AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಮ್ಮು ನೆಗಡಿ ಸಮಸ್ಯೆಗೆ ಈ ಮನೆ ಮದ್ದು ಪರಿಹಾರ, ಇಲ್ಲಿದೆ ಸುಲಭ ವಿಧಾನ

ಹವಾಮಾನದಲ್ಲಾಗುವ ಬದಲಾವಣೆಯಿಂದಾಗಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ವಾತಾವರಣದಲ್ಲಾಗುವ ಸ್ವಲ್ಪ ವ್ಯತ್ಯಾಸವಾದರೂ ಹೆಚ್ಚಿನವರಲ್ಲಿ ಕೆಮ್ಮು, ನೆಗಡಿ, ಗಂಟಲು ನೋವು ಸಮಸ್ಯೆಯು ಉಂಟಾಗಿ ಹೈರಾಣಾಗಿಸಿ ಬಿಡುತ್ತದೆ. ಎಷ್ಟೇ ಮದ್ದು ಮಾಡಿದರೂ ಕೂಡ ಗುಣಮುಖವಾಗುವುದೇ ಇಲ್ಲ. ಈ ಸಮಯದಲ್ಲಿ ಹೆಚ್ಚಿನವರು ಹಳ್ಳಿ ಮದ್ದಿನತ್ತ ಒಲವು ತೋರಿಸಿ ಆರೋಗ್ಯವನ್ನು ಸರಿಪಡಿಸಿಕೊಳ್ಳುತ್ತಾರೆ.

ಕೆಮ್ಮು ನೆಗಡಿ ಸಮಸ್ಯೆಗೆ ಈ ಮನೆ ಮದ್ದು ಪರಿಹಾರ, ಇಲ್ಲಿದೆ ಸುಲಭ ವಿಧಾನ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 13, 2024 | 10:14 AM

ಈಗಿನ ಕಾಲದಲ್ಲಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕೂಡ ಕಡಿಮೆಯೇ. ವಾತಾವರಣದಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾದರೂ ಹೆಚ್ಚಿನವರಲ್ಲಿ ಈ ಕೆಮ್ಮು, ನೆಗಡಿ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ. ಇದು ಗಂಭೀರವಾದ ಆರೋಗ್ಯ ಸಮಸ್ಯೆಯಲ್ಲದೇ ಇದ್ದರೂ ಕೆಲವೊಮ್ಮೆ ತಿಂಗಳುಗಳ ಕಾಲ ಇರುತ್ತದೆ. ಪ್ರಾರಂಭದಲ್ಲಿ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳದೆ ಹೋದರೆ ಪರಿಣಾಮ ಜ್ವರ ಹಾಗೂ ತಲೆನೋವು ಕೂಡ ಶುರುವಾಗುತ್ತದೆ. ಹೀಗಾಗಿ ಈ ನೆಗಡಿ ಹಾಗೂ ಕೆಮ್ಮಿನಂತಹ ಸಮಸ್ಯೆಗೆ ಮನೆಯಲ್ಲೇ ಸುಲಭವಾದ ಔಷಧಿಯನ್ನು ತಯಾರಿಸಿ ಸೇವಿಸುವುದು ಉತ್ತಮ.

ಕೆಮ್ಮು ಹಾಗೂ ನೆಗಡಿಗೆ ಮನೆ ಮದ್ದುಗಳು

* ತುಳಸಿ ಎಲೆಗಳ ರಸ, ಬೆಳ್ಳುಳ್ಳಿ ರಸ, ಜೇನುತುಪ್ಪವನ್ನು ಬೆರೆಸಿ ಮೂರು ನಾಲ್ಕು ಗಂಟೆಗೊಮ್ಮೆ ಒಂದೊಂದು ಚಮಚ ಸೇವಿಸುತ್ತಿದ್ದರೆ ಕಫ, ಕೆಮ್ಮಿಗೆ ಪರಿಣಾಮಕಾರಿಯಾದ ಮನೆ ಮದ್ದಾಗಿದೆ.

* ವೀಳೆದೆಲೆಗೆ ಕಪ್ಪು ತುಳಸಿ, ಲವಂಗವನ್ನು ಅರೆದು, ಒಂದೆರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

* ಅಳಲೆಕಾಯಿಯನ್ನು ಜೇನುತುಪ್ಪದಲ್ಲಿ ತೇದು, ಈ ಮಿಶ್ರಣವನ್ನು ಗಂಟಲಿಗೆ ಹಚ್ಚುತ್ತಿದ್ದರೆ ಒಣಕೆಮ್ಮು ಸಮಸ್ಯೆಯು ನಿವಾರಣೆಯಾಗುತ್ತದೆ.

* ತುಳಸಿ ಹೂವುಗಳನ್ನು ಈರುಳ್ಳಿ ರಸ, ಶುಂಠಿ ರಸ, ಜೇನುತುಪ್ಪದೊಂದಿಗೆ ಸೇರಿಸಿ ಕುಡಿಯುವುದರಿಂದ ಕಫ ನಿವಾರಣೆ ಆಗುವುದು.

* ಅಳಲೆಕಾಯಿಯನ್ನು ಜೇನುತುಪ್ಪದಲ್ಲಿ ತೇದು, ತಯಾರಿಸಿದ ಗಂಧವನ್ನು ಗಂಟಲಿಗೆ ಹಚ್ಚುತ್ತಿದ್ದರೆ ಒಣಕೆಮ್ಮು ಕಡಿಮೆ ಆಗುವುದು.

ಇದನ್ನೂ ಓದಿ: ಇನ್ಮುಂದೆ ಸ್ಟೌವ್ ಮೇಲೆ ರೊಟ್ಟಿ ಸುಡಬೇಡಿ; ಅದರಿಂದಾಗುವ ಅಪಾಯವಿದು

* ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಶೀತದ ಕೆಮ್ಮು ಗುಣ ಮುಖವಾಗುತ್ತದೆ.

* ದಿನವೂ ಬೆಳ್ಳುಳ್ಳಿ ಅಡುಗೆಯಲ್ಲಿ ಬಳಸುತ್ತಿದ್ದರೆ ಕೆಮ್ಮು ರೋಗ ಸಾಮಾನ್ಯವಾಗಿ ಬರುವ ಸಂಭವವೇ ಕಡಿಮೆ.

* ಕಾಳುಮೆಣಸು ಪುಡಿಯನ್ನು ತುಪ್ಪಕ್ಕೆ ಬೆರೆಸಿ ಸೇವಿಸುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

* ಮೆಣಸಿನಕಾಳುಗಳನ್ನು ಮೆಲ್ಲನೆ ಜಗಿದು ರಸ ನುಂಗುತ್ತಿರುವುದರಿಂದ ಕಫವು ಕರಗಿ ಹೊರ ಬಂದು ಕೆಮ್ಮಿನಿಂದ ಮುಕ್ತಿ ಕಾಣಬಹುದು.

* ಕರಿಮೆಣಸಿನ ಕಾಳುಗಳನ್ನು ತುಳಸಿಯ ರಸದಲ್ಲಿ ಅರೆದು ಸೇವಿಸುವುದರಿಂದ ಕೆಮ್ಮಿಗೆ ಪರಿಣಾಮಕಾರಿಯಾದ ಔಷಧಿ.

* ಕಾಳು ಮೆಣಸಿನಕಾಳುಗಳನ್ನು ತುಪ್ಪದಲ್ಲಿ ಹುರಿದು, ಸ್ವಲ್ಪ ಸಕ್ಕರೆ ಸೇರಿಸಿ ಮಿಶ್ರಣವನ್ನು ಚೂರ್ಣ ಮಾಡಿಕೊಂಡು ದಿನಕ್ಕೆರಡು ಸಲ ಜೇನಿನಲ್ಲಿ ಅಥವಾ ಬಿಸಿನೀರಿನಲ್ಲಿ ಸೇವಿಸುವುದರಿಂದ ನೆಗಡಿ ಮತ್ತು ಕೆಮ್ಮು ಗುಣಮುಖವಾಗುತ್ತದೆ.

* ಮಲಗುವ ಸಮಯದಲ್ಲಿ ವಿಪರೀತವಾಗಿ ಕೆಮ್ಮು ಕಾಣಿಸಿಕೊಂಡರೆ ಒಂದೆರಡು ಕಲ್ಲು ಉಪ್ಪು ಬಾಯಿಗೆ ಹಾಕಿ ನೀರನ್ನು ನುಂಗಿದರೆ ಕಕೆಮ್ಮು ಬರುವುದಿಲ್ಲ.

* ಒಣಕೆಮ್ಮು ಕಾಣಿಸಿಕೊಂಡಾಗ ಏಲಕ್ಕಿ ಪುಡಿಗೆ ಸ್ವಲ್ಪ ಶುಂಠಿ ಪುಡಿಯನ್ನ ಸೇವಿಸಿದರೆ ಉತ್ತಮ.

* ಮಜ್ಜಿಗೆ ಅನ್ನಕ್ಕೆ ಹಸಿ ಈರುಳ್ಳಿಯನ್ನು ಸೇರಿಸಿ ಸೇವಿಸುವುದರಿಂದ ಉಷ್ಣದಿಂದ ಉಂಟಾದ ಕೆಮ್ಮು ಶಮನವಾಗುತ್ತದೆ.

* ಕೆಮ್ಮು, ನೆಗಡಿಯು ಇದ್ದಾಗ ಒಂದು ಚಮಚದಷ್ಟು ಅರಿಶಿನ ಪುಡಿ ಹಾಗೂ ಕರಿಮೆಣಸಿನ ಪುಡಿ ಸೇರಿಸಿ ಕುದಿಸಿ, ದಿನಕ್ಕೆ ಒಂದೆರಡು ಬಾrರಿ ಸೇವನೆ ಮಾಡುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ
ಊಟಕ್ಕೆ ಕೂತಿದ್ದ ಮಗನನ್ನು ಸ್ನೇಹಿತ ಕರೆದುಕೊಂಡು ಹೋಗಿದ್ದ: ಮನೋಜ್ ತಂದೆ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ಪ್ರೇಯಸಿ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿದ ಪ್ರಿಯಕರ
ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ದುರಂತಕ್ಕೆ ರಾಶಿಗಟ್ಟಲೇ ಚಪ್ಪಲಿಗಳು ಸಾಕ್ಷಿ: ಇವೇ ಹೇಳುತ್ತಿವೆ ಸಾವಿನ ಕಥೆ
ಆಟಗಾರರ ಜೊತೆ ಸೆಲ್ಪೀ ತೆಗೆದುಕೊಳ್ಳೋದು ನಮ್ಮ ನಾಯಕರಿಗೆ ಬೇಕಿತ್ತಾ? ಸುಧಾಕರ್
ಆಟಗಾರರ ಜೊತೆ ಸೆಲ್ಪೀ ತೆಗೆದುಕೊಳ್ಳೋದು ನಮ್ಮ ನಾಯಕರಿಗೆ ಬೇಕಿತ್ತಾ? ಸುಧಾಕರ್
Live: ವಿಜಯೇಂದ್ರ, ಅಶೋಕ್​ ಜಂಟಿ ಸುದ್ದಿಗೋಷ್ಠಿ ನೇರ ಪ್ರಸಾರ
Live: ವಿಜಯೇಂದ್ರ, ಅಶೋಕ್​ ಜಂಟಿ ಸುದ್ದಿಗೋಷ್ಠಿ ನೇರ ಪ್ರಸಾರ
ಬೆಂಗಳೂರು ಕಾಲ್ತುಳಿತ: ಘೋರ ದುರಂತವನ್ನು ಕನ್ನಡಿಗರು ಯಾವತ್ತೂ ಮರೆಯಲಾರರು
ಬೆಂಗಳೂರು ಕಾಲ್ತುಳಿತ: ಘೋರ ದುರಂತವನ್ನು ಕನ್ನಡಿಗರು ಯಾವತ್ತೂ ಮರೆಯಲಾರರು
ನನಗೂ ಉಸಿರುಗಟ್ಟಿತ್ತ; ಸ್ಟೇಡಿಯಂ ಕರಾಳ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ
ನನಗೂ ಉಸಿರುಗಟ್ಟಿತ್ತ; ಸ್ಟೇಡಿಯಂ ಕರಾಳ ಅನುಭವ ಬಿಚ್ಚಿಟ್ಟ ಚಂದನ್ ಶೆಟ್ಟಿ
ಸ್ಮಶಾನವಾದ ಚಿನ್ನಸ್ವಾಮಿ ಸ್ಟೇಡಿಯಂ, ದುರಂತಕ್ಕೆ ಸಾಕ್ಷಿಯಾದ ರಾಶಿ ಚಪ್ಪಲಿ
ಸ್ಮಶಾನವಾದ ಚಿನ್ನಸ್ವಾಮಿ ಸ್ಟೇಡಿಯಂ, ದುರಂತಕ್ಕೆ ಸಾಕ್ಷಿಯಾದ ರಾಶಿ ಚಪ್ಪಲಿ
Daily Devotional: ಸಹವಾಸದಿಂದ ಏನೆಲ್ಲಾ ಪ್ರಭಾವ ಬೀರುತ್ತೆ ಗೊತ್ತಾ?
Daily Devotional: ಸಹವಾಸದಿಂದ ಏನೆಲ್ಲಾ ಪ್ರಭಾವ ಬೀರುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಅಶುಭ ಫಲ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಅಶುಭ ಫಲ