AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರ ಯೌವನ್ನಿಗ ನಾಯ್ಡು ಫುಡ್ಡು ಏನು ಗೊತ್ತಾ! ಅಮರಾವತಿ ನೂತನ ಸಾರಥಿ ಚಂದ್ರಬಾಬು ಆಹಾರಶೈಲಿ ಹೀಗಿದೆ

Chandrababu Naidu Food style: ತಾವು ತಿನ್ನುವ ಆಹಾರದ ಬಗ್ಗೆ ಸ್ವತಃ ಚಂದ್ರಬಾಬು ನಾಯ್ಡು ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದಾರೆ: ಬದುಕಲು ತಿನ್ನುತ್ತಾನೆಯೇ ಹೊರತು ತಿನ್ನಲು ಬದುಕುವುದಿಲ್ಲ ಎಂದಿದ್ದಾರೆ. ತನ್ಮೂಲಕ ತಾವು ತಿನ್ನುವ ಆಹಾರವು ತುಂಬಾ ಸರಳವಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಚಿರ ಯೌವನ್ನಿಗ ನಾಯ್ಡು ಫುಡ್ಡು ಏನು ಗೊತ್ತಾ! ಅಮರಾವತಿ ನೂತನ ಸಾರಥಿ ಚಂದ್ರಬಾಬು ಆಹಾರಶೈಲಿ ಹೀಗಿದೆ
Chandrababu Foods: ಚಿರ ಯೌವನ್ನಿಗ ನಾಯ್ಡು ಫುಡ್ಡು ಏನು ಗೊತ್ತಾ!
ಸಾಧು ಶ್ರೀನಾಥ್​
|

Updated on:Jun 06, 2024 | 4:39 PM

Share

ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಅಸೆಂಬ್ಲಿ ಮತ್ತೊ ಲೋಕಸಭೆ ಚುನಾವಣೆಗಳಲ್ಲಿ ತೆಲುಗು ದೇಶಂ ಪಕ್ಷ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಚಂದ್ರಬಾಬು ನಾಯ್ಡು ಎಂಬ ಚಿರ ಯೌವನ್ನಿಗ ಮುಂದಿನ ವಾರದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಂದಹಾಗೆ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರಿಗೆ 74 ವರ್ಷ ವಯಸ್ಸಾಗಿದೆ. ಪಾದರಸದಂತೆ ಸಕ್ರಿಯವಾಗಿ (Chandrababu Naidu Life Style) ಅವರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಹಾಗಾದರೆ ಚಂದ್ರಬಾಬು ನಾಯ್ಡು ಅಷ್ಟೋಂದು ಆರೋಗ್ಯವಾಗಿರಲು ಏನೆಲ್ಲಾ ಆಹಾರ ತಿನ್ನುತ್ತಾರೆ? ಅವರು ಯಾವ ರೀತಿಯ ಆಹಾರಕ್ರಮವನ್ನು ಅನುಸರಿಸುತ್ತಾರೆ? (Chandrababu Naidu Food style)

ತಾವು ತಿನ್ನುವ ಆಹಾರದ ಬಗ್ಗೆ ಸ್ವತಃ ಚಂದ್ರಬಾಬು ನಾಯ್ಡು ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದಾರೆ: ಬದುಕಲು ತಿನ್ನುತ್ತಾನೆಯೇ ಹೊರತು ತಿನ್ನಲು ಬದುಕುವುದಿಲ್ಲ ಎಂದಿದ್ದಾರೆ. ತನ್ಮೂಲಕ ತಾವು ತಿನ್ನುವ ಆಹಾರವು ತುಂಬಾ ಸರಳವಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಯಾವುದೇ ತರಹದ ವಿಶೇಷ, ನಿರ್ದಿಷ್ಟ ಆಹಾರ ತೆಗೆದುಕೊಳ್ಳುವುದಿಲ್ಲ. ಆರೋಗ್ಯಕರವಾದುದನ್ನೇ ತಿನ್ನುತ್ತೇನೆ ಎಂದಿದ್ದಾರೆ. ನಾವು ಎಷ್ಟು ತಿನ್ನುತ್ತೇವೆ ಮತ್ತು ಎಷ್ಟು ಕ್ಯಾಲೊರಿಗಳನ್ನು ಖರ್ಚು ಮಾಡುತ್ತಿದ್ದೇವೆ ಎಂದು ಅವರು ಪಕ್ಕಾ ಲೆಕ್ಕ ಹಾಕುತ್ತಾರಂತೆ.

ಇದನ್ನೂ ಓದಿ: ಸಂಜಯ್ ಗಾಂಧಿ ಕಟ್ಟಾ ಬೆಂಬಲಿಗ, ಸೈಬರಾಬಾದ್ ಖ್ಯಾತಿಯ ಚಂದ್ರಬಾಬು ನಾಯ್ಡು ಕೈಗೆ ಮತ್ತೆ ಆಂಧ್ರ ಚುಕ್ಕಾಣಿ

ಚಂದ್ರಬಾಬು ಡಯಟ್ ಚಾರ್ಟ್​ ಹೀಗಿದೆ:

ದಿನಾ ಬೆಳಗ್ಗೆ: ಇಡ್ಲಿ- ಸಾಂಬಾರು, ರಾಗಿ ಇಡ್ಲಿ, ಓಟ್ಸ್ ಉಪ್ಮಾ, ಎರಡು ದೋಸೆ, ಸ್ವಲ್ಪ ಚಟ್ನಿ, ಎರಡು ಬೇಯಿಸಿದ ಮೊಟ್ಟೆಗಳು. ಇವುಗಳಲ್ಲಿ ಒಂದನ್ನು ಉಪಾಹಾರಕ್ಕಾಗಿ ತೆಗೆದುಕೊಳ್ಳಲಾಗುತ್ತದೆ. ಬೆಳಗಿನ ಉಪಾಹಾರ ಮತ್ತು ಊಟದ ನಡುವೆ ಹಣ್ಣು ತಗೋತಾರೆ.

ಮಧ್ಯಾಹ್ನ: ರಾಗಿ ಮುದ್ದೆ, ಸಾಂಬಾರು, ರೊಟ್ಟಿ ಅಥವಾ ಅನ್ನ, ಎರಡು ಅಥವಾ ಮೂರು ಸಾಂಬಾರು. ಹೆಚ್ಚು ಎಣ್ಣೆ ಇಲ್ಲ, ಸ್ವಲ್ಪ ಮೊಸರು. ಮಧ್ಯಾಹ್ನ ಮತ್ತು ಸಂಜೆಯ ತಿಂಡಿಗಳ ನಡುವೆ ಸ್ವಲ್ಪ ನಟ್ಸ್ ಅಥವಾ ಜ್ಯೂಸ್ ಸೇವಿಸುತ್ತಾರೆ.

ಸಂಜೆ: ಯಾವುದಾದರೂ ಸೂಪ್, ಕೆಲವು ಅಲ್ಪಾಹಾರದ ತಿಂಡಿ, ಮೊಟ್ಟೆ.

Also Read: Amaravati as Andhra Capital – ಆಂಧ್ರದಲ್ಲಿನ್ನು ಬಾಬು ಆಡಳಿತ -ಚಂದ್ರಬಾಬು ಕನಸಿನ ಅಮರಾವತಿ ಮತ್ತೆ ರಾಜಧಾನಿಯಾಗಲಿದೆಯೇ?

ರಾತ್ರಿ: ರಾತ್ರಿ ಮಲಗುವ ಮುನ್ನ ಕೇವಲ ಒಂದು ಲೋಟ ಹಾಲು. ತುಂಬಾ ಹಸಿವಾದರೆ ಚಿಕ್ಕ ಹಣ್ಣು.

ಇದರ ಜೊತೆಗೆ ಆರರಿಂದ ಏಳು ಗಂಟೆಗಳ ನಿದ್ದೆ ಮಾಡುತ್ತೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಈ ಆಹಾರ ಕ್ರಮವನ್ನು ಅನುಸರಿಸುವಾಗ, ಅವರು ವಾಕಿಂಗ್ ಅಥವಾ ಸಣ್ಣ ವ್ಯಾಯಾಮಗಳನ್ನು ಮಾಡುತ್ತಾರಂತೆ. ಕೆಲವೊಮ್ಮೆ ತಿನ್ನುವ ಆಹಾರದ ಆಧಾರದ ಮೇಲೆ ವ್ಯಾಯಾಮವೂ ಬದಲಾಗುತ್ತದೆ. ಇದು ಚಂದ್ರಬಾಬು ಅವರ ಪಥ್ಯ. ಎಲ್ಲೇ ಇದ್ದರೂ ಈ ಡಯಟ್ ಫಾಲೋ ಮಾಡುತ್ತೇನೆ ಎಂದು ಬಾಬು ಹೇಳುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:35 pm, Thu, 6 June 24

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!