AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Marriage Life : ನಿಮ್ಮ ಪತಿಯು ಬಯಸುವ ಈ ಗುಣಗಳು ನಿಮ್ಮಲ್ಲಿದೆಯಾ? ಹಾಗಾದ್ರೆ ನಿಮಗೆ ಇದು ತಿಳಿದಿರಬೇಕು

ಮದುವೆ ಎನ್ನುವುದು ಎರಡು ಕುಟುಂಬಗಳ ಬೆಸುಗೆ, ಎರಡು ಮನಸ್ಸುಗಳ ಮಿಲನ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಹೆಣ್ಣಾದವಳು ಗಂಡನ ಮನೆಯ ಆಚಾರ, ವಿಚಾರಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಗಂಡು ತನ್ನನ್ನೆ ನಂಬಿಕೊಂಡು ಬಂದ ಪತ್ನಿಯ ಸುಖ ಕಷ್ಟಗಳಿಗೆ ಜೊತೆಯಾಗಬೇಕು. ಸಂಸಾರದಲ್ಲಿ ಹೆಣ್ಣು ಗಂಡಿನಿಂದ ಪ್ರೀತಿಯನ್ನು ಬಯಸೋದು ಸಹಜ. ಆದರೆ ಪ್ರತಿ ಗಂಡು ತನ್ನ ಮಡದಿಯಿಂದ ಈ ಕೆಲವುದನ್ನು ಬಯಸುತ್ತಾನಂತೆ. ಇದನ್ನರಿತು ಪತಿಯ ಇಚ್ಛೆಯಂತೆ ಪತ್ನಿಯು ನಡೆದರೆ ಸಂಸಾರವು ಸ್ವರ್ಗವಾಗುತ್ತದೆ.

Marriage Life : ನಿಮ್ಮ ಪತಿಯು ಬಯಸುವ ಈ ಗುಣಗಳು ನಿಮ್ಮಲ್ಲಿದೆಯಾ? ಹಾಗಾದ್ರೆ ನಿಮಗೆ ಇದು ತಿಳಿದಿರಬೇಕು
ಸಾಯಿನಂದಾ
| Edited By: |

Updated on: Jun 05, 2024 | 3:04 PM

Share

ಪ್ರತಿಯೊಬ್ಬರ ಜೀವನದ ಸುಂದರವಾದ ಅಧ್ಯಾಯವೇ ಈ ಮದುವೆ. ಗಂಡು ಹೆಣ್ಣಿನ ಜೀವನದಲ್ಲಿ ತಿರುವಿನ ಘಟ್ಟವು ಕೂಡ. ಹೀಗಾಗಿ ಹೆಣ್ಣು ಗಂಡು ಮದುವೆಯಾದ ಬಳಿಕ ಎಲ್ಲಾ ರೀತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಹೆಣ್ಣಿನಂತೆ ಗಂಡಿಗೂ ಕೂಡ ಆಸೆ ಆಕಾಂಕ್ಷೆಗಲಿರುವುದು ಸಹಜ. ತನ್ನ ಸಂಗಾತಿಯೂ ಹೀಗೆ ಇರಬೇಕೆಂದು ಕನಸು ಕಂಡಿರುತ್ತಾರೆ. ಗಂಡು ಮದುವೆಯಾದ ಬಳಿಕ ಪತ್ನಿಯಿಂದ ಇದನ್ನು ನಿರೀಕ್ಷೆ ಮಾಡುತ್ತಾನೆ.

* ನಂಬಿಕೆಯೇ ಜೀವಾಳ : ಯಾವುದೇ ಸಂಬಂಧದಲ್ಲಿಯೂ ನಂಬಿಕೆಯೂ ಬಹಳ ಮುಖ್ಯ. ಹೀಗಾಗಿ ತನ್ನ ಮಡದಿಯೂ ಸದಾ ನನ್ನ ಮೇಲೆ ನಂಬಿಕೆ ಇಡಬೇಕು. ಯಾವುದೇ ಕಾರಣಕ್ಕೂ ಅನುಮಾನಪಡಬಾರದೆಂದು ಬಯಸುತ್ತಾನೆ.

* ಪ್ರಾಮಾಣಿಕತೆಯಿರಲಿ : ಸಂಸಾರದಲ್ಲಿ ಒಬ್ಬರಿಗೊಬ್ಬರು ಪ್ರಾಮಾಣಿಕರಾಗಿರಬೇಕು. ಗಂಡಂದಿರು ತಮ್ಮ ಸಂಗಾತಿಯೂ ಸಂಬಂಧದಲ್ಲಿ ಸದಾ ಪ್ರಾಮಾಣಿಕರಾಗಿರಬೇಕೆಂದು ಬಯಸುತ್ತಾರೆ.

* ಅರ್ಥಮಾಡಿಕೊಳ್ಳುವುದು : ವೈವಾಹಿಕ ಜೀವನದಲ್ಲಿ ಪರಸ್ಪರ ಅರ್ಥಮಾಡಿಕೊಂಡರೆ ಸಂಸಾರವು ಸರಾಗವಾಗಿ ಸಾಗಲು ಸಾಧ್ಯ. ಹೀಗಾಗಿ ಪತ್ನಿಯಾದವಳು ತನ್ನ ಅಗತ್ಯತೆಗಳನ್ನು ಪೂರೈಸುತ್ತ, ತನ್ನ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳಲಿ ಎನ್ನುವ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾನೆ.

* ಪರಸ್ಪರ ಗೌರವವಿರಲಿ : ಸಂಸಾರದಲ್ಲಿ ಪರಸ್ಪರ ಗೌರವ ನೀಡುವುದು ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಹೆಂಡತಿಯೂ ಸದಾ ಪತಿಯ ಆಲೋಚನೆಗಳು, ಸಲಹೆಗಳು ಹಾಗೂ ನಿರ್ಧಾರಗಳನ್ನು ಗೌರವಿಸುತ್ತಿರಬೇಕು. ಹೀಗಾಗಿ ಪತಿಯೂ ಪತ್ನಿಯಿಂದ ಸದಾ ಗೌರವವನ್ನು ಬಯಸುತ್ತಾನೆ.

ಇದನ್ನೂ ಓದಿ: ಈ ಸಂದರ್ಭದಲ್ಲಿ ನೀವು ಅಪ್ಪಿತಪ್ಪಿಯೂ ಮಾತನಾಡಲೇಬೇಡಿ, ಇದ್ರಿಂದ ತೊಂದರೆಯೇ ಹೆಚ್ಚು

* ಆರ್ಥಿಕವಾಗಿ ಸಹಕರಿಸಲಿ : ಸಂಸಾರವು ಸುಗಮವಾಗಿ ನಡೆಯಬೇಕಾದರೆ ಆರ್ಥಿಕ ಸ್ಥಿತಿಯೂ ಚೆನ್ನಾಗಿರಬೇಕು. ಪತ್ನಿಯಾದವಳು ತನ್ನ ಜವಾಬ್ದಾರಿಯನ್ನು ಅರಿತು, ಆರ್ಥಿಕವಾಗಿ ಬೆಂಬಲ ನೀಡಲಿ ಎಂದು ಪತ್ನಿಯಾದವನು ಸದಾ ಬಯಸುತ್ತಾನೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!