AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಹಬ್ಬಕ್ಕೆ ಸ್ವೀಟ್ ತರುತ್ತೀರಾ?; ಕಲಬೆರಕೆಯಿಲ್ಲದ ಸಿಹಿತಿಂಡಿಯನ್ನು ಆಯ್ಕೆ ಮಾಡುವ 5 ಮಾರ್ಗಗಳಿವು

ಕಲಬೆರಕೆಯ ಸಿಹಿತಿಂಡಿಗಳನ್ನು ಗುರುತಿಸುವುದು ತುಂಬಾ ಸವಾಲಿನ ಸಂಗತಿಯಾಗಿದೆ. ಏಕೆಂದರೆ ಎಲ್ಲಾ ಕಲಬೆರಕೆಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಕಲಬೆರಕೆ ಸಿಹಿತಿಂಡಿಗಳನ್ನು ಗುರುತಿಸಲು 5 ಮಾರ್ಗಗಳು ಇಲ್ಲಿವೆ.

ದಸರಾ ಹಬ್ಬಕ್ಕೆ ಸ್ವೀಟ್ ತರುತ್ತೀರಾ?; ಕಲಬೆರಕೆಯಿಲ್ಲದ ಸಿಹಿತಿಂಡಿಯನ್ನು ಆಯ್ಕೆ ಮಾಡುವ 5 ಮಾರ್ಗಗಳಿವು
ಸ್ವೀಟ್Image Credit source: iStock
ಸುಷ್ಮಾ ಚಕ್ರೆ
|

Updated on: Oct 23, 2023 | 4:49 PM

Share

ದಸರಾ ಹಬ್ಬ ಮುಗಿಯುತ್ತಾ ಬಂದಿದೆ. ವಿಜಯದಶಮಿಗೆ ನೀವೇನಾದರೂ ಸ್ವೀಟ್ ತರಬೇಕೆಂದು ಪ್ಲಾನ್ ಮಾಡಿದ್ದರೆ ಆ ಸಿಹಿತಿಂಡಿಯಲ್ಲಿ ಕಲಬೆರಕೆ ಇದೆಯೇ? ಎಂಬುದನ್ನು ಖಚಿತಪಡಿಸಿಕೊಂಡ ನಂತರ ಖರೀದಿಸಿ. ಹಬ್ಬಗಳ ಸಮಯದಲ್ಲಿ ಸಿಹಿತಿಂಡಿಗೆ ಗ್ರಾಹಕರು ಹೆಚ್ಚಾಗುವುದರಿಂದ ಸ್ವೀಟ್​ನಲ್ಲಿ ಕಲಬೆರಕೆ ಮಾಡುವ ದೊಡ್ಡ ಜಾಲ ಎಲ್ಲೆಡೆ ಹಬ್ಬಿದೆ. ಹಾಗಾದರೆ, ಸ್ವೀಟ್ ಕಲಬೆರಕೆಯದ್ದೋ? ಅಲ್ಲವೋ? ಎಂಬುದನ್ನು ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ಮಾಹಿತಿ.

ಹಬ್ಬದ ಸಮಯದಲ್ಲಿ ಎಲ್ಲ ಕಂಪನಿಗಳವರು ತಮ್ಮ ಉದ್ಯೋಗಿಗಳಿಗೆ ಸ್ವೀಟ್ ಬಾಕ್ಸ್​ ಕೊಡುತ್ತಾರೆ. ಅಂಗಡಿಗಳವರು ಕೂಡ ಗ್ರಾಹಕರಿಗೆ ಸ್ವೀಟ್ ನೀಡುತ್ತಾರೆ. ಇನ್ನು ಕೆಲವೆಡೆ ದಸರಾ ಗೊಂಬೆಗಳನ್ನು ನೋಡಲು ಬಂದವರಿಗೆ ಉಡುಗೊರೆಯಾಗಿ ಸ್ವೀಟ್ ಬಾಕ್ಸ್​ ನೀಡುವ ಸಂಪ್ರದಾಯವಿದೆ. ಹೀಗಾಗಿ, ಈಗ ಸಿಹಿ ತಿಂಡಿಗಳಿಗೆ ಭಾರೀ ಬೇಡಿಕೆ. ಆದರೆ, ಆ ಸಿಹಿತಿಂಡಿಗಳು ಶುದ್ಧವಾಗಿರುತ್ತದೆಯೇ? ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಹಬ್ಬ ಹರಿದಿನಗಳಲ್ಲಿ ಕಲಬೆರಕೆ ಹೆಚ್ಚಾಗಿ ಕಂಡುಬರುತ್ತದೆ. ಆದರೆ, ಕಲಬೆರಕೆಯ ಸಿಹಿತಿಂಡಿಗಳನ್ನು ಗುರುತಿಸುವುದು ತುಂಬಾ ಸವಾಲಿನ ಸಂಗತಿಯಾಗಿದೆ. ಏಕೆಂದರೆ ಎಲ್ಲಾ ಕಲಬೆರಕೆಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ.

ಕಲಬೆರಕೆ ಸಿಹಿತಿಂಡಿಗಳನ್ನು ಗುರುತಿಸಲು 5 ಮಾರ್ಗಗಳು ಇಲ್ಲಿವೆ:

ಪ್ಯಾಕೇಜಿಂಗ್ ಅನ್ನು ಪರೀಕ್ಷಿಸಿ:

ಸಿಹಿತಿಂಡಿಯ ಪ್ಯಾಕೇಜಿಂಗ್ ಅನ್ನು ಸೂಕ್ಷ್ಮವಾಗಿ ನೋಡಿ. ಅದು ಹಾನಿಗೊಳಗಾಗಿದ್ದರೆ, ಸರಿಯಾಗಿ ಸೀಲ್ ಇಲ್ಲದಿದ್ದರೆ ಅಥವಾ ಕಡಿಮೆ ಗುಣಮಟ್ಟದ್ದಾಗಿದ್ದರೆ ಅದು ಒರಿಜಿನಲ್ ಸ್ವೀಟ್ ಬಾಕ್ಸ್​ ಅಲ್ಲವೆಂದು ಅರ್ಥ. ವಿಶ್ವಾಸಾರ್ಹ ಬ್ರ್ಯಾಂಡ್‌ಗಳು ಸಾಮಾನ್ಯವಾಗಿ ಸುರಕ್ಷಿತ ಮತ್ತು ವೃತ್ತಿಪರ ಪ್ಯಾಕೇಜಿಂಗ್ ಅನ್ನು ಬಳಸುತ್ತವೆ.

ಇದನ್ನೂ ಓದಿ: Sweet Corn: ಚಳಿಗಾಲದಲ್ಲಿ ಸ್ವೀಟ್ ಕಾರ್ನ್ ತಿನ್ನುವುದರಿಂದಾಗುವ ಲಾಭಗಳೇನು ಗೊತ್ತಾ: ಇಲ್ಲಿದೆ ಮಾಹಿತಿ

ವಾಸನೆ, ರುಚಿ ನೋಡಿ:

ನಿಮ್ಮ ವಾಸನೆ ಮತ್ತು ರುಚಿಯ ಪ್ರಜ್ಞೆಗೆ ಗಮನ ಕೊಡಿ. ಸಿಹಿತಿಂಡಿಗಳು ಕೆಟ್ಟ ಅಥವಾ ಅಹಿತಕರ ವಾಸನೆ ಅಥವಾ ರುಚಿಯನ್ನು ಹೊಂದಿದ್ದರೆ ಅದು ಕಲಬೆರಕೆಯ ಸೂಚನೆಯಾಗಿರಬಹುದು. ಅಧಿಕೃತ ಸಿಹಿತಿಂಡಿಗಳು ಸಾಮಾನ್ಯವಾಗಿ ತಾಜಾ ಮತ್ತು ಆಹ್ಲಾದಕರ ಪರಿಮಳವನ್ನು ಹೊಂದಿರುತ್ತವೆ.

ವಿನ್ಯಾಸವನ್ನು ನೋಡಿ:

ಸಿಹಿತಿಂಡಿಗಳ ವಿನ್ಯಾಸ ಮತ್ತು ನೋಡಲು ಯಾವ ರೀತಿ ಇದೆ ಎಂಬುದನ್ನು ಪರೀಕ್ಷಿಸಿ. ಅವುಗಳು ತುಂಬಾ ಹೊಳೆಯುತ್ತಿದ್ದರೆ, ಗಾಢವಾದ ಬಣ್ಣ ಅಥವಾ ವಿಚಿತ್ರವಾದ ವಿನ್ಯಾಸವನ್ನು ಹೊಂದಿದ್ದರೆ ಅದನ್ನು ಖರೀದಿಸಬೇಡಿ.

ಇದನ್ನೂ ಓದಿ: Mysuru Dasara: ಮೈಸೂರಿನ ದಸರಾ ಉತ್ಸವದಲ್ಲಿ ಶ್ವಾನ ಪ್ರದರ್ಶನ

ಲೇಬಲ್‌ಗಳು ಮತ್ತು ಬ್ರ್ಯಾಂಡಿಂಗ್ ಪರಿಶೀಲಿಸಿ:

ತಪ್ಪಾದ ಲೇಬಲ್‌ಗಳು, ತಪ್ಪಾದ ಬ್ರ್ಯಾಂಡ್ ಲೋಗೊಗಳು ಅಥವಾ ವೃತ್ತಿಪರವಲ್ಲದ ಪ್ಯಾಕೇಜಿಂಗ್‌ ಇದ್ದರೆ ಆ ಸಿಹಿತಿಂಡಿಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಪ್ರತಿಷ್ಠಿತ ತಯಾರಕರು ಬ್ರ್ಯಾಂಡಿಂಗ್ ಮತ್ತು ಲೇಬಲಿಂಗ್‌ ಬಗ್ಗೆ ಹೆಚ್ಚು ಎಚ್ಚರ ವಹಿಸುತ್ತಾರೆ.

ಉತ್ತಮ ಬೇಕರಿಯಿಂದ ಸ್ವೀಟ್ ತನ್ನಿ:

ಸಿಹಿತಿಂಡಿಗಳನ್ನು ಖರೀದಿಸುವಾಗ ಯಾವಾಗಲೂ ಉತ್ತಮ ಬ್ರ್ಯಾಂಡ್ ಇರುವ, ಪ್ರಸಿದ್ಧವಾದ ಸ್ವೀಟ್ ಅಂಗಡಿಗಳು ಅಥವಾ ಬ್ರ್ಯಾಂಡ್‌ಗಳನ್ನು ಆರಿಸಿಕೊಳ್ಳಿ. ಈಗಾಗಲೇ ಹೆಸರು ಮಾಡಿರುವ ಸ್ವೀಟ್ ಅಂಗಡಿಯವರು ಅಥವಾ ಬೇಕರಿಯವರು ಕಲಬೆರಕೆಯಿಲ್ಲದ, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಸಾಧ್ಯತೆಯಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?