Relationship Tips: ನಿಮ್ಮ ರಿಲೇಷನ್​​​ಶಿಪ್​​ನಲ್ಲಿ ಇಂತಹ ಅಭ್ಯಾಸಗಳು ಕಂಡುಬಂದರೆ ತಕ್ಷಣ ಸಂಬಂಧಕ್ಕೆ ಬ್ರೇಕ್ ಹಾಕಿ

ನೀವು ಡೇಟಿಂಗ್​ ಮಾಡುವ ವ್ಯಕ್ತಿಯಲ್ಲಿ ಈ ಕೆಳಗಿನ ಅಭ್ಯಾಸಗಳು ಕಂಡುಬಂದರೆ ಸಂಬಂಧವನ್ನು ಯಾವುದೇ ಕಾರಣಕ್ಕೂ ಮುಂದುವರಿಸಲು ಹೋಗದಿರಿ. ನಿಮ್ಮ ಸಂಬಂಧವನ್ನು ನೀವು ಜೀವನ ಪೂರ್ತಿ ಮುಂದುವರಿಸಲು ಬಯಸಿದರೆ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿ.

Relationship Tips: ನಿಮ್ಮ ರಿಲೇಷನ್​​​ಶಿಪ್​​ನಲ್ಲಿ ಇಂತಹ ಅಭ್ಯಾಸಗಳು ಕಂಡುಬಂದರೆ ತಕ್ಷಣ ಸಂಬಂಧಕ್ಕೆ ಬ್ರೇಕ್ ಹಾಕಿ
Follow us
|

Updated on:Feb 28, 2023 | 7:10 PM

ಇತ್ತೀಚೆಗೆ ಡೇಟಿಂಗ್​​ ಆಪ್​​ಗಳು ಹೆಚ್ಚಾಗುತ್ತಿದ್ದಂತೆ ಸಂಬಂಧಗಳ ನಿಜವಾದ ಅರ್ಥ ಕಳೆದು ಹೋಗುತ್ತಿದೆ. ಇದರಿಂದಾಗಿ ಸಂಬಂಧಗಳು 6 ತಿಂಗಳಲ್ಲಿಯೇ ಬಿರುಕು ಬಿಡುವುದನ್ನು ಕಾಣಬಹುದು. ಆದ್ದರಿಂದ ನೀವು ನಿಜವಾದ ಪ್ರೀತಿಯನ್ನು ಹುಡುಕುತ್ತಿದ್ದರೆ, ಅದರಲ್ಲಿಯೂ ನಿಮಗೆ ಮೋಸವಾಗಬಹುದು. ಆದ್ದರಿಂದ ನೀವು ಡೇಟಿಂಗ್​ ಮಾಡುವ ವ್ಯಕ್ತಿಯಲ್ಲಿ ಈ ಕೆಳಗಿನ ಅಭ್ಯಾಸಗಳು ಕಂಡುಬಂದರೆ ಸಂಬಂಧವನ್ನು ಯಾವುದೇ ಕಾರಣಕ್ಕೂ ಮುಂದುವರಿಸಲು ಹೋಗದಿರಿ. ನಿಮ್ಮ ಸಂಬಂಧವನ್ನು ನೀವು ಜೀವನ ಪೂರ್ತಿ ಮುಂದುವರಿಸಲು ಬಯಸಿದರೆ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿ.

ಸಾಕಷ್ಟು ಭಿನ್ನಾಭಿಪ್ರಾಯಗಳು:

ನಿಮ್ಮ ಸಂಬಂಧದಲ್ಲಿ ಪ್ರಾರಂಭದಲ್ಲಿಯೇ ಪ್ರತಿದಿನ ಜಗಳ, ಮನಸ್ತಾಪ, ನಿರಂತರ ದೂರು ಆ ಸಂಬಂಧವನ್ನು ಕಷ್ಟ ಪಟ್ಟು ಮುಂದುವರಿಸಿಕೊಂಡು ಹೋಗಬೇಡಿ. ಯಾಕೆಂದರೆ ಒಬ್ಬರಿಂದ ಸಂಬಂಧವನ್ನು ಉಳಿಸಲು ಸಾಧ್ಯವಿಲ್ಲ. ಅದಕ್ಕಿಂತ ನೀವು ಆ ಸಂಬಂಧದಿಂದ ದೂರವಾಗುವುದು ತುಂಬಾ ಅಗತ್ಯವಾಗಿದೆ.

ನಿಮ್ಮೊಂದಿಗೆ ಮಾಜಿ ಪ್ರೇಮಿಯ ಬಗ್ಗೆ ಮಾತು:

ನಿಮ್ಮ ಮೊದಲ ಡೇಟಿಂಗ್​​ನಲ್ಲಿಯೇ ಅತಿಯಾಗಿ ಮಾಜಿ ಪ್ರೇಮಿಯ ಬಗ್ಗೆ ಮಾತನಾಡುತ್ತಾ ಇದ್ದರೆ, ಅವರಿನ್ನು ಮಾಜಿ ಪ್ರೇಮಿಯನ್ನು ಮರೆತಿಲ್ಲ ಎಂಬುದನ್ನು ತಿಳಿಸುತ್ತದೆ. ಸಂಬಂಧದಲ್ಲಿ ಇನ್ನೂ ಕೂಡ ಸಾಕಷ್ಟು ಗೊಂದಲ ಇರುವವರನ್ನು ಎಂದಿಗೂ ನಿಮ್ಮ ಸಂಗಾತಿಯಾಗಲು ಸೂಕ್ತವಲ್ಲ.

ಮೆಸ್ಡ್ ಅಪ್ ಕಮ್ಯುನಿಕೇಶನ್:

ನಿಮ್ಮ ಸಂಬಂಧದಲ್ಲಿ ಕಾಳಜಿ, ಜವಾಬ್ದಾರಿಯ ಹೊರತಾಗಿ ಕೆಟ್ಟ ವಿಷಯಗಳೇ ಹೆಚ್ಚಾಗಿ ಬರುತ್ತಿದೆ ಎಂದು ನಿಮಗನಿಸುತ್ತಿದ್ದರೆ, ತಕ್ಷಣ ಆ ಸಂಬಂಧವನ್ನು ತೊರೆಯಲು ಸಿದ್ಧರಾಗಿ. ಯಾಕೆಂದರೆ ಅವರು ನಿಮ್ಮನ್ನು ನಿಜವಾಗಿ ಜೀವನ ಸಂಗಾತಿಯಾಗಲು ಬಯಸಿದರೆ, ನಿಮ್ಮ ಬಗ್ಗೆ ಅತಿಯಾದ ಕಾಳಜಿ ಹಾಗೂ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಇದನ್ನೂ ಓದಿ: ಕೆಟ್ಟ ನೆನಪುಗಳು ಮತ್ತೆ ಮತ್ತೆ ನಿಮ್ಮನ್ನು ಕಾಡುತ್ತಿದೆಯಾ? ಹಾಗಿದ್ದರೆ ಕೆಲವು ದಿನಗಳ ವರೆಗೆ ಈ ಟಿಪ್ಸ್​​ ಫಾಲೋ ಮಾಡಿ ನೋಡಿ

ವೈಯಕ್ತಿಕ ವಿಷಯಗಳಿಗೆ ಅತಿಯಾಗಿ ತಲೆಹಾಕುವುದು:

ನಿಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ನಿಮಗೆ ಅವರೊಂದಿಗೆ ಹೇಳಲು ಇಷ್ಟವಿಲ್ಲದಿದ್ದರೂ, ನಿಮ್ಮ ವಿಷಯವನ್ನು ಮತ್ತೆ ಮತ್ತೆ ಕೆಣಕಿ, ನಿಮಗೆ ಸಾಕಷ್ಟು ಕಿರಿ ಕಿರಿಯನ್ನುಂಟು ಮಾಡುತ್ತಿದ್ದರೆ, ಆ ಸಂಬಂಧದಿಂದ ತಕ್ಷಣ ದೂರ ಸರಿಯಿರಿ. ಮೊದಲು ನಿಮ್ಮ ವೈಯಕ್ತಿಕ ಸಂತೋಷ ಮುಖ್ಯವಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿಕ್ಲಿಕ್​ ಮಾಡಿ:  

Published On - 7:10 pm, Tue, 28 February 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ