AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನಸಿಕ ಆರೋಗ್ಯಕ್ಕೆ ಕೆಲಸದಿಂದ ಯಾವಾಗ ಬ್ರೇಕ್ ತೆಗೆದುಕೊಳ್ಳಬೇಕು?

ನಿಮ್ಮ ಮನಸ್ಸು ವೇಗವಾಗಿ ಕಾರ್ಯ ನಿರ್ವಹಿಸುತ್ತಿರುವಾಗ, ನಿಮ್ಮ ಕಾರ್ಯದ ಮೇಲೆ ಕೇಂದ್ರೀಕರಿಸಲು ನೀವು ಹೆಣಗಾಡುತ್ತೀರಿ. ಆ ಕೆಲಸ ಸಣ್ಣದೇ ಆಗಿದ್ದರೂ ನೀವು ಅದನ್ನು ಪೂರ್ಣಗೊಳಿಸಲು ಕಷ್ಟಪಡುತ್ತೀರಿ. ಹಾಗಾದರೆ, ನೀವು ಯಾವಾಗ ನಿಮ್ಮ ಕೆಲಸದಿಂದ ವಿರಾಮ ತೆಗೆದುಕೊಳ್ಳಬೇಕು?

ಮಾನಸಿಕ ಆರೋಗ್ಯಕ್ಕೆ ಕೆಲಸದಿಂದ ಯಾವಾಗ ಬ್ರೇಕ್ ತೆಗೆದುಕೊಳ್ಳಬೇಕು?
ಮಾನಸಿಕ ಆರೋಗ್ಯ
Follow us
ಸುಷ್ಮಾ ಚಕ್ರೆ
|

Updated on: Jan 04, 2024 | 12:37 PM

ಒತ್ತಡದ ಜೀವನಶೈಲಿಯಿಂದಾಗಿ ನಮಗೆ ಅರಿವಿಲ್ಲದಂತೆ ನಮ್ಮ ಆರೋಗ್ಯ ಹದಗೆಡತೊಡಗುತ್ತದೆ. ಬಿಡುವಿಲ್ಲದ ಜೀವನದಿಂದ ಯಾವಾಗ ಬಿಡುವು ತೆಗೆದುಕೊಳ್ಳಬೇಕೆಂಬುದು ಕೂಡ ನಮಗೆ ತಿಳಿದಿರಬೇಕಾಗುತ್ತದೆ. ಕೆಲಸದ ಮಧ್ಯೆ ಆರೋಗ್ಯಕರ ವಿರಾಮಗಳನ್ನು ತೆಗೆದುಕೊಳ್ಳದೆ ನೀವು ನಿರಂತರವಾಗಿ ಕೆಲಸ ಮಾಡಿದರೆ ನಿಮ್ಮ ಮಾನಸಿಕ ಆರೋಗ್ಯವು ತೀವ್ರವಾಗಿ ಹಾನಿಗೊಳಗಾಗಬಹುದು. ಇದರಿಂದ ಖಿನ್ನತೆ, ಏಕಾಗ್ರತೆಯ ಕೊರತೆ ಮುಂತಾದ ಸಮಸ್ಯೆಗಳು ಎದುರಾಗಬಹುದು.

ನಿಮ್ಮ ಮನಸ್ಸು ವೇಗವಾಗಿ ಕಾರ್ಯ ನಿರ್ವಹಿಸುತ್ತಿರುವಾಗ, ನಿಮ್ಮ ಕಾರ್ಯದ ಮೇಲೆ ಕೇಂದ್ರೀಕರಿಸಲು ನೀವು ಹೆಣಗಾಡುತ್ತೀರಿ. ಆ ಕೆಲಸ ಸಣ್ಣದೇ ಆಗಿದ್ದರೂ ನೀವು ಅದನ್ನು ಪೂರ್ಣಗೊಳಿಸಲು ಕಷ್ಟಪಡುತ್ತೀರಿ. ನಿಮ್ಮ ಮಾನಸಿಕ ಯೋಗಕ್ಷೇಮಕ್ಕಾಗಿ ವಿರಾಮವನ್ನು ತೆಗೆದುಕೊಳ್ಳುವ ಬಗ್ಗೆ ನೀವು ಯೋಚಿಸಬೇಕಾದ ಅಗತ್ಯವಿದೆ. ಹಾಗಾದರೆ, ನೀವು ಯಾವಾಗ ನಿಮ್ಮ ಕೆಲಸದಿಂದ ವಿರಾಮ ತೆಗೆದುಕೊಳ್ಳಬೇಕು?

ಇದನ್ನೂ ಓದಿ: ನೀವು ಡಯೆಟ್​ನಲ್ಲಿದ್ದೀರಾ? ಎಣ್ಣೆ ತಿಂಡಿಗಳನ್ನು ತಿಂದ ಮೇಲೆ ಏನು ಮಾಡಬೇಕು?

ವೈಯಕ್ತಿಕ ಸಂಬಂಧ ಹಾಳಾಗುವಾಗ:

ನೀವು ಕೆಲಸದಲ್ಲಿ ಒತ್ತಡಕ್ಕೊಳಗಾದಾಗ ನೀವು ಸಾಮಾನ್ಯವಾಗಿ ಆ ಉದ್ವೇಗ ಮತ್ತು ಒತ್ತಡವನ್ನು ನಿಮ್ಮ ವೈಯಕ್ತಿಕ ಸಂಬಂಧಗಳಿಗೂ ಒಯ್ಯುತ್ತೀರಿ. ನಿಮ್ಮ ಕೆಲಸದಿಂದ ನಿಮ್ಮ ಹತಾಶೆ ಮತ್ತು ಕೋಪವನ್ನು ಮನೆಯವರ ಕಡೆಗೆ ಹರಿಸುವುದರಿಂದ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿಮ್ಮ ಸಂಬಂಧ ಹಳಸಬಹುದು. ಆಗ ನೀವು ಎಚ್ಚೆತ್ತುಕೊಳ್ಳಬೇಕಾಗುತ್ತದೆ.

ದೇಹದಲ್ಲಿ ಒತ್ತಡದ ಲಕ್ಷಣಗಳು ಗೋಚರಿಸಿದಾಗ:

ಆಯಾಸ, ಕೀಲುಗಳಲ್ಲಿ ನೋವು ಮತ್ತು ಕಣ್ಣುಗಳಲ್ಲಿ ಒತ್ತಡದಂತಹ ಒತ್ತಡದ ದೈಹಿಕ ಲಕ್ಷಣಗಳು ನಿಮ್ಮ ಕೆಲಸದಲ್ಲಿ ನೀವು ಹೆಣಗಾಡುತ್ತಿರುವಿರಿ ಎಂಬುದರ ಲಕ್ಷಣಗಳಾಗಿವೆ. ನಿಮಗೆ ಅರ್ಹವಾದ ವಿರಾಮ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇದು ಸಾಮಾನ್ಯವಾಗಿ ಉತ್ತಮ ಸೂಚಕಗಳಾಗಿವೆ.

ನೀವು ಸ್ವಯಂ ಕಾಳಜಿಯನ್ನು ನಿರ್ಲಕ್ಷಿಸಿದಾಗ:

ನೀವು ಕೆಲಸದಲ್ಲಿ ಒತ್ತಡದಲ್ಲಿದ್ದಾಗ ನೀವು ನಿಮ್ಮ ಆರೈಕೆ ಮತ್ತು ನಿಮ್ಮ ವೈಯಕ್ತಿಕ ಸಂತೋಷವನ್ನು ನಿರ್ಲಕ್ಷಿಸಬಹುದು. ಒಂದು ವೇಳೆ ನಿಮ್ಮ ದೇಹ ಮತ್ತು ಮನಸ್ಸಿನಲ್ಲಿ ಕೆಲವು ಅನಪೇಕ್ಷಿತ ಬದಲಾವಣೆಗಳನ್ನು ನೀವು ಅನುಭವಿಸಿದರೆ ನೀವು ತಕ್ಷಣ ಕೆಲಸದಿಂದ ವಿರಾಮ ತೆಗೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: Blue Zone Diet: ಏನಿದು ಬ್ಲೂ ಜೋನ್ ಡಯೆಟ್?; ಇದರಿಂದ ತೂಕ ಇಳಿಸುವ ವಿಧಾನ ಇಲ್ಲಿದೆ

ಆತಂಕ ಎದುರಾದಾಗ:

ನಿಮ್ಮ ಕೆಲಸದ ಬಗ್ಗೆ ನೀವು ಆತಂಕವನ್ನು ಅನುಭವಿಸುತ್ತಿದ್ದರೆ ಮತ್ತು ಅದರ ಬಗ್ಗೆ ನಿರಂತರವಾಗಿ ಯೋಚಿಸುತ್ತಿದ್ದರೆ, ನಿಮ್ಮ ವೈಯಕ್ತಿಕ ಸಮಯಕ್ಕಾಗಿ ನೀವು ವಿರಾಮ ತೆಗೆದುಕೊಳ್ಳುವ ಸಮಯ ಇದು ಎಂದರ್ಥ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್