AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

kitchen Tips in Kannada : ಈರುಳ್ಳಿ ಹಾಳಾಗದಂತೆ ಸಂಗ್ರಹಿಸಿಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಭಾರತೀಯ ಅಡುಗೆಯಲ್ಲಿ ಈರುಳ್ಳಿಯಿಲ್ಲದೇ ಯಾವುದೇ ಅಡುಗೆಯು ರುಚಿಸುವುದಿಲ್ಲ. ಅಡುಗೆಯ ರುಚಿ ಹಾಗೂ ಸ್ವಾದವನ್ನು ಹೆಚ್ಚಿಸುವ ಈರುಳ್ಳಿಯನ್ನು ಹಸಿಯಾಗಿಯೇ ತಿನ್ನುತ್ತಾರೆ. ಆದರೆ ಈ ದೀರ್ಘಕಾಲದವರೆಗೂ ಈ ತರಕಾರಿಯನ್ನು ತಾಜಾವಾಗಿಡುವುದು ಕಷ್ಟ. ಅದಲ್ಲದೇ, ಬೇಸಿಗೆಯಲ್ಲಿ ಈರುಳ್ಳಿ ಬೇಗನೇ ಕೆಡುವುದಲ್ಲದೇ ಮೊಳಕೆಯೊಡೆಯುತ್ತದೆ. ಈ ಸುಲಭ ವಿಧಾನಗಳಿಂದ ಕೆಡದಂತೆ ದೀರ್ಘಕಾಲದವರೆಗೆ ಸಂರಕ್ಷಿಸಿಟ್ಟುಕೊಳ್ಳಬಹುದು.

kitchen Tips in Kannada : ಈರುಳ್ಳಿ ಹಾಳಾಗದಂತೆ ಸಂಗ್ರಹಿಸಿಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಯಿನಂದಾ
| Edited By: |

Updated on: May 21, 2024 | 12:08 PM

Share

ಯಾವುದೇ ಅಡುಗೆಯಿರಲಿ ಈರುಳ್ಳಿಯಿಲ್ಲದೇ ರುಚಿ ಬರುವುದೇ ಇಲ್ಲ. ಮಸಾಲೆಯುಕ್ತ ಆಹಾರಗಳಿಗೆ ಈರುಳ್ಳಿ ಇರಲೇಬೇಕು. ಅಡುಗೆಗೆ ಹೆಚ್ಚು ಉಪಯೋಗವಾಗುವ ಕಾರಣ ಈರುಳ್ಳಿ ಹೆಚ್ಚು ತರುತ್ತೇವೆ. ಆದರೆ ಕೆಲವೊಮ್ಮೆ ಮಾರುಕಟ್ಟೆಯಲ್ಲಿ ತಂದ ಈರುಳ್ಳಿ ಬೇಗನೇ ಕೆಡುತ್ತದೆ. ಹೆಚ್ಚಿನವರು ಫ್ರಿಡ್ಜ್ ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ ಈ ಕೆಲವು ತಪ್ಪುಗಳನ್ನು ಮಾಡದೇ ಕೆಲ ಸಲಹೆಗಳನ್ನು ಅನುಸರಿಸಿದರೆ ಒಳ್ಳೆಯದು.

  • ಈರುಳ್ಳಿಯನ್ನು ಶೇಖರಿಸಿಡುವಾಗ ಶುಷ್ಕ ಮತ್ತು ತಂಪಾದ ವಾತಾವರಣವಿರಲಿ.
  • ಗಾಳಿಯಾಡುವ ಪ್ರದೇಶದಲ್ಲಿಟ್ಟರೆ ಈರುಳ್ಳಿಯು ಬೇಗನೆ ಕೆಡುವುದಿಲ್ಲ.
  • ಒಣ ಬಟ್ಟೆಯಿಂದ ಈರುಳ್ಳಿಯನ್ನು ಒರೆಸಿ, ತೆರೆದ ಬ್ಲಾಸ್ಕೆಟ್ ನಲ್ಲಿ ಗಾಳಿಯಾಡುವಂತೆ ಇಡುವುದು ಒಳ್ಳೆಯದು.
  • ಈರುಳ್ಳಿ ಗ್ಯಾಸ್ ಬಿಡುಗಡೆ ಮಾಡುತ್ತದೆ. ಹೀಗಾಗಿ ಈರುಳ್ಳಿಯ ಜೊತೆಗೆ ಬೇರೆ ತರಕಾರಿ ಹಾಗೂ ಹಣ್ಣುಗಳನ್ನು ಇಡಬೇಡಿ.
  • ಮಾರುಕಟ್ಟೆಯಿಂದ ತಂದ ಈರುಳ್ಳಿಯನ್ನು ಪ್ಲಾಸ್ಟಿಕ್‌ ಕವರ್‌ನೊಳಗೆ ಹಾಕಿಡಬಾರದು. ಹೀಗೆ ಮಾಡಿದರೆ ಬೇಗನೇ ಕೊಳೆತು ಹೋಗುತ್ತದೆ.
  • ಈರುಳ್ಳಿಯನ್ನು ಎಂದಿಗೂ ಫ್ರಿಡ್ಜ್‌ನಲ್ಲಿ ಶೇಖರಿಸಿಡಬೇಡಿ. ಹೀಗಿಟ್ಟರೆ ಬೇಗನೇ ಹಾಳಾಗುತ್ತದೆ.
  • ಕತ್ತರಿಸಿದ ಹಾಗೂ ಸಿಪ್ಪೆ ಸುಲಿದ ಈರುಳ್ಳಿಯನ್ನು ಆದಷ್ಟು ಬೇಗ ಅಡುಗೆ ಬಳಸುವುದು ಒಳ್ಳೆಯದು.
  • ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ತರುವಾಗ ದೊಡ್ಡ ಈರುಳ್ಳಿಯನ್ನೇ ಆಯ್ಕೆ ಮಾಡಿಕೊಳ್ಳಿ. ಒಣಸಿಪ್ಪೆಯ ಪದರುಗಳೂ ಹಾಗೂ ದೊಡ್ಡ ಈರುಳ್ಳಿಯು ಹೆಚ್ಚು ಕಾಲ ಉಳಿಯುತ್ತದೆ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ
'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಯಿಲ್ ಟ್ಯಾಂಕರ್ ಪಲ್ಟಿ; ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!
ಆಯಿಲ್ ಟ್ಯಾಂಕರ್ ಪಲ್ಟಿ; ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!
'ರಾಮಾಯಣ' ಚಿತ್ರದ ಪೆನ್ಸಿಲ್ ಆರ್ಟ್
'ರಾಮಾಯಣ' ಚಿತ್ರದ ಪೆನ್ಸಿಲ್ ಆರ್ಟ್
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
9 ಗಂಟೆಗಳ ಶೋಧ: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?
9 ಗಂಟೆಗಳ ಶೋಧ: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?