AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದ ಹೆಣ್ಮಕ್ಕಳು ಪದೇ ಪದೇ ಅಮ್ಮನ ಮನೆಗೆ ಬರಬೇಡಿ, ಯಾಕೆ ಗೊತ್ತಾ?

ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದರೂ ತವರು ಮನೆಯೆಂದರೆ ವ್ಯಾಮೋಹ ಹೆಚ್ಚು. ತನ್ನ ತವರು ಸದಾ ಹಸಿರಾಗಿರಬೇಕೆಂದು ಬಯಸುವ ಹೆಣ್ಣು ಮಕ್ಕಳು ಅದೆಷ್ಟೋ. ಅದಲ್ಲದೇ ಸಮಯ ಸಿಕ್ಕಾಗಲೆಲ್ಲಾ ತನ್ನ ತವರಿಗೆ ಹೋಗಿ ಸ್ವಲ್ಪ ದಿನಗಳ ಕಾಲ ಅಲ್ಲೇ ಇದ್ದು ಬರುತ್ತಾರೆ. ಆದರೆ ಹೆಣ್ಣಾದವಳು ಪದೇ ಪದೇ ತವರಿಗೆ ಹೋಗುವುದು ಒಳ್ಳೆಯದಲ್ಲವಂತೆ. ಮಗಳು ತನ್ನ ತಾಯಿಮನೆಗೆ ಪದೇ ಪದೇ ಹೋಗುವುದರಿಂದ ಏನಾಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮದುವೆಯಾದ ಹೆಣ್ಮಕ್ಕಳು ಪದೇ ಪದೇ ಅಮ್ಮನ ಮನೆಗೆ ಬರಬೇಡಿ, ಯಾಕೆ ಗೊತ್ತಾ?
ಸಾಯಿನಂದಾ
| Edited By: |

Updated on: Jun 06, 2024 | 1:50 PM

Share

ತಾನು ಹುಟ್ಟಿ ಬೆಳೆದ ತವರನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಹೆಣ್ಣಿಗೆ ಆಗುವ ನೋವು ಅಷ್ಟಿಷ್ಟಲ್ಲ. ಆಡಿ ಬೆಳೆದ ಮನೆ, ಅಮ್ಮ ಅಪ್ಪನ ಪ್ರೀತಿ, ಅಣ್ಣ ತಮ್ಮಂದಿರ ಕಾಳಜಿ ಈ ಎಲ್ಲವನ್ನು ತೊರೆದು ಬೇರೊಂದು ಮನೆಯ ದೀಪವನ್ನು ಹಚ್ಚುವುದು ಹೆಣ್ಣಾದವಳಿಗೆ ಅನಿವಾರ್ಯ. ಆದರೆ ಹೆಣ್ಣಿನ ತವರು ತಂದು ಕೊಡುವ ಬೆಚ್ಚನೆಯ ಅನುಭವವನ್ನು ಗಂಡನ ಮನೆ ತಂದುಕೊಡುವುದಿಲ್ಲ. ತವರಿನಲ್ಲಿ ಸಿಗುವ ಬೆಚ್ಚನೆಯ ಪ್ರೀತಿ, ಕಾಳಜಿ, ಅಕ್ಕರೆ ತುಂಬಿದ ಮಾತಿಗೆ ಸರಿಸಾಟಿಯೇ ಇಲ್ಲ.

ಆದರೆ ಪದೇ ಪದೇ ತಾಯಿ ಮನೆಗೆ ಬರುವ ಹೆಣ್ಣು ಮಕ್ಕಳಿಗೆ ಈ ಕೆಲವು ವಿಚಾರಗಳು ಗೊತ್ತಿರಲೇಬೇಕು. ಬಿಡುವು ಸಿಕ್ಕಾಗಲೆಲ್ಲಾ ತವರಿಗೆ ಹೋಗುವುದು ಒಳ್ಳೆಯದಲ್ಲ ಎನ್ನುತ್ತದೆ ಶಾಸ್ತ್ರ. ಮನೆಯ ಲಕ್ಷ್ಮಿ ಎನ್ನಲಾಗುವ ಹೆಣ್ಣು ತನ್ನ ತವರಿಗೆ ಬರುವ ಮುನ್ನ ದಿನ ಹಾಗೂ ಸಮಯ ನೋಡಬೇಕೆಂತೆ. ಕೆಟ್ಟ ಸಮಯ ಹಾಗೂ ಕೆಟ್ಟ ದಿನದಲ್ಲಿ ಹೆಣ್ಣು ತನ್ನ ತವರಿಗೆ ಬಂದರೆ ಎರಡು ಮನೆಗೂ ಸಮಸ್ಯೆಗಳಾಗುತ್ತದೆ. ಹುಟ್ಟಿದ ಮನೆ ಹಾಗೂ ಮೆಟ್ಟಿನ ಮನೆಗೂ ಶ್ರೇಯಸಲ್ಲವಂತೆ.

ಇದನ್ನೂ ಓದಿ: ನಿಮ್ಮ ಪತಿಯು ಬಯಸುವ ಈ ಗುಣಗಳು ನಿಮ್ಮಲ್ಲಿದೆಯಾ? ಹಾಗಾದ್ರೆ ನಿಮಗೆ ಇದು ತಿಳಿದಿರಬೇಕು

ಈ ದಿನಗಳಲ್ಲಿ ತವರು ಮನೆಗೆ ಹೋಗಲೇಬೇಡಿ

* ತಾಯಿ ಮನೆಗೆ ಅಮವಾಸ್ಯೆ ದಿನ, ಅಮವಾಸ್ಯೆಯ ಹಿಂದಿನ ಹಾಗೂ ಮುಂದಿನ ದಿನ ಹೋಗಬಾರದು. ಈ ಮೂರು ದಿನಗಳಲ್ಲಿ ತವರು ಮನೆಯಿಂದ ಗಂಡನ ಮನೆಗೂ ಬರಬಾರದು ಎನ್ನಲಾಗುತ್ತದೆ.

* ಸೂರ್ಯ ಗ್ರಹಣ ಅಥವಾ ಚಂದ್ರ ಗ್ರಹಣವಿರುವ ದಿನ ತವರು ಮನೆಗೆ ಹೋಗಬಾರದು, ತವರಿನಿಂದ ಗಂಡನ ಮನೆಗೆ ಬರಬಾರದು. ಒಂದು ವೇಳೆ ಈ ಸಮಯದಲ್ಲಿ ಬಂದರೆ ತನ್ನ ಎರಡು ಮನೆಯಲ್ಲಿಯೂ ಆರ್ಥಿಕವಾಗಿ ಸಮಸ್ಯೆಗಳು ಉಂಟಾಗುತ್ತದೆ.

* ಹೆಣ್ಣು ಯಾವತ್ತಿಗೂ ಗಂಡನ ಜೊತೆ ಜಗಳ ಮಾಡಿಕೊಂಡು ತಾಯಿ ಮನೆಗೆ ಹೋಗಬಾರದು. ಹೆಣ್ಣು ಹೀಗೆ ಮಾಡಿದರೆ ಸಂಸಾರದಲ್ಲಿ ಬಿರುಕು ಮೂಡಿ ಸಮಸ್ಯೆಗೂ ಕಾರಣವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು