AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗಾತಿಯ ಬಳಿ ಕ್ಷಮೆ ಕೇಳುವ ಮುನ್ನ ಈ ವಿಚಾರಗಳು ತಲೆಯಲ್ಲಿರಲಿ

ಜೀವನದಲ್ಲಿ ಹುಟ್ಟುತ್ತಲೇ ಜೊತೆಯಾಗುವ ಸಂಬಂಧಿಕರು ನಿಮ್ಮ ಗುಣ ಸ್ವಭಾವವನ್ನು ಹುಟ್ಟಿನಿಂದಲೇ ಅರಿತಿರುತ್ತಾರೆ. ಆದರೆ ಜೀವನದಲ್ಲಿ ಕೆಲವು ಸಂಬಂಧಗಳು ಬೆಳೆಯುತ್ತಾ ಹೋದಂತೆ ಜೊತೆಯಾಗುತ್ತವೆ. ಅದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಿಮ್ಮ ಜೊತೆಗೆ ಜೀವನವನ್ನು ಹಂಚಿಕೊಳ್ಳುವ ಸಂಗಾತಿಯು ಕೂಡ ಸೇರಿಕೊಳ್ಳುತ್ತಾರೆ. ಮದುವೆ ಜೀವನಕ್ಕೆ ಕಾಲಿಟ್ಟ ಬಳಿಕ ನಿಮ್ಮ ಗುಣ ಅವಗುಣಗಳನ್ನು ಎಲ್ಲವನ್ನು ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಕೆಲವೊಮ್ಮೆ ನಿಮ್ಮಿಂದ ಅಥವಾ ಸಂಗಾತಿಯಿಂದ ತಪ್ಪುಗಳಾಗಬಹುದು. ಆ ಸಮಯದಲ್ಲಿ ಕ್ಷಮೆ ಕೇಳುವಾಗ ಅಥವಾ ಕ್ಷಮಿಸುವ ವೇಳೆ ನೀವು ಈ ವಿಚಾರಗಳ ಬಗ್ಗೆ ಗಮನ ಕೊಡುವುದು ಅಗತ್ಯ.

ಸಂಗಾತಿಯ ಬಳಿ ಕ್ಷಮೆ ಕೇಳುವ ಮುನ್ನ ಈ ವಿಚಾರಗಳು ತಲೆಯಲ್ಲಿರಲಿ
ಸಾಯಿನಂದಾ
| Edited By: |

Updated on: Jan 19, 2024 | 7:00 PM

Share

ತಪ್ಪು ಯಾರು ಮಾಡಲ್ಲ ಹೇಳಿ. ತಪ್ಪು ಮಾಡಿದಾಗ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳುವ ಮನೋಭಾವ ಬಹಳ ಮುಖ್ಯವಾಗುತ್ತದೆ. ಒಬ್ಬರ ಮುಂದೆ ಹೋಗಿ ಕ್ಷಮಿಸಿ ಎಂದು ಕೇಳುವಾಗ ನಿಮ್ಮ ಸ್ವಾಭಿಮಾನವು ಅಡ್ಡಬರಬಹುದು. ಆದರೆ ಸಂಬಂಧಗಳೇ ಮುಖ್ಯ ಎನ್ನುವ ಸಂದರ್ಭದಲ್ಲಿ ಕ್ಷಮಾಗುಣ ಅಥವಾ ಕ್ಷಮೆ ಕೇಳುವ ಗುಣವನ್ನು ರೂಢಿಸಿಕೊಳ್ಳಬೇಕು. ಆದರೆ ಕ್ಷಮೆ ಕೇಳುವುದು ಎಂದರೆ ನೀವು ಒಬ್ಬರ ಎದುರಲ್ಲಿ ಚಿಕ್ಕವರು ಆಗುವುದು ಖಂಡಿತವಲ್ಲ. ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಬಹುದು.

ಸಂಗಾತಿಯ ಬಳಿ ಕ್ಷಮೆ ಕೇಳುವಾಗ ಈ ಬಗ್ಗೆ ತಿಳಿದಿರಲಿ

* ಸಂಗಾತಿಯ ಬಳಿ ತನ್ನ ಕ್ಷಮೆ ಕೇಳುವುದು ಒಳ್ಳೆಯದು. ಈ ವೇಳೆಯಲ್ಲಿ ತಾನು ಮಾಡಿದ ತಪ್ಪಿನಿಂದಾದ ತೊಂದರೆಗಳಿಗೆ ತಾನು ಅನುಭವಿಸುತ್ತಿರುವ ನೋವಿನ ಬಗ್ಗೆ ಹೇಳಿ ಬಿಡಿ. ಈ ವೇಳೆಯಲ್ಲಿ ಸಂಗಾತಿಯು ನಿಮ್ಮ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

* ತಾನು ಮಾಡಿದ ತಪ್ಪುಗಳಿಂದ ಈಗಾಗಲೇ ಏನೆಲ್ಲಾ ಸಮಸ್ಯೆಗಳಾಗಿವೆ. ಅದನ್ನೆಲ್ಲಾ ಒಪ್ಪಿಕೊಂಡು, ಸಮಸ್ಯೆಗಳಿಗೆ ಜವಾಬ್ದಾರಿಯುತವಾಗಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಂಗಾತಿಯ ಬಳಿ ಮಾತನಾಡಿ.

* ಸಣ್ಣ ತಪ್ಪಿನಿಂದ ಸಂಬಂಧದಲ್ಲಿ ಬಿರುಕು ಮೂಡಿದರೆ, ಸಂಗಾತಿಯನ್ನು ಮಾತುಕತೆಗೆ ಕರೆಯಿರಿ. ಇಬ್ಬರೂ ಜೊತೆಯಾಗಿ ಚರ್ಚಿಸಿ ಈಗಾಗಲೇ ಆಗಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ.

ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಈ ಸೂತ್ರಗಳನ್ನು ಬಳಸಿದರೆ ಲೈಫ್ ಇನ್ನಷ್ಟು ಕಲರ್ ಫುಲ್

* ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಸಂಗಾತಿಯ ಬಳಿ ಹೇಳಿ ಅವರಿಗೆ ನಿಮ್ಮ ಮೇಲೆ ನಂಬಿಕೆ ಬರುವಂತೆ ಮಾತನಾಡಿ. ನಿಮ್ಮ ಭರವಸೆಯ ಮಾತುಗಳಿಂದ ನಿಮ್ಮನ್ನು ಕ್ಷಮಿಸುತ್ತಾರೆ.

* ಸಂಗಾತಿಯ ಬಳಿ ತನ್ನನ್ನು ಕ್ಷಮಿಸಿ ಎಂದು ಕೇಳಿಕೊಳ್ಳಿ. ನೀವು ಮಾಡಿದ ತಪ್ಪಿನಿಂದ ಸಂಗಾತಿಗೆ ನೋವಾಗಿರಬಹುದು. ಹೀಗಾಗಿ ಸಂಬಂಧವು ಮೊದಲಿನಂತೆ ಆಗಲು ಸಮಯವಕಾಶವನ್ನು ನೀಡಿದರೆದರೆ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ