AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ibuprofen Tablet : ಅತಿಯಾದ ಐಬುಪ್ರೊಫೇನ್ ಮಾತ್ರೆ ಸೇವನೆ ಕರುಳಿನಲ್ಲಿ ರಂಧ್ರ, ಮೆದುಳಿನ ರಕ್ತಸಾವ್ರಕ್ಕೆ ಕಾರಣವಾಗಬಹುದು

ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಪುಟ್ಟ ನೋವಿಗೂ ನೋವು ನಿವಾರಕ ಮಾತ್ರೆಗಳ ಮೊರೆ ಹೋಗುತ್ತಿರುವವರ ಸಂಖ್ಯೆಯು ಹೆಚ್ಚಳವಾಗುತ್ತದೆ. ಈ ಐಬುಪ್ರೊಫೇನ್ ನಂತಹ ಮಾತ್ರೆಗಳ ಸೇವನೆಯಿಂದ ಕರುಳಿನ ಬ್ಯಾಕ್ಟಿರಿಯಾಗಳ ನಡುವಿನ ಸಮತೋಲನವನ್ನು ಏರುಪೇರು ಉಂಟಾಗಿ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ಅಧ್ಯಯನದಿಂದ ಬಹಿರಂಗವಾಗಿದೆ.

Ibuprofen Tablet : ಅತಿಯಾದ ಐಬುಪ್ರೊಫೇನ್ ಮಾತ್ರೆ ಸೇವನೆ ಕರುಳಿನಲ್ಲಿ ರಂಧ್ರ, ಮೆದುಳಿನ ರಕ್ತಸಾವ್ರಕ್ಕೆ ಕಾರಣವಾಗಬಹುದು
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Mar 28, 2024 | 2:31 PM

Share

ಅತಿಯಾಗಿ ಮೈ ದಂಡಿಸಿ ಕೆಲಸ ಮಾಡಿದರೆ ಮೈ ಕೈ ನೋವು ಶುರುವಾಗುತ್ತದೆ. ಸ್ವಲ್ಪ ಒತ್ತಡ ಬಿದ್ದರೆ ತಲೆ ನೋವಿನಂತಹ ಸಣ್ಣ ಪುಟ್ಟ ಸಮಸ್ಯೆಗಳು ಕಾಡುವುದೇ ಹೆಚ್ಚು. ಹೀಗಾಗಿ ವೈದ್ಯರನ್ನು ಭೇಟಿಯಾಗದೇ ಮೆಡಿಕಲ್ ನಲ್ಲಿ ಸಿಗುವ ನೋವು ನಿವಾರಕ ಮಾತ್ರೆಗಳನ್ನು ಹೆಚ್ಚು ಸೇವಿಸುತ್ತಾರೆ. ದಿನನಿತ್ಯ ಐಬುಪ್ರೊಫೇನ್ ಸೇವಿಸುತ್ತಿದ್ದರೆ ಅಡ್ಡಪರಿಣಾಮಗಳೇ ಹೆಚ್ಚು ಎಂದಿದ್ದಾರೆ. ಕರುಳಿನಲ್ಲಿ ವಾಸಿಸುವ ಬ್ಯಾಕ್ಟಿರಿಯಾ, ಶಿಲೀಂಧ್ರ ವೈರಸ್‌ಗಳು ಮತ್ತು ಇತರ ಸೂಕ್ಷ್ಮಾಣುಜೀವಿಗಳ ಈ ಸಮುದಾಯವು ದೇಹದ ಆರೋಗ್ಯಕರ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ. ಆದರೆ ಈ ನೋವು ನಿವಾರಕ ಮಾತ್ರೆಗಳ ಸೇವನೆಯು ಆರೋಗ್ಯದಲ್ಲಿ ಏರುಪೇರನ್ನು ಉಂಟು ಮಾಡಬಹುದು.

ಹೌದು, ಐಬುಪ್ರೊಫೇನ್‌ನಂತಹ ಔಷಧಗಳು ಅಸೆಟೈಲ್ಸಲಿಸಿಲಿಕ್ ಆಮ್ಲವನ್ನು ಹೊಂದಿರುತ್ತವೆ. ಇದು ಕರುಳಿನ ಬ್ಯಾಕ್ಟಿರಿಯಾಗಳ ನಡುವಿನ ಸಮತೋಲನವನ್ನು ಏರುಪೇರು ಮಾಡುವ ಸಾಧ್ಯತೆಯು ಅಧಿಕವಾಗಿದೆ. ಇದರಿಂದಾಗಿ ಫಲವತ್ತತೆ ಸಮಸ್ಯೆಗಳು, ಹೊಟ್ಟೆಯ ಹುಣ್ಣು, ರಕ್ತ ಹೆಪ್ಪುಗಟ್ಟುವಿಕೆ, ಹೃದಯ ಅಸ್ವಸ್ಥತೆಗಳು, ರಕ್ತಹೀನತೆ, ಮೆದುಳಿನ ರಕ್ತಸ್ರಾವ ಸೇರಿದಂತೆ ಇನ್ನಿತ್ತರ ರೋಗಲಕ್ಷಣಗಳು ಕಂಡು ಬರುತ್ತದೆ. ಕರುಳಿನ ರಂಧ್ರಕ್ಕೂ ಕಾರಣವಾಗಿ ಕರುಳಿನ ಆರೋಗ್ಯವನ್ನು ತೀರಾ ಹದಗೆಡಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಅದಲ್ಲದೇ ಕರುಳಿನ ಬ್ಯಾಕ್ಟಿರಿಯಾದಲ್ಲಿನ ಅಸಮತೋಲನದೊಂದಿಗೆ ಕೈಕಾಲುಗಳ ಉರಿಯೂತ, ಬೆನ್ನುಮೂಳೆಯ ಅಥವಾ ಸಂಧಿವಾತದಂತಹ ಪರಿಸ್ಥಿತಿಗಳು ಉಲ್ಬಣವಾಗುತ್ತದೆ. ಆಟೋಇಮ್ಯೂನ್ ಅಸ್ವಸ್ಥತೆಗಳು, ಹಾರ್ಮೋನುಗಳ ಅಸ್ವಸ್ಥತೆಗಳು, ಹೃದಯ ರೋಗಗಳು, ಡಿಸ್ಟಯೋಸಿಸ್ ರೋಗಕ್ಕೂ ಕಾರಣವಾಗಬಹುದು ಎಂದು ಆತಂಕ

ಇದನ್ನೂ ಓದಿ: ಕೂದಲು ಉದುರುವಿಕೆ ಬೇಗ ಕಡಿಮೆಯಾಗಲು ಅಡುಗೆಮನೆಯಲ್ಲಿರುವ ಈ ವಸ್ತು ಬಳಸಿ

ಕರುಳಿನ ಈ ಸೂಕ್ಷ್ಮ ಜೀವಿಗಳ ಪಾತ್ರವೇನು?

ಸಂಶೋಧಕರ ಪ್ರಕಾರ, ಕರುಳಿನ ಸೂಕ್ಷ್ಮಜೀವಿಯು ದೇಹದ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕರುಳಿನಲ್ಲಿನ ಚಟುವಟಿಕೆಯನ್ನು ನಿಯಂತ್ರಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ