AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ದಾಂಪತ್ಯದಲ್ಲಿ ಪತಿಯೊಂದಿಗೆ ಎಂದಿಗೂ ಈ ವಿಚಾರಗಳ ಬಗ್ಗೆ ಚರ್ಚಿಸಬೇಡಿ

ಸಂಬಂಧದಲ್ಲಿ ಪ್ರಾಮಾಣಿಕರಾಗಿರಿ. ಆದರೆ ಸಂಗಾತಿಯ ನ್ಯೂನ್ಯತೆಗಳನ್ನು ಚರ್ಚಿಸಬೇಡಿ. ಆತನ ವೀಕ್​ಪಾಯಿಂಟ್​ಗಳನ್ನು ಎತ್ತಿ ಆಗಾಗ ಹೀಯಾಳಿಸಬೇಡಿ.

Relationship Tips: ದಾಂಪತ್ಯದಲ್ಲಿ ಪತಿಯೊಂದಿಗೆ ಎಂದಿಗೂ ಈ ವಿಚಾರಗಳ ಬಗ್ಗೆ ಚರ್ಚಿಸಬೇಡಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Mar 19, 2022 | 3:28 PM

Share

ಮದುವೆ ಪ್ರತೀ ವ್ಯಕ್ತಿಯ ಜೀವನದಲ್ಲಿ ಘಟಿಸುವ ಸುಂದರ ಕ್ಷಣ. ಮಹತ್ತರ ಬದಲಾವಣೆ ತರುವ ಮದುವೆ ಹಂತದ ಮೇಲೆ ನಿಂತಿರುವಂತಹದ್ದು. ಸಪ್ತಪದಿ ತುಳಿದು ಏಳೇಳು ಜನುಮದಲ್ಲಿಯೂ ಜೊತೆಯಾಗಿರೋಣ ಎಂಬ  ಮಾತಿನೊಂದಿಗೆ ಆರಂಭವಾಗುವ ಬಂಧ. ಹೆಣ್ಣುಮಕ್ಕಳ ಪಾಲಿಗೆ ಸುಮಧುರ ಗಳಿಗೆ ಹಾಗೂ ಸತ್ವಪರೀಕ್ಷೆ ಕೂಡ. ಹುಟ್ಟಿದ ಮನೆ, ಪರಿಸರ, ಜನ ಜೀವನಶೈಲಿ ಎಲ್ಲವನ್ನೂ ತೊರೆದು ಹೊಸ ಪ್ರಪಂಚಕ್ಕೆ ಆಕೆ ಅಡಿಯಿಡುತ್ತಾಳೆ. ಮದುವೆ ಎನ್ನುವುದು ಪರಸ್ಪರ ಒಡಂಬಡಿಕೆ. ಬಂಧುತ್ವವನ್ನು ಅಳವಡಿಸಿಕೊಂಡರೆ ಸುಖ ಜೀವನ ಸಾಧ್ಯ. ಅದಕ್ಕೆ ನಂಬಿಕಯೇ ಆಧಾರ. ಪತಿಯೊಂದಿಗೆ ಪಾರದರ್ಶಕವಾಗಿರುವುದು ಉತ್ತಮ. ಆದರೆ ಕೆಲವೊಂದು ವಿಚಾರಗಳನ್ನು ಚರ್ಚಿಸದಿರುವುದೇ ಒಳಿತು. ಇದರಿಂದ ಇಬ್ಬರ ಬಂಧಗಳಲ್ಲೂ ಬಿರುಕು ಉಂಟಾಗಬಹುದು. ಹಾಗಾದರೆ ಯಾವೆಲ್ಲಾ ವಿಚಾರಗಳನ್ನು ಚರ್ಚಿಸಬಾರದು ಎನ್ನುವ ಮಾಹಿತಿ ಇಲ್ಲಿದೆ  ನೋಡಿ,

ಸಂಗಾತಿಯ ಕುಟುಂಬದ ಬಗೆಗೆ ಇಷ್ಟವಿಲ್ಲದ ಸಂಗತಿ: ನಿಮ್ಮ ಪತಿಯ ಕುಟುಂಬದ ಬಗ್ಗೆ ಇಷ್ಟವಾಗದ ಸಂಗತಿಗಳನ್ನು ಎಂದಿಗೂ ಚರ್ಚಿಸಬೇಡಿ. ಮನೆಯಲ್ಲಿ ಸಮಸ್ಯೆಗಳನ್ನು ಎದುರಸುತ್ತಿದ್ದರೆ ಸಂಗಾತಿಗೆ ತಾಳ್ಮೆಯಿಂದ ಹೇಳಿ, ಮನೆಯವರ ಬಗ್ಗೆ ದೂರಬೇಡಿ. ಇದು ಆತನಿಗೆ ಇಷ್ಟವಾಗದೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಬಹುದು.

ಹಿಂದಿನ ಸಂಬಂಧಗಳ ಬಗ್ಗೆ ಮದುವೆಗೆ ಮೊದಲು ನೀವೇನಾದರೂ ಲೈಂಗಿಕ ಸಂಪರ್ಕ ಮಾಡಿದ್ದರೆ ಅಥವಾ ಅತಿಯಾಗಿ ಪ್ರೀತಿಸಿದ್ದರೆ ಅಂತಹ ವಿಚಾರಗಳನ್ನು ಪತಿಯೊಂದಿಗೆ ಹಂಚಿಕೊಳ್ಳಬೇಡಿ. ಸಂಬಂಧಗಳಲ್ಲಿ ಅಭದ್ರತೆ ಕಾಡುವುದಕ್ಕೆ ಇದು ಪ್ರಮುಖ ಕಾರಣವಾಗುತ್ತದೆ. ನಿಮ್ಮ ಹಳೆಯ ಪ್ರೀತಿಯ ವಿಚಾರಗಳನ್ನು ಆಗಾಗ ಚರ್ಚಿಸುವುದನ್ನು ಮಾಡಬೇಡಿ.

ನ್ಯೂನ್ಯತೆಗಳ ಚರ್ಚೆ ಬೇಡ: ಸಂಬಂಧದಲ್ಲಿ ಪ್ರಾಮಾಣಿಕರಾಗಿರಿ. ಆದರೆ ಸಂಗಾತಿಯ ನ್ಯೂನ್ಯತೆಗಳನ್ನು ಚರ್ಚಿಸಬೇಡಿ. ಆತನ ವೀಕ್​ಪಾಯಿಂಟ್​ಗಳನ್ನು ಎತ್ತಿ ಆಗಾಗ ಹೀಯಾಳಿಸಬೇಡಿ. ನಿನ್ನಿಂದ ಅದು ಸಾಧ್ಯವಿಲ್ಲ, ಇದು ಸಾಧ್ಯವಿಲ್ಲ ಎಂದು ಪದೇ ಪದೇ ಹೇಳಬೇಡಿ. ಇದರಿಂದ ಆತನಿಗೆ ಮುಜುಗರವಾಗಬಹುದು.

ಹಣದ ಸಮಸ್ಯೆ: ಹಣಕಾಸಿನ ಬಗ್ಗೆ ಚರ್ಚಿಸಿ, ಜಂಟಿ ಬಜೆಟ್‌ಗಳನ್ನು ರಚಿಸಿ ಆದರೆ ನಿಮ್ಮಿಬ್ಬರ ನಡುವೆ ಹಣವನ್ನು ಸಮಸ್ಯೆಯಾಗಿ ಮಾಡಬೇಡಿ. ಹಣದ ವಿಷಯದಲ್ಲಿ ಅನೇಕ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಿಭಿನ್ನ ಕಾರಣಗಳನ್ನು ಹೊಂದಿರಬಹುದು. ಹಣವಿಲ್ಲ ಎಂದು ಕೊರಗುವ ಬದಲು ಹಣದ ವ್ಯಯದ ಬಗ್ಗೆ ಸರಿಯಾದ ಪ್ಲಾನ್ ಮಾಡಿಕೊಳ್ಳಿ​.

ಸಂಬಂಧದ ಬಗ್ಗೆ ಸ್ನೇಹಿತರು ಆಡುವ ಮಾತುಗಳು: ಪ್ರತಿಯೊಬ್ಬರು ನಿಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾರೆ. ಹಾಗೆಂದು ಎಲ್ಲವನ್ನೂ ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಬೇಡಿ. ಆದಷ್ಟು ಧನಾತ್ಮಕ ಅಂಶಗಳನ್ನು ಹೇಳಿ. ಋಣಾತ್ಮ ಅಂಶಗಳನ್ನು ಸರಿಪಡಿಸಲು ಪ್ರಯತ್ನಸಿ. ಇದರಿಂ ಸಂಬಂಧ ಹದಗೆಡುವುದನ್ನು ತಡೆಯಬಹುದು.

ಇದನ್ನೂ ಓದಿ:

ಕಳೆದು ಹೋದ ಘಟನೆಗಳನ್ನ ಮರೆಯೋದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ

300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ