AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಸ್ಟೌವ್ ಮೇಲೆ ರೊಟ್ಟಿ ಸುಡಬೇಡಿ; ಅದರಿಂದಾಗುವ ಅಪಾಯವಿದು

ಬಹುತೇಕ ಜನರು ರೊಟ್ಟಿಯನ್ನು ಗ್ಯಾಸ್​ ಸ್ಟೌವ್ ಮೇಲೆ ಸುಡುವ ಅಭ್ಯಾಸ ಇರುತ್ತದೆ. ಆದರೆ, ಇದು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆಯೂ ನಾವು ತಿಳಿದಿರಬೇಕಾದುದು ಅಗತ್ಯ. ನೀವು ಕೂಡ ರೊಟ್ಟಿಯನ್ನು ಗ್ಯಾಸ್ ಸ್ಟೌವ್ ಮೇಲೆ ಸುಡುವ ಅಭ್ಯಾಸವನ್ನು ಹೊಂದಿದ್ದರೆ ಆ ಅಭ್ಯಾಸವನ್ನು ಬಿಟ್ಟುಬಿಡುವುದು ಉತ್ತಮ. ಯಾಕೆ ಅಂತೀರಾ?

ಇನ್ಮುಂದೆ ಸ್ಟೌವ್ ಮೇಲೆ ರೊಟ್ಟಿ ಸುಡಬೇಡಿ; ಅದರಿಂದಾಗುವ ಅಪಾಯವಿದು
ರೊಟ್ಟಿImage Credit source: iStock
ಸುಷ್ಮಾ ಚಕ್ರೆ
|

Updated on: Feb 12, 2024 | 5:23 PM

Share

ರೊಟ್ಟಿ ಕರ್ನಾಟಕದ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಸೇವಿಸುವ ಆಹಾರ. ಸಾಂಪ್ರದಾಯಿಕವಾಗಿ ರೊಟ್ಟಿಯನ್ನು ಕೆಂಡದ ಮೇಲೆ ಹಾಕಿ ಸುಡಲಾಗುತ್ತದೆ. ಆದರೆ, ನಗರ ಪ್ರದೇಶದಲ್ಲಿ ಕೆಂಡ ಸಿಗದ ಕಾರಣ ಅಥವಾ ಹಳ್ಳಿಯಲ್ಲೂ ಕಟ್ಟಿಗೆ ಒಲೆಯನ್ನು ಹಾಕುವವರು ಕಡಿಮೆಯಾಗಿರುವುದರಿಂದ ಗ್ಯಾಸ್ ಸ್ಟೌವ್​ನಲ್ಲಿಯೇ ರೊಟ್ಟಿಯನ್ನು ಸುಡುವ ಅಭ್ಯಾಸ ಹಲವರದು. ಆದರೆ, ಇದರಿಂದ ಆರೋಗ್ಯದ ಮೇಲಾಗುವ ಅಪಾಯದ ಬಗ್ಗೆಯೂ ನಿಮಗೆ ತಿಳಿದಿರುವುದು ಅಗತ್ಯ. ನೀವೇನಾದರೂ ಗ್ಯಾಸ್ ಸ್ಟೌವ್​ನಲ್ಲಿ ರೊಟ್ಟಿ ಸುಡುವವರಾಗಿದ್ದರೆ ಆ ಅಭ್ಯಾಸವನ್ನು ಬಿಟ್ಟುಬಿಡಿ.

ಆರೋಗ್ಯಕರ ಪೋಷಣೆಗೆ ರೊಟ್ಟಿಗಳು ಅಥವಾ ಚಪಾತಿಗಳು ನಿಮ್ಮ ಆಹಾರಕ್ಕೆ ಉತ್ತಮವಾಗಿದೆ. ನೀವು ತೂಕವನ್ನು ಇಳಿಸಿಕೊಳ್ಳಲು ಅಥವಾ ಸ್ನಾಯುಗಳ ಬಲವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ ರೊಟ್ಟಿ ಸಾಕಷ್ಟು ಆಹಾರದ ಫೈಬರ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗಳನ್ನು ಒದಗಿಸುತ್ತದೆ. ಇವೆಲ್ಲವೂ ನಿಮಗೆ ಹೆಚ್ಚು ಕಾಲ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಹೊಟ್ಟೆಯ ಕೊಬ್ಬು ಕಡಿಮೆ ಮಾಡುವ 6 ಗಿಡಮೂಲಿಕೆಗಳಿವು

ರೊಟ್ಟಿಯನ್ನು ಲಟ್ಟಿಸಿ, ಬಾಣಲೆಯಲ್ಲಿ ಸ್ವಲ್ಪ ಬೇಯಿಸಿ, ನಂತರ ಕೆಂಡದ ಮೇಲೆ ಹಾಕಿ ಬೇಯಿಸಲಾಗುತ್ತದೆ. ರೊಟ್ಟಿಯನ್ನು ಗೋಧಿ ಹಿಟ್ಟು ಮತ್ತು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಬೆಂಕಿಯ ಮೇಲೆ ಹಾಕಿದರೆ ರೊಟ್ಟಿ ಚೆನ್ನಾಗಿ ಉಬ್ಬುತ್ತದೆ. ಆದರೆ, ಗ್ಯಾಸ್ ಸ್ಟೌವ್ ಮೇಲೆ ರೊಟ್ಟಿಯನ್ನು ಸುಡುವುದು ಒಳ್ಳೆಯದಲ್ಲ. ಆರೋಗ್ಯ ತಜ್ಞರ ಪ್ರಕಾರ, ಈ ಪ್ರಕ್ರಿಯೆಯು ನಿಮ್ಮ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿದೆ.

ರೊಟ್ಟಿಗಳನ್ನು ಸಾಮಾನ್ಯವಾಗಿ ಮೊದಲು ತವಾ ಮೇಲೆ ಹಾಕಿ ಬೇಯಿಸಲಾಗುತ್ತದೆ. ನಂತರ ಅವುಗಳನ್ನು ನೇರವಾಗಿ ಬೆಂಕಿಯ ಮೇಲೆ ಹಾಕಿ ಸುಡಲಾಗುತ್ತದೆ. ಗ್ಯಾಸ್ ಸ್ಟೌವ್‌ಗಳಿಂದ ಬೆಂಕಿ ಇಂಗಾಲದ ಮಾನಾಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್ ಮತ್ತು ಕಣಗಳಂತಹ ಹಾನಿಕಾರಕ ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡುತ್ತದೆ. ಇವೆಲ್ಲವೂ ಮಾನವ ದೇಹಕ್ಕೆ ಮಾರಕವಾಗಿದೆ. ಈ ಹಾನಿಕಾರಕ ಮಾಲಿನ್ಯಕಾರಕಗಳು ಉಸಿರಾಟದ ತೊಂದರೆಗಳು, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಕ್ಯಾನ್ಸರ್‌ನಂತಹ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ನ್ಯೂಟ್ರಿಷನ್ ಆ್ಯಂಡ್ ಕ್ಯಾನ್ಸರ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಅತಿ ಹೆಚ್ಚು ತಾಪಮಾನದಲ್ಲಿ ಅಡುಗೆ ಮಾಡುವುದು, ನೇರವಾಗಿ ಬೆಂಕಿಯ ಮೇಲೆ ಆಹಾರವನ್ನು ಹಾಕುವುದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕಾರ್ಸಿನೋಜೆನಿಕ್ ಸಂಯುಕ್ತಗಳ ಉತ್ಪಾದನೆಗೆ ಕಾರಣವಾಗುತ್ತದೆ. ರೊಟ್ಟಿ ಪೈರೋಲಿಸಿಸ್ ಎಂದು ಕರೆಯಲ್ಪಡುವ ಪ್ರಕ್ರಿಯೆಗೆ ಒಳಗಾದಾಗ ಈ ರಾಸಾಯನಿಕ ಸಂಯುಕ್ತಗಳು ಉದ್ಭವಿಸುತ್ತವೆ. ಈ ಪ್ರಕ್ರಿಯೆಯಲ್ಲಿ, ಸಾವಯವ ಸಂಯುಕ್ತಗಳನ್ನು ಸಣ್ಣ ಅಣುಗಳಾಗಿ ವಿಭಜಿಸಲಾಗುತ್ತದೆ. ಅವುಗಳಲ್ಲಿ ಕೆಲವು ಕಾರ್ಸಿನೋಜೆನಿಕ್ ಆಗಿರಬಹುದು.

ಇದನ್ನೂ ಓದಿ: Weight Loss: ಬೇಗ ದೇಹದ ಕೊಬ್ಬು ಕರಗಿಸಲು ಬೆಳಗ್ಗೆ ಇದನ್ನು ಕುಡಿಯಿರಿ

ಅಲ್ಲದೆ, ರೊಟ್ಟಿಗಳನ್ನು ಹೊರತುಪಡಿಸಿ, ಸುಟ್ಟ ಬರ್ಗರ್ ಅಥವಾ ಸುಟ್ಟ ತರಕಾರಿಗಳು ಮತ್ತು ಮಾಂಸವನ್ನು ಇಷ್ಟಪಡುವವರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಆಲೂಗಡ್ಡೆಯನ್ನು ಬೇಯಿಸುವಾಗ ತರಕಾರಿಗಳಲ್ಲಿನ ಸಕ್ಕರೆಗಳು ಅಮೈನೋ ಆಮ್ಲಗಳೊಂದಿಗೆ ಪ್ರತಿಕ್ರಿಯಿಸಿದಾಗ ರಾಸಾಯನಿಕ ಅಕ್ರಿಲಾಮೈಡ್ ನೈಸರ್ಗಿಕವಾಗಿ ಬೆಳೆಯುತ್ತದೆ.

ತವಾದಲ್ಲಿ ರೊಟ್ಟಿಯನ್ನು ಬೇಯಿಸುವುದು ಫೈಬರ್, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ರೊಟ್ಟಿಯನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸದ ಕಾರಣ, ಈ ಪೋಷಕಾಂಶಗಳು ಬದಲಾಗುವುದಿಲ್ಲ. ತವಾದಲ್ಲಿ ರೊಟ್ಟಿಯನ್ನು ಬೇಯಿಸುವುದರಿಂದ ಕಡಿಮೆ ಎಣ್ಣೆ ಅಥವಾ ತುಪ್ಪವನ್ನು ಬಳಸಬಹುದು. ಇದು ಕಡಿಮೆ ಕೊಬ್ಬಿನಂಶವನ್ನು ಸೇವಿಸಲು ಕಾರಣವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ