ಇಡ್ಲಿ ಪ್ರಿಯರಿಗೆ ಶಾಕಿಂಗ್ ಸುದ್ದಿ; ಇನ್ಮುಂದೆ ಈ ತಿಂಡಿ ತಿನ್ನುವಾಗ ಯೋಚಿಸಬೇಕು!

ಇನ್ನುಮುಂದೆ ನೀವು ಇಡ್ಲಿ ತಿನ್ನಬೇಕು ಎಂದರೆ ನೀವು ಒಮ್ಮೆ ಯೋಚನೆ ಮಾಡಲೇಬೇಕು. ಇಡ್ಲಿ ಪ್ರಿಯರಿಗೆ ಶಾಕ್ ಆಗುವ ವಿಚಾರವೊಂದನ್ನು ಅಧ್ಯಯನ ಬಯಲಿಗೆಳೆದಿದೆ. ನಮ್ಮ ಜೀವ ವೈವಿಧ್ಯಕ್ಕೆ ಹಾನಿ ಉಂಟುಮಾಡುವ ಪಟ್ಟಿಯಲ್ಲಿ ಇಡ್ಲಿಯ ಹೆಸರು ಕೂಡ ಇದೆ. ಏನಿದು ಹೊಸ ಸಂಗತಿ ಅಂತೀರಾ? ಇಲ್ಲಿದೆ ಪೂರ್ತಿ ಮಾಹಿತಿ.

ಇಡ್ಲಿ ಪ್ರಿಯರಿಗೆ ಶಾಕಿಂಗ್ ಸುದ್ದಿ; ಇನ್ಮುಂದೆ ಈ ತಿಂಡಿ ತಿನ್ನುವಾಗ ಯೋಚಿಸಬೇಕು!
ಇಡ್ಲಿImage Credit source: iStock
Follow us
| Updated By: ಸುಷ್ಮಾ ಚಕ್ರೆ

Updated on:Feb 26, 2024 | 8:11 PM

ಇಡ್ಲಿ (Idli) ಸೇರಿದಂತೆ 25 ಆಹಾರಗಳಿಂದ ಜೀವ ವೈವಿಧ್ಯತೆ (biodiversity) ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಎಂದು ಸಿಂಗಾಪುರ ನ್ಯಾಷನಲ್ ಯುನಿವರ್ಸಿಟಿ ಮಾಡಿದ ಅಧ್ಯಯನದಲ್ಲಿ ತಿಳಿಸಲಾಗಿದೆ. ಪ್ರಪಂಚದಾದ್ಯಂತ 151 ಜನಪ್ರಿಯ ಆಹಾರಗಳ‌ ಮೇಲೆ ಸರ್ವೇ ಮಾಡಲಾಗಿತ್ತು.‌ ಈ ವೇಳೆ ದಕ್ಷಿಣ ಭಾರತದ ಜನಪ್ರಿಯ ತಿನಿಸಾಗಿರುವ ಇಡ್ಲಿಯಿಂದಲೂ ಜೀವ ವೈವಿಧ್ಯತೆ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ತಿಳಿಸಲಾಗಿದೆ.

ಜೀವ ವೈವಿಧ್ಯತೆ ಮೇಲೆ ಪರಿಣಾಮ ಬೀರುವ ಟಾಪ್ 25 ಆಹಾರಗಳ ಪಟ್ಟಿಯಲ್ಲಿ ಇಡ್ಲಿ 6ನೇ ಸ್ಥಾನದಲ್ಲಿದೆ. ಇತ್ತೀಚಿಗೆ ಇಡ್ಲಿಗಳನ್ನು ತಿನ್ನುವವರ ಸಂಖ್ಯೆ ಜಾಸ್ತಿಯಾಗಿದೆ. ಇದರಿಂದ ರೈತರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಇಡ್ಲಿ ಹಾಗೂ ದೋಸೆಗೆ ಬಳಸುವ ಉದ್ದಿನ ಬೇಳೆಯನ್ನು ಸಹ ಭೂಮಿಯಲ್ಲಿಯೇ ಬೆಳೆಯಬೇಕಾಗುತ್ತದೆ. ಅಕ್ಕಿ ಬೆಳೆಯುವುದಕ್ಕೆ ನೀರು, ಹವಮಾನ, ಭೂಮಿ, ಸಮಯ, ಹಣವು ಹೆಚ್ಚಿನದಾಗಿ ಬೇಕಾಗುತ್ತದೆ. ಹೀಗಾಗಿ ಅಕ್ಕಿಯ ಬದಲಿಗೆ ಹೆಚ್ಚು ಸಿರಿಧಾನ್ಯಗಳನ್ನು ಬಳಕೆ ಮಾಡುವುದು ಉತ್ತಮ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

ಇದನ್ನೂ ಓದಿ: White Blood Cells: ಬಿಳಿ ರಕ್ತ ಕಣ ಕಡಿಮೆಯಾಗಿದೆಯೇ? ಈ ಆಹಾರ ಸೇವಿಸಿ

ಅಕ್ಕಿಯಿಂದ ಮಾಡಿದ ಇಡ್ಲಿಯನ್ನು ತಿನ್ನುವುದರಿಂದ ಮಧುಮೇಹ ಜಾಸ್ತಿಯಾಗುತ್ತದೆ. ಇದರಿಂದ ಸಕ್ಕರೆ ಕಾಯಿಲೆ ಮಾತ್ರವಲ್ಲದೆ ತೂಕವೂ ಹೆಚ್ಚಾಗುತ್ತದೆ. ಹಾರ್ಮೋನ್ ಅಸಮತೋಲನದಂತಹ ಸಮಸ್ಯೆಗಳು ಮಹಿಳೆಯರಲ್ಲಿ ಕಂಡುಬರುತ್ತವೆ. ಅಲ್ಲದೇ ದೇಹದಲ್ಲಿ ಸೋಮಾರಿತನ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ಅಕ್ಕಿಯಿಂದ ಮಾಡಿದ ಇಡ್ಲಿ ಬದಲು ಸಿರಿಧಾನ್ಯ ಪದಾರ್ಥಗಳ ಬಳಕೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದು ವೈದ್ಯರ ಸಲಹೆ ನೀಡುತ್ತಿದ್ದಾರೆ.

ಆದರೆ, ಇದಕ್ಕೆ ಹೋಟೇಲ್ ಮಾಲೀಕರಿಂದ ವಿರೋಧ ವ್ಯಕ್ತವಾಗಿದೆ. ಎಷ್ಟೋ ವರ್ಷಗಳಿಂದ ಇಡ್ಲಿಯನ್ನು ಜನರು ತಿನ್ನುತ್ತ ಬಂದಿದ್ದಾರೆ. ಎಷ್ಟೋ ಡಾಕ್ಟರ್ ಗಳು ಆರೋಗ್ಯ ಹದಗೆಟ್ಟಾಗ ಇಡ್ಲಿ ತಿನ್ನುವುದಕ್ಕೆ ಸಲಹೆ ನೀಡುತ್ತಾರೆ. ಹೀಗಿರುವಾಗ ಇಡ್ಲಿ ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ ಎನ್ನುವುದು ಸುಳ್ಳು. ಸಿಂಗಾಪುರದಲ್ಲಿ ಯಾರೋ ಒಬ್ಬ ಕುಳಿತುಕೊಂಡು ಸರ್ವೇ ಮಾಡಿದಾಕ್ಷಣಕ್ಕೆ ಇಡ್ಲಿ ತನ್ನ ಮಹತ್ವ ಕಳೆದುಕೊಳ್ಳುವುದಿಲ್ಲ ಎಂದು ಹೊಟೇಲ್ ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ.

ದಕ್ಷಿಣ ಮತ್ತು ಉತ್ತರ ಭಾರತದ ಎರಡು ಅಚ್ಚುಮೆಚ್ಚಿನ ಖಾದ್ಯಗಳಾದ ಇಡ್ಲಿ ಮತ್ತು ರಾಜ್ಮಾ ಜೀವವೈವಿಧ್ಯಕ್ಕೆ ಹಾನಿಯನ್ನುಂಟುಮಾಡುತ್ತಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. PloS One ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಇಡ್ಲಿ ಮತ್ತು ರಾಜ್ಮಾ ಪ್ರಪಂಚದಾದ್ಯಂತ ಹೆಚ್ಚು ಹಾನಿಯನ್ನುಂಟುಮಾಡುವ ಟಾಪ್ 25 ಭಕ್ಷ್ಯಗಳಲ್ಲಿ ಸೇರಿವೆ.

ಇದನ್ನೂ ಓದಿ: Idli Benefits: ನಿಮಗೆ ಇಡ್ಲಿ ಎಂದರೆ ಇಷ್ಟಾನಾ? ಈ ವಿಷಯವೂ ತಿಳಿದಿರಲಿ

ಪ್ರಪಂಚದಾದ್ಯಂತ 151 ಜನಪ್ರಿಯ ಭಕ್ಷ್ಯಗಳು ಪರಿಸರ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಎಂಬುದನ್ನು ನಿರ್ಣಯಿಸಲು ಅಧ್ಯಯನವನ್ನು ನಡೆಸಲಾಯಿತು. ಅವುಗಳಲ್ಲಿ ಇಡ್ಲಿ ಆರನೇ ಸ್ಥಾನದಲ್ಲಿದೆ ಮತ್ತು ರಾಜ್ಮಾ ಏಳನೇ ಸ್ಥಾನವನ್ನು ಪಡೆದಿದೆ. ಇತರ ಭಕ್ಷ್ಯಗಳು ಚನಾ ಮಸಾಲಾ ಮತ್ತು ಚಿಕನ್ ಜಲ್ಫ್ರೇಜಿಯನ್ನು ಒಳಗೊಂಡಿವೆ. ಸಂಶೋಧಕರ ಪ್ರಕಾರ, ಪ್ರಾಥಮಿಕವಾಗಿ ದ್ವಿದಳ ಧಾನ್ಯಗಳು, ಗೋಮಾಂಸ ಮತ್ತು ಅಕ್ಕಿಯನ್ನು ಒಳಗೊಂಡಿರುವ ಭಕ್ಷ್ಯಗಳು ಜೀವವೈವಿಧ್ಯತೆಯ ಮೇಲೆ ನೇರ ಮತ್ತು ಗಣನೀಯ ಪರಿಣಾಮವನ್ನು ಬೀರುತ್ತವೆ.

ಆಲೂಗೆಡ್ಡೆ ಮತ್ತು ಗೋಧಿಯಿಂದ ಮಾಡಿದ ಭಕ್ಷ್ಯಗಳು ಕಡಿಮೆ ಜೀವವೈವಿಧ್ಯದ ಮೇಲೆ ಕಡಿಮೆ ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಪಿಟಿಐ ಪ್ರಕಾರ, ಮಾಂಸವನ್ನು ಹೊಂದಿರುವ ಭಕ್ಷ್ಯಗಳಿಗೆ ಹೋಲಿಸಿದರೆ ಸಸ್ಯಾಹಾರಿ ಮತ್ತು ಸಸ್ಯಾಹಾರಿ ಭಕ್ಷ್ಯಗಳು ಸ್ಥಿರವಾಗಿ ಕಡಿಮೆ ಜೀವವೈವಿಧ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:10 pm, Mon, 26 February 24

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ