AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Life Lesson : ಈ ಸಂದರ್ಭದಲ್ಲಿ ನೀವು ಅಪ್ಪಿತಪ್ಪಿಯೂ ಮಾತನಾಡಲೇಬೇಡಿ, ಇದ್ರಿಂದ ತೊಂದರೆಯೇ ಹೆಚ್ಚು

ಕೆಲವರೂ ಹಿಂದೆ ಮುಂದೆ ಯೋಚಿಸುವುದನ್ನು ಬಿಟ್ಟು ಮಾತನಾಡುತ್ತಾರೆ. ಈ ಮಾತುಗಳು ಕೆಲವರಿಗೆ ನೋವನ್ನು ಉಂಟು ಮಾಡುತ್ತದೆ. ತನಗನಿಸಿದ್ದನ್ನು ನೇರವಾಗಿ ಹೇಳುವುದು ಹಾಗೂ ತಮ್ಮ ಭಾವನೆಯನ್ನು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಈ ಕೆಲವು ಸಂದರ್ಭದಲ್ಲಿ ಮಾತಿಗಿಂತ ಮೌನ ವಹಿಸುವುದೇ ಮುಖ್ಯ. ಇಂತಹ ಸಂದರ್ಭಗಳು ನಿಮಗೂ ಎದುರಾದರೆ ಈ ಸಮಯದಲ್ಲಿ ಆದಷ್ಟು ಮೌನವಾಗಿರುವುದನ್ನು ಕಲಿಯಿರಿ.

Life Lesson : ಈ ಸಂದರ್ಭದಲ್ಲಿ ನೀವು ಅಪ್ಪಿತಪ್ಪಿಯೂ ಮಾತನಾಡಲೇಬೇಡಿ, ಇದ್ರಿಂದ ತೊಂದರೆಯೇ ಹೆಚ್ಚು
ಸಾಯಿನಂದಾ
| Edited By: |

Updated on: Jun 04, 2024 | 6:30 PM

Share

ಮಾತು ಬೆಳ್ಳಿ ಮೌನ ಬಂಗಾರ, ಈ ಮಾತು ಕೆಲವೊಂದು ಸಂದರ್ಭದಲ್ಲಿ ನಿಜವೆನಿಸುತ್ತದೆ. ಮಾತು ಮತ್ತು ಮೌನ ಎರಡೂ ಮನುಷ್ಯನಿಗೆ ಅತ್ಯಅಗತ್ಯವಾಗಿದೆ. ಆದರೆ ಅಗತ್ಯವಿದ್ದಾಗ ಮಾತ್ರ ಮಾತನಾಡುವುದು. ಅಗತ್ಯ ಇಲ್ಲದೆ ಇರುವಾಗ ಮೌನವನ್ನು ವಹಿಸುವುದು ತಿಳಿದಿರಬೇಕು. ಅದರಲ್ಲಿಯು ಕೆಲವು ಸಂದರ್ಭದಲ್ಲಿ ಮಾತಿಗಿಂತ ಮೌನವು ಹಿತಕರವಾಗಿರುತ್ತದೆ.

* ಎಲ್ಲರೂ ಕೂಡ ಎಲ್ಲವನ್ನು ಬಲ್ಲವರು ಆಗಿರುವುದಿಲ್ಲ. ಯಾರಾದರೂ ಗಂಭೀರ ವಿಷಯದ ಬಗ್ಗೆ ಮಾತನಾಡುತ್ತಿರುವಾಗ ಅದನ್ನು ಕೇಳುವ ತಾಳ್ಮೆಯಿರಬೇಕು. ಆ ವಿಷಯದ ಬಗ್ಗೆ ತಿಳಿದಿಲ್ಲದೇ ಇರುವಾಗ ಆ ಬಗ್ಗೆ ಮಾತನಾಡಬೇಡಿ. ಮೌನದಿಂದಲೇ ಅವರ ಮಾತುಗಳನ್ನು ಆಲಿಸಿ.

* ಕೋಪದಲ್ಲಿರುವಾಗ ಮೌನ ವಹಿಸುವುದೇ ಲೇಸು. ಕೆಲವೊಮ್ಮೆ ಕೋಪದಲ್ಲಿ ಒಬ್ಬ ವ್ಯಕ್ತಿಯು ತಾನು ಹೇಳಬಾರದ ವಿಷಯಗಳನ್ನು ಹೇಳುತ್ತಾನೆ. ಅದಲ್ಲದೇ, ಎದುರಿಗಿರುವ ವ್ಯಕ್ತಿಗೆ ನೋಯಿಸುವ ಸಾಧ್ಯತೆಯೇ ಹೆಚ್ಚಿರುತ್ತದೆ. ಈ ಸಮಯದಲ್ಲಿ ಮಾತಿಗಿಂತ ಮೌನವೇ ಒಳ್ಳೆಯದು.

* ದುಃಖದ ಸಮಯದಲ್ಲಿ ಮೌನ ವಹಿಸುವುದು ಬಹಳನೇ ಮುಖ್ಯ. ಯಾರೊಬ್ಬರ ನೋವಿಗೆ ನೀವು ಸ್ಪಂದಿಸುವಾಗ ಹೆಚ್ಚು ಮಾತನಾಡಬೇಡಿ. ಮೌನವಾಗಿ ಉಳಿಯುವ ಮೂಲಕ ನಿಮ್ಮ ನೋವನ್ನು ವ್ಯಕ್ತಪಡಿಸಬಹುದು. ಅಥವಾ ನಿಮ್ಮ ಮುಖದ ಬದಲಾವಣೆಗಳು ಎದುರಿಗೆ ವ್ಯಕ್ತಿಗೆ ಸಾಂತ್ವನವಾಗಬಹುದು.

* ಜೀವನದಲ್ಲಿ ಪ್ರಮುಖವಾದ ವಿಚಾರಗಳಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವಾಗ ಹೆಚ್ಚು ಮಾತನಾಡಬೇಡಿ. ಈ ವೇಳೆ ಒಬ್ಬರೇ ಕುಳಿತು ಮೌನವಾಗಿ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಇದನ್ನೂ ಓದಿ: ಕೆಲಸ ಮಾಡಿ ಸುಸ್ತಾಗಿದ್ದರೆ ದೇಹಕ್ಕೆ ಎನರ್ಜಿ ಕೊಡುತ್ತೆ ಈ ಆಹಾರ! ಒಮ್ಮೆ ಸೇವಿಸಿ ನೋಡಿ

* ಸುಳ್ಳು ಹೇಳುವ ಸಂದರ್ಭ ಅಥವಾ ಸಮಯ ಎದುರಾದಾಗ ಸುಳ್ಳು ಹೇಳುವ ಬದಲು ಮೌನ ವಹಿಸುವುದನ್ನು ಕಲಿಯಿರಿ. ಕೆಲವೊಮ್ಮೆ ಒಂದು ಸುಳ್ಳನ್ನು ಮುಚ್ಚಿಹಾಕಲು ಮತ್ತೊಂದು ಸುಳ್ಳು ಹೇಳಬೇಕಾಗುತ್ತದೆ. ಸುಳ್ಳಿನಿಂದ ಪರಿಸ್ಥಿತಿಯನ್ನು ಹದಗೆಟ್ಟು ಸಂಬಂಧವು ಹಾಳಾಗಬಹುದು. ಹೀಗಾಗಿ ಮೌನದಿಂದಲೇ ಆ ಸಂದರ್ಭವನ್ನು ತಿಳಿಯಾಗಿಸುವುದು ಒಳ್ಳೆಯ ಮಾರ್ಗವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ; ರವಿಚಂದ್ರನ್
ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ; ರವಿಚಂದ್ರನ್
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು