AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ಖಿಚಿಡಿ, ಆರೋಗ್ಯಕ್ಕೂ ಒಳ್ಳೆಯದು, ಮಾಡೋದು ಹೇಗೆ?

ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಸಿಕ್ಕಾಪಟ್ಟೆ ಫೇಮಸ್. ಅಲ್ಲಿನ ಜನರಿಗೆ ರೊಟ್ಟಿ ತಿನ್ನದೇ ಊಟವು ಪೂರ್ಣವಾಗುವುದೇ ಇಲ್ಲ. ಗಟ್ಟಿಮುಟ್ಟಾದ ಆಹಾರವಾಗಿರುವ ಈ ಜೋಳದ ರೊಟ್ಟಿ ರುಚಿಸುವುದಿಲ್ಲ ಎನ್ನುವವರು ಜೋಳದ ಖಿಚಿಡಿಯನ್ನು ಮನೆಯಲ್ಲಿಯೇ ರುಚಿಕರವಾಗಿ ಮಾಡಬಹುದು. ಹಾಗಾದ್ರೆ ಈ ರೆಸಿಪಿಯನ್ನು ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ಖಿಚಿಡಿ, ಆರೋಗ್ಯಕ್ಕೂ ಒಳ್ಳೆಯದು, ಮಾಡೋದು ಹೇಗೆ?
ಸಾಯಿನಂದಾ
| Edited By: |

Updated on: Jul 30, 2024 | 5:58 PM

Share

ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವೇ ಈ ಜೋಳದ ರೊಟ್ಟಿ. ಖಡಕ್ ರೊಟ್ಟಿ ಜೊತೆಗೆ ಚಟ್ನಿ ಪುಡಿ, ಎಣ್ಣೆಯಿದ್ದರೆ ಅದಕ್ಕಿಂತ ಬೆಸ್ಟ್ ಆಹಾರ ಮತ್ತೊಂದಿಲ್ಲ. ಹೀಗಾಗಿ ಅಲ್ಲಿಯವರ ಆರೋಗ್ಯದ ರಹಸ್ಯವೇ ಈ ರೊಟ್ಟಿ ಎನ್ನಬಹುದು. ಆದರೆ ಈ ಜೋಳದಿಂದ ರೊಟ್ಟಿ ಮಾತ್ರವಲ್ಲದೇ ವಿವಿಧ ರೆಸಿಪಿಯನ್ನು ಮಾಡಬಹುದು.ಆರೋಗ್ಯ ವರ್ಧಕವಾಗಿ ಜೋಳದಿಂದ ಉತ್ತರ ಕರ್ನಾಟಕದ ಸ್ಪೆಷಲ್ ಖಿಚಿಡಿ ಮಾಡಿ ಸವಿಯಬಹುದು. ಖಿಚಿಡಿಯೂ ವಿಶೇಷ ತಿನಿಸಾಗಿದ್ದು, ಮಾಡಲು ಸುಲಭವಾಗಿದ್ದು ಬೆಳಗ್ಗಿನ ಉಪಹಾರಕ್ಕೆ ಇದು ಉತ್ತಮ ತಿಂಡಿಯಾಗಿದೆ.

ಜೋಳದ ಖಿಚಡಿ ಮಾಡಲು ಸಾಮಗ್ರಿಗಳು

* ಒಂದು ಕಪ್ ಜೋಳ

* ಕಾಲು ಕಪ್ ಹೆಸರು ಬೇಳೆ

* ಈರುಳ್ಳಿ

* ಕೊತ್ತಂಬರಿ ಸೊಪ್ಪು

* ತೆಂಗಿನ ಕಾಯಿ ತುರಿ

* ರುಚಿಗೆ ತಕ್ಕಷ್ಟು ಉಪ್ಪು

* ನೀರು

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು

* ಅಡುಗೆ ಎಣ್ಣೆ

* ಸಾಸಿವೆ

* ಉದ್ದಿನ ಬೇಳೆ

* ಕರಿಬೇವು

* ಒಣ ಮೆಣಸಿನ ಕಾಯಿ

* ಇಂಗು

ಇದನ್ನೂ ಓದಿ: ತಲೆ ಕೂದಲಿಗೆ ಎಣ್ಣೆ ಯಾವಾಗ ಹಚ್ಚಬೇಕು? ಸ್ನಾನದ ಮೊದಲು ಅಥವಾ ನಂತರವೋ !?

ಮಾಡುವ ವಿಧಾನ

* ಮೊದಲಿಗೆ ಜೋಳವನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಬೇಕು

* ಬೆಳಿಗ್ಗೆ ಕುಕ್ಕರಿನಲ್ಲಿ ಜೋಳವನ್ನು ಐದಾರು ಸೀಟಿ ಕೂಗುವವರೆಗೂ ಬೇಯಿಸಿಕೊಳ್ಳಬೇಕು.

* ಆ ಬಳಿಕ ಹೆಸರು ಬೇಳೆಯನ್ನು ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಬೇಕು.

* ಈರುಳ್ಳಿಯನ್ನು ಚಿಕ್ಕ ಚೂರುಗಳಾಗಿ ಕತ್ತರಿಸಿಟ್ಟುಕೊಳ್ಳಬೇಕು.

* ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಒಗ್ಗರಣೆ ಬೇಕಾದ ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ.

* ಇದಕ್ಕೆ ಕತ್ತರಿಸಿಟ್ಟ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿಕೊಳ್ಳಿ.

* ನಂತರ ಬೇಯಿಸಿಟ್ಟ ಜೋಳ, ಹುರಿದಿಟ್ಟ ಹೆಸರುಬೇಳೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ನೀರು ಹಾಕಿ ಬೇಯಿಸಿಕೊಳ್ಳಿ.

* ಕೊನೆಗೆ ಇದಕ್ಕೆ ತೆಂಗಿನ ತುರಿ, ಕತ್ತರಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿ ರುಚಿಯಾದ ಜೋಳದ ಖಿಚಿಡಿ ಸವಿಯಲು ಸಿದ್ಧ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ