Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರಾಧಿ ಭಾವ ನಿಮ್ಮನ್ನು ಕಾಡುತ್ತಿದೆಯೇ? ಮಾನಸಿಕ ಆರೋಗ್ಯದ ಮೇಲೆ ಹೀಗೂ ಪರಿಣಾಮ ಬೀರಬಹುದು

ಯಾವುದೋ ಕ್ಷಣದಲ್ಲಿ ಯಾವುದೋ ವಿಚಾರದಲ್ಲಿ ನಿಮಗೆ ಅಪರಾಧಿ ಭಾವ ಕಾಡಬಹುದು, ನೀವು ತಪ್ಪು ಮಾಡಿದ್ದೇನೆಂದು ನಿಮಗೆ ಅನ್ನಿಸಬಹುದು ಅಥವಾ ಯಾರಿಗೋ ಮೋಸ ಮಾಡಿದ್ದೇನೆ ಅಂತಲೂ ಅನ್ನಿಸುವುದು ಸಹಜ, ಆದರೆ ಈ ಭಾವನೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಂತೂ ಸತ್ಯ.

ಅಪರಾಧಿ ಭಾವ ನಿಮ್ಮನ್ನು ಕಾಡುತ್ತಿದೆಯೇ?  ಮಾನಸಿಕ ಆರೋಗ್ಯದ ಮೇಲೆ ಹೀಗೂ ಪರಿಣಾಮ ಬೀರಬಹುದು
Image Credit source: Psychology Today
Follow us
ನಯನಾ ರಾಜೀವ್
|

Updated on: Jan 10, 2024 | 2:49 PM

ಯಾವುದೋ ಕ್ಷಣದಲ್ಲಿ ಯಾವುದೋ ವಿಚಾರದಲ್ಲಿ ನಿಮಗೆ ಅಪರಾಧಿ ಭಾವ ಕಾಡಬಹುದು, ನೀವು ತಪ್ಪು ಮಾಡಿದ್ದೇನೆಂದು ನಿಮಗೆ ಅನ್ನಿಸಬಹುದು ಅಥವಾ ಯಾರಿಗೋ ಮೋಸ ಮಾಡಿದ್ದೇನೆ ಅಂತಲೂ ಅನ್ನಿಸುವುದು ಸಹಜ, ಆದರೆ ಈ ಭಾವನೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಂತೂ ಸತ್ಯ.

ಯಾವುದೋ ವಿಷಯದ ಬಗ್ಗೆ ತುಂಬಾ ದುಃಖಿತರಾಗುವುದು ಎಲ್ಲಾ ಸಮಯದಲ್ಲಿ ಅದೇ ವಿಷಯದ ಬಗ್ಗೆ ಯೋಚಿಸುವುದು ನಿದ್ರಾಹೀನತೆ ಯಾವುದೇ ಕಾರಣವಿಲ್ಲದೇ ಅಳುವುದು ಹೊಟ್ಟೆ ಉರಿ ಆತಂಕ, ದುಃಖದ ಭಾವನೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದು ಜನರೊಂದಿಗೆ ಬೆರೆಯಲು ಸಾಧ್ಯವಾಗದಿರುವುದು

ದೀರ್ಘಕಾಲ ನೀವು ತಪ್ಪಿತಸ್ಥ ಎಂಬ ಭಾವನೆ ಇದ್ದರೆ ಏನಾಗುತ್ತೆ? ನಿರಂತರವಾಗಿ ನೀವು ತಪ್ಪಿತಸ್ಥ ಎಂಬ ಭಾವನೆಯು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು. ಇದಾದ ಬಳಿಕ ನೀವು ನಿಮ್ಮ ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವ ರೀತಿ ಕೂಡ ಬದಲಾಗಬಹುದು.

ಅತೃಪ್ತಿ, ದುಃಖ, ಕಿರಿಕಿರಿಯ ನಡವಳಿಕೆ ಬೆಳೆಯಬಹುದು, ಇದು ನಿಮ್ಮ ಮಾನಸಿಕ ಆರೋಗ್ಯ ಮತ್ತು ಸಂಬಂಧಗಳ ಮೇಲೆ ಇನ್ನಷ್ಟು ಋಣಾತ್ಮಕ ಪರಿಣಾಮ ಉಂಟಾಗಬಹುದು. ಯಾವುದೋ ಒಂದು ಸಂದರ್ಭದಲ್ಲಿ ನಿಮಗೆ ತಿಳಿದೋ, ತಿಳಿಯದೇ ನಡೆಯುವ ಅಪರಾಧವು ನಿಮ್ಮ ಆರೋಗ್ಯ, ಸಂಬಂಧಗಳು ಹಾಗೂ ಉತ್ಪಾದಕತೆ ಮೇಲೆ ನೇರ ಪರಿಣಾಮ ಬೀರುತ್ತದೆ.

ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಬೇಡಿ ಯಾವುದೇ ವಿಚಾರಕ್ಕೂ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಬೇಡಿ, ಎಲ್ಲವೂ ನಿಮ್ಮಿಂದಲೇ ಆಯಿತು ಎಂಬುದನ್ನು ನಿಲ್ಲಿಸಿ, ಎಲ್ಲದಕ್ಕೂ ಹಲವು ಕಾರಣಗಳಿರುತ್ತವೆ.

ನಿಮ್ಮನ್ನು ಒಪ್ಪಿಕೊಳ್ಳಿ ನೀವು ಹೇಗೆ ಎಂಬುದರ ಬಗ್ಗೆ ವಿಶ್ವಾಸವಿರಲಿ, ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಿಮ್ಮ ದಿನಚರಿಯಲ್ಲಿ ಬದಲಾವಣೆ ಮಾಡುವುದು ಸರಿ, ಆದರೆ ಬೇರೊಬ್ಬರಿಗಾಗಿ ನೀವು ಬದಲಾಗುವುದು ಅನಿವಾರ್ಯವಲ್ಲ.

ಕಾರಣಗಳನ್ನು ಅರ್ಥಮಾಡಿಕೊಳ್ಳಿ ಸನ್ನಿವೇಶವು ನಿಮ್ಮಿಂದ ತಪ್ಪು ಮಾಡಿಸಿರಬಹುದು ಆದರೆ ನೀವು ನಿಮ್ಮನ್ನು ಮಾತ್ರ ತಪ್ಪಿತಸ್ಥರೆಂದು ಭಾವಿಸುವುದು ತಪ್ಪು, ಯಾವುದೇ ಸಮಯ ತಪ್ಪಾಗಿದೆ ಅದನ್ನು ಸಾಧ್ಯವಾದರೆ ತಿದ್ದಿಕೊಳ್ಳಲು ಪ್ರಯತ್ನಿಸಿ, ಕಾರಣಗಳನ್ನು ಅರ್ಥಮಾಡಿಕೊಳ್ಳಿ.

ಬದಲಾವಣೆಯತ್ತ ಸಾಗಿ ನೀವು ಹೋಗುವ ದಾರಿಯಲ್ಲಿ ಬದಲಾವಣೆ ಸಾಧ್ಯವಾಗದಿದ್ದರೆ ವಿರುದ್ಧ ದಿಕ್ಕಿನಲ್ಲಿ ಹೋಗಿ ನೀವು ಅಂದುಕೊಂಡಿರುವ ಗುರಿ ಸಾಧಿಸಿ.

ಸಕಾರಾತ್ಮಕ ಜನರೊಂದಿಗೆ ಮಾತನಾಡಿ ನಿಮ್ಮನ್ನು ತಪ್ಪಿತಸ್ಥರೆಂದು ಭಾವಿಸುವ ಸಂದರ್ಭದಲ್ಲಿ ನಿಮ್ಮ ಹಿತೈಷಿಗಳೊಂದಿಗೆ ಪ್ರಾಮಾಣಿಕವಾಗಿ ಮಾತನಾಡಿ, ನಿಮ್ಮ ಭಾವನೆಗಳನ್ನು ಮತ್ತು ಪ್ರಸ್ತುತ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಅನೇಕ ಬಾರಿ ನೀವು ಯೋಚಿಸುತ್ತಿರುವುದು ಕೇವಲ ನಿಮ್ಮ ಕಲ್ಪನೆಯಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್