AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಹಬ್ಬದಂದು ಕಣ್ಣಿನ ರಕ್ಷಣೆ ಹೇಗೆ? ಕೆಲ ಸಲಹೆ ಇಲ್ಲಿವೆ

ಮೈ ಮರೆತು ಆಡುವ ಈ ಹಬ್ಬದಲ್ಲಿ ದೇಹಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಅಪಾಯಗಳ ಬಗ್ಗೆ ಎಚ್ಚರ ವಹಿಸಬೇಕು. ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡಾಗ ಕಣ್ಣಿಗೆ ಬೀಳಬಹುದು.

ಹೋಳಿ ಹಬ್ಬದಂದು ಕಣ್ಣಿನ ರಕ್ಷಣೆ ಹೇಗೆ? ಕೆಲ ಸಲಹೆ ಇಲ್ಲಿವೆ
ಸಾಂದರ್ಭಿಕ ಚಿತ್ರ
TV9 Web
| Edited By: sandhya thejappa|

Updated on: Mar 15, 2022 | 2:06 PM

Share

ಮಾರ್ಚ್ 18ಕ್ಕೆ ಹೋಳಿ ಹಬ್ಬ (Holi). ದೇಶದ ಹಲವು ಕಡೆ ಬಹಳ ಅದ್ದೂರಿಯಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕುಣಿದು ಕುಪ್ಪಳಿಸುವುದಕ್ಕೆ ಜನ ಕಾಯುತ್ತಿದ್ದಾರೆ. ಬಣ್ಣಗಳನ್ನ (Colour) ಎರಚ್ಚುತ್ತಾ ಸಂಭ್ರಮಿಸುವ ಈ ಹಬ್ಬ ಎಂದರೆ ಎಲ್ಲರಿಗೂ ಇಷ್ಟ. ಮೈ ಮರೆತು ಕುಣಿಯುತ್ತಾ ಆಡುವ ಈ ಹಬ್ಬದಲ್ಲಿ ದೇಹಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಅಪಾಯಗಳ ಬಗ್ಗೆ ಎಚ್ಚರ ವಹಿಸಬೇಕು. ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡಾಗ ಕಣ್ಣಿಗೆ ಬೀಳಬಹುದು. ಹೋಳಿ ಹಬ್ಬದಂದು ಕಣ್ಣಿನ ಬಗ್ಗೆ ಹೇಗೆ ಎಚ್ಚರವಹಿಸಬೇಕು ಅಂತ ಇಲ್ಲಿ ತಿಳಿಸಲಾಗಿದೆ.

ಕಣ್ಣಿನ ಸುತ್ತ ಕೊಬ್ಬರಿ ಎಣ್ಣೆ: ಕೆಮಿಕಲ್ ಬಳಸಿ ಬಣ್ಣವನ್ನು ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಬಣ್ಣ ಕಣ್ಣಿಗೆ ಹೋದರೆ ಅಲರ್ಜಿ ಆಗಬಹುದು. ಕೆಲವೊಮ್ಮೆ ಕಾಣಿಸದೇ ಇರಬಹುದು. ಇದರಿಂದ ಕಣ್ಣಿನ ಸುತ್ತ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಹೋಳಿ ಆಡಿ. ಹೀಗೆ ಮಾಡಿದರೆ ಕಣ್ಣು ಸುರಕ್ಷಿತವಾಗಿರುತ್ತದೆ.

ಗ್ಲಾಸ್ ಬಳಸಿ: ಹೋಳಿ ಆಡುವ ಮೊದಲು ಕಣ್ಣಿನ ಬಗ್ಗೆ ಕಾಳಜಿ ಇರಲಿ. ರಕ್ಷಣಾತ್ಮಕ ಗ್ಲಾಸ್, ಸನ್​ಗ್ಲಾಸ್​ಗಳನ್ನ ಬಳಸಿ. ಗ್ಲಾಸ್ ಬಳಿಸಿದರೆ ಕಣ್ಣಿಗೆ ಬೀಳುವ ಬಣ್ಣ ಗ್ಲಾಸ್ ಮೇಲೆ ಬೀಳುತ್ತದೆ. ಈ ಮೂಲಕ ಹೋಳಿ ಹಬ್ಬದಂದು ಕಣ್ಣನ್ನು ರಕ್ಷಣೆ ಮಾಡಬಹುದು.

ಶುದ್ಧ ನೀರಿನಿಂದ ತೊಳೆಯಿರಿ: ಹೋಳಿ ಹಬ್ಬದಲ್ಲಿ ಬಣ್ಣಗಳು ಕಣ್ಣಿಗೆ ಬೀಳುವುದು ಸಹಜ. ಆದರೆ ಹಬ್ಬ ಸಂಭ್ರಮದಿಂದ ಕೂಡಿರಬೇಕು. ಬದಲಾಗಿ ನೋವಿಗೆ ಕಾರಣವಾಗಬಾರದು. ಕಣ್ಣಿಗೆ ಬಣ್ಣ ಬಿದ್ದ ತಕ್ಷಣ ಶುದ್ಧ ನೀರಿನಿಂದ ತೊಳೆಯಿರಿ. ಅಥವಾ ಶುದ್ಧ ನೀರಿನಲ್ಲಿ ಕಣ್ಣು ಬಿಡಿ. ಹೀಗೆ ಮಾಡಿದರೆ ಕಣ್ಣನ್ನು ರಕ್ಷಿಸಿಕೊಳ್ಳಬಹುದು.

ಬಣ್ಣದ ಪೌಡರ್ ಬಳಸಿ: ಕಣ್ಣಿನ ಒಳಗೆ ಬಣ್ಣ ಹೋದರೆ ಯಾವುದೇ ಕಾರಣಕ್ಕೂ ಉಜ್ಜಬಾರದು. ಹೋಳಿ ಹಬ್ಬದಂದು ಬಣ್ಣದ ಪೇಸ್ಟ್ ಬಳಸುವ ಬದಲು ಪುಡಿಯನ್ನು ಬಳಸಿ. ಇದರ ಅಪಾಯ ಪ್ರಮಾಣ ಕಡಿಮೆ. ಒಂದು ವೇಳೆ ಕಣ್ಣಿಗೆ ಬಣ್ಣ ಹೋಗಿ ಕೆಂಪಾದರೆ ತಕ್ಷಣ ವೈದ್ಯರ ಬಳಿ ಹೋಗಿ ಪರಿಕ್ಷಿಸಿಕೊಳ್ಳಿ.

ಇದನ್ನೂ ಓದಿ

Jasprit Bumrah: ಭಾರತ ಪರ ಇದುವರೆಗೆ ಯಾರೂ ಮಾಡಿಲ್ಲ: ವಿಶೇಷ ದಾಖಲೆ ನಿರ್ಮಿಸಿದ ಜಸ್​ಪ್ರೀತ್ ಬುಮ್ರಾ

ಫಿಲ್ಮ್​ ಚೇಂಬರ್​ನಲ್ಲಿ ಚುನಾವಣೆ ಗಲಾಟೆ; ಭಾಮಾ ‌ಹರೀಶ್ ಹಾಗು ಸುರೇಶ್ ನಡುವೆ ಮಾತಿನ ಚಕಮಕಿ

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ