Relationship: ಕೇವಲ ಪ್ರೀತಿ ಮಾತ್ರವಲ್ಲ, ಈ 4 ವಿಷಯಗಳ ಕೊರತೆಯು ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುತ್ತೆ

ಪ್ರೀತಿಯಲ್ಲಿ ಬಿದ್ದಮೇಲೆ ಸರಸ, ವಿರಸಗಳೆಲ್ಲವೂ ಕಾಮನ್, ಆದರೂ ಒಂದೊಮ್ಮೆ ಸಂಗಾತಿ ತಮ್ಮ ಮೇಲೆ ಪ್ರೀತಿ ತೋರಿಸುವುದನ್ನು ಸ್ವಲ್ಪ ಕಡಿಮೆ ಮಾಡಿದರೂ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡುತ್ತವೆ.

Relationship: ಕೇವಲ ಪ್ರೀತಿ ಮಾತ್ರವಲ್ಲ, ಈ 4 ವಿಷಯಗಳ ಕೊರತೆಯು ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುತ್ತೆ
ಸಂಬಂಧ
Follow us
|

Updated on: Feb 28, 2023 | 5:30 PM

ಪ್ರೀತಿಯಲ್ಲಿ ಬಿದ್ದಮೇಲೆ ಸರಸ, ವಿರಸಗಳೆಲ್ಲವೂ ಕಾಮನ್, ಆದರೂ ಒಂದೊಮ್ಮೆ ಸಂಗಾತಿ ತಮ್ಮ ಮೇಲೆ ಪ್ರೀತಿ ತೋರಿಸುವುದನ್ನು ಸ್ವಲ್ಪ ಕಡಿಮೆ ಮಾಡಿದರೂ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಕೇವಲ ಪ್ರೀತಿ ಮಾತ್ರವಲ್ಲ ಇನ್ನೂ ಕೆಲವು ವಿಚಾರಗಳು ನಿಮ್ಮ ಸಂಬಂಧದಲ್ಲಿ ಹುಳಿ ಹಿಂಸುವ ಕೆಲಸ ಮಾಡುತ್ತದೆ. ಎರಡೂ ಕಡೆಯಿಂದ ಪ್ರಯತ್ನಗಳು ಇದ್ದಾಗ ಮಾತ್ರ ಸಂಬಂಧವು ಬಲವಾದ ಮತ್ತು ರೋಮ್ಯಾಂಟಿಕ್ ಆಗುತ್ತದೆ. ಸಂಬಂಧವನ್ನು ಕಾಪಾಡಿಕೊಳ್ಳಲು, ಪರಸ್ಪರ ಅರ್ಥಮಾಡಿಕೊಳ್ಳುವುದು ಮತ್ತು ಮುಕ್ತವಾಗಿ ಮಾತನಾಡುವುದು ಬಹಳ ಮುಖ್ಯ. ಒಬ್ಬರನ್ನೊಬ್ಬರು ನಂಬುವುದು ಕೂಡ ಅತ್ಯಂತ ಮುಖ್ಯ.

ಇಬ್ಬರೂ ಸಂಬಂಧವನ್ನು ಉಳಿಸಿಕೊಳ್ಳುವುದಕ್ಕಿಂತ ಮುರಿದುಕೊಳ್ಳುವ ಪ್ರಯತ್ನದಲ್ಲಿದ್ದರೆ ಯಾರು ಏನೂ ಮಾಡಲು ಸಾಧ್ಯವಿಲ್ಲ. ಸಂಬಂಧವನ್ನು ಕಾಪಾಡಿಕೊಳ್ಳಲು, ಈ 4 ಕಾರಣಗಳನ್ನು ಪರಿಗಣಿಸುವುದು ಬಹಳ ಮುಖ್ಯ.

ಮತ್ತಷ್ಟು ಓದಿ: Relationship Tips: ಕೃತಜ್ಞತಾ ಭಾವ ಸಂಗಾತಿ ಹಾಗೂ ನಿಮ್ಮ ನಡುವಿನ ಸಂಬಂಧವನ್ನು ಸುಧಾರಿಸುತ್ತದೆ

1. ಒಬ್ಬರಿಗೊಬ್ಬರು ಸಮಯ ಮಾಡಿಕೊಳ್ಳದಿರುವುದು ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಸಾಧ್ಯವಾಗದಿರುವುದು ಸಂಬಂಧವನ್ನು ದುರ್ಬಲಗೊಳಿಸಲು ಕಾರಣವಾಗಬಹುದು. ಕೆಲವೊಮ್ಮೆ ನೀವಿಬ್ಬರೂ ನಿಮ್ಮ ಜೀವನದಲ್ಲಿ ತುಂಬಾ ಕಾರ್ಯನಿರತರಾಗಿರಬಹುದು. ಇದರಿಂದಾಗಿ ನೀವು ನಿಮಗಾಗಿ ಸಮಯವನ್ನು ಸಹ ಪಡೆಯದಿರಬಹುದು. ಆದರೆ ನೀವು ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸಿದರೆ, ಖಂಡಿತವಾಗಿಯೂ ಪ್ರತಿದಿನ ಪರಸ್ಪರ ಒಂದಷ್ಟು ಸಮಯವನ್ನು ಸಂಗಾತಿಯೊಂದಿಗೆ ಕಳೆಯಿರಿ. ಇದು ಪರಸ್ಪರ ಅರ್ಥಮಾಡಿಕೊಳ್ಳಲು ಮತ್ತು ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದೀರ್ಘಕಾಲ ಸಂಪರ್ಕದಲ್ಲಿ ಇರದಿರುವುದು ಸಂಬಂಧದಲ್ಲಿ ದೂರವನ್ನು ತರಬಹುದು.

2. ಲೈಂಗಿಕ ಬಯಕೆಯನ್ನು ಬಹಿರಂಗವಾಗಿ ಮಾತನಾಡದೇ ಇರುವುದು ಅನೇಕ ಬಾರಿ ದಂಪತಿ ತಮ್ಮ ಲೈಂಗಿಕ ಬಯಕೆಯ ಬಗ್ಗೆ ಬಹಿರಂಗವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಅವರ ಸಂಬಂಧದಲ್ಲಿ ದೂರವು ಬರಲು ಪ್ರಾರಂಭಿಸುತ್ತದೆ. ಒಬ್ಬರಿಗೊಬ್ಬರು ಹತ್ತಿರವಾಗುವ ಬದಲು, ಅವರು ಸಂಬಂಧದಿಂದ ಓಡಿಹೋಗಲು ಪ್ರಯತ್ನಿಸುತ್ತಾರೆ. ಅನೇಕ ಬಾರಿ ಜನರು ಲೈಂಗಿಕ ಬಯಕೆಯ ಅಗತ್ಯವಿರುವ ಬೇರೊಬ್ಬರ ಕಡೆಗೆ ಆಕರ್ಷಿತರಾಗಲು ಪ್ರಾರಂಭಿಸುತ್ತಾರೆ. ಅದಕ್ಕಾಗಿಯೇ ನಿಮ್ಮ ಅಗತ್ಯತೆಗಳು ಮತ್ತು ಲೈಂಗಿಕ ಬಯಕೆಯ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡುವುದು ಬಹಳ ಮುಖ್ಯ. ಏಕೆಂದರೆ ಅನ್ಯೋನ್ಯತೆಯು ಪ್ರೀತಿಯ ಭಾಷೆಯಾಗಿದೆ, ಇದು ಪ್ರತಿಯೊಬ್ಬ ವ್ಯಕ್ತಿಗೆ ವಿಭಿನ್ನ ವಿಷಯಗಳನ್ನು ಅರ್ಥೈಸಬಲ್ಲದು.

3. ಸಂಬಂಧಗಳಲ್ಲಿ ನಂಬಿಕೆಯ ನಷ್ಟ ನೀವು ಪರಸ್ಪರ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ನೀವು ಭಾವಿಸಿದರೆ, ನೀವು ಈ ಬಗ್ಗೆ ಗಮನ ಹರಿಸಬೇಕು. ಸಂಗಾತಿ ದೂರದಲ್ಲಿದ್ದಾಗ ಅನುಮಾನ, ಅಸೂಯೆ, ಅಭದ್ರತೆ ಹೆಚ್ಚಾಗತೊಡಗುತ್ತದೆ. ಒಬ್ಬರನ್ನೊಬ್ಬರು ಕಳೆದುಕೊಳ್ಳುವ ಭಯ ಕೆಲವೊಮ್ಮೆ ಅನುಮಾನಕ್ಕೆ ಕಾರಣವಾಗುತ್ತದೆ.

4. ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಸಂಬಂಧದ ಆರಂಭದಲ್ಲಿ, ದಂಪತಿ ಒಬ್ಬರಿಗೊಬ್ಬರು ಹೆಚ್ಚಿನ ಗಮನವನ್ನು ನೀಡುತ್ತಾರೆ, ಪರಸ್ಪರ ಕಾಳಜಿ ವಹಿಸುತ್ತಾರೆ. ಆದರೆ ದಿನಕಳೆದಂತೆ ಅದು ಕಡಿಮೆಯಾಗುತ್ತದೆ. ಆದರೆ ನೀವು ನಿಮ್ಮ ಸಂಗಾತಿಗೆ ಹೆಚ್ಚು ಸಮಯ ಕೊಟ್ಟು ಕಳೆದು ಹೋಗಿರುವ ಪ್ರೀತಿಯನ್ನು ಮರಳಿ ಪಡೆಯಲೇಬೇಕು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು