AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cooking Tips : ಮನೆಯಲ್ಲಿ ಜ್ಯೂಸ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

ಬೇಸಿಗೆ ಬಂತೆಂದರೆ ಸಾಕು, ವಿಪರೀತ ಬಾಯಾರಿಕೆಯಿಂದ ಬಳಲುವುದು ಸಹಜ. ತಣ್ಣನೆಯ ಏನಾದರೂ ಸಿಕ್ಕರೆ ಸಾಕು ಎಂದೆನಿಸುತ್ತದೆ. ಹೀಗಾಗಿ ಹೆಚ್ಚಿನವರು ತಂಪಾದ ಪಾನೀಯಗಳನ್ನು ಕುಡಿದರೆ, ಕೆಲವರು ಮನೆಯಲ್ಲೇ ತಾಜಾ ಹಣ್ಣಿನಿಂದ ಜ್ಯೂಸ್ ಮಾಡಿ ಕುಡಿಯುವವರು ಇದ್ದಾರೆ. ಆದರೆ ಫ್ರೂಟ್ಸ್ ಜ್ಯೂಸ್ ಮಾಡುವಾಗ ಈ ಕೆಲವು ವಿಚಾರಗಳ ಬಗ್ಗೆ ಗಮನ ಹರಿಸುವುದು ಒಳ್ಳೆಯದು.

Cooking Tips : ಮನೆಯಲ್ಲಿ ಜ್ಯೂಸ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
ಸಾಯಿನಂದಾ
| Edited By: |

Updated on: May 02, 2024 | 4:04 PM

Share

ಸುಡು ಬಿಸಿಲಿನ ನಡುವೆ ತಣ್ಣನೆಯ ಪಾನೀಯವಂತೂ ಇದ್ದು ಬಿಟ್ಟರೆ ದೇಹಕ್ಕೆ ತಂಪು ಹಾಗೂ ಮನಸ್ಸಿಗೆ ಹಿತಕರ ಅನುಭವ. ಹೆಚ್ಚಿನವರು ಮನೆಯಲ್ಲೇ ಜ್ಯೂಸ್ ಮಾಡಿ ಸವಿಯುತ್ತಾರೆ. ಆದರೆ ಮನೆಯಲ್ಲೇ ಮಾಡುವ ಜ್ಯೂಸ್ ಗಳು ರೆಸ್ಟೋರೆಂಟ್‌ಗಳಲ್ಲಿ, ಜ್ಯೂಸ್‌ ಅಂಗಡಿಗಳಲ್ಲಿ ಸಿಗುವ ರುಚಿಯನ್ನು ಹೊಂದಿರುವುದಿಲ್ಲ. ತಾಜಾ ಜ್ಯೂಸ್ ತಯಾರಿಸುವಾಗ ಈ ಕೆಲವು ಟ್ರಿಕ್ಸ್ ಗಳನ್ನು ಬಳಸಿದರೆ ತಾಜಾ ಹಾಗೂ ರುಚಿಕರವಾದ ಹಣ್ಣಿನ ಜ್ಯೂಸ್ ಸವಿಯಲು ಸಿದ್ಧವಾಗುತ್ತದೆ.

ಹಣ್ಣಿನ ಜ್ಯೂಸ್ ಮಾಡುವಾಗ ಈ ವಿಷಯಗಳು ನೆನಪಿನಲ್ಲಿರಲಿ:

  1. ಮನೆಯಲ್ಲಿ ಜ್ಯೂಸ್‌ ಮಾಡುವಾಗ ಜ್ಯೂಸರ್‌ ಬಿಸಿ ಇರದಂತೆ ನೋಡಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ಜ್ಯೂಸರ್‌ ತುಂಬಾ ಬಿಸಿಯಿದ್ದರೆ ಹಣ್ಣುಗಳ ರುಚಿಯು ಬರುವುದಿಲ್ಲ.
  2. ಹಣ್ಣುಗಳು ಹಾಳಾಗಬಾರದು ಎಂದು ಹೆಚ್ಚಿನವರು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡುತ್ತಾರೆ. ಹೀಗೆ ಇಡುವುದರಿಂದ ಹಣ್ಣಿನಲ್ಲಿರುವ ಪೋಷಕಾಂಶಗಳು ಹಾಳಾಗುತ್ತದೆ. ಅದಲ್ಲದೇ ಹೊರಗಿಟ್ಟ ಹಣ್ಣುಗಳ ಜ್ಯೂಸ್ ಮಾಡಿದರೆ ರುಚಿಯು ಹೆಚ್ಚಾಗಿರುತ್ತದೆ.
  3. ಹಣ್ಣುಗಳ ಜ್ಯೂಸ್‌ ಮಾಡಿ ಫ್ರಿಡ್ಜ್‌ನಲ್ಲಿಡುವ ಅಭ್ಯಾಸವಿರುತ್ತದೆ. ಆದರೆ ಫ್ರಿಡ್ಜ್ ನಲ್ಲಿಟ್ಟ ಜ್ಯೂಸ್ ಕುಡಿಯುವುದರಿಂದ ಪೋಷಕಾಂಶಗಳು ಹಾಳಾಗುತ್ತದೆ. ಅದಲ್ಲದೇ, ತಣ್ಣಗೆಯೆನಿಸಿದರೂ ರುಚಿಯು ತಾಜಾ ಹಣ್ಣಿನ ಜ್ಯೂಸ್ ನಂತೆ ಇರುವುದಿಲ್ಲ.
  4. ಹೆಚ್ಚಿನವರಿಗೆ ಜ್ಯೂಸ್ ತಯಾರಿಸುವಾಗ ಸಿಹಿ ಹೆಚ್ಚಾಗಲಿ ಎಂದು ಸಕ್ಕರೆ ಹಾಕುವ ಅಭ್ಯಾಸವಿರುತ್ತದೆ. ಆದರೆ ಸಕ್ಕರೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಣ್ಣಿನಲ್ಲಿ ಸಿಹಿಯ ಅಂಶವಿರುವುದರಿಂದ ಆದಷ್ಟು ಸಕ್ಕರೆ ಹಾಕುವುದನ್ನು ತಪ್ಪಿಸುವುದು ಒಳ್ಳೆಯದು.
  5. ಹಣ್ಣುಗಳ ಜ್ಯೂಸ್‌ ಮಾಡುವಾಗ, ಮೊದಲು ಮಾಡಬೇಕಾದ ಕೆಲಸವೆಂದರೆ ಅದರ ಬೀಜಗಳನ್ನು ತೆಗೆಯುವುದು. ಬೀಜಗಳ ಸಹಿತ ಜ್ಯೂಸ್ ಮಾಡಿದರೆ ಕಹಿ ರುಚಿಯಿಂದ ಹಣ್ಣಿನ ಜ್ಯೂಸ್ ಹಾಳಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್