AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಚಳಿಗಾಲದಲ್ಲಿ ನಿಮ್ಮ ಕೂದಲ ಆರೈಕೆ ಹೀಗಿರಲಿ; ಇಲ್ಲಿದೆ ಉಪಯುಕ್ತ ಮಾಹಿತಿ

ಸೌಂದರ್ಯದ ಭಾಗವಾದ ಕೂದಲ ಆರೈಕೆಯೂ ಅಷ್ಟೇ ಮುಖ್ಯ. ದಿನಿತ್ಯದ ಓಡಾಟ, ಧೂಳು, ಬೆವರಿನಿಂದ ಕೂದಲು ದುರ್ಬಲಗೊಂಡು ತುಂಡಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಕೂದಲ ರಕ್ಷಣೆ ಮಾಡಿಕೊಳ್ಳುವುದು ಸವಾಲಿನ ಕೆಲಸವೇ ಸರಿ.

Health Tips: ಚಳಿಗಾಲದಲ್ಲಿ ನಿಮ್ಮ ಕೂದಲ ಆರೈಕೆ ಹೀಗಿರಲಿ; ಇಲ್ಲಿದೆ ಉಪಯುಕ್ತ ಮಾಹಿತಿ
ತ್ವಚೆಯನ್ನು ಸ್ವಚ್ಛವಾಗಿಡಲು ಪ್ರತಿಯೊಬ್ಬರೂ ಪ್ರತಿದಿನ ಸ್ನಾನ ಮಾಡುತ್ತಾರೆ. ಆದರೆ ಸ್ನಾನದ ಮೂಲಕ ನಿಮ್ಮ ತ್ವಚೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಿವಾರಿಸಬಹುದು ಎಂಬುವುದು ನಿಮಗೆ ತಿಳಿದಿದೆಯೇ? ಇದಕ್ಕಾಗಿ ನೀವು ಸ್ನಾನದ ನೀರಿನಲ್ಲಿ ಕೆಲವು ವಸ್ತುಗಳನ್ನು ಮಿಶ್ರಣ ಮಾಡಬೇಕು.
TV9 Web
| Edited By: |

Updated on: Dec 08, 2021 | 10:03 AM

Share

ಪ್ರತಿಯೊಬ್ಬರಿಗೂ ತಾನು ಸುಂದರವಾಗಿ ಕಾಣಿಸಬೇಕು ಎನ್ನುವ ಹಂಬಲವಿರುತ್ತದೆ. ಸೌಂದರ್ಯವೆನ್ನುವುದು ಕೇವಲ ಮುಖದ ಅಂದ ಮಾತ್ರವಲ್ಲ. ಸೌಂದರ್ಯದ ಭಾಗವಾದ ಕೂದಲ ಆರೈಕೆಯೂ ಅಷ್ಟೇ ಮುಖ್ಯ. ದಿನನಿತ್ಯದ ಓಡಾಟ, ಧೂಳು, ಬೆವರಿನಿಂದ ಕೂದಲು ದುರ್ಬಲಗೊಂಡು ತುಂಡಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಕೂದಲ ರಕ್ಷಣೆ ಮಾಡಿಕೊಳ್ಳುವುದು ಸವಾಲಿನ ಕೆಲಸವೇ ಸರಿ. ವಾತಾವರಣ ತಂಪಾದಂತೆ ಕೂದಲು ಶುಷ್ಕಗೊಂಡು, ಡ್ರೈ ಎನಿಸಲು ಆರಂಭವಾಗುತ್ತದೆ. ಹೀಗಾಗಿ ಕೇಶ ಸೌಂದರ್ಯ ಹೆಚ್ಚಿಸಿಕೊಳ್ಳಲು ಮುಖ್ಯವಾಗಿ ಚಳಿಗಾಲದಲ್ಲಿ ಕೊಂಚ ಶ್ರಮವಹಿಸುವುದು ಅಗತ್ಯ.

ಮಾರುಕಟ್ಟೆಯಲ್ಲಿ ಸಿಗುವ ಶಾಂಪೂ, ಕಂಡೀಶನರ್​ಗಳು ನಮ್ಮ ಕೂದಲಿಗೆ ಹಾನಿಯ ಉಂಟುಮಾಡುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ನೈಸರ್ಗಿಕವಾಗಿ ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡರೆ ಕೂದಲು ಉದುರುವುದನ್ನು ತಡೆಯಹುದುಸಾಮಾನ್ಯವಾಗಿ ನಾವು ವಿವಿಧ ರೀತಿಯ ಹೇರ್​ಸ್ಟೈಲ್​ ಮಾಡಿಕೊಳ್ಳಲು ಹೇರ್ ಡ್ರೈಯರ್​ನಂತಹ ಉಪಕರಣಗಳನ್ನು ಬಳಸುತ್ತೇವೆ. ಇದರಿಂದ ಕೂದಲಿಗೆ ಅನಗತ್ಯ ಅಥವಾ ಅತಿಯಾದ ಬಿಸಿತಾಗಿ ಕೂದಲು ಡ್ರೈಆಗುತ್ತದೆ. ಇದು ಕೂದಲು ಉದುರಲು ಒಂದು ಮುಖ್ಯ ಕಾರಣ. ನಮ್ಮ ಆಹಾರ ಶೈಲಿಯೂ ಕೂಡ ಕೂದಲ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರೋಟೀನ್​ಭರಿತ ಆಹಾರ ಸೇವನೆ ಅವಶ್ಯಕ.​

ಕೂದಲ ಆರೈಕೆಯಲ್ಲಿ ಇವುಗಳನ್ನು ತಪ್ಪದೇ ಮಾಡಿ ಎಣ್ಣೆಯ ಮಸಾಜ್ ಮತ್ತು ಹೇರ್​ ಪ್ಯಾಕ್​​ ಪ್ರತಿ ಬಾರಿ ತೆಲೆಗೆ ಸ್ನಾನ ಮಾಡುವ ಮೊದಲು ಕೊಬ್ಬರಿ ಎಣ್ಣೆಯಿಂದ ಮಸಾಜ್​ ಮಾಡಿಕೊಳ್ಳಿ. ಇದು ಕೂದಲಿನ ಸಾಪ್ಟನೆಸ್​ ಹೆಚ್ಚಿಸುತ್ತದೆ. ವಾರದಲ್ಲಿ ಎರಡು ಬಾರಿಯಾದರೂ ನಿಮ್ಮ ಕೂದಲಿಗೆ ಸೆಟ್​ ಆಗುವ ಹೇರ್​ಪ್ಯಾಕ್​​ ಹಾಕಿಕೊಳ್ಳಿ. ಹೇರ್ ಪ್ಯಾಕ್​ನಲ್ಲಿ ಆದಷ್ಟು ಮೊಸರು ಇರುವಂತೆ ನೋಡಿಕೊಳ್ಳಿ. ಏಕೆಂದರೆ ಮೊಸರು ನಿಮ್ಮ ಕೂದಲು ಡ್ರೈ ಆಗುವುದನ್ನು ತಡೆಯುತ್ತದೆ. ಅಲ್ಲದೆ ಮೊಸರನ್ನು ಕೂದಲಿಗೆ ಹಾಕುವುದರಿಂದ ಹೊಟ್ಟಿನ (ಡ್ಯಾಂಡ್ರಪ್) ಸಮಸ್ಯೆ ನಿವಾರಣೆಯಾಗಲಿದೆ.

ಸ್ನಾನಕ್ಕೆ ಬಿಸಿ ನೀರು ಬೇಡ ನೆನಪಿಡಿ ತಲೆಸ್ನಾನ ಮಾಡುವಾಗ ಬಿಸಿ ನೀರನ್ನು ಬಳಸಬೇಡಿ. ಕೂದಲಿನ ಸೂಕ್ಷ್ಮತೆಗೆ ಬಿಸಿ ನೀರು ಹಾನಿಯುಂಟು ಮಾಡುತ್ತದೆ. ಹೀಗಾಗಿ ಉಗುರು ಬೆಚ್ಚಗಿನ ಅಥಾವ ತಣ್ಣನೆಯ ನೀರಿನಿಂದ ಸ್ನಾನಮಾಡಿ. ಸ್ನಾನದ ಬಳಿಕ ಕೂದಲನ್ನು ತಕ್ಷಣ ಬಾಚಿಕೊಳ್ಳಬೇಡಿ. ಬದಲಾಗಿ ಒದ್ದೆ ಕೂದಲನ್ನು ಗಾಳಿಯಲ್ಲಿ ಒಣಗಿಸಿ ಅಥವಾ ಹತ್ತಿಯ ಟವೆಲ್​ನಿಂದ ನೀರು ಆರುವವರೆಗೆ ಕಟ್ಟಿಕೊಳ್ಳಿ. ಅನಿವಾರ್ಯವಿದ್ದರೆ ಹೇರ್ ಡ್ರೈಯರ್​ ಬಳಸಿ ಆದರೆ, ಹೇರ್​ ಡ್ರೈಯರ್​ನಲ್ಲಿ ಹೀಟ್​ ಆಗುವ ಪ್ರಮಾಣವನ್ನು ಸೆಟ್​ ಮಾಡಿಕೊಳ್ಳಲು ಮರೆಯದಿರಿ.

ಅಗಲ ಹಲ್ಲಿನ ಬಾಚಣಿಗೆ ಬಳಸಿ ಕೂದಲು ಬಾಚುವಾಗ ಆದಷ್ಟು ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸಿ. ಇದು ನಿಮ್ಮ ಕೂದಲು ತುಂಡಾಗುವುದನ್ನು ತಡೆಯುತ್ತದೆ. ಅಲ್ಲದೆ ಸಿಕ್ಕಾಗಿರುವ ಕೂದಲನ್ನು ನಿಧಾನವಾಗಿ ಬಿಡಿಸಬಹುದು. ಇದರಿಂದ ಕೂದಲು ಅರ್ಧದಲ್ಲೇ ತುಂಡಾಗಿ ಬಿಳುವುದು ತಪ್ಪುತ್ತದೆ.

ಲೋಳೆಸರ (ಆಲೋವೇರಾ) ಬಳಕೆಯಿರಲಿ. ಚಳಿಗಾಲದಲ್ಲಿ ನಾವು ದೇಹವನ್ನು ಬೆಚ್ಚಗಿರಿಸಿಲು ಸೇವಿಸಿದ ಆಹಾರ ನಮ್ಮ ಕೂದಲಿಗೆ ಹೊಂದಿಕೆಯಾಗದಿರಬಹುದು. ಹೀಗಾಗಿ ತಲೆಯ ಆರೋಗ್ಯಕ್ಕೆ ಆದಷ್ಟು ಆಲೋವೆರಾ ಬಳಸಿ. ಇದು ನಿಮ್ಮ ನೆತ್ತಿಯನ್ನು ತಂಪಾಗಿರುಸುತ್ತದೆ. ಪ್ರೆಶ್​ ಆಲೋವೆರಾ ಎಲೆಯನ್ನು ಕತ್ತರಿಸಿ ಕೂದಲು ಮತ್ತು ನೆತ್ತಿಯ ಮಧ್ಯ ಉಜ್ಜಿಕೊಂಡು 30 ನಿಮಿಷ ಕಾಲ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಆಲೋವೆರಾ ಕೂದಲ ಸಮೃದ್ಧ ಬೆಳವಣಿಗೆಗೆ ಸಹಕಾರಿಯಾಗಿದೆ ಮತ್ತು ಕೂದಲು ಮೃದುವಾಗಿರುವಂತೆ ಮಾಡುತ್ತದೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ