AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯ ದಿನ ವಧುವಿನ ಅಂದವನ್ನು ಹೆಚ್ಚಿಸಲು, ತಿಂಗಳುಗಳ ಮುನ್ನವೇ ಈ ಜೀವನಶೈಲಿ ರೂಢಿಸಿ

ಮದುವೆಯಂದು ಸುಂದರವಾಗಿ ಕಾಣಲು  ಮಾಡುವ ಮೇಕ್​ಅಪ್​​ ಮಾತ್ರ ಮುಖ್ಯ  ಅಲ್ಲ, ಬದಲಾಗಿ ತಿಂಗಳುಗಳ ಮುಂಚೆಯಿಂದಲೇ ನೀವು ಜೀವನಶೈಲಿಯಲ್ಲಿ  ಕೆಲವೊಂದಿಷ್ಟು ಬದಲಾವಣೆಯನ್ನು ಮಾಡಿಕೊಂಡರೆ ನೈಸರ್ಗಿಕವಾಗಿ ಸೌಂದರ್ಯವನ್ನು ಪಡೆಯಬಹುದು.

ಮದುವೆಯ ದಿನ ವಧುವಿನ ಅಂದವನ್ನು ಹೆಚ್ಚಿಸಲು, ತಿಂಗಳುಗಳ ಮುನ್ನವೇ ಈ ಜೀವನಶೈಲಿ ರೂಢಿಸಿ
Bride Beauty TipsImage Credit source: Professional Makeup Classes in Gurgaon
ಅಕ್ಷತಾ ವರ್ಕಾಡಿ
|

Updated on: May 19, 2023 | 7:00 AM

Share

ಪ್ರತೀ ವಧುವಿಗೆ ತಾನು ಮದುವೆಯ ದಿನ ಅತ್ಯಂತ ಸುಂದರವಾಗಿ ಕಾಣಬೇಕು ಎಂಬ ಕನಸಿರುತ್ತದೆ. ಆದರೆ ಮದುವೆಯಂದು ಸುಂದರವಾಗಿ ಕಾಣಲು  ಮಾಡುವ ಮೇಕ್​ಅಪ್​​ ಮಾತ್ರ ಮುಖ್ಯ  ಅಲ್ಲ, ಬದಲಾಗಿ ತಿಂಗಳುಗಳ ಮುಂಚೆಯಿಂದಲೇ ನೀವು ಜೀವನಶೈಲಿಯಲ್ಲಿ  ಕೆಲವೊಂದಿಷ್ಟು ಬದಲಾವಣೆಯನ್ನು ಮಾಡಿಕೊಂಡರೆ ನೈಸರ್ಗಿಕವಾಗಿ ಸೌಂದರ್ಯವನ್ನು ಪಡೆಯಬಹುದು. ನೀವು ನೈಸರ್ಗಿಕ ಹೊಳಪನ್ನು ಪಡೆಯಲು , ನೀವು ಆರೋಗ್ಯಕರವಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯ. ಮದುವೆ ಕನಿಷ್ಟ ಆರು ವಾರಗಳ ಮೊದಲು ನಿಮ್ಮ ಚರ್ಮವನ್ನು ಆರೋಗ್ಯವಾಗಿಟ್ಟುಕೊಳ್ಳಲು ಈ ಸಲಹೆಗಳನ್ನು ಪಾಲಿಸಿ.

ವಧುವಿನ ಆಹಾರಕ್ರಮ:

  • ಆಲ್ಕೋಹಾಲ್ ತಪ್ಪಿಸಿ
  • ನೀರು,ತಾಜಾ ಹಣ್ಣಿನ ರಸಗಳನ್ನು ಹೆಚ್ಚು ಕುಡಿಯಿರಿ
  • ನಿಮ್ಮ ಆಹಾರದಲ್ಲಿ ಪ್ರತಿದಿನ ಕನಿಷ್ಠ ಐದು ಹಣ್ಣುಗಳನ್ನು ಸೇರಿಸಿ.

ವಧುವಿನ ಡಾರ್ಕ್ ಸರ್ಕಲ್‌ ನಿವಾರಣೆಗಾಗಿ:

ಮದುವೆಯ ಸಂಭ್ರಮದ ಸಮಯದಲ್ಲಿ ಸಾಕಷ್ಟು ಒತ್ತಡದ ಜೀವನಶೈಲಿ ಇರುವುದರಿಂದ ನಿದ್ದೆಯು ಕಡಿಮೆಯಾಗಬಹುದು. ಆದರೆ ನಿಮ್ಮ ಆರೋಗ್ಯ ಹಾಗೂ ಸೌಂದರ್ಯದ ದೃಷ್ಟಿಯಿಂದ ಸರಿಯಾಗಿ ನಿದ್ದೆ ಮತ್ತು ವಿಶ್ರಾಂತಿ ಅಗತ್ಯವಾಗಿರುತ್ತದೆ. ನಿದ್ದೆಗೆ ಸರಿಯಾದ ಸಮಯ ಮೀಸಲಿಡುವುದರಿಂದ ನೈಸರ್ಗಿಕವಾಗಿ ಡಾರ್ಕ್ ಸರ್ಕಲ್‌ ಸಮಸ್ಯೆಯನ್ನು ನಿವಾರಿಸಬಹುದು.

ಇದನ್ನೂ ಓದಿ: ನಿಮ್ಮ ಸಂಗಾತಿಯ ಸುರಕ್ಷಿತ ಭಾವನೆಗಳಿಗೆ ನೀವು ಹೇಗೆ ಸಹಾಯ ಮಾಡಬಹುದು? ಇಲ್ಲಿದೆ ತಜ್ಞರ ಸಲಹೆ

ವಧುವಿನ ಚರ್ಮದ ಕಾಂತಿಗಾಗಿ:

1 ಟೀಸ್ಪೂನ್ ಹಾಲು,1 ಟೀಸ್ಪೂನ್ ಜೇನುತುಪ್ಪ ಮತ್ತ ಬಾದಾಮಿಯನ್ನು ಸೇರಿಸಿ ಚೆನ್ನಾಗಿ ಪೇಸ್ಟ್​​ ಮಾಡಿ ಮುಖ, ಬೆನ್ನು ಹಾಗೂ ಕೈ ಕಾಲುಗಳಿಗೆ ಹಚ್ಚಿ. 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ವಧುವಿನ ಕೂದಲಿನ ಆರೈಕೆಗಾಗಿ:

ಭೃಂಗರಾಜ್ ಎಣ್ಣೆ ಕೂದಲಿಗೆ ಮಸಾಜ್​​ ಮಾಡಿ. ಇದು ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ರಾಮಬಾಣವಾಗಿದೆ. ಇದಲ್ಲದೇ ಹೇರ್​​ ಪೇಸ್ಟ್​​​ ಕೂಡ ತಯಾರಿಸಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ 1 ಹಿಸುಕಿದ ಆವಕಾಡೊವನ್ನು ಸ್ವಲ್ಪ ಹಾಲು ಮತ್ತು 1 ಟೀಸ್ಪೂನ್ ಶುದ್ಧ ದೇಸಿ ತುಪ್ಪ ಎಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 30 ನಿಮಿಷಗಳ ವರೆಗೆ ಹಾಗೆಯೇ ಬಿಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ