AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hair Transplant: ಕೂದಲು ಉದುರುವ ಸಮಸ್ಯೆಗೊಂದು ಶಾಶ್ವತ ಪರಿಹಾರ, ಕೂದಲು ಕಸಿ ವಿಧಾನ

ಏನಿದು ಕೂದಲು ಕಸಿ ವಿಧಾನ? ಯಾವ ವಯಸ್ಸಿನವರಿಗೆ ಇದು ಸೂಕ್ತ ಮತ್ತು ಹೇಗೆಲ್ಲಾ ಕಸಿ ವಿಧಾನ ಪರಿಣಾಮಕಾರಿ ಎಂಬೆಲ್ಲ ವಿಷಯದ ಕುರಿತು ಏಮ್ಸ್ ಚರ್ಮರೋಗ ತಜ್ಞ ಮತ್ತು ಜಾಗತಿಕ ಕೂದಲು ಕಸಿ ಮಂಡಳಿಯ ಶಸ್ತ್ರಚಿಕಿತ್ಸಕರಾಗಿರುವ ಡಾ. ಅಮರೇಂದ್ರ ಕುಮಾರ್ ನ್ಯೂಸ್ 9 ಲೈವ್‌ಗೆ ತಿಳಿಸಿದ ಮಾಹಿತಿ ಇಲ್ಲಿದೆ ನೋಡಿ.

Hair Transplant: ಕೂದಲು ಉದುರುವ ಸಮಸ್ಯೆಗೊಂದು ಶಾಶ್ವತ ಪರಿಹಾರ, ಕೂದಲು ಕಸಿ ವಿಧಾನ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Jul 27, 2024 | 2:32 PM

Share

ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೊಸತೇನಲ್ಲ. ಹವಾಮಾನ, ಮಾಲಿನ್ಯ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳಿಂದಾಗಿ, ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಆಧುನಿಕತೆ ಮಾನವ ಇಂತಹ ಸಮಸ್ಯೆಗಳನ್ನು ಪರಿಹರಿಸುವ ಕ್ರಮಗಳನ್ನು ಸುಲಭಗೊಳಿಸಿವೆ. ಜೇಬಿನಲ್ಲಿ ಹಣವಿದ್ದರೆ ಈ ಕೂದಲು ಉದುರುವುದು ದೊಡ್ಡ ಸಮಸ್ಯೆಯೇ ಅಲ್ಲ. ಬಹಳಷ್ಟು ಜನರು ಕಳೆದುಹೋದ ಕೂದಲನ್ನು ‘ಕೂದಲು ಕಸಿ’ ವಿಧಾನದಲ್ಲಿ ಮರಳಿ ಪಡೆಯುತ್ತಿದ್ದಾರೆ.

ಹಾಗಾದ್ರೆ ಏನಿದು ಕೂದಲು ಕಸಿ ವಿಧಾನ? ಯಾವ ವಯಸ್ಸಿನವರಿಗೆ ಇದು ಸೂಕ್ತ ಮತ್ತು ಹೇಗೆಲ್ಲಾ ಕಸಿ ವಿಧಾನ ಪರಿಣಾಮಕಾರಿ ಎಂಬೆಲ್ಲ ವಿಷಯದ ಕುರಿತು ಏಮ್ಸ್ ಚರ್ಮರೋಗ ತಜ್ಞ ಮತ್ತು ಜಾಗತಿಕ ಕೂದಲು ಕಸಿ ಮಂಡಳಿಯ ಶಸ್ತ್ರಚಿಕಿತ್ಸಕರಾಗಿರುವ ಡಾ. ಅಮರೇಂದ್ರ ಕುಮಾರ್ ನ್ಯೂಸ್ 9 ಲೈವ್‌ಗೆ ತಿಳಿಸಿದ ಮಾಹಿತಿ ಇಲ್ಲಿದೆ ನೋಡಿ.

ಕೂದಲು ಕಸಿಗೆ ಸೂಕ್ತ ವಯಸ್ಸು ಯಾವುದು?

ವೈದ್ಯರ ಪ್ರಕಾರ, ಯಾವ ವಯಸ್ಸಿನಲ್ಲಿ ಕೂದಲು ಕಸಿ ಮಾಡಬೇಕು ಎಂಬುದಕ್ಕೆ ಕೆಲವು ನಿಯಮಗಳಿವೆ. ಸರಿಯಾದ ವಯಸ್ಸಿನಲ್ಲಿ ನಾಟಿ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಸಾಮಾನ್ಯವಾಗಿ 25 ರಿಂದ 75 ವರ್ಷ ವಯಸ್ಸಿನವರಿಗೆ ಕೂದಲು ಕಸಿ ಮಾಡಬಹುದು. ವೈದ್ಯರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕಸಿ ಮಾಡಬಾರದು ಎಂದು ಹೇಳುತ್ತಾರೆ. ಆ ಸಮಯದಲ್ಲಿ ‘ಕೂದಲು ಕಸಿ’ ಮಾಡುವುದರಿಂದ ಭವಿಷ್ಯದಲ್ಲಿ ಪ್ರತಿಕೂಲ ಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ, ಇದಲ್ಲದೆ ಕೂದಲು ಉದುರುವುದು ಹೆಚ್ಚಾಗುವ ಸಂಭವನೀಯತೆಯೂ ಇದೆ.

ಉತ್ತಮ ಫಲಿತಾಂಶಗಳನ್ನು ಯಾವಾಗ ಪಡೆಯಬಹುದು?

ಫಲಿತಾಂಶವು ಉತ್ತಮವಾಗಿದೆಯೇ ಅಥವಾ ಇಲ್ಲವೇ ಎಂಬುದು ಕೂದಲು ಕಸಿಗೆ ಒಳಗಾದ ವ್ಯಕ್ತಿಯ ಕೂದಲಿನ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. 20 ವರ್ಷದ ನಂತರ ಕೂದಲನ್ನು ಕಳೆದುಕೊಳ್ಳಲು ಪ್ರಾರಂಭಿಸುವವರು ತಕ್ಷಣವೇ ‘ಕೂದಲು ಕಸಿ’ ಮಾಡಲು ನಿರ್ಧರಿಸುತ್ತಾರೆ. ಇದು ನೈಸರ್ಗಿಕವಾಗಿ ಬೆಳೆಯುವ ಕೂದಲಿನ ಮೇಲೆ ಪರಿಣಾಮ ಬೀರುತ್ತದೆಯೇ ವಿನಃ, ಕೂದಲು ಕಸಿಯ ಫಲಿತಾಂಶ ಪಡೆಯುವುದರಲ್ಲಿ ವಿಫಲತೆ ಕಾಣಸಿಗುತ್ತದೆ.

‘ಕೂದಲು ಕಸಿ’ಗೆ ಕನಿಷ್ಠ ವಯಸ್ಸು ಎಷ್ಟು?

25-36 ವರ್ಷದೊಳಗಿನ ವಯಸ್ಸಿನವರಿಗೆ ಕೂದಲು ಕಸಿ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಆ ಸಮಯದಲ್ಲಿ ಕೂದಲು ಉದುರುವಿಕೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಕೂದಲು ಉದುರುವ ಸಮಸ್ಯೆ ಯಾವಾಗ ಕಾಣಿಸಿಕೊಳ್ಳುತ್ತದೆ?

ಪುರುಷರಲ್ಲಿ, ಕೂದಲು ಉದುರುವಿಕೆಯು 30 ರಿಂದ 45 ವರ್ಷಗಳ ನಡುವೆ ಪ್ರಾರಂಭವಾಗುತ್ತದೆ. ಮಹಿಳೆಯರಲ್ಲಿ ಈ ಪ್ರವೃತ್ತಿ ಹಾರ್ಮೋನುಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಸಮಸ್ಯೆಯು ಮುಖ್ಯವಾಗಿ ಋತುಬಂಧದ ನಂತರ ಅಂದರೆ 40, 50 ಅಥವಾ ಕೆಲವು ಸಂದರ್ಭಗಳಲ್ಲಿ 60 ವರ್ಷದ ನಂತರ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಏನಿದು ಹೆಪಟೈಟಿಸ್ ಕಾಯಿಲೆ? ಈ ರೋಗ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?

‘ಕೂದಲು ಕಸಿ’ ಬಗ್ಗೆ ಇನ್ನೂ ಕೆಲವು ಪ್ರಮುಖ ಮಾಹಿತಿ;

ಅಧ್ಯಯನದ ಪ್ರಕಾರ, ಕೂದಲು ಕಸಿಯನ್ನು ಚಿಕ್ಕ ವಯಸ್ಸಿನಲ್ಲಿ ಅಥವಾ ಬಹಳ ವೃದ್ಧಾಪ್ಯದಲ್ಲಿ ಮಾಡಬಾರದು. ಸರಿಯಾದ ವಯಸ್ಸು 25 ರಿಂದ 50 ರ ನಡುವೆ ಇರುತ್ತದೆ. ಯುವಜನರ ವಿಷಯದಲ್ಲಿ ‘ಕೂದಲು ಕಸಿ’ ಭವಿಷ್ಯದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. 60 ವರ್ಷದ ನಂತರ, ಕೂದಲು ಕಸಿ ಮಾಡುವ ಸಾಧ್ಯತೆ ಬಹಳಷ್ಟು ಕಡಿಮೆ. ಅಂತಹ ಸಂದರ್ಭದಲ್ಲಿ ಇತರ ಆರೋಗ್ಯ ಸಂಬAಧಿತ ಸಮಸ್ಯೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.

ಭಾರತದಲ್ಲಿ ‘ಕೂದಲು ಕಸಿ’ ಮಾರುಕಟ್ಟೆ ಸ್ಥಿರವಾಗಿ ಬೆಳೆಯುತ್ತಿದೆ ಎಂಬುದನ್ನು ಗಮನಿಸಬೇಕು. 2025 ರ ವೇಳೆಗೆ 140 ಮಿಲಿಯನ್ ಜನರನ್ನು ತಲುಪುವ ನಿರೀಕ್ಷೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟೆಕ್‌ಸಿ ಸಂಶೋಧನೆಯ ಪ್ರಕಾರ, ಕೂದಲು ಕಸಿ ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿದೆ. 2016 ಮತ್ತು 2020 ರ ನಡುವೆ, ವಿಶ್ವಾದ್ಯಂತ ಕೂದಲು ಕಸಿ ಶಸ್ತ್ರಚಿಕಿತ್ಸೆಗಳು ಶೇಕಡಾ 16 ರಷ್ಟು ಹೆಚ್ಚಾಗಿವೆ. ಅಮೆರಿಕ, ಟರ್ಕಿ, ದಕ್ಷಿಣ ಕೊರಿಯಾ ದೇಶಗಳು ಈ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿವೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:29 pm, Sat, 27 July 24

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!