AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Juice Therapy: ಯಾವ ಕಾಯಿಲೆಗೆ ಯಾವ ಜೂಸ್ ಕುಡಿದರೆ ಉತ್ತಮ, ಇಲ್ಲಿದೆ ಜೂಸ್ ಥೆರಪಿ

ನಮ್ಮ ಆಹಾರದಲ್ಲಿ ಪೌಷ್ಟಿಕಾಶ, ವಿಟಮಿನ್, ಜೀವಸತ್ವಗಳು ಇರುವುದು ಅತಿ ಮುಖ್ಯ. ಸದ್ಯ ನಾವಿಂದು ಯಾವ ಕಾಯಿಲೆಗೆ ಯಾವ ಜೂಸ್ ಕುಡಿದರೆ ಉತ್ತಮ ಎಂಬ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ.

Juice Therapy: ಯಾವ ಕಾಯಿಲೆಗೆ ಯಾವ ಜೂಸ್ ಕುಡಿದರೆ ಉತ್ತಮ, ಇಲ್ಲಿದೆ ಜೂಸ್ ಥೆರಪಿ
ಜೂಸ್ ಥೆರಪಿ
TV9 Web
| Edited By: |

Updated on: Feb 28, 2022 | 7:30 AM

Share

ದಿನ ನಿತ್ಯದ ಜಂಜಾಟ, ಬದಲಾಗುತ್ತಿರುವ ಜೀವನ ಶೈಲಿಗಳಿಂದಾಗಿ(Lifestyle) ಮನುಷ್ಯನ ದೇಹದಲ್ಲಿ ಎಂದೂ ಕೇಳಿರದಂತಹ ಅದೆಷ್ಟೋ ಆರೋಗ್ಯ ಸಮಸ್ಯೆಗಳು(Health Issues) ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿವೆ. ಮನುಷ್ಯ ಆರೋಗ್ಯವಾಗಿ ಇರಬೇಕೆಂದರೆ ಅವನ ಆಹಾರ ಅಭ್ಯಾಸ ಅತಿ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ಬೆಳಗಿನ ವೇಳೆ ಮಹಾರಾಜನಂತೆ ಊಟ ಮಾಡಬೇಕು. ಮಧ್ಯಾಹ್ನ ಮದ್ಯಮರ ಊಟ ಹಾಗೂ ರಾತ್ರಿಯ ವೇಳೆ ಭಿಕ್ಷುಕರಂತೆ ಊಟ ಮಾಡುವುದು ಯೋಗ್ಯವೆಂದು ಹಿರಿಯರು ಹೇಳುತ್ತಾರೆ. ನಮ್ಮ ಆಹಾರದಲ್ಲಿ ಪೌಷ್ಟಿಕಾಶ, ವಿಟಮಿನ್, ಜೀವಸತ್ವಗಳು ಇರುವುದು ಅತಿ ಮುಖ್ಯ. ಸದ್ಯ ನಾವಿಂದು ಯಾವ ಕಾಯಿಲೆಗೆ ಯಾವ ಜೂಸ್ ಕುಡಿದರೆ ಉತ್ತಮ ಎಂಬ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ.

ಯಾವ ಕಾಯಿಲೆಗೆ ಯಾವ ಜೂಸ್ 1. ನೆನಪಿನ ಶಕ್ತಿ -ಕ್ಯಾರೆಟ್ ಜೂಸ್ 2. ರಕ್ತಹೀನತೆ -ಬೀಟ್ ರೂಟ್ ಜೂಸ್ 3. ಪಿತ್ತ -ಕ್ಯಾಬೇಜ್ ಜೂಸ್ 4. ಸಕ್ಕರೆ ಕಾಯಿಲೆ -ಬೀನ್ಸ್ ಅಥವಾ ನವಿಲುಕೋಸ್ ಜೂಸ್ 5. ಕಿಡ್ನಿ ಸ್ಟೋನ್ -ಬೂದ ಕುಂಬಳಕಾಯಿ ಜೂಸ್ 6. ತೂಕ ಕಡಿಮೆ ಮಾಡಲು -ಸವತೆಕಾಯಿ ಜೂಸ್ 7. ಮಲಬದ್ಧತೆ -ಆಲೂಗಡ್ಡೆ, ಮೂಲಂಗಿ ಅಥವಾ ಪೇರಲೆ ಹಣ್ಣಿನ ಜೂಸ್ 8. ಹೊಟ್ಟೆ ನೋವು -ನವಿಲು ಕೋಸು ಅಥವಾ ಬೂದಗುಂಬಳ ಕಾಯಿ ಜೂಸ್ 9. ಜ್ವರ -ಒಂದು ಕಪ್ ಬಿಸಿ ಬೀರಿನಲ್ಲಿ ಅರ್ಧ ನಿಂಬೆ ಹಣ್ಣು ಹಿಂಡಿ ಒಂದು ಟೀ ಚಮಚ ಜೇನು ತುಪ್ಪ ಹಾಕಿ ದಿನಕ್ಕೆ 3 ಸಲ ಕುಡಿಯಬೇಕು. 10. ತಲೆ ನೋವು -ಹಸಿ ಶುಂಠಿಯನ್ನು ಹಲ್ಲಿನಿಂದ ಕಚ್ಚಿ ಅದರ ರಸವನ್ನು ನುಂಗಬೇಕು 11. ಕ್ಯಾನ್ಸರ್ -ಪ್ರತಿದಿನ ಗೋಧಿ ಸಸಿ ಮತ್ತು ಕ್ಯಾರೆಟ್ ಜೂಸ್ ಕುಡಿಯಬೇಕು 12. ಹೆಚ್ಚಿನ ಉಷ್ಣಾಂಶ -ಸವತೆಕಾಯಿ ಜೂಸ್ 13. ಕಫ, ಕೆಮ್ಮು, ಧಮ್ಮು -ಎರಡು ಕ್ಯಾರೆಟ್ + 10 ಕರಿ ತುಳಸಿ ಎಲೆ +6 ಬೆಳುಳ್ಳಿ +ಅರಿಶಿಣ 14. ಮೂಲವ್ಯಾಧಿ -ಸವತೆಕಾಯಿ + ಮೂಲಂಗಿ ಜೂಸ್ 15. ಶೀತ, ನೆಗಡಿ -ಬಿಸಿ ನೀರಿನಲ್ಲಿ ಹಸಿ ಶುಂಠಿ ಜೂಸ್ 16. ಕಣ್ಣಿನ ಸಮಸ್ಯೆಗೆ – ಕ್ಯಾರೆಟ್ ಜೂಸ್ 17. ಸೌಂದರ್ಯಕ್ಕಾಗಿ -ಸವತೆಕಾಯಿ ಜೂಸ್ 18. ರಕ್ತ ಶುದ್ಧೀಕರಣ -ಬೀಟ್ ರೂಟ್ ಅಥವಾ ಹಾಗಲಕಾಯಿ ಜೂಸ್ 19. ಋತುಚಕ್ರ ಸಮಸ್ಯೆ – ಕ್ಯಾರೆಟ್ ಜೂಸ್ ಮತ್ತು ಬೀಟ್ ರೂಟ್ ಜೂಸ್ 20. ಮೂರ್ಛೆ ರೋಗ -ಬಾಳೆದಿಂಡಿನ ಜೂಸ್ + ಎಳನೀರು

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಳನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ; ಇಲ್ಲಿದೆ ತಜ್ಞರ ಸಲಹೆ

ಅರಿಶಿಣ ಹಾಲಿನಲ್ಲಿ ಅಡಗಿದೆ ಆರೋಗ್ಯ ಪ್ರಯೋಜನಗಳು

Follow Us
ಚಂದ್ರ ಗ್ರಹಣ ದಿನವೇ ವೈಭವದಿಂದ ನೆರವೇರಿದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ
ಚಂದ್ರ ಗ್ರಹಣ ದಿನವೇ ವೈಭವದಿಂದ ನೆರವೇರಿದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ
ಹೋಳಿ ಹುಣ್ಣಿಮೆಯಂದೇ ಗ್ರಹಣ: ಸಾಲು ಸಾಲು ಅವಘಡಗಳು ಫಿಕ್ಸ್​​?
ಹೋಳಿ ಹುಣ್ಣಿಮೆಯಂದೇ ಗ್ರಹಣ: ಸಾಲು ಸಾಲು ಅವಘಡಗಳು ಫಿಕ್ಸ್​​?
ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ವಿಡಿಯೋ ಇಲ್ಲಿದೆ
ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ವಿಡಿಯೋ ಇಲ್ಲಿದೆ
ವ್ಯಾನ್​ಗೆ ಗುದ್ದಿದ ಸ್ಲೀಪರ್ ಬಸ್, 6 ಮಂದಿ ಸಾವು
ವ್ಯಾನ್​ಗೆ ಗುದ್ದಿದ ಸ್ಲೀಪರ್ ಬಸ್, 6 ಮಂದಿ ಸಾವು
ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿ ಮೇಲೆ ನಡೆದ ಕಲಿಯುಗದ ಪ್ರಹ್ಲಾದ
ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿ ಮೇಲೆ ನಡೆದ ಕಲಿಯುಗದ ಪ್ರಹ್ಲಾದ
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ಎಂಜಾಯ್ ಮಾಡ್ತಿರುವಾಗ್ಲೇ ದಾಳಿ: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?