Festival Season Recipes : ಹಬ್ಬಕ್ಕೆ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಆರೋಗ್ಯಕರ ರೆಸಿಪಿಗಳಿವು

ಹಬ್ಬಗಳು ಸಾಲಾಗಿ ಬಂತೆಂದರೆ ಹೆಣ್ಣು ಮಕ್ಕಳಿಗೆ ಮನೆಯ ಅಲಂಕಾರದ ಜೊತೆಗೆ ಏನು ಅಡುಗೆ ಮಾಡುವುದು ಎನ್ನುವುದೇ ಯೋಚನೆ. ಈ ಸಮಯದಲ್ಲಿ ವಿವಿಧ ಸಿಹಿ ತಿನಿಸುಗಳನ್ನು ಮಾಡಲು ಮನೆಯಲ್ಲಿ ತಯಾರಿಯಂತೂ ನಡೆಯುತ್ತಿರುತ್ತದೆ. ಆದರೆ ಹಬ್ಬದ ಸಮಯದಲ್ಲಿ ಈ ಆರೋಗ್ಯಕರ ರೆಸಿಪಿಗಳಾದ ಬೇಸನ್ ಲಡ್ಡು, ರಾಗಿ ಖೀರ್ ಹಾಗೂ ನವಣೆ ತಂಬಿಟ್ಟನ್ನು ಟ್ರೈ ಮಾಡಬಹುದು. ಹಾಗಾದ್ರೆ ಈ ರೆಸಿಪಿಗಳನ್ನು ಮಾಡುವ ವಿಧಾನದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Festival Season Recipes : ಹಬ್ಬಕ್ಕೆ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಆರೋಗ್ಯಕರ ರೆಸಿಪಿಗಳಿವು
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 10, 2024 | 5:45 PM

ಹಬ್ಬವೆಂದ ಮೇಲೆ ಮನೆ ಮಂದಿಯೆಲ್ಲಾ ಸೇರಿ ಹಬ್ಬದಡುಗೆಯನ್ನು ಮಾಡುತ್ತಾರೆ. ಬಹುತೇಕ ಹಬ್ಬಗಳಲ್ಲಿ ದೇವರಿಗೆ ಪ್ರಸಾದ ರೂಪದಲ್ಲಿ ವಿವಿಧ ಖಾದ್ಯಗಳನ್ನು ನೈವೇದ್ಯವಾಗಿ ಇಡಲಾಗುತ್ತದೆ. ಆದರೆ ಈ ಸಮಯದಲ್ಲಿ ದಿಢೀರನೆ ಆರೋಗ್ಯಕರವಾದ ಈ ರೆಸಿಪಿಯನ್ನು ಟ್ರೈ ಮಾಡಬಹುದು. ಅದರಲ್ಲಿ ಈ ಬೇಸನ್ ಲಡ್ಡು, ರಾಗಿ ಖೀರ್ ಹಾಗೂ ನವಣೆ ತಂಬಿಟ್ಟನ್ನು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಈ ರೆಸಿಪಿಯು ಎಷ್ಟು ಸುಲಭವೋ ತಿನ್ನಲು ಅಷ್ಟೇ ರುಚಿಕರವಾಗಿರುತ್ತದೆ.

ಬೇಸನ್‌ ಲಡ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು:

* ಎರಡು ಕಪ್ ಕಡ್ಲೆಹಿಟ್ಟು

* ಮುಕ್ಕಾಲು ಕಪ್ ಸಕ್ಕರೆ ಪುಡಿ

* ತುಪ್ಪ

* ಏಲಕ್ಕಿ ಪುಡಿ

* ಪಿಸ್ತಾ ಹಾಗೂ ಗೋಡಂಬಿ

ಬೇಸನ್‌ ಲಡ್ದು ಮಾಡುವ ವಿಧಾನ:

* ಮೊದಲಿಗೆ ಈ ಕಡ್ಲೆಹಿಟ್ಟನ್ನು ಜರಡಿ ಮಾಡಿಕೊಳ್ಳಿ. ಆ ಬಳಿಕ ಬಾಣಲೆಗೆ ಸ್ವಲ್ಪ ತುಪ್ಪ ಸೇರಿಸಿ ಈ ಕಡ್ಲೆಹಿಟ್ಟು ಸೇರಿಸಿ ಕಡಿಮೆ ಉರಿಯಲ್ಲಿ 15 ನಿಮಿಷಗಳ ಕಾಲ ಚೆನ್ನಾಗಿ ಹುರಿದು ಕೊಳ್ಳಿ.

* ಆದರೆ ಎರಡು ಮೂರು ನಿಮಿಷಕ್ಕೊಮ್ಮೆ ತುಪ್ಪ ಸೇರಿಸುತ್ತಾ ಕಡ್ಲೆಹಿಟ್ಟು ಹಸಿ ವಾಸನೆ ಹೋಗುವವರೇ ಫ್ರೈ ಮಾಡಿಕೊಳ್ಳಿ.

* ಈ ಮಿಶ್ರಣವನ್ನು ತಣ್ಣಗಾಗಲು ಬಿಟ್ಟು, ನಂತರದಲ್ಲಿ ಏಲಕ್ಕಿ ಪುಡಿ, ಸಕ್ಕರೆ ಪುಡಿ ಸೇರಿಸಿ ಕಲಸಿಕೊಳ್ಳಿ.

* ತದನಂತರದಲ್ಲಿ ಕೈಗೆ ತುಪ್ಪ ಸವರಿಕೊಂಡು ಉಂಡೆಗಳನ್ನು ಕಟ್ಟಿ. ಇದರ ಮೇಲೆ ಪಿಸ್ತಾ ಹಾಗೂ ಗೋಡಂಬಿಯಿಂದ ಅಲಂಕರಿಸಿದರೆ ರುಚಿಕರವಾದ ಬೇಸನ್ ಲಡ್ಡು ಸವಿಯಲು ಸಿದ್ಧ.

ರಾಖಿ ಖೀರ್ ಮಾಡಲು ಬೇಕಾಗುವ ಸಾಮಗ್ರಿಗಳು:

* ತುಪ್ಪ

* ಏಲಕ್ಕಿ

* ಅರ್ಧ ಕಪ್ ರಾಗಿ ಹಿಟ್ಟು

* ನೀರು

* ಒಂದು ಕಪ್ ಹಾಲು,

* ಬೆಲ್ಲ

* ಗೋಡಂಬಿ, ಪಿಸ್ತಾ, ಬಾದಾಮಿ

* ರುಚಿಗೆ ತಕ್ಕಷ್ಟು ಉಪ್ಪು

ರಾಗಿ ಖೀರ್ ರೆಸಿಪಿ ಮಾಡುವ ವಿಧಾನ:

* ಮೊದಲಿಗೆ ಒಂದು ಬಾಣಲೆಗೆ ನೀರು ಬೆರೆಸಿದ ಹಾಲು ಹಾಕಿ ಅದಕ್ಕೆ ರಾಗಿ ಹಿಟ್ಟು ಗಂಟಾಗದಂತೆ ಕಲಸಿಕೊಳ್ಳಿ.

* ಈ ಮಿಶ್ರಣಕ್ಕೆ ಬೆಲ್ಲ ಹಾಗೂ ದಪ್ಪ ಹಾಲು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಕುದಿಸಿಕೊಳ್ಳಿ.

* ಈಗಾಗಲೇ ಕತ್ತರಿಸಿಟ್ಟ ಗೋಡಂಬಿ, ಪಿಸ್ತಾ, ಬಾದಾಮಿ, ಏಲಕ್ಕಿ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿಕೊಂಡರೆ ರಾಖಿ ಖೀರ್ ಸವಿಯಲು ಸಿದ್ಧ.

ನವಣೆ ತಂಬಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು:

* ಒಂದು ಕಪ್ ನವಣೆ

* ಒಂದು ಚಮಚ ಅಕ್ಕಿ

* ಒಂದು ಚಮಚ ಕಡಲೆಬೇಳೆ

* ನೀರು

* ಬೆಲ್ಲ

* ಏಲಕ್ಕಿ

* ತುಪ್ಪ

ಇದನ್ನೂ ಓದಿ: ತುಳುವರಿಗೆ ಸಂತಸದ ಸುದ್ದಿ, ಯೂನಿಕೋಡ್​​ಗೆ ತುಳುಲಿಪಿ ಸೇರ್ಪಡೆ

ನವಣೆ ತಂಬಿಟ್ಟು ಮಾಡುವ ವಿಧಾನ:

* ನವಣೆ, ಅಕ್ಕಿ ಮತ್ತು ಕಡಲೇ ಬೇಳೆ ಈ ಮೂರನ್ನು ಒಟ್ಟಿಗೆ ಹುರಿದು, ಮಿಕ್ಸರ್ ಗೆ ಹಾಕಿ ಪುಡಿಮಾಡಿಕೊಳ್ಳಿ.

* ಸ್ಟವ್ ಮೇಲೆ ನೀರು ಕುದಿಯುತ್ತಿದ್ದಂತೆ ಬೆಲ್ಲ ಸೇರಿಸಿಕೊಳ್ಳಿ. ಬೆಲ್ಲ ಕರಗುವ ಮೊದಲು ಮಾಡಿಟ್ಟ ಪುಡಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ

* ಈ ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ಸ್ಟವ್ ಆಫ್ ಮಾಡಿ ತಣ್ಣಗಾಗಲು ಬಿಡಿ. * ಆ ಬಳಿಕ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಿದರೆ ಈ ಸಿಹಿ ತಿನಿಸು ಸವಿಯಲು ಸಿದ್ಧವಾದಂತೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Tue, 10 September 24

ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ