AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಯುಮಾಲಿನ್ಯದಿಂದ ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಖಿನ್ನತೆ ಸಮಸ್ಯೆ: ಅಧ್ಯಯನ

ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ಕಾಡುವ ಮಾನಸಿಕ ಖಿನ್ನತೆ ಒತ್ತಡಕ್ಕೆ ವಾಯುಮಾಲಿನ್ಯವೂ ಕಾರಣ ಎನ್ನುವ ಅಂಶವನ್ನು ವಿಜ್ಞಾನಿಗಳು ಸಂಶೊಧನೆ ಮೂಲಕ ಕಂಡುಕೊಂಡಿದ್ದಾರೆ.

ವಾಯುಮಾಲಿನ್ಯದಿಂದ ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಖಿನ್ನತೆ ಸಮಸ್ಯೆ: ಅಧ್ಯಯನ
ಪ್ರಾತಿನಿಧಿಕ ಚಿತ್ರ
TV9 Web
| Updated By: Pavitra Bhat Jigalemane|

Updated on:Mar 15, 2022 | 6:02 PM

Share

ಹದಿಹರೆಯದ (Adolescents) ವಯಸ್ಸಿನ ಮಕ್ಕಳಲ್ಲಿ ಕಾಡುವ ಮಾನಸಿಕ ಖಿನ್ನತೆ,ಒತ್ತಡಕ್ಕೆ ವಾಯುಮಾಲಿನ್ಯವೂ (Air Pollution) ಕಾರಣ ಎನ್ನುವ ಅಂಶವನ್ನು ವಿಜ್ಞಾನಿಗಳು ಸಂಶೊಧನೆ ಮೂಲಕ ಕಂಡುಕೊಂಡಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹದಿಹರೆಯದ ಮಕ್ಕಳು ವಾಯುಮಾಲಿನ್ಯದ ಪ್ರದೇಶದಲ್ಲಿ ಓಡಾಡುವುದಿಂದ ಮಾನಸಿಕ ಖಿನ್ನತೆ (Depression) ಹೆಚ್ಚುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಡೆವಲೆಂಪ್​ಮೆಂಟಲ್​​ ಸೈಕಾಲಜಿ ಎನ್ನುವ ಜರ್ನಲ್​ನಲ್ಲಿ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದೆ.

ಓಝೋನ್ ಎನ್ನುವುದು ವಾಹನಗಳಿಂದ ಹೊರಬರುವ ಹೊಗೆ ಇದು ವಿದ್ಯುತ್ ಸ್ಥಾವರಗಳು ಮತ್ತು ಇತರ ಮೂಲಗಳಿಂದ ವಿವಿಧ ಮಾಲಿನ್ಯಕಾರಕಗಳು ಸೂರ್ಯನ ಬೆಳಕಿಗೆ ಪ್ರತಿಕ್ರಿಯಿಸಿದಾಗ ಉತ್ಪತ್ತಿಯಾಗುವ ಅನಿಲವಾಗಿದೆ. ಹೆಚ್ಚಿನ ಓಝೋನ್ ಮಟ್ಟಗಳು ಅಸ್ತಮಾ, ಉಸಿರಾಟದ ವೈರಸ್‌ಗಳು ಮತ್ತು ಉಸಿರಾಟದ ಕಾರಣಗಳಿಂದ ಅಕಾಲಿಕ ಮರಣ ಸೇರಿದಂತೆ ವಿವಿಧ ದೈಹಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಸ್ಯಾನ್ ಫ್ರಾನ್ಸಿಸ್ಕೊ ​​​​ಕೊಲ್ಲಿ ಪ್ರದೇಶದಲ್ಲಿ 213 ಹದಿಹರೆಯದ 9 ರಿಂದ 13 ವರ್ಷ ವಯಸ್ಸಿನವರಲ್ಲಿ ಕಾಣಿಸಕೊಳ್ಳುವ ಆರಂಭಿಕ ಜೀವನ ಒತ್ತಡದ ಕುರಿತು ಅಧ್ಯಯನ ನಡೆಸಿದ್ದಾರೆ. ಸಂಶೋಧಕರು ನಾಲ್ಕು ವರ್ಷಗಳ ಅವಧಿಯಲ್ಲಿ ಹದಿಹರೆಯದವರ ಮಾನಸಿಕ ಆರೋಗ್ಯದ ಕುರಿತಾದ ಡೇಟಾವನ್ನು ಸಂಗ್ರಹಿಸಿ ಕ್ಯಾಲಿಫೋರ್ನಿಯಾ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯಿಂದ ಆ ಪ್ರದೇಶಗಳಿಗೆ ಗಾಳಿಯ ಗುಣಮಟ್ಟದ ಡೇಟಾದೊಂದಿಗೆ ಹೋಲಿಸಿದ್ದಾರೆ. ಫಲಿತಾಂಶದಲ್ಲಿ ಹದಿಹರೆಯದ ಮಕ್ಕಳು ಹೆಚ್ಚು ಕಾಲ ಹೊರಗಿನ ವಾತಾವರಣದಲ್ಲಿ ಇರುವುದರಿಂದ ಧೂಳು, ಕಳಪೆ ಗಾಳಿಯ ಮಟ್ಟದ ಪ್ರಭಾವದಿಂದ ಮಕ್ಕಳು ಖಿನ್ನತೆಗೆ ಒಳಗಾಗುವುದು ಸಾಬೀತಾಗಿದೆ. ಓಝೋನ್ ಮತ್ತು ವಾಯು ಮಾಲಿನ್ಯದ ಇತರ ಅಂಶಗಳು ದೇಹದಲ್ಲಿ ಹೆಚ್ಚಿನ ಮಟ್ಟದ ಉರಿಯೂತಕ್ಕೆ ಕಾರಣವಾಗಬಹುದು, ಇದು ಖಿನ್ನತೆಯ ಆಕ್ರಮಣ ಮತ್ತು ಬೆಳವಣಿಗೆಗೆ ಕಾರಣವಾಗುತ್ತದೆ.

ನಮ್ಮ ಸಂಶೋಧನೆಗಳು ಮತ್ತು ಇತರ ಅಧ್ಯಯನಗಳು ಕಡಿಮೆ ಮಟ್ಟದ ಓಝೋನ್ ಮಾನ್ಯತೆ ಕೂಡ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಗಂಭೀರವಾದ ಅಪಾಯಗಳನ್ನು ಉಂಟುಮಾಡಬಹುದು ಎಂದು ಸೂಚಿಸುತ್ತದೆ ಎಂದು ಸಂಶೋಧನೆಯ ರುವಾರಿ ಡೆನ್ವರ್ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಮ್ಯಾನ್ಕ್ಜಾಕ್ ತಳಿಸಿದ್ದಾರೆ.

ಇದನ್ನೂ ಓದಿ:

Beer: ನಿಯಮಿತವಾಗಿ ಬಿಯರ್​ ಸೇವನೆ ಮಾಡಿದರೆ ಈ ಅಪಾಯಗಳು ಕಟ್ಟಿಟ್ಟಬುತ್ತಿ

Published On - 5:59 pm, Tue, 15 March 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ