Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips: ಗೋಧಿ ಹಿಟ್ಟನ್ನು ದೀರ್ಘಕಾಲದವರೆಗೆ ಶೇಖರಿಸುವುದು ಹೇಗೆ; ಇಲ್ಲಿವೆ 5 ಸಲಹೆಗಳು

ಗೋಧಿ ಹಿಟ್ಟು ಅಡುಗೆಮನೆಗಳಲ್ಲಿ ಆಹಾರ ತಯಾರಿಸಲು ಉಪಯೋಗಿಸುವ ಪ್ರಧಾನ ಸಾಮಗ್ರಿಯಾಗಿದೆ. ರೊಟ್ಟಿ, ಪರಾಠ, ಸಿಹಿತಿಂಡಿಗಳು ಮತ್ತು ಇತರ ಅನೇಕ ಪದಾರ್ಥಗಳನ್ನು ಒಳಗೊಂಡಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಗೋಧಿ ಹಿಟ್ಟು ಬಳಸಲಾಗುತ್ತದೆ.

Kitchen Tips: ಗೋಧಿ ಹಿಟ್ಟನ್ನು ದೀರ್ಘಕಾಲದವರೆಗೆ ಶೇಖರಿಸುವುದು ಹೇಗೆ; ಇಲ್ಲಿವೆ 5 ಸಲಹೆಗಳು
Wheat FlourImage Credit source: NDTV
Follow us
ನಯನಾ ಎಸ್​ಪಿ
|

Updated on: Mar 14, 2023 | 11:35 AM

ಗೋಧಿ ಹಿಟ್ಟು (Wheat Flour) ಅಡುಗೆಮನೆಗಳಲ್ಲಿ (Kitchen) ಆಹಾರ ತಯಾರಿಸಲು ಉಪಯೋಗಿಸುವ ಪ್ರಧಾನ ಸಾಮಗ್ರಿಯಾಗಿದೆ. ರೊಟ್ಟಿ, ಪರಾಠ, ಸಿಹಿತಿಂಡಿಗಳು ಮತ್ತು ಇತರ ಅನೇಕ ಪದಾರ್ಥಗಳನ್ನು ಒಳಗೊಂಡಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಗೋಧಿ ಹಿಟ್ಟು ಬಳಸಲಾಗುತ್ತದೆ. ಸಾಮಾನ್ಯವಾಗಿ ಗೋಧಿ ಹಿಟ್ಟನ್ನು ದೊಡ್ಡ ಪ್ರಮಾಣದಲ್ಲಿ ತರುತ್ತಾರೆ. ಹಿಟ್ಟುಗಳನ್ನು ದೊಡ್ಡ ಪ್ರಮಾಣದಲ್ಲಿ ತರುವುದರಿಂದ ಅದನ್ನು ಸರಿಯಾಗಿ ಸ್ಟೋರ್ ಮಾಡದೇ ಇದ್ದಲ್ಲಿ, ತೇವಾಂಶ (moisture) ಹೆಚ್ಚಾದಾಗ ಅದು ಗಂಟು ಕಟ್ಟುವ ಸಾಧ್ಯತೆ ಇರುತ್ತದೆ ಅಥವಾ ಹಿಟ್ಟಿನಲ್ಲಿ ಹುಳ (Insects/Bugs) ಆಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹಿಟ್ಟು ಹಾಳಾಗುವುದನ್ನು ತಡೆಯಲು, ಅದನ್ನು ಸರಿಯಾಗಿ ಶೇಖರಿಸುವುದು ಮುಖ್ಯ. ಈ ಲೇಖನದಲ್ಲಿ, ನಿಮ್ಮ ಹಿಟ್ಟನ್ನು ತಾಜಾ ಮತ್ತು ಕೀಟಗಳಿಂದ ಮುಕ್ತವಾಗಿಡಲು ಸಹಾಯ ಮಾಡುವ ಕೆಲವು ಸುಲಭ ಸಲಹೆಗಳನ್ನು ಹಂಚಿಕೊಂಡಿದ್ದೇವೆ,

ಗೋಧಿ ಹಿಟ್ಟನ್ನು ಶೇಖರಿಸಿಡಲು 5 ಸುಲಭ ಸಲಹೆಗಳು ಇಲ್ಲಿವೆ:

  • ರೆಫ್ರಿಜರೇಟರ್‌ನಲ್ಲಿ ಇಡುವುದು:

ಹಿಟ್ಟನ್ನು ಶೇಖರಿಸಿಡಲು ಸುಲಭವಾದ ಮಾರ್ಗವೆಂದರೆ ಅದನ್ನು ಗಾಜಿನ ಜಾರ್ ಅಥವಾ ಗಾಳಿಯಾಡದ ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಹಾಕಿ ರೆಫ್ರಿಜರೇಟರ್‌ನಲ್ಲಿ ಇಡುವುದು. ತೇವಾಂಶ ಪ್ರವೇಶಿಸದಂತೆ ಮುಚ್ಚಳವನ್ನು ಬಿಗಿಯಾಗಿ ಮುಚ್ಚಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಹಿಟ್ಟನ್ನು ಹಲವಾರು ದಿನಗಳವರೆಗೆ ಸಂಗ್ರಹಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

  • ಸ್ಟೇನ್ಲೆಸ್ ಸ್ಟೀಲ್ ಕಂಟೈನರ್ ಬಳಸಿ

ತೇವಾಂಶವು ಹಿಟ್ಟು ತ್ವರಿತವಾಗಿ ಹಾಳಾಗಲು ಕಾರಣವಾಗಬಹುದು, ಆದ್ದರಿಂದ ಹಿಟ್ಟನ್ನು ಸಂಗ್ರಹಿಸಲು ಸ್ಟೀಲ್ ಕಂಟೇನರ್ ಅನ್ನು ಬಳಸಬಹುದು. ಹಿಟ್ಟನ್ನು ಕಂಟೇನರ್ ಒಳಗೆ ಹಾಕುವ ಮೊದಲು, ತೇವಾಂಶವನ್ನು ತೆಗೆದುಹಾಕಲು ಕಂಟೇನರ್ ಅನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ.

  • ಉಪ್ಪು ಬಳಸಿ

ಹಿಟ್ಟಿಗೆ 4 ರಿಂದ 5 ಚಮಚ ಉಪ್ಪನ್ನು ಸೇರಿಸುವುದರಿಂದ ಕೀಟಗಳು ಅದರೊಳಗೆ ಹೋಗದಂತೆ ತಡೆಯಲು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಪಾತ್ರೆಯಲ್ಲಿ ಅರ್ಧದಷ್ಟು ಹಿಟ್ಟಿಗೆ ಎರಡರಿಂದ ಮೂರು ಚಮಚ ಉಪ್ಪನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉಳಿದ ಹಿಟ್ಟು ಸೇರಿಸಿ ಅದಕ್ಕೆ ಒಂದು ಅಥವಾ ಎರಡು ಚಮಚ ಉಪ್ಪು ಸೇರಿಸಿ ಮತ್ತೆ ಮಿಶ್ರಣ ಮಾಡಿ. ಇದು ಹಿಟ್ಟನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಸಹಾಯ ಮಾಡುತ್ತದೆ.

  • ಪಲಾವ್ ಎಲೆ ಬಳಸಿ

ಹಿಟ್ಟನ್ನು ಸಂಗ್ರಹಿಸುವಾಗ ಪಲಾವ್ ಎಲೆಯನ್ನು ಸೇರಿಸುವುದು ಕೀಟಗಳನ್ನು ದೂರವಿರಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗವಾಗಿದೆ. ಪಲಾವ್ ಎಲೆಯ ಬಲವಾದ ಸುವಾಸನೆಯು ಕೀಟಗಳನ್ನು ದೂರವಿಡುತ್ತದೆ ಮತ್ತು ನೀವು ಹಿಟ್ಟನ್ನು ಬಳಸುವಾಗ ಸುಲಭವಾಗಿ ಈ ಎಲೆಯನ್ನು ತೆಗೆಯಬಹುದು.

ಇದನ್ನೂ ಓದಿ: ಮನೆಯಲ್ಲಿ ರುಚಿಕರವಾದ ಕೆನೆ ಲಸ್ಸಿ ತಯಾರಿಸಲು ಇಲ್ಲಿದೆ 5 ಸುಲಭ ಸಲಹೆ

  • ಯಾವಾಗಲೂ ತಯಾರಿಕೆಯ ದಿನಾಂಕವನ್ನು ಪರಿಶೀಲಿಸಿ

ಹಿಟ್ಟು ಖರೀದಿಸುವಾಗ, ಯಾವಾಗಲೂ ಉತ್ಪಾದನಾ ದಿನಾಂಕವನ್ನು ಪರಿಶೀಲಿಸಿ. ಒಂದು ತಿಂಗಳಿಗಿಂತ ಹಳೆಯದಾದ ಹಿಟ್ಟನ್ನು ಬಳಸುವುದು ಒಳ್ಳೆಯದಲ್ಲ. ಉತ್ಪಾದನಾ ದಿನಾಂಕದ ಒಂದು ತಿಂಗಳೊಳಗೆ ಹಿಟ್ಟನ್ನು ಬಳಸಲು ಪ್ರಯತ್ನಿಸಿ.

ಈ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಗೋಧಿ ಹಿಟ್ಟನ್ನು ದೀರ್ಘಕಾಲದವರೆಗೆ ಶೇಖರಿಸುವ ಜೊತೆಗೆ ಕೀಟಗಳಿಂದ ದೊರವಿಡಲು ಸಹಾಯಮಾಡುತ್ತದೆ.

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !