AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸ ಮಾಡುವಾಗ ತೂಕಡಿಸುತ್ತೀರಾ?; ಹಗಲು ನಿದ್ರೆ ಬಾರದಂತೆ ಎಚ್ಚರವಾಗಿರಲು 6 ಮಾರ್ಗಗಳು ಇಲ್ಲಿವೆ

Sleep Control: ಆಫೀಸಿನಲ್ಲಿ ನೀವು ಆಗಾಗ ಆಕಳಿಸಿದರೆ ಅದು ಸಹೋದ್ಯೋಗಿಗಳಿಗೆ ಮುಜುಗರ ಉಂಟುಮಾಡಬಹುದು. ಕೆಲಸದ ಸಮಯದಲ್ಲಿ ನೀವು ನಿದ್ರೆಯಿಂದ ತಪ್ಪಿಸಿಕೊಳ್ಳಲು ಬಯಸಿದರೆ ಸುಲಭ ಉಪಾಯ ಇಲ್ಲಿದೆ.

ಕೆಲಸ ಮಾಡುವಾಗ ತೂಕಡಿಸುತ್ತೀರಾ?; ಹಗಲು ನಿದ್ರೆ ಬಾರದಂತೆ ಎಚ್ಚರವಾಗಿರಲು 6 ಮಾರ್ಗಗಳು ಇಲ್ಲಿವೆ
ನಿದ್ರೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 28, 2022 | 1:52 PM

ಕೆಲವರಿಗೆ ಓದಲು ಕುಳಿತ ಕೂಡಲೆ ನಿದ್ರೆ (Sleep) ಬರಲು ಶುರುವಾಗುತ್ತದೆ. ಇನ್ನು ಕೆಲವರು ಕೆಲಸ ಮಾಡುವಾಗಲೆಲ್ಲ ತೂಕಡಿಸುತ್ತಿರುತ್ತಾರೆ. ಹೀಗೆ ಕೆಲಸ ಮಾಡುವಾಗಲೆಲ್ಲ ನಿದ್ರೆ ಬಂದರೆ ಕೆಲಸದಲ್ಲಿ ಏಕಾಗ್ರತೆ ವಹಿಸಲು ಸಾಧ್ಯವಾಗುವುದಿಲ್ಲ. ಆಫೀಸಿನಲ್ಲಿ ನೀವು ಆಗಾಗ ಆಕಳಿಸಿದರೆ ಅದು ಸಹೋದ್ಯೋಗಿಗಳಿಗೆ ಮುಜುಗರ ಉಂಟುಮಾಡಬಹುದು. ಕೆಲಸದ ಸಮಯದಲ್ಲಿ ನೀವು ನಿದ್ರೆಯಿಂದ ತಪ್ಪಿಸಿಕೊಳ್ಳಲು ಬಯಸಿದರೆ ಸುಲಭ ಉಪಾಯ ಇಲ್ಲಿದೆ. ನೀವು ಸೇವಿಸುವ ಆಹಾರದಲ್ಲಿ, ನಿಮ್ಮ ಚಟುವಟಿಕೆಯಲ್ಲಿ ಕೊಂಚ ಎಚ್ಚರ ವಹಿಸಿದರೆ ಕೆಲಸದ ವೇಳೆ ನಿದ್ರೆಯಿಂದ ಮುಕ್ತಿ ಪಡೆಯಬಹುದು.

ಕೆಫೇನ್ ಸೇವನೆ: ಕೆಫೇನ್ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ನಿದ್ರೆ ಬರದಂತೆ ತಡೆಯಬಹುದು. ಕಾಫಿ, ಟೀ, ಚಾಕೋಲೇಟ್​ನಂತಹ ಪದಾರ್ಥಗಳನ್ನು ಸೇವನೆ ತ್ವರಿತ ಶಕ್ತಿಯ ವರ್ಧಕವನ್ನು ನೀಡುತ್ತದೆ ಮತ್ತು ಮೆದುಳು ಮತ್ತು ನರಮಂಡಲವನ್ನು ಉತ್ತೇಜಿಸುತ್ತದೆ. ಇದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ವಾಕಿಂಗ್: ನಿಮಗೆ ನಿದ್ರೆ ಬರುತ್ತಿದೆ ಎನಿಸಿದ ಕೂಡಲೆ ಆಫೀಸಿನ ಆವರಣದ ಒಳಗೆ ಅಥವಾ ಹೊರಗೆ ಸ್ವಲ್ಪ ಸಮಯದವರೆಗೆ ವಾಕಿಂಗ್ ಮಾಡಿ. ದೈಹಿಕ ಚಟುವಟಿಕೆಯು ನಿಮಗೆ ನಿದ್ರೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ನಿಮಗೆ ಚೈತನ್ಯವನ್ನು ಸಹ ನೀಡುತ್ತದೆ.

ಸಂಗೀತವನ್ನು ಆಲಿಸಿ: ನಿದ್ರೆ ಬರುತ್ತಿದೆ ಎನಿಸಿದಾಗ ಸರಿಯಾದ ರೀತಿಯ ಸಂಗೀತವನ್ನು ಕೇಳುವುದು ಕೆಲಸದ ಸಮಯದ ತೂಕಡಿಕೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ವೇಗದ ಗತಿಯ ಅಥವಾ ಲವಲವಿಕೆಯ ಸಂಗೀತವನ್ನು ಕೇಳುವುದರಿಂದ ಕೆಲಸದ ಸಮಯದಲ್ಲಿ ನಿದ್ರಿಸುವುದನ್ನು ತಡೆಯಬಹುದು. ನೀವು ಮೆಲೋಡಿಯಸ್ ಹಾಡುಗಳನ್ನು ಕೇಳಿದರೆ ನಿದ್ರೆಯ ಪ್ರಚೋದನೆಯು ಹೆಚ್ಚಾಗುವ ಸಾಧ್ಯತೆಗಳಿವೆ.

ಕಡಿಮೆ ಆಹಾರ ಪದಾರ್ಥಗಳನ್ನು ತಿನ್ನಿರಿ: ಕೆಲಸದ ಸಮಯದಲ್ಲಿ ನಿಮಗೆ ಮಲಗಬೇಕು ಎನಿಸುತ್ತಿದ್ದರೆ ಕೆಲಸ ಶುರು ಮಾಡುವ ಮೊದಲು ಸ್ವಲ್ಪವೇ ಆಹಾರ ಸೇವಿಸಿ. ಕಡಿಮೆ ಆಹಾರವನ್ನು ಸೇವಿಸಿದರೆ ಹೊಟ್ಟೆಯೂ ಹಗುರವಾಗಿರುತ್ತದೆ. ಹೆಚ್ಚು ತಿಂದರೆ ಹೊಟ್ಟೆ ಭಾರವಾಗಿ, ಆಲಸ್ಯ ಶುರುವಾಗಿ ನಿದ್ರೆ ಬರುತ್ತದೆ. ಆದಷ್ಟೂ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯಿಂದ ದೂರವಿರಿ. ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳಲು ಲಘು ಊಟವನ್ನು ಸೇವಿಸಿ.

ಮುಖದ ಮೇಲೆ ನೀರು ಚಿಮುಕಿಸಿ: ನಿದ್ರೆಯನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯುವುದು. ಇದು ನಿಮಗೆ ಚೈತನ್ಯ ನೀಡುತ್ತದೆ ಮತ್ತು ಜಾಗರೂಕತೆಯನ್ನು ಹೆಚ್ಚಿಸುತ್ತದೆ.

ಮೌನ ಮತ್ತು ಏಕತಾನತೆಯನ್ನು ತಪ್ಪಿಸಿ: ಕೆಲಸದ ಸ್ಥಳದ ಸುತ್ತಲೂ ಇರುವ ಮೌನ ಅಥವಾ ನಿಶ್ಯಬ್ಧ ನಿದ್ರಾಹೀನತೆಗೆ ಕಾರಣವಾಗಬಹುದು. ನಿಮ್ಮ ಮೆದುಳನ್ನು ಉತ್ತೇಜಿಸಲು ಮತ್ತು ಜಾಗರೂಕತೆಯನ್ನು ಹೆಚ್ಚಿಸಲು ಆಸಕ್ತಿದಾಯಕ ಸಂಗತಿಯ ಕುರಿತು ಸಹೋದ್ಯೋಗಿಯೊಂದಿಗೆ ಮಾತನಾಡಿ. ಹೆಚ್ಚುವರಿಯಾಗಿ, ನಿಮ್ಮನ್ನು ಕಾರ್ಯನಿರತವಾಗಿರಿಸಲು ಮತ್ತು ಆಯಾಸವನ್ನು ತಪ್ಪಿಸಲು ಕೆಲಸ ಮತ್ತು ಜವಾಬ್ದಾರಿಗಳನ್ನು ತೆಗೆದುಕೊಳ್ಳಿ. ಸುಮ್ಮನೇ ಕುಳಿತಿದ್ದರೆ ನಿದ್ರೆ ಬರುವುದು ಸಾಮಾನ್ಯ. ಹಾಗಾಗಿ, ಚಟುವಟಿಕೆಯಿಂದ ಇದ್ದರೆ ನಿದ್ರೆ ಬರದಂತೆ ತಡೆಯಬಹುದು.

ಚೆನ್ನಾಗಿ ನಿದ್ರೆ ಮಾಡುವುದರಿಂದ ಕ್ಯಾಲೋರಿ ಸೇವನೆಯ ಹೆಚ್ಚಳವನ್ನು ತಡೆಯಬಹುದು. ಸರಿಯಾದ ಎಂಟು ಗಂಟೆಗಳ ನಿದ್ರೆಯನ್ನು ಪಡೆಯುವುದು ಕ್ಯಾಲೋರಿ ಸೇವನೆ ಮತ್ತು ಹಸಿವು ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಸಾಮಾನ್ಯವಾಗಿ ನೀವು ನಿದ್ರೆಯಿಂದ ವಂಚಿತರಾದಾಗ ಸಂಭವಿಸುತ್ತದೆ. ಹೀಗಾಗಿ, ನಿದ್ರೆ ನಮ್ಮ ಆರೋಗ್ಯದಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ರಾತ್ರಿ ಸಂಪೂರ್ಣವಾಗಿ ನಿದ್ರೆ ಮಾಡಿದರೆ ಹಗಲು ವೇಳೆ ನಿದ್ರೆ ಬಾರದಂತೆ ತಡೆಯಬಹುದು.

ಇದನ್ನೂ ಓದಿ: Health Tips: ನಿದ್ರೆಯಿಂದ ಖಿನ್ನತೆ ಹೆಚ್ಚಾಗುತ್ತಾ?; ನಿದ್ರೆಗೂ ಮಾನಸಿಕ ಆರೋಗ್ಯಕ್ಕೂ ಇರುವ ನಂಟೇನು?

Weight Loss: ನಿದ್ರೆ ಮಾಡುವಾಗ ತೂಕ ಜಾಸ್ತಿ ಆಗುತ್ತಾ? ಕಡಿಮೆಯಾಗುತ್ತಾ?; ಅಚ್ಚರಿಯ ಸಂಗತಿ ಇಲ್ಲಿದೆ

ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಪಾಕ್ ಶೆಲ್ಲಿಂಗ್​ನಲ್ಲಿ ಗಾಯಗೊಂಡವರಿಗೆ ಸೇನಾ ವೈದ್ಯರಿಂದ ಚಿಕಿತ್ಸೆ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ
ಮೈಸೂರು: ಸಫಾರಿ ವೇಳೆ ಕಬಿನಿ ಹಿನ್ನೀರಿನ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ