Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಬಗ್ಗೆ ಯಾರು ಏನು ಆಲೋಚಿಸ್ತಾರೆ ಎಂದು ಯೋಚನೆ ಮಾಡಬೇಡಿ, ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಳ್ಳುವುದೇ ಮುಖ್ಯ

ನಾವು ದಿನ ನಿತ್ಯದ ಜೀವನದಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ಹೆಚ್ಚು ತಲೆ ಕೆಡಿಸಿಕೊಳ್ಳುತ್ತೇವೆ, ಬೇರೆಯವರು ಏನೆಂದುಕೊಳ್ಳುತ್ತಾರೋ ಎನ್ನುವ ಆಲೋಚನೆಯಲ್ಲಿ ಸಣ್ಣಪುಟ್ಟ ಖುಷಿಯ ಕ್ಷಣವನ್ನು ಎಂಜಾಯ್ ಮಾಡುವುದನ್ನೇ ಮರೆತುಬಿಡುತ್ತೇವೆ.

ನಿಮ್ಮ ಬಗ್ಗೆ ಯಾರು ಏನು ಆಲೋಚಿಸ್ತಾರೆ ಎಂದು ಯೋಚನೆ ಮಾಡಬೇಡಿ, ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಳ್ಳುವುದೇ ಮುಖ್ಯ
SmileImage Credit source: Healthshots.com
Follow us
ನಯನಾ ರಾಜೀವ್
|

Updated on: Feb 19, 2023 | 2:57 PM

ನಾವು ದಿನ ನಿತ್ಯದ ಜೀವನದಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ಹೆಚ್ಚು ತಲೆ ಕೆಡಿಸಿಕೊಳ್ಳುತ್ತೇವೆ, ಬೇರೆಯವರು ಏನೆಂದುಕೊಳ್ಳುತ್ತಾರೋ ಎನ್ನುವ ಆಲೋಚನೆಯಲ್ಲಿ ಸಣ್ಣಪುಟ್ಟ ಖುಷಿಯ ಕ್ಷಣವನ್ನು ಎಂಜಾಯ್ ಮಾಡುವುದನ್ನೇ ಮರೆತುಬಿಡುತ್ತೇವೆ. ಒಂದು ವಿಚಾರದ ಬಗ್ಗೆ ಗಂಟೆಗಟ್ಟಲೆ ತಲೆ ಕೆಡಿಸಿಕೊಳ್ಳಬೇಡಿ, ಇದರಿಂದ ನಮ್ಮ ಸಮಯ ವ್ಯರ್ಥವಾಗುವುದಲ್ಲದೆ ಕ್ರಮೇಣ ಒತ್ತಡಕ್ಕೆ ಒಳಗಾಗುತ್ತೇವೆ. ಕಿರಿಕಿರಿ, ದುಃಖ, ಒಂಟಿಯಾಗಿರುವುದು ಮತ್ತು ಇತರರಿಂದ ತನ್ನನ್ನು ತಾನು ಕಡಿಮೆ ಅಂದಾಜು ಮಾಡಿಕೊಳ್ಳುವುದು ನಡವಳಿಕೆಯಲ್ಲಿ ಕಂಡುಬರುತ್ತದೆ. ದೈನಂದಿನ ಜೀವನದಲ್ಲಿ ನಡೆಯುವ ಇಂತಹ ವಿಷಯಗಳನ್ನು ನೀವು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೀರಾ? ಹೌದು ಎಂದಾದರೆ, ನೀವು ನಿಮ್ಮ ಖುಷಿಯಾಗಿ ಕೆಲವು ಕೆಲಸವನ್ನು ಮಾಡಬೇಕಾಗುತ್ತದೆ. ನಿಮ್ಮ ಭಾವನಾತ್ಮಕ ಆರೋಗ್ಯವನ್ನು ಬಲಪಡಿಸಲು ಸಹಾಯ ಮಾಡುವ ಸಲಹೆಗಳು ಇಲ್ಲಿವೆ.

ಎಲ್ಲರೂ ಏನು ಆಲೋಚಿಸುತ್ತಾರೆ ಅನ್ನುವುದರ ಕುರಿತು ಯೋಚಿಸಬೇಡಿ ನೀವೇನೋ ತಪ್ಪು ಮಾಡುತ್ತಿದ್ದೀರಿ ಎಂದು ನಿಮಗನಿಸಿದಾಗ ಯಾರು ಏನು ಅಂದುಕೊಳ್ಳಬಹುದು ಎಂದು ನೀವು ಆಲೋಚಿಸಬಹುದು, ಆದರೆ ನೀವು ಮಾಡುವ ಪ್ರತಿ ಕೆಲಸಕ್ಕೂ ಈ ರೀತಿ ಆಲೋಚಿಸಬೇಡಿ.

ಯಾರೇ ಹೇಳಿದರೂ ನಂಬಬೇಡಿ

ಯಾರೋ ನಿಮ್ಮ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು ಎಂದು ಯಾರೋ ನಿಮ್ಮ ಬಳಿ ಹೇಳಿದಾಗ ನೀವು ಅದನ್ನು ನಂಬಬೇಡಿ. ನಿಮ್ಮ ಬಳಿ ಬಂದು ನೇರವಾಗಿ ಮಾತನಾಡಲಿ, ಆಗ ಎಲ್ಲವನ್ನೂ ಶಾಂತ ರೀತಿಯಿಂದ ನಿಭಾಯಿಸಿದರಾಯಿತು.

ಮಾಡುವ ಕೆಲಸದ ಬಗ್ಗೆ ಶ್ರದ್ಧೆ ಇರಲಿ ಪ್ರತಿ ಕೆಲಸ ಮಾಡುವ ಮೊದಲು ನಮ್ಮ ಮನಸ್ಸಿನಲ್ಲಿ ಯಾವಾಗಲೂ ಯಾರು ಏನು ಹೇಳುತ್ತಾರೆ ಎಂಬುದನ್ನೇ ಆಲೋಚಿಸುತ್ತೇವೆ. ಬಾಲ್ಯದಿಂದಲೂ, ನಾವು ಈ ಪರಿಕಲ್ಪನೆಯೊಂದಿಗೆ ಬೆಳೆದಿದ್ದೇವೆ. ಮೊದಲನೆಯದಾಗಿ, ಈ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ ಮತ್ತು ನಿಮಗೆ ಏನು ಮಾಡಬೇಕೆಂದು ಅನಿಸುತ್ತದೆ ಅದನ್ನು ಮಾಡಿ. ನಿಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ನಿಮಗೆ ಇದೆ.

ನಿಮ್ಮ ಮೇಲೆ ಕೇಂದ್ರೀಕರಿಸಿ ನಾವು ದಿನವಿಡೀ ಇತರರ ಬಗ್ಗೆ ಚಿಂತಿಸುವುದರಲ್ಲಿ ನಿರತರಾಗಿದ್ದೇವೆ ಆದರೆ ನಮ್ಮ ಬಗ್ಗೆ ಯೋಚಿಸುವುದನ್ನು ಮರೆತುಬಿಡುತ್ತೇವೆ. ಯಾರು ಏನು ಯೋಚಿಸುತ್ತಾರೆ, ಯಾರು ಏನು ಹೇಳುತ್ತಾರೆ, ಯಾರೂ ಕೆಟ್ಟದ್ದನ್ನು ಅನುಭವಿಸುವುದಿಲ್ಲ. ಇವೆಲ್ಲವೂ ನಮ್ಮ ಮೇಲೆ ಬಹಳ ಪರಿಣಾಮ ಬೀರುತ್ತವೆ. ಇದರಿಂದ ಯಾರಾದರೂ ಏನಾದರೂ ಹೇಳಿದರೆ ನಮಗೆ ದುಃಖವಾಗುತ್ತದೆ.

ಪ್ರತಿಕ್ರಿಯಿಸುವುದನ್ನು ತಪ್ಪಿಸಿ ಪ್ರತಿಕ್ರಿಯೆ ನಿಮ್ಮ ದೌರ್ಬಲ್ಯವನ್ನು ವಿವರಿಸುತ್ತದೆ. ಎಲ್ಲರಿಗೂ ಸಮರ್ಥನೆ ನೀಡುವ ಅಗತ್ಯವಿಲ್ಲ. ನೀವು ಸರಿಯಾಗಿದ್ದರೆ, ಆ ಕ್ಷಣವನ್ನು ಆನಂದಿಸಿ. ಎದುರಿಗಿರುವವರ ಮಾತುಗಳು ನಿಮಗೆ ತೊಂದರೆ ಕೊಡುವ ಪರಿಸ್ಥಿತಿಯಲ್ಲಿದ್ದರೆ. ಈ ಪರಿಸ್ಥಿತಿಯು ನಿಮ್ಮನ್ನು ಆಳಲು ಬಿಡಬೇಡಿ ಮತ್ತು ಯಾರೊಂದಿಗೂ ಏನನ್ನೂ ಹೇಳದೆ ಮುಗುಳು ನಗು ನಗೆ ಬೀರಿ ಹೊರಬನ್ನಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ