Maha Shivratri Shloka: ಜೀವನದ ಸಂಕಷ್ಟವೆಲ್ಲಾ ದೂರವಾಗಲು ಶಿವರಾತ್ರಿಯ ಶುಭ ಸಂದರ್ಭದಲ್ಲಿ ಈ ಮಂತ್ರಗಳನ್ನು ಪಠಿಸಿ

ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಮಹಾ ಶಿವರಾತ್ರಿಯೂ ಒಂದು. ಮಹಾಶಿವರಾತ್ರಿ ಕೇವಲ ಧಾರ್ಮಿಕ ಹಬ್ಬವಲ್ಲ, ಇದು ಆತ್ಮಶುದ್ಧಿ ಮತ್ತು ಆಧ್ಯಾತ್ಮಿಕ ಜಾಗೃತಿಗಾಗಿ ಇರುವ ಒಂದು ಶುಭ ಸಂದರ್ಭವೂ ಹೌದು. ಈ ಶುಭ ದಿನದಂದು ಶಿವನಿಗೆ ಅರ್ಪಿತವಾದ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿನ ಸಂಕಷ್ಟವೆಲ್ಲಾ ದೂರವಾಗಿ ಸಕಾರಾತ್ಮಕತೆ ತುಂಬುತ್ತದಂತೆ. ಹಾಗಿದ್ರೆ ಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ಯಾವ ಶಿವಮಂತ್ರವನ್ನು ಪಠಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ.

Maha Shivratri Shloka: ಜೀವನದ ಸಂಕಷ್ಟವೆಲ್ಲಾ ದೂರವಾಗಲು ಶಿವರಾತ್ರಿಯ ಶುಭ ಸಂದರ್ಭದಲ್ಲಿ ಈ ಮಂತ್ರಗಳನ್ನು ಪಠಿಸಿ
ಮಹಾಶಿವರಾತ್ರಿ
Image Credit source: Pinterest

Updated on: Feb 15, 2026 | 7:54 AM

ಮಹಾಶಿವರಾತ್ರಿಯು (Maha Shivratri) ಶಿವನ ಆರಾಧನೆಗೆ ಮೀಸಲಾಗಿರುವ ವಿಶೇಷ ಹಬ್ಬವಾಗಿದೆ. ಈ ದಿನದಂದು ಪ್ರಾಮಾಣಿಕ, ನಿಷ್ಕಲ್ಮಶ ಹೃದಯದಿಂದ ಶಿವನನ್ನು ಪೂಜಿಸುವುದು, ಉಪವಾಸ ವ್ರತ ಆಚರಿಸುವುದು ಮತ್ತು ಮಂತ್ರಗಳನ್ನು ಪಠಿಸುವುದರಿಂದ ಜೀವನದ ತೊಂದರೆಗಳು ದೂರವಾಗುತ್ತವೆ ಮತ್ತು ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ನಂಬಿಕೆಯಿದೆ.  ಅಲ್ಲದೆ  ಶಿವನನ್ನು ಮೆಚ್ಚಿಸಲು ಮತ್ತು ಮಹಾದೇವನ ಆಶೀರ್ವಾದವನ್ನು ಪಡೆಯಲು ಈ ದಿನವನ್ನು ಶುಭವೆಂದು ಪರಿಗಣಿಸಲಾಗಿದೆ. ಸಂಕಷ್ಟವೆಲ್ಲಾ ದೂರವಾಗಿ ನಿಮ್ಮ ಜೀವನದಲ್ಲೂ ಸಕಾರಾತ್ಮಕತೆ ನೆಲೆಗೊಳ್ಳಬೇಕು ಎಂದರೆ ಮಹಾ ಶಿವರಾತ್ರಿಯ ಈ ಶುಭ ಸಂದರ್ಭದಲ್ಲಿ ಶಿವನಿಗೆ ಸಮರ್ಪಿತವಾಗಿರುವ ಈ ಕೆಲವೊಂದು ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ.

ಶಿವರಾತ್ರಿಯಂದು ಭಕ್ತರು ಪಠಿಸಬೇಕಾದ ಶಿವ ಮಂತ್ರಗಳು:

ಮಹಾಮೃತ್ಯುಂಜಯ ಮಂತ್ರ: “ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ. ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತತ್” ಮಹಾಶಿವರಾತ್ರಿಯ ದಿನ ಈ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ.

ಪಂಚಾಕ್ಷರಿ ಮಂತ್ರ: ಶಿವನಿಗೆ ಸಂಬಂಧಿಸಿದ ಅತ್ಯಂತ ಪ್ರಸಿದ್ಧ ಮತ್ತು ಸರಳ ಮಂತ್ರವೆಂದರೆ ಓಂ ನಮಃ ಶಿವಾಯ” ಇದನ್ನು ಪಂಚಾಕ್ಷರಿ ಮಂತ್ರ ಎಂದೂ ಕರೆಯುತ್ತಾರೆ. ಮಹಾಶಿವರಾತ್ರಿಯಂದು ಈ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಜೀವನದಲ್ಲಿನ ದುಃಖಗಳು ಕಡಿಮೆಯಾಗುತ್ತವೆ. ಇದು ಮಾನಸಿಕ ಶಾಂತಿಯನ್ನು ತರುತ್ತದೆ ಮತ್ತು ಶಿವನ ಆಶೀರ್ವಾದವೂ ಲಭಿಸುತ್ತದೆ.

ರುದ್ರ ಮಂತ್ರ: “ಓಂ ನಮೋ ಭಗವತೇ ರುದ್ರಾಯ” ಮಹಾಶಿವರಾತ್ರಿಯಂದು ಈ ಮಂತ್ರವನ್ನು ಪಠಿಸುವುದರಿಂದ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಪರಿಗಣಿಸಲಾಗಿದೆ. ಮಹಾಶಿವರಾತ್ರಿಯಂದು ಇದನ್ನು ಪಠಿಸುವುದರಿಂದ ಮಾನಸಿಕ ಶಕ್ತಿ ದೊರೆಯುತ್ತದೆ.

ಓಂ ನಮೋ ಭಗವತೇ ರುದ್ರಾಯ ನಮಃ” ಇದು ಇಷ್ಟಾರ್ಥಗಳನ್ನು ಈಡೇರಿಸುವ ಮಂತ್ರ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶಿವನ ರುದ್ರ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಮಹಾಶಿವರಾತ್ರಿಯಂದು ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಖಂಡಿತವಾಗಿಯೂ ಈಡೇರುತ್ತವೆ. ಈ ಮಂತ್ರವು ಆಸೆಗಳನ್ನು ಈಡೇರಿಸಲು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದ್ಯಾತ್” ಈ ಮಂತ್ರವು ಆತ್ಮಬಲವನ್ನು ಹೆಚ್ಚಿಸುತ್ತದೆ, ಆಲೋಚನೆಗಳನ್ನು ಶುದ್ಧೀಕರಿಸುತ್ತದೆ ಮತ್ತು ಜ್ಞಾನದ ಮಾರ್ಗವನ್ನು ತೆರೆಯುತ್ತದೆ.

“ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮ್ಹಿತನ್ನೋ ರುದ್ರ: ಪ್ರಚೋದಯಾತ್” ಈ ಮಂತ್ರವನ್ನು ಸಂತೋಷ ಮತ್ತು ಸಮೃದ್ಧಿಗಾಗಿ ಜಪಿಸಬಹುದು. ಶಿವನಿಗೆ ಅರ್ಪಿತವಾದ ಈ ಗಾಯತ್ರಿ ಮಂತ್ರವನ್ನು ಸರ್ವಶಕ್ತ ಮಂತ್ರವೆಂದು ಪರಿಗಣಿಸಲಾಗಿದೆ. ಈ ಮಂತ್ರವನ್ನು ನಿಯಮಿತವಾಗಿ ಜಪಿಸುವವರಿಗೆ ಅವರ ಜೀವನದಲ್ಲಿ ಎಲ್ಲಾ ಸಂತೋಷ ಮತ್ತು ಶಾಂತಿ ದೊರೆಯುತ್ತದೆ.

ಓಂ ಐಂ ಹ್ರೀಂ ಸರಸ್ವತ್ಯೈ ನಮಃ” ಮಹಾಶಿವರಾತ್ರಿಯಂದು ವಿದ್ಯಾರ್ಥಿಗಳು ಈ ಮಂತ್ರವನ್ನು 21 ಬಾರಿ ಜಪಿಸಬೇಕು. ಶಿಕ್ಷಣ ಮತ್ತು ವೃತ್ತಿ ಎರಡರಲ್ಲೂ ಯಶಸ್ಸು ಲಭಿಸಲು ನೀವು ಈ ಮಂತ್ರವನ್ನು ಜಪಿಸಬಹುದು.

ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿ ಪುಷ್ಟಿವರ್ಧನಂ. ಉರ್ವಾರುಕಮಿವ್ ಬನ್ಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್” ತೊಂದರೆಗಳಿಂದ ಪರಿಹಾರ ಪಡೆಯಲು, ಮಹಾಶಿವರಾತ್ರಿಯಂದು ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸಿ. ಈ ಮಂತ್ರವು ಅಹಿತಕರ ಘಟನೆಗಳಿಂದ ರಕ್ಷಣೆ ನೀಡುತ್ತದೆ. ಅಲ್ಲದೆ ಈ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಅಕಾಲಿಕ ಮರಣದ ಭಯದಿಂದ ಮುಕ್ತರಾಗಬಹುದು.

ಇದನ್ನೂ ಓದಿ: ಶಿವರಾತ್ರಿಯಂದು ಮಹಾದೇವನನ್ನು ಮೆಚ್ಚಿಸಲು ನೈವೇದ್ಯಗಳನ್ನು ಅರ್ಪಿಸಿ

ಮಂತ್ರ ಪಠಣದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಪ್ರಯೋಜನಗಳೇನು?

ಮಂತ್ರ ಪಠಣೆ ಮಾಡುವಾಗ ಉತ್ಪತ್ತಿಯಾಗುವ ಶಕ್ತಿ ತರಂಗಗಳು ಮನಸ್ಸು ಮತ್ತು ದೇಹವನ್ನು ಸಕಾರಾತ್ಮಕತೆಯತ್ತ ಕೊಂಡೊಯ್ಯುತ್ತವೆ ಮತ್ತು  ಆರೋಗ್ಯವನ್ನು ಸುಧಾರಿಸುತ್ತವೆ ಎಂದು ವಿವಿಧ ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿವೆ. ಮಹಾಶಿವರಾತ್ರಿಯ ಪವಿತ್ರ ದಿನದಂದು ಈ ಜಪಗಳನ್ನು ಪಠಿಸಿದರೆ, ಅದರ ಪ್ರಯೋಜನಗಳು ಹಲವು ಪಟ್ಟು ಹೆಚ್ಚಾಗುತ್ತವೆ. ‘ಓಂ ನಮಃ ಶಿವಾಯ’ ಎಂಬ ಮಹಾಮಂತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು ಪಠಿಸುವವರಿಗೆ ಬೇರೆ ಯಾವುದೇ ಮಂತ್ರಗಳು, ತೀರ್ಥಯಾತ್ರೆಗಳು, ತಪಸ್ಸುಗಳು ಅಥವಾ ಯಜ್ಞಗಳ ಅಗತ್ಯವಿಲ್ಲ ಎಂದು ಸ್ಕಂದ ಪುರಾಣದಲ್ಲಿ ಹೇಳಲಾಗಿದೆ. ಈ ಮಂತ್ರವು ಮೋಕ್ಷವನ್ನು ನೀಡುತ್ತದೆ ಮತ್ತು ಪಾಪಗಳನ್ನು ನಾಶಪಡಿಸುತ್ತದೆ ಎಂಬ ನಂಬಿಕೆಯಿದೆ.

 ಮಂತ್ರಗಳನ್ನು ಪಠಿಸಲಿರುವ ನಿಯಮಗಳೇನು?

  • ಯಾವಾಗಲೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಮಾಡಿ ಮಂತ್ರಗಳನ್ನು ಪಠಿಸಬೇಕು.
  • ಶಿವ ದೇವಾಲಯ, ಪುಣ್ಯಸ್ಥಳ ಅಥವಾ ಮನೆಯಲ್ಲಿ ಸ್ವಚ್ಛ, ಶಾಂತ ಮತ್ತು ಏಕಾಂತ ಸ್ಥಳದಲ್ಲಿ ಕುಳಿತು ಜಪಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ.
  • ರುದ್ರಾಕ್ಷ ಮಾಲೆಯೊಂದಿಗೆ ಪ್ರತಿದಿನ ಕನಿಷ್ಠ 108 ಬಾರಿ ಜಪ ಮಾಡಬೇಕು, ಏಕೆಂದರೆ ರುದ್ರಾಕ್ಷ ಶಿವನಿಗೆ ತುಂಬಾ ಪ್ರಿಯವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:53 am, Sun, 15 February 26