AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ನಿಮ್ಮ ರಿಲೇಷನ್​​​ಶಿಪ್​​ನಲ್ಲಿ ಇಂತಹ ಅಭ್ಯಾಸಗಳು ಕಂಡುಬಂದರೆ ತಕ್ಷಣ ಸಂಬಂಧಕ್ಕೆ ಬ್ರೇಕ್ ಹಾಕಿ

ನೀವು ಡೇಟಿಂಗ್​ ಮಾಡುವ ವ್ಯಕ್ತಿಯಲ್ಲಿ ಈ ಕೆಳಗಿನ ಅಭ್ಯಾಸಗಳು ಕಂಡುಬಂದರೆ ಸಂಬಂಧವನ್ನು ಯಾವುದೇ ಕಾರಣಕ್ಕೂ ಮುಂದುವರಿಸಲು ಹೋಗದಿರಿ. ನಿಮ್ಮ ಸಂಬಂಧವನ್ನು ನೀವು ಜೀವನ ಪೂರ್ತಿ ಮುಂದುವರಿಸಲು ಬಯಸಿದರೆ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿ.

Relationship Tips: ನಿಮ್ಮ ರಿಲೇಷನ್​​​ಶಿಪ್​​ನಲ್ಲಿ ಇಂತಹ ಅಭ್ಯಾಸಗಳು ಕಂಡುಬಂದರೆ ತಕ್ಷಣ ಸಂಬಂಧಕ್ಕೆ ಬ್ರೇಕ್ ಹಾಕಿ
Follow us
ಅಕ್ಷತಾ ವರ್ಕಾಡಿ
|

Updated on:Feb 28, 2023 | 7:10 PM

ಇತ್ತೀಚೆಗೆ ಡೇಟಿಂಗ್​​ ಆಪ್​​ಗಳು ಹೆಚ್ಚಾಗುತ್ತಿದ್ದಂತೆ ಸಂಬಂಧಗಳ ನಿಜವಾದ ಅರ್ಥ ಕಳೆದು ಹೋಗುತ್ತಿದೆ. ಇದರಿಂದಾಗಿ ಸಂಬಂಧಗಳು 6 ತಿಂಗಳಲ್ಲಿಯೇ ಬಿರುಕು ಬಿಡುವುದನ್ನು ಕಾಣಬಹುದು. ಆದ್ದರಿಂದ ನೀವು ನಿಜವಾದ ಪ್ರೀತಿಯನ್ನು ಹುಡುಕುತ್ತಿದ್ದರೆ, ಅದರಲ್ಲಿಯೂ ನಿಮಗೆ ಮೋಸವಾಗಬಹುದು. ಆದ್ದರಿಂದ ನೀವು ಡೇಟಿಂಗ್​ ಮಾಡುವ ವ್ಯಕ್ತಿಯಲ್ಲಿ ಈ ಕೆಳಗಿನ ಅಭ್ಯಾಸಗಳು ಕಂಡುಬಂದರೆ ಸಂಬಂಧವನ್ನು ಯಾವುದೇ ಕಾರಣಕ್ಕೂ ಮುಂದುವರಿಸಲು ಹೋಗದಿರಿ. ನಿಮ್ಮ ಸಂಬಂಧವನ್ನು ನೀವು ಜೀವನ ಪೂರ್ತಿ ಮುಂದುವರಿಸಲು ಬಯಸಿದರೆ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿ.

ಸಾಕಷ್ಟು ಭಿನ್ನಾಭಿಪ್ರಾಯಗಳು:

ನಿಮ್ಮ ಸಂಬಂಧದಲ್ಲಿ ಪ್ರಾರಂಭದಲ್ಲಿಯೇ ಪ್ರತಿದಿನ ಜಗಳ, ಮನಸ್ತಾಪ, ನಿರಂತರ ದೂರು ಆ ಸಂಬಂಧವನ್ನು ಕಷ್ಟ ಪಟ್ಟು ಮುಂದುವರಿಸಿಕೊಂಡು ಹೋಗಬೇಡಿ. ಯಾಕೆಂದರೆ ಒಬ್ಬರಿಂದ ಸಂಬಂಧವನ್ನು ಉಳಿಸಲು ಸಾಧ್ಯವಿಲ್ಲ. ಅದಕ್ಕಿಂತ ನೀವು ಆ ಸಂಬಂಧದಿಂದ ದೂರವಾಗುವುದು ತುಂಬಾ ಅಗತ್ಯವಾಗಿದೆ.

ನಿಮ್ಮೊಂದಿಗೆ ಮಾಜಿ ಪ್ರೇಮಿಯ ಬಗ್ಗೆ ಮಾತು:

ನಿಮ್ಮ ಮೊದಲ ಡೇಟಿಂಗ್​​ನಲ್ಲಿಯೇ ಅತಿಯಾಗಿ ಮಾಜಿ ಪ್ರೇಮಿಯ ಬಗ್ಗೆ ಮಾತನಾಡುತ್ತಾ ಇದ್ದರೆ, ಅವರಿನ್ನು ಮಾಜಿ ಪ್ರೇಮಿಯನ್ನು ಮರೆತಿಲ್ಲ ಎಂಬುದನ್ನು ತಿಳಿಸುತ್ತದೆ. ಸಂಬಂಧದಲ್ಲಿ ಇನ್ನೂ ಕೂಡ ಸಾಕಷ್ಟು ಗೊಂದಲ ಇರುವವರನ್ನು ಎಂದಿಗೂ ನಿಮ್ಮ ಸಂಗಾತಿಯಾಗಲು ಸೂಕ್ತವಲ್ಲ.

ಮೆಸ್ಡ್ ಅಪ್ ಕಮ್ಯುನಿಕೇಶನ್:

ನಿಮ್ಮ ಸಂಬಂಧದಲ್ಲಿ ಕಾಳಜಿ, ಜವಾಬ್ದಾರಿಯ ಹೊರತಾಗಿ ಕೆಟ್ಟ ವಿಷಯಗಳೇ ಹೆಚ್ಚಾಗಿ ಬರುತ್ತಿದೆ ಎಂದು ನಿಮಗನಿಸುತ್ತಿದ್ದರೆ, ತಕ್ಷಣ ಆ ಸಂಬಂಧವನ್ನು ತೊರೆಯಲು ಸಿದ್ಧರಾಗಿ. ಯಾಕೆಂದರೆ ಅವರು ನಿಮ್ಮನ್ನು ನಿಜವಾಗಿ ಜೀವನ ಸಂಗಾತಿಯಾಗಲು ಬಯಸಿದರೆ, ನಿಮ್ಮ ಬಗ್ಗೆ ಅತಿಯಾದ ಕಾಳಜಿ ಹಾಗೂ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಇದನ್ನೂ ಓದಿ: ಕೆಟ್ಟ ನೆನಪುಗಳು ಮತ್ತೆ ಮತ್ತೆ ನಿಮ್ಮನ್ನು ಕಾಡುತ್ತಿದೆಯಾ? ಹಾಗಿದ್ದರೆ ಕೆಲವು ದಿನಗಳ ವರೆಗೆ ಈ ಟಿಪ್ಸ್​​ ಫಾಲೋ ಮಾಡಿ ನೋಡಿ

ವೈಯಕ್ತಿಕ ವಿಷಯಗಳಿಗೆ ಅತಿಯಾಗಿ ತಲೆಹಾಕುವುದು:

ನಿಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ನಿಮಗೆ ಅವರೊಂದಿಗೆ ಹೇಳಲು ಇಷ್ಟವಿಲ್ಲದಿದ್ದರೂ, ನಿಮ್ಮ ವಿಷಯವನ್ನು ಮತ್ತೆ ಮತ್ತೆ ಕೆಣಕಿ, ನಿಮಗೆ ಸಾಕಷ್ಟು ಕಿರಿ ಕಿರಿಯನ್ನುಂಟು ಮಾಡುತ್ತಿದ್ದರೆ, ಆ ಸಂಬಂಧದಿಂದ ತಕ್ಷಣ ದೂರ ಸರಿಯಿರಿ. ಮೊದಲು ನಿಮ್ಮ ವೈಯಕ್ತಿಕ ಸಂತೋಷ ಮುಖ್ಯವಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿಕ್ಲಿಕ್​ ಮಾಡಿ:  

Published On - 7:10 pm, Tue, 28 February 23

ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ