AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ಖಿಚಿಡಿ, ಆರೋಗ್ಯಕ್ಕೂ ಒಳ್ಳೆಯದು, ಮಾಡೋದು ಹೇಗೆ?

ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಸಿಕ್ಕಾಪಟ್ಟೆ ಫೇಮಸ್. ಅಲ್ಲಿನ ಜನರಿಗೆ ರೊಟ್ಟಿ ತಿನ್ನದೇ ಊಟವು ಪೂರ್ಣವಾಗುವುದೇ ಇಲ್ಲ. ಗಟ್ಟಿಮುಟ್ಟಾದ ಆಹಾರವಾಗಿರುವ ಈ ಜೋಳದ ರೊಟ್ಟಿ ರುಚಿಸುವುದಿಲ್ಲ ಎನ್ನುವವರು ಜೋಳದ ಖಿಚಿಡಿಯನ್ನು ಮನೆಯಲ್ಲಿಯೇ ರುಚಿಕರವಾಗಿ ಮಾಡಬಹುದು. ಹಾಗಾದ್ರೆ ಈ ರೆಸಿಪಿಯನ್ನು ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ಖಿಚಿಡಿ, ಆರೋಗ್ಯಕ್ಕೂ ಒಳ್ಳೆಯದು, ಮಾಡೋದು ಹೇಗೆ?
ಸಾಯಿನಂದಾ
| Edited By: |

Updated on: Jul 30, 2024 | 5:58 PM

Share

ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವೇ ಈ ಜೋಳದ ರೊಟ್ಟಿ. ಖಡಕ್ ರೊಟ್ಟಿ ಜೊತೆಗೆ ಚಟ್ನಿ ಪುಡಿ, ಎಣ್ಣೆಯಿದ್ದರೆ ಅದಕ್ಕಿಂತ ಬೆಸ್ಟ್ ಆಹಾರ ಮತ್ತೊಂದಿಲ್ಲ. ಹೀಗಾಗಿ ಅಲ್ಲಿಯವರ ಆರೋಗ್ಯದ ರಹಸ್ಯವೇ ಈ ರೊಟ್ಟಿ ಎನ್ನಬಹುದು. ಆದರೆ ಈ ಜೋಳದಿಂದ ರೊಟ್ಟಿ ಮಾತ್ರವಲ್ಲದೇ ವಿವಿಧ ರೆಸಿಪಿಯನ್ನು ಮಾಡಬಹುದು.ಆರೋಗ್ಯ ವರ್ಧಕವಾಗಿ ಜೋಳದಿಂದ ಉತ್ತರ ಕರ್ನಾಟಕದ ಸ್ಪೆಷಲ್ ಖಿಚಿಡಿ ಮಾಡಿ ಸವಿಯಬಹುದು. ಖಿಚಿಡಿಯೂ ವಿಶೇಷ ತಿನಿಸಾಗಿದ್ದು, ಮಾಡಲು ಸುಲಭವಾಗಿದ್ದು ಬೆಳಗ್ಗಿನ ಉಪಹಾರಕ್ಕೆ ಇದು ಉತ್ತಮ ತಿಂಡಿಯಾಗಿದೆ.

ಜೋಳದ ಖಿಚಡಿ ಮಾಡಲು ಸಾಮಗ್ರಿಗಳು

* ಒಂದು ಕಪ್ ಜೋಳ

* ಕಾಲು ಕಪ್ ಹೆಸರು ಬೇಳೆ

* ಈರುಳ್ಳಿ

* ಕೊತ್ತಂಬರಿ ಸೊಪ್ಪು

* ತೆಂಗಿನ ಕಾಯಿ ತುರಿ

* ರುಚಿಗೆ ತಕ್ಕಷ್ಟು ಉಪ್ಪು

* ನೀರು

ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು

* ಅಡುಗೆ ಎಣ್ಣೆ

* ಸಾಸಿವೆ

* ಉದ್ದಿನ ಬೇಳೆ

* ಕರಿಬೇವು

* ಒಣ ಮೆಣಸಿನ ಕಾಯಿ

* ಇಂಗು

ಇದನ್ನೂ ಓದಿ: ತಲೆ ಕೂದಲಿಗೆ ಎಣ್ಣೆ ಯಾವಾಗ ಹಚ್ಚಬೇಕು? ಸ್ನಾನದ ಮೊದಲು ಅಥವಾ ನಂತರವೋ !?

ಮಾಡುವ ವಿಧಾನ

* ಮೊದಲಿಗೆ ಜೋಳವನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಬೇಕು

* ಬೆಳಿಗ್ಗೆ ಕುಕ್ಕರಿನಲ್ಲಿ ಜೋಳವನ್ನು ಐದಾರು ಸೀಟಿ ಕೂಗುವವರೆಗೂ ಬೇಯಿಸಿಕೊಳ್ಳಬೇಕು.

* ಆ ಬಳಿಕ ಹೆಸರು ಬೇಳೆಯನ್ನು ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಬೇಕು.

* ಈರುಳ್ಳಿಯನ್ನು ಚಿಕ್ಕ ಚೂರುಗಳಾಗಿ ಕತ್ತರಿಸಿಟ್ಟುಕೊಳ್ಳಬೇಕು.

* ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಒಗ್ಗರಣೆ ಬೇಕಾದ ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ.

* ಇದಕ್ಕೆ ಕತ್ತರಿಸಿಟ್ಟ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿಕೊಳ್ಳಿ.

* ನಂತರ ಬೇಯಿಸಿಟ್ಟ ಜೋಳ, ಹುರಿದಿಟ್ಟ ಹೆಸರುಬೇಳೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ನೀರು ಹಾಕಿ ಬೇಯಿಸಿಕೊಳ್ಳಿ.

* ಕೊನೆಗೆ ಇದಕ್ಕೆ ತೆಂಗಿನ ತುರಿ, ಕತ್ತರಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿ ರುಚಿಯಾದ ಜೋಳದ ಖಿಚಿಡಿ ಸವಿಯಲು ಸಿದ್ಧ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!