AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಹಿ ತಿಂಡಿ ಇಷ್ಟ ಪಡುವವರು ಮನೆಯಲ್ಲಿ ರುಚಿಯಾದ ಅವಲಕ್ಕಿ ಕೇಸರಿ ಬಾತ್ ಮಾಡಿ ಸವಿಯಿರಿ

ಗೃಹಿಣಿಯರಿಗೆ ಅಡುಗೆ ಮನೆಗಿಂತ ಇಷ್ಟವಾದ ಸ್ಥಳ ಮತ್ತೊಂದಿಲ್ಲ. ಹೀಗಾಗಿ ತಮ್ಮ ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯುವ ಕಾರಣ ದಿನಕ್ಕೊಂದು ಬಗೆಯ ಆಹಾರವನ್ನು ತಯಾರಿಸಿ ಮನೆ ಮಂದಿಗೆಲ್ಲಾ ಉಣಬಡಿಸುತ್ತಾರೆ. ಹಬ್ಬದ ದಿನ ಬಿಟ್ಟು ಉಳಿದ ದಿನ ಸಿಹಿತಿನಿಸನ್ನು ಮಾಡಿ ಮನೆಯವರಿಗೆ ಬಡಿಸಿದರೆ ಮನೆಯ ಮೊಗದಲ್ಲಿ ಸಂತೋಷ ಕಾಣುತ್ತದೆ. ಹೀಗಾಗಿ ಮನೆಯ ಮಂದಿಯನ್ನು ವಿಧವಿಧವಾದ ಅಡುಗೆಯ ಮೂಲಕ ಖುಷಿ ಪಡಿಸುವ ಪ್ರಯತ್ನದಲ್ಲಿದ್ದರೆ ಮನೆಯಲ್ಲೇ ಸಿಗುವ ಕೆಲವು ಸಾಮಗ್ರಿಗಳಿಂದ ಅವಲಕ್ಕಿ ಕೇಸರಿ ಬಾತ್ ಮಾಡಿ ಸವಿಯಲು ನೀಡಬಹುದು. ಹಾಗಾದ್ರೆ ಈ ಅವಲಕ್ಕಿ ಕೇಸರಿ ಬಾತ್ ಈ ಸಿಂಪಲ್ ರೆಸಿಪಿ ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ.

ಸಿಹಿ ತಿಂಡಿ ಇಷ್ಟ ಪಡುವವರು ಮನೆಯಲ್ಲಿ ರುಚಿಯಾದ ಅವಲಕ್ಕಿ ಕೇಸರಿ ಬಾತ್ ಮಾಡಿ ಸವಿಯಿರಿ
ಸಾಯಿನಂದಾ
| Edited By: |

Updated on: Jan 23, 2024 | 3:16 PM

Share

ಸಿಹಿತಿಂಡಿಯನ್ನು ಯಾರು ಇಷ್ಟ ಪಡಲ್ಲ ಹೇಳಿ, ಎಲ್ಲರೂ ಕೂಡ ಇಷ್ಟ ಪಟ್ಟು ಸೇವಿಸುತ್ತಾರೆ. ಆದರೆ ಸಿಹಿ ತಿಂಡಿಗಳನ್ನು ಹಬ್ಬಹರಿದಿನಗಳಲ್ಲಿಯೇ ಮಾಡುವುದೇ ಹೆಚ್ಚು. ಸಿಹಿ ತಿಂಡಿಯನ್ನು ತಿನ್ನಲು ಆಸೆಯಾಗಿದ್ದರೆ, ಮನೆಯಲ್ಲಿರುವ ಕೆಲವೇ ಕೆಲವು ವಸ್ತುಗಳಿಂದ ಸುಲಭವಾಗಿ ಮಾಡಬಹುದಾದ ಕೆಲವು ಸಿಹಿ ತಿಂಡಿಗಳಿವೆ. ಅದರಲ್ಲಿ ಈ ಅವಲಕ್ಕಿ ಕೇಸರಿ ಬಾತ್ ಕೂಡ ಒಂದು. ಮನೆಯಲ್ಲಿರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ, ಈ ಅವಲಕ್ಕಿ ಕೇಸರಿ ಬಾತ್ ಮಾಡಿ ರುಚಿ ಸವಿಯಬಹುದು.

ಅವಲಕ್ಕಿ ಕೇಸರಿ ಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು

ಅರ್ಧ ಕಪ್ ಅವಲಕ್ಕಿ, ಅರ್ಧ ಕಪ್ ಸಕ್ಕರೆ, ಕಾಲು ಕಪ್ ತುಪ್ಪ, ಕೇಸರಿ ಬಣ್ಣದ ಫುಡ್ ಕಲರ್, ಏಲಕ್ಕಿ ಪುಡಿ, ನೀರು ಹಾಗೂ ಗೋಡಂಬಿ.

ಅವಲಕ್ಕಿ ಕೇಸರಿ ಬಾತ್ ಮಾಡುವ ವಿಧಾನ:

* ಮೊದಲಿಗೆ ಒಂದು ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿಕೊಂಡು ಗೋಡಂಬಿ ಹಾಕಿ ಹುರಿದುಕೊಳ್ಳಿ. ಹುರಿದ ಗೋಡಂಬಿಯನ್ನು ತೆಗೆದಿಟ್ಟುಕೊಳ್ಳಿ.

* ಆ ಬಳಿಕ ಅವಲಕ್ಕಿಯನ್ನು ತುಸು ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ. ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಸಣ್ಣಗೆ ರುಬ್ಬಿಕೊಳ್ಳಿ.

ಇದನ್ನೂ ಓದಿ:ಪ್ಯಾಶನ್ ಫ್ರೂಟ್​​​ನ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಈ ಹಣ್ಣಿನ ವಿಶೇಷತೆ

* ಒಂದು ಕಪ್ ನೀರು ಹಾಕಿ ಬಿಸಿ ಮಾಡಿಕೊಂಡು, ನೀರು ಕುದಿಯುತ್ತಿದ್ದಂತೆ ಅದಕ್ಕೆ ಪುಡಿ ಮಾಡಿಟ್ಟುಕೊಂಡಟ್ಟುಕೊಂಡ ಅವಲಕ್ಕಿಯನ್ನು ಸೇರಿಸಿ ಕಲಸಿಕೊಳ್ಳಿ.

* ಈ ಮಿಶ್ರಣಕ್ಕೆ ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಮಿಶ್ರಣ ದಪ್ಪಗಾಗುತ್ತಿದ್ದಂತೆಗುತ್ತಿದ್ದಂತೆ ಅದಕ್ಕೆ ಸಕ್ಕರೆ, ತುಪ್ಪ ಸೇರಿಸಿ ಕೈಯಾಡಿ. ತಳ ಬಿಡುತ್ತಿದ್ದಂತೆ ಏಲಕ್ಕಿ ಪುಡಿ, ಗೋಡಂಬಿ ಹಾಕಿದರೆ ರುಚಿ ರುಚಿಯಾದ ಅವಲಕ್ಕಿ ಕೇಸರಿಬಾತ್ ಸವಿಯಲು ಸಿದ್ಧವಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ