AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Habits: ಆರೋಗ್ಯಯುತ ಆಹಾರ ತಯಾರಿಕೆಗೆ ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಸಸ್ಯಾಹಾರಿ ಆಗಿರಲಿ ಅಥವಾ ಮಾಂಸಹಾರಿ ಆಗಿರಲಿ ಸೇವಿಸುವ ಮುನ್ನ ಸ್ವಚ್ಛತೆಯಿಂದ ತಯಾರಿಸಬೇಕು. ಹಾಗಾದರೆ ಅಡುಗೆ ಮನೆಯಲ್ಲಿ ಯಾವೆಲ್ಲಾ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ಆಹಾರ ಕಲುಷಿತಗೊಳ್ಳಬಹುದು. ಆ ಕುರಿತು ಮಾಹಿತಿ ಇಲ್ಲಿದೆ.

Kitchen Habits: ಆರೋಗ್ಯಯುತ ಆಹಾರ ತಯಾರಿಕೆಗೆ ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ
ಸಾಂಕೇತಿಕ ಚಿತ್ರ
TV9 Web
| Updated By: Pavitra Bhat Jigalemane|

Updated on: Jan 30, 2022 | 2:30 PM

Share

ಸೇವಿಸುವ ಆಹಾರ ಎಷ್ಟು ಮುಖ್ಯವೋ ಅದನ್ನು ತಯಾರಿಸುವ ವಿಧಾನವೂ ಅಷ್ಟೇ ಪ್ರಮುಖವಾಗಿರುತ್ತದೆ. ಏಕೆಂದರೆ ಆಹಾರದ ಶುದ್ಧತೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೊರೋನಾ ಸಾಂಕ್ರಾಮಿಕ ಶುರುವಾದಾಗಿನಿಂದ ಎಷ್ಟು ಸ್ವಚ್ಛತೆ ವಹಿಸಿದರೂ ಕಡಿಮೆಯೇ ಎನ್ನುವಂತಾಗಿದೆ. ಅಡುಗೆ ಮನೆಯಲ್ಲಿ ನೀವು ಪಾಲಿಸುವ ಕೆಲವು ಅಭ್ಯಾಸಗಳು ನಿಮ್ಮ ಆಹಾರವನ್ನು ಕಲುಷಿತಗೊಳಿಸಬಹುದು. ಇದರಿಂದ ನಿಮ್ಮ ಆರೋಗ್ಯ ಕೆಡಬಹುದು. ಸಸ್ಯಾಹಾರಿ ಆಗಿರಲಿ ಅಥವಾ ಮಾಂಸಹಾರಿ ಆಗಿರಲಿ ಸೇವಿಸುವ ಮುನ್ನ ಸ್ವಚ್ಛತೆಯಿಂದ ತಯಾರಿಸಬೇಕು. ಹಾಗಾದರೆ ಅಡುಗೆ ಮನೆಯಲ್ಲಿ ಯಾವೆಲ್ಲಾ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ಆಹಾರ ಕಲುಷಿತಗೊಳ್ಳಬಹುದು. ಆ ಕುರಿತು ಇಲ್ಲಿದೆ ಮಾಹಿತಿ.

ಸ್ಪಾಂಜ್​ಗಳ ಬಳಕೆ ತಿಂಗಳುಗಳ ಕಾಲ ಒಂದೇ ಸ್ಪಾಂಜ್​ ಮೂಲಕ ಅಡುಗೆ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರೆ ಇದು ಬ್ಯಾಕ್ಟೀರಿಯಾಗಳು ಹರಡಲು ಕಾರಣವಾಗುತ್ತದೆ. ಹೀಗಾಗಿ ಅಡುಮನೆಯನ್ನು ಸ್ಚಚ್ಛಗೊಳಿಸುವ ವೇಳೆ ಬಳಸುವ ವಸ್ತುಗಳ ಬಗ್ಗೆ ಗಮನಹರಿಸಿ. ಒಂದೇ ಸ್ಪಾಂಜ್​ಗಳನ್ನು ಹಲವು ದಿನ ಬಳಕೆ ಮಾಡುವುದರಿಂದ ಅದರಿಲ್ಲಿ ಕೊಳೆ ಸಿಲುಕಿ ಕೀಟಾಣುಗಳು ಉತ್ಪತ್ತಿಯಾಗುತ್ತವೆ. ಇವುಗಳು ನಿಮ್ಮ ಆಹಾರದ ಮೇಲೆಯೂ ಪರಿಣಾಮ ಬೀರುತ್ತದೆ.

ಕೌಂಟರ್​ಟಾಪ್​ಗಳ ಬಳಕೆ ನೀವು ಮನೆಯಲ್ಲಿ ಮಾಂಸಾಹಾರವನ್ನು ತಯಾರಿಸುತ್ತಿದ್ದೀರಾ ಎನ್ನುವುದಾದರೆ ಕೌಂಟರ್​ಟಾಪ್​ ಮೇಲೆ ಅವುಗಳನ್ನು ತಯಾರಿಸಬೇಡಿ. ಏಕೆಂದರೆ ಮಾಂಸಾಹಾರ ತಯಾರಿಕೆಯಲ್ಲಿ ವಿವಿಧ ರೀತಿಯ ಮಸಾಲೆಗಳು ಬೇಕಾಗುತ್ತವೆ. ಕೌಂಟರ್​ಟಾಪ್​ನಲ್ಲಿ ಮಾಂಸದ ಜತೆಗೆ ಅವು ಬಿದ್ದಾಗ ಕೀಟಾಣಿಗಳು ಉತ್ಪತ್ತಿಯಾಗುತ್ತವೆ. ಇದರಿಂದ ವಾಸನೆಯೂ ಬರಲು ಶುರುವಾಗುತ್ತದೆ.  ಹೀಗಾಗಿ ಅಡುಗೆ ಮನೆಯಲ್ಲಿ ಮಾಂಸ ತಯಾರಿಕೆಯ ವೇಳೆ ಶುದ್ಧತೆಯನ್ನು ಅಳವಡಿಸಿಕೊಂಡಷ್ಟೂ ಸಾಲದು.

ಮರುಬಳಕೆಯ ಬ್ಯಾಗ್​ಗಳನ್ನು ತೊಳೆಯದೇ ಇರುವುದು ಪರಿಸರಕ್ಕೆ ಹಾನಿ ಮಾಡದ ಮರು ಬಳಕೆ ಬ್ಯಾಗ್​ಗಳ ಬಳಕೆ ಮಾಡುವುದು ಉತ್ತಮ. ಅದೇ ರೀತಿ ಆರೋಗ್ಯವನ್ನು ನೀವು ಕಡೆಗಣಿಸುವಂತಿಲ್ಲ. ಒಂದು ಬಾರಿ ಮಾರುಕಟ್ಟೆಗೆ ಹೋಗಿ ಬಂದ ಮೇಲೆ ಅವಶ್ಯವಾಗಿ ಬ್ಯಾಗ್​ಗಳನ್ನು ತೊಳೆದು ಸ್ವಚ್ಛಗೊಳಿಸಿ ಇಲ್ಲವಾದರೆ ಅದರಲ್ಲಿ ಕೊಳೆ ತುಂಬಿಕೊಂಡು ಕೀಟಾಣಿಗಳು ಉತ್ಪತ್ತಿಯಾಗುತ್ತವೆ. ಬ್ಯಾಗ್​ ಮರುಬಳಕೆಗೆ ಬರುವುದಾದರೂ ಬಳಕೆಗೆ ಯೋಗ್ಯವಾಗದ ರೀತಿ ಆಗುತ್ತದೆ.

ಮಾಂಸವನ್ನು ತೊಳೆಯುವುದು ಅಡುಗೆ ಮಾಡುವ ಮುನ್ನ ತರಕಾರಿಯನ್ನಾಗಲೀ ಮಾಂಸವನ್ನಾಗಲಿ ತೊಳೆಯಲೇಬೇಕು ಎನ್ನುವುದು ತಿಳಿದ ಸಂಗತಿ. ಆದರೆ ಮಾಂಸವನ್ನು ಹೇಗೆ ತೊಳೆಯುತ್ತೀರಾ ಎನ್ನುವುದು ಮುಖ್ಯವಾಗಿರುತ್ತದೆ. ನೀವು ಸಿಂಕ್​ನಲ್ಲಿ ತೊಳೆದಾಗ ಮಾಂಸದಲ್ಲಿರುವ ಅಂಶಗಳು ಸಿಂಕ್​ನಲ್ಲಿ ಸುಲಕಿ ನಿಮ್ಮ ಇತರ ಪಾತ್ರೆಗಳಿಗೂ ಅಂಟುತ್ತದೆ. ಆಗ ನಿಮ್ಮ ಆಹಾರ ಅಶುಚಿಯಾಗುತ್ತದೆ

5  ಸೆಕೆಂಡ್​ ರೂಲ್​ಅನ್ನು ಅನುಸರಿಸುವುದು ಅಡುಗೆ ಮನೆಯಲ್ಲಿ ಎಣ್ಣೆ ಬಿದ್ದರೆ 5 ಸೆಕೆಂಡ್​ ಒಳಗೆ ಸ್ಚಚ್ಛಗೊಳಿಸಬೇಕು ಎನ್ನುವುದು 5 ಸೆಕೆಂಡ್ ​ರೂಲ್​ ಆಗಿದೆ. ಆದರೆ ಇದು ಕೆಲವೇ ಸಂದರ್ಭಗಳಲ್ಲಿ ಮಾತ್ರ ಅನ್ವಯಿಸುತ್ತದೆ. ಹೀಗಾಗಿ ಸಮಸ್ಯೆ ಆಗುವ ಮೊದಲು ಎಚ್ಚರಿಕೆ ವಹಿಸುವುದು ಒಳ್ಳೆಯದು. ಏಕೆಂದರೆ ಎಣ್ಣೆ ಅಥಾ ಇತರ ಮಸಾಲೆ ಪದಾರ್ಥಗಳು ನಿಮ್ಮ ಬಟ್ಟೆಯ ಮೇಲೆ ಬಿದ್ದರೆ 5 ಸೆಕೆಂಡ್​ ನಿಯಮ ಅನ್ವಯವಾಗುವುದಿಲ್ಲ ಹೀಗಾಗಿ. ಅಡುಗೆ ಮನೆಯಲ್ಲಿ ಎಚ್ಚರವಹಿಸಿ ಕೆಲಸ ಮಾಡುವುದು ಉತ್ತಮ.

ಇದನ್ನೂ ಓದಿ:

Type 2 Diabetes; ಟೈಪ್​ 2 ಮಧುಮೇಹ ನಿಯಂತ್ರಣಕ್ಕೆ ಈ ನೈಸರ್ಗಿಕ ಪದಾರ್ಥಗಳು ಸಹಕಾರಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ