಾಡಿದ್ದು ಯಾರು ಗೊತ್ತಾ?

ಈ ಸುಂದರ ಬೆಳಕಿನ ಪ್ರತಿಬಿಂಬಕದ ಹಾರವನ್ನು ಬಿಳಿ ಹಾಳೆಯ ಮೇಲೆ ವಿನ್ಯಾಸಗೊಳಿಸಲು ಎರಡು ದಿನಗಳನ್ನು ತೆಗೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಡೌಯಿನ್‌ನಲ್ಲಿ ಜಾಂಗ್ ಅಪ್‌ಲೋಡ್ ಮಾಡಿದ ನೆಕ್ಲೇಸ್‌ನ ವೀಡಿಯೊವನ್ನು 62 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ. ಜೊತೆಗೆ 40,000 ಕ್ಕಿಂತಲೂ ಹೆಚ್ಚಿನ ಕಾಮೆಂಟ್​​ಗಳನ್ನು ಕಾಣಬಹುದು.ಈತ ಕಳೆದ ವರ್ಷ ತನ್ನ ಸ್ನೇಹಿತೆಗಾಗಿ ಕಾಗದದ ಕೊರೆಯಚ್ಚು ಬಳಸಿ ಹಗುರವಾದ “ಡೈಮಂಡ್ ರಿಂಗ್” ನೀಡಿದ್ದರು ಎಂದು ತಿಳಿದುಬಂದಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:09 am, Thu, 2 March 23

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು