AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paneer Gulab Jamun: ದೀಪಾವಳಿಯಲ್ಲಿ ಮನೆಯಲ್ಲೇ ಪನೀರ್ ಗುಲಾಬ್ ಜಾಮೂನ್ ಮಾಡಿ ಸವಿಯಿರಿ, ರೆಸಿಪಿ ಇಲ್ಲಿದೆ

ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ, ಹಬ್ಬಗಳಲ್ಲಿ ಉಡುಗೆ ತೊಡುಗೆಯಷ್ಟೇ ಆಹಾರವು ಕೂಡ ಮುಖ್ಯವಾಗುತ್ತದೆ.

Paneer Gulab Jamun: ದೀಪಾವಳಿಯಲ್ಲಿ ಮನೆಯಲ್ಲೇ ಪನೀರ್ ಗುಲಾಬ್ ಜಾಮೂನ್ ಮಾಡಿ ಸವಿಯಿರಿ, ರೆಸಿಪಿ ಇಲ್ಲಿದೆ
Paneer Gulab JamunImage Credit source: Livehindustan
TV9 Web
| Edited By: |

Updated on: Oct 21, 2022 | 11:54 AM

Share

ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ, ಹಬ್ಬಗಳಲ್ಲಿ ಉಡುಗೆ ತೊಡುಗೆಯಷ್ಟೇ ಆಹಾರವು ಕೂಡ ಮುಖ್ಯವಾಗುತ್ತದೆ. ಕಲಬೆರಕೆ ಆಹಾರವನ್ನು ಸೇವಿಸುವುದರಿಂದ ಬಾಯಿಯ ರುಚಿ ಕೆಡುವುದಲ್ಲದೆ, ವ್ಯಕ್ತಿಯ ಆರೋಗ್ಯದ ಮೇಲೆ ಅದರ ಕೆಟ್ಟ ಪರಿಣಾಮವೂ ಸ್ಪಷ್ಟವಾಗಿ ಗೋಚರಿಸುತ್ತದೆ.

ಹಬ್ಬದ ಸೀಸನ್ ಶುರುವಾಗಿದೆ, ಹೀಗಿರುವಾಗ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಸುದ್ದಿಯೂ ಮುನ್ನೆಲೆಗೆ ಬರಲಾರಂಭಿಸಿದೆ. ಈ ದೀಪಾವಳಿಯಲ್ಲಿ ಮನೆಗೆ ಬರುವ ಅತಿಥಿಗಳನ್ನು ಕಲಬೆರಕೆ ಸಿಹಿತಿಂಡಿಗಳ ದುಷ್ಪರಿಣಾಮಗಳಿಂದ ರಕ್ಷಿಸಲು ನೀವು ಬಯಸಿದರೆ, ಈ ಟೇಸ್ಟಿ ಇನ್‌ಸ್ಟಂಟ್ ಪನೀರ್ ಗುಲಾಬ್ ಜಾಮೂನ್ ರೆಸಿಪಿಯನ್ನು ಪ್ರಯತ್ನಿಸಿ.

ತ್ವರಿತ ಪನೀರ್ ಗುಲಾಬ್ ಜಾಮೂನ್ ಮಾಡಲು ಬೇಕಾಗುವ ಸಾಮಾಗ್ರಿಗಳು  300 ಗ್ರಾಂ – ಖೋಯಾ 100 ಗ್ರಾಂ – ಪನೀರ್ 50 ಗ್ರಾಂ – ಮೈದಾ 600 ಗ್ರಾಂ – ಸಕ್ಕರೆ 2 – 3 ಏಲಕ್ಕಿ ಕರಿಯಲು ತುಪ್ಪ

ತಕ್ಷಣ ಪನೀರ್ ಗುಲಾಬ್ ಜಾಮೂನ್ ಮಾಡುವುದು ಹೇಗೆ? ನೀವು ಮೊದಲು ಸಕ್ಕರೆ ಪಾಕವನ್ನು ತಯಾರಿಸಬೇಕು. ಇದಕ್ಕಾಗಿ, 2 ಕಪ್ ನೀರಿನಲ್ಲಿ ಸಕ್ಕರೆ ಸೇರಿಸಿ ಮತ್ತು ಅದು ಕರಗುವ ತನಕ ಕುದಿಸಿ, ನಂತರ, 2-3 ನಿಮಿಷಗಳ ಕಾಲ ಉರಿಯನ್ನು ಕಡಿಮೆ ಮಾಡಿ ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ. ಪನೀರ್ ಅನ್ನು ತಟ್ಟೆಯಲ್ಲಿ ತೆಗೆದುಕೊಂಡು ಅದನ್ನು ನಿಮ್ಮ ಅಂಗೈಯಿಂದ ಮ್ಯಾಶ್ ಮಾಡಿ.

ಈಗ ಅದಕ್ಕೆ ಮೈದಾ ಹಿಟ್ಟನ್ನು ಸೇರಿಸಿ, ಹಾಲಿನ ಜತೆಯೂ ಮಿಶ್ರಣ ಮಾಡಬಹುದು. ಅದರಲ್ಲಿ ಹಿಟ್ಟನ್ನು ಬೆರೆಸಿದ ನಂತರ ನಯವಾದ ಮಿಶ್ರಣವನ್ನು ತಯಾರಿಸಿ ನಿಮ್ಮ ಕೈಯಿಂದ ಸಣ್ಣ ಉಂಡೆಯನ್ನು ತೆಗೆದುಕೊಂಡು ವೃತ್ತಾಕಾರದಲ್ಲಿ ಸುತ್ತಿ. ಅದಕ್ಕೆ ಬಾದಾಮಿಯನ್ನು ಬೇಕಾದರೂ ಸೇರಿಸಬಹುದು.

ಈಗ ಗುಲಾಬ್ ಜಾಮೂನ್‌ಗಳನ್ನು ಕರಿಯಲು, ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಮತ್ತು ತಣ್ಣಗಾದ ನಂತರ, ಗುಲಾಬ್ ಜಾಮೂನ್‌ಗಳನ್ನು ಸೇರಿಸಿ ಮತ್ತು ಕಂದು ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.

ಅದರ ನಂತರ, ಅವುಗಳನ್ನು ತೆಗೆದುಕೊಂಡು ಈಗಾಗಲೇ ಮಾಡಿಕೊಂಡಿರುವ ಸಕ್ಕರೆ ಪಾಕದೊಳಗೆ ಹಾಕಿ. ಅದೇ ರೀತಿ ಎಲ್ಲಾ ಗುಲಾಬ್ ಜಾಮೂನ್‌ಗಳನ್ನು ತಯಾರಿಸಿ. ಇದನ್ನು ಸುಮಾರು 10 ನಿಮಿಷಗಳ ಕಾಲ ಸಕ್ಕರೆ ಪಾಕದಲ್ಲಿ ಇರಿಸಿದರೆ, ನಿಮ್ಮ ರುಚಿಕರವಾದ ಪನೀರ್ ಗುಲಾಬ್ ಜಾಮೂನ್ ಸಿದ್ಧವಾಗುತ್ತದೆ. ಮನೆಗೆ ಬಂದ ಅತಿಥಿಗಳಿಗೆ ಬಿಸಿಬಿಸಿಯಾಗಿ ಬಡಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಫೋಟೋ ಟಿಪ್ಸ್ ನೀಡಿದ ರವಿ ಕಿಶನ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
ಸಮಂತಾ ಸೆಟ್​​​ನಲ್ಲಿ ಹೇಗಿರ್ತಾರೆ? ವಿವರಿಸಿದ ದಿಗಂತ್
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
KSRTC ಬಸ್​ ಅಡ್ಡಗಟ್ಟಿ ಕುಡುಕರ ಕಿರಿಕ್​​: ಸೆಲ್ಫಿ ತೆಗೆದು ಹುಚ್ಚಾಟ
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಮಗುವನ್ನು ಸಾಕ್ಷಾತ್ ದೇವರಂತೆ ಬಂದು ರಕ್ಷಿಸಿದ ಪೊಲೀಸರು!
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಲಕ್ಷ್ಮೀಪುರ ಬಿಡಿಎ ಲೇಔಟಲ್ಲಿ ಚೀಲದಲ್ಲಿ ಅಪರಿಚಿತ ಶವ ಪತ್ತೆ, ಬೆಚ್ಚಿದ ಜನ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ರಾಘಣ್ಣ ಮತ್ತು ಶಾಸಕ ಗೋಪಾಲಯ್ಯ
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ಸಿಇಟಿ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿದ್ರಾ ಸಿಬ್ಬಂದಿ?
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಜನಿವಾರ ತೆಗೆಸಿದ್ದಕ್ಕೆ ವ್ಯಾಪಕ ಆಕ್ರೋಶ
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?
ಒಂದು ರನ್​​ಗಾಗಿ ಇಷ್ಟೆಲ್ಲ ಪೋಸ್​​​ ಬೇಕಿತ್ತಾ ಪಾಂಡ್ಯ?