AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ನಿಮ್ಮ ಆತ್ಮೀಯರೇ ದ್ರೋಹ ಬಗೆದಾಗ ಈ ವಿಷಯ ನೆನಪಿನಲ್ಲಿಡಿ ಎನ್ನುತ್ತಾನೆ ಚಾಣಕ್ಯ

ಈ ಕಾಲದಲ್ಲಿ ಯಾರನ್ನು ನಂಬುವುದು, ಯಾರನ್ನು ಬಿಡುವುದು ತಿಳಿಯುವುದಿಲ್ಲ. ನಾವು ಅತಿಯಾಗಿ ನಂಬಿದ ವ್ಯಕ್ತಿಗಳೇ ನಮಗೆ ಮೋಸ ಮಾಡುತ್ತಾರೆ. ಆದರೆ ಎಷ್ಟೋ ಸಲ ಆ ಕಹಿ ನೆನಪಿನಲ್ಲಿ ಕೊರಗುತ್ತೇವೆ. ಹೀಗಾಗಿ ಆಚಾರ್ಯ ಚಾಣಕ್ಯನು ತನ್ನ ನೀತಿಯಲ್ಲಿ ನಂಬಿಕೆ ದ್ರೋಹವಾದಾಗ ಏನು ಮಾಡಬೇಕು ಎನ್ನುವ ಸಲಹೆಗಳನ್ನು ನೀಡಿದ್ದಾನೆ ಆ ಕುರಿತಾದ ಮಾಹಿತಿ ಇಲ್ಲಿದೆ.

Chanakya Niti: ನಿಮ್ಮ ಆತ್ಮೀಯರೇ ದ್ರೋಹ ಬಗೆದಾಗ ಈ ವಿಷಯ ನೆನಪಿನಲ್ಲಿಡಿ ಎನ್ನುತ್ತಾನೆ ಚಾಣಕ್ಯ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Jan 04, 2025 | 6:26 PM

Share

ನಮ್ಮವರು ಎಂದು ನಂಬಿದವರೇ ಮೋಸ ಮಾಡುವುದೇ ಹೆಚ್ಚು. ಎಷ್ಟೋ ಜನರಿಗೆ ಈ ಅನುಭವವಾಗಿರುತ್ತದೆ. ಆತ್ಮೀಯ ವ್ಯಕ್ತಿಯಲ್ಲಿ ಯಾರಾದರೂ ದ್ರೋಹ, ಮೋಸ ಮಾಡಿದಾಗ ಮನಸ್ಸಿಗೆ ತುಂಬಾನೇ ನೋವಾಗುತ್ತದೆ. ಆದರೆ ಆ ವಿಷಯದ ಬಗ್ಗೆ ಚಿಂತಿಸುತ್ತಾ ಸಮಯ ವ್ಯರ್ಥ ಮಾಡದೇ ಈ ಚಾಣಕ್ಯನ ಈ ಸಲಹೆಗಳನ್ನು ಪಾಲಿಸಿದ್ರೆ ಯಶಸ್ವಿ ವ್ಯಕ್ತಿಯಾಗಲು ಸಾಧ್ಯವಂತೆ.

  • ಹಣದ ಸೂಕ್ತ ರೀತಿಯಲ್ಲಿ ಬಳಸಿ : ಹಣವನ್ನು ಸಂಪಾದಿಸುವುದು ಅಷ್ಟೇ ಅಲ್ಲ ಅದನ್ನು ಸರಿಯಾದ ಸ್ಥಳದಲ್ಲಿ ಖರ್ಚು ಮಾಡುವುದು ತಿಳಿದಿರಬೇಕು. ತಪ್ಪಾದ ಸ್ಥಳದಲ್ಲಿ ಹಣವನ್ನು ಹೂಡಿಕೆ ಮಾಡುವುದು ಜೀವನದಲ್ಲಿ ನಷ್ಟಕ್ಕೆ ಕಾರಣವಾಗುತ್ತದೆ. ಹಣವನ್ನು ಸರಿಯಾಗಿ ವಿನಿಯೋಗಿಸಿದರೆ, ಜೀವನದ ಯಶಸ್ಸಿಗೆ ಕಾರಣವಾಗುತ್ತದೆ.
  • ತಪ್ಪುಗಳಿಂದ ಪಾಠ ಕಲಿಯಿರಿ : ತಪ್ಪು ಯಾರು ಮಾಡಲ್ಲ ಹೇಳಿ, ಆದರೆ ಆ ತಪ್ಪುಗಳೇ ಮರಳಿ ಆಗದಿರಲಿ. ಒಬ್ಬ ವ್ಯಕ್ತಿಯು ತನ್ನ ತಪ್ಪುಗಳಿಂದ ಜೊತೆಗೆ ಇತರರ ತಪ್ಪುಗಳಿಂದಲೂ ಪಾಠವನ್ನು ಕಲಿಯಬೇಕು. ಹೀಗೆ ಪಾಠ ಕಲಿತಲ್ಲಿ ತಪ್ಪುಗಳನ್ನು ಮಾಡುವುದಿಲ್ಲ. ಇದರಿಂದ ಸಮಾಜದಲ್ಲಿ ಗೌರವಯುತವಾಗಿ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಇದರಿಂದ ಯಶಸ್ಸು ನಿಮ್ಮನ್ನು ಅರಸಿಕೊಂಡು ಬರುತ್ತದೆ ಎಂದಿದ್ದಾನೆ ಚಾಣಕ್ಯ.
  • ಸುಳ್ಳಿನಿಂದ ಯಶಸ್ಸು ಪಡೆಯಬೇಡಿ : ಕಷ್ಟ ಪಟ್ಟು ಗಳಿಸಿದ ಯಶಸ್ಸಿಗೆ ನಿಜವಾದ ಬೆಲೆ. ಹೀಗಾಗಿ ಸುಳ್ಳಿನಿಂದ ಪಡೆದ ಯಶಸ್ಸು ಶಾಶ್ವತವಾಗಿ ಉಳಿಯುವುದಿಲ್ಲ. ಈ ಯಶಸ್ಸು ಆ ಕ್ಷಣಕ್ಕೆ ಸಂತೋಷವನ್ನು ತಂದುಕೊಟ್ಟರೂ ಕೂಡ ಕಾಲಕ್ರಮೇಣ ನೋವಿಗೆ ಕಾರಣವಾಗುತ್ತದೆ. ಇದು ವ್ಯಕ್ತಿಯ ಜೀವನವನ್ನು ಹಾಳು ಮಾಡುತ್ತದೆ. ಹೀಗಾಗಿ ಯಶಸ್ಸು ಯಾವತ್ತಿಗೂ ಸತ್ಯದ ಮಾರ್ಗದಿಂದ ಇರಲಿ. ಆಗ ಆತ್ಮೀಯ ವ್ಯಕ್ತಿ ಮೋಸ ಮಾಡಿದರೂ ಕೂಡ ಆ ನೋವಿನಿಂದ ಚೇತರಿಸಿಕೊಳ್ಳಲು ಸಾಧ್ಯ ಎನ್ನುತ್ತಾನೆ ಚಾಣಕ್ಯ.
  • ಯಾರನ್ನೂ ಯಾವತ್ತಿಗೂ ನಿರ್ಲಕ್ಷಿಸಬೇಡಿ : ಒಬ್ಬ ವ್ಯಕ್ತಿಯು ಜ್ಞಾನ ಸಂಪಾದಿಸಿಕೊಂಡಾಗ ತನ್ನ ಮುಂದೆ ಇರುವ ವ್ಯಕ್ತಿಯನ್ನು ದುರ್ಬಲ ಎಂದು ಭಾವಿಸುತ್ತಾನೆ. ಆತನ ತಲೆ ಯಲ್ಲಿ ಅಹಂ ಭಾವನೆ ಮೂಡುತ್ತದೆ. ಆದರೆ ತನ್ನ ಎದುರಿಗಿರುವ ವ್ಯಕ್ತಿಯು ದುರ್ಬಲ ಎಂದು ಯಾವತ್ತಿಗೂ ಪರಿಗಣಿಸಲೇಬಾರದು. ಈ ವಿಷಯ ಆ ವ್ಯಕ್ತಿಗೆ ತಿಳಿದರೆ ತನ್ನ ತನ್ನ ಶಕ್ತಿಯನ್ನು ಬಹಿರಂಗ ಪಡಿಸದೇ ಇರಬಹುದು ಈ ವೇಳೆಯಲ್ಲಿ ಆತನನ್ನು ನೀವು ನಿರ್ಲಕ್ಷ್ಯ ಮಾಡುವರಿಂದ ನಿಮ್ಮ ನಾಶಕ್ಕೆ ನೀವೇ ದಾರಿ ಮಾಡಿಕೊಟ್ಟಂತಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ