AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ನೀವು ಸಂಗಾತಿಯೊಂದಿಗೆ ಪಾರ್ಟಿಗೆ ಹೋದ್ರೆ ಈ ತಪ್ಪುಗಳನ್ನು ಮಾಡಬೇಡಿ

ನೀವು ಸಂಗಾತಿ ಜತೆಗೆ ಕೆಲ ಸಮಯವನ್ನು ಕಳೆಯಬೇಕೆನಿಸಿದಾಗ ಪಾರ್ಟಿಗೆ ಹೋಗುವುದು ಸಹಜ ಆದರೆ ಪಾರ್ಟಿ ಖುಷಿ ಕೊಡಬೇಕೇ ವಿನಃ ಮನಸ್ಥಾನವನ್ನು ಸೃಷ್ಟಿಸಕೂಡದು.

Relationship Tips: ನೀವು ಸಂಗಾತಿಯೊಂದಿಗೆ ಪಾರ್ಟಿಗೆ ಹೋದ್ರೆ ಈ ತಪ್ಪುಗಳನ್ನು ಮಾಡಬೇಡಿ
Relationship
TV9 Web
| Updated By: ನಯನಾ ರಾಜೀವ್|

Updated on: Sep 20, 2022 | 6:30 AM

Share

ನೀವು ಸಂಗಾತಿ ಜತೆಗೆ ಕೆಲ ಸಮಯವನ್ನು ಕಳೆಯಬೇಕೆನಿಸಿದಾಗ ಪಾರ್ಟಿಗೆ ಹೋಗುವುದು ಸಹಜ ಆದರೆ ಪಾರ್ಟಿ ಖುಷಿ ಕೊಡಬೇಕೇ ವಿನಃ ಮನಸ್ಥಾನವನ್ನು ಸೃಷ್ಟಿಸಕೂಡದು. ನೀವು ಕೆಲಕಾಲ ಕಳೆಯಲು ಪಾರ್ಟಿಗೆ ಹೋಗಬೇಕೆಂದೇನಿಲ್ಲ ಎಲ್ಲಿ ಬೇಕಾದರೂ ತೆರಳಬಹುದು, ಆದರೆ ಅದು ನಿಮ್ಮ ಸಂಗಾತಿಗೆ ಖುಷಿಯಾಗುವಂತಿರಬೇಕು.

ಸ್ನೇಹಿತರೊಂದಿಗೆ ಮಾತನಾಡುತ್ತಾ ಇರಬೇಡಿ ಸಂಗಾತಿ ಕಡೆಗೆ ಗಮನಕೊಡಿ ನಾವು ಯಾವುದೇ ದೊಡ್ಡ ಪಾರ್ಟಿಗಳಿಗೆ ಹೋದಾಗ, ಅನೇಕ ಸ್ನೇಹಿತರನ್ನು ಮತ್ತು ಪರಿಚಯಸ್ಥರನ್ನು ಭೇಟಿ ಮಾಡುವುದು ಅನಿವಾರ್ಯವಾಗಿದೆ ಮತ್ತು ನಂತರ ಹಳೆಯ ನೆನಪುಗಳು ತಾಜಾ ಆಗಲು ಪ್ರಾರಂಭಿಸುತ್ತವೆ, ಸ್ನೇಹಿತರೊಂದಿಗೆ ಹರಟೆಹೊಡಿಯುತ್ತಾ ನಿಮ್ಮ ಸಂಗಾತಿ ಕಡೆಗೆ ಗಮನಕೊಡುವುದನ್ನೇ ಮರೆತುಬಿಡುತ್ತೇವೆ. ಆಗ ಅವರು ಒಂಟಿ ತನವನ್ನು ಅನುಭವಿಸಬಹುದು ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಬಹುದು.

ಸ್ನೇಹಿತರನ್ನು ಪರಿಚಯಿಸದಿರುವುದು ನೀವು ನಿಮ್ಮ ಸಂಗಾತಿಯೊಂದಿಗೆ ಪಾರ್ಟಿಗೆ ಹೋಗಿದ್ದರೆ ಮತ್ತು ನಿಮ್ಮ ಸ್ನೇಹಿತರಿಗೆ ಈ ಸಂಬಂಧದ ಬಗ್ಗೆ ಏನೂ ತಿಳಿದಿಲ್ಲದಿದ್ದರೆ, ನಿಮ್ಮ ಸಂಗಾತಿಯನ್ನು ಸ್ನೇಹಿತರಿಗೆ ಪರಿಚಯಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ನೀವು ಸಂಬಂಧದ ಬಗ್ಗೆ ಗಂಭೀರವಾಗಿಲ್ಲ ಮತ್ತು ಅದನ್ನು ಉಳಿಸಿಕೊಳ್ಳಲು ಬಯಸುತ್ತೀರಿ ಎಂದು ಅವರು ಭಾವಿಸುತ್ತಾರೆ. ನೀವು ಆಕೆ, ಆತ ನಿಮ್ಮ ಸ್ನೇಹಿತ ಎಂದಾದರೂ ಪರಿಚಯ ಮಾಡಿಕೊಡಿ, ಆಗ ಅವರಿಗೂ ಸಂತೋಷವಾಗುವುದು.

ಜಗಳ ಮಾಡಬೇಡಿ ಪಾರ್ಟಿ ಮಾಡುವಾಗ ನಿಮ್ಮ ಸಂಗಾತಿಯ ವರ್ತನೆ ಹಿಡಿಸಲಿಲ್ಲ ಎಂದಾದರೆ ಅಲ್ಲೇ ಜನರ ಎದುರು ಬೈದುಬಿಡಬೇಡಿ, ಶಾಂತಿಯಿಂದ ವರ್ತಿಸಿ, ನಿಮ್ಮ ವರ್ತನೆಯೇ ನಿಮ್ಮ ಸಂಬಂಧದ ಬಿರುಕಿಗೆ ಕಾರಣವಾಗಬಹುದು.

ಏನಿದ್ದರೂ ಪ್ರೀತಿಯಿಂದ ವಿವರಿಸಿ ಸಂಗಾತಿಯದ್ದು ಏನಾದರೂ ತಪ್ಪಿದ್ದಲ್ಲಿ ಅಥವಾ ಅವರ ನಡವಳಿಕೆ ಇಷ್ಟವಾಗದಿದ್ದಲ್ಲಿ, ನೀವು ಸಂಗಾತಿಯನ್ನು ಬದಿಗೆ ಕರೆದುಕೊಂಡು ಹೋಗಿ ಪ್ರೀತಿಯಿಂದ ಅರ್ಥಮಾಡಿಸಲು ಪ್ರಯತ್ನಿಸಿ. ಪಾರ್ಟಿಯನ್ನು ಆನಂದಿಸಿ ಮತ್ತು ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ಎಂದಿಗೂ ಜಗಳವಾಡಬೇಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?