Sign In

By signing in or creating an account, you agree with Associated Broadcasting Company's Terms & Conditions and Privacy Policy.

Paneer Gulab Jamun: ದೀಪಾವಳಿಯಲ್ಲಿ ಮನೆಯಲ್ಲೇ ಪನೀರ್ ಗುಲಾಬ್ ಜಾಮೂನ್ ಮಾಡಿ ಸವಿಯಿರಿ, ರೆಸಿಪಿ ಇಲ್ಲಿದೆ

ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ, ಹಬ್ಬಗಳಲ್ಲಿ ಉಡುಗೆ ತೊಡುಗೆಯಷ್ಟೇ ಆಹಾರವು ಕೂಡ ಮುಖ್ಯವಾಗುತ್ತದೆ.

Paneer Gulab Jamun: ದೀಪಾವಳಿಯಲ್ಲಿ ಮನೆಯಲ್ಲೇ ಪನೀರ್ ಗುಲಾಬ್ ಜಾಮೂನ್ ಮಾಡಿ ಸವಿಯಿರಿ, ರೆಸಿಪಿ ಇಲ್ಲಿದೆ
Paneer Gulab JamunImage Credit source: Livehindustan
Follow us
TV9 Web
| Updated By: ನಯನಾ ರಾಜೀವ್

Updated on: Oct 21, 2022 | 11:54 AM

ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ, ಹಬ್ಬಗಳಲ್ಲಿ ಉಡುಗೆ ತೊಡುಗೆಯಷ್ಟೇ ಆಹಾರವು ಕೂಡ ಮುಖ್ಯವಾಗುತ್ತದೆ. ಕಲಬೆರಕೆ ಆಹಾರವನ್ನು ಸೇವಿಸುವುದರಿಂದ ಬಾಯಿಯ ರುಚಿ ಕೆಡುವುದಲ್ಲದೆ, ವ್ಯಕ್ತಿಯ ಆರೋಗ್ಯದ ಮೇಲೆ ಅದರ ಕೆಟ್ಟ ಪರಿಣಾಮವೂ ಸ್ಪಷ್ಟವಾಗಿ ಗೋಚರಿಸುತ್ತದೆ.

ಹಬ್ಬದ ಸೀಸನ್ ಶುರುವಾಗಿದೆ, ಹೀಗಿರುವಾಗ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಸುದ್ದಿಯೂ ಮುನ್ನೆಲೆಗೆ ಬರಲಾರಂಭಿಸಿದೆ. ಈ ದೀಪಾವಳಿಯಲ್ಲಿ ಮನೆಗೆ ಬರುವ ಅತಿಥಿಗಳನ್ನು ಕಲಬೆರಕೆ ಸಿಹಿತಿಂಡಿಗಳ ದುಷ್ಪರಿಣಾಮಗಳಿಂದ ರಕ್ಷಿಸಲು ನೀವು ಬಯಸಿದರೆ, ಈ ಟೇಸ್ಟಿ ಇನ್‌ಸ್ಟಂಟ್ ಪನೀರ್ ಗುಲಾಬ್ ಜಾಮೂನ್ ರೆಸಿಪಿಯನ್ನು ಪ್ರಯತ್ನಿಸಿ.

ತ್ವರಿತ ಪನೀರ್ ಗುಲಾಬ್ ಜಾಮೂನ್ ಮಾಡಲು ಬೇಕಾಗುವ ಸಾಮಾಗ್ರಿಗಳು  300 ಗ್ರಾಂ – ಖೋಯಾ 100 ಗ್ರಾಂ – ಪನೀರ್ 50 ಗ್ರಾಂ – ಮೈದಾ 600 ಗ್ರಾಂ – ಸಕ್ಕರೆ 2 – 3 ಏಲಕ್ಕಿ ಕರಿಯಲು ತುಪ್ಪ

ತಕ್ಷಣ ಪನೀರ್ ಗುಲಾಬ್ ಜಾಮೂನ್ ಮಾಡುವುದು ಹೇಗೆ? ನೀವು ಮೊದಲು ಸಕ್ಕರೆ ಪಾಕವನ್ನು ತಯಾರಿಸಬೇಕು. ಇದಕ್ಕಾಗಿ, 2 ಕಪ್ ನೀರಿನಲ್ಲಿ ಸಕ್ಕರೆ ಸೇರಿಸಿ ಮತ್ತು ಅದು ಕರಗುವ ತನಕ ಕುದಿಸಿ, ನಂತರ, 2-3 ನಿಮಿಷಗಳ ಕಾಲ ಉರಿಯನ್ನು ಕಡಿಮೆ ಮಾಡಿ ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ. ಪನೀರ್ ಅನ್ನು ತಟ್ಟೆಯಲ್ಲಿ ತೆಗೆದುಕೊಂಡು ಅದನ್ನು ನಿಮ್ಮ ಅಂಗೈಯಿಂದ ಮ್ಯಾಶ್ ಮಾಡಿ.

ಈಗ ಅದಕ್ಕೆ ಮೈದಾ ಹಿಟ್ಟನ್ನು ಸೇರಿಸಿ, ಹಾಲಿನ ಜತೆಯೂ ಮಿಶ್ರಣ ಮಾಡಬಹುದು. ಅದರಲ್ಲಿ ಹಿಟ್ಟನ್ನು ಬೆರೆಸಿದ ನಂತರ ನಯವಾದ ಮಿಶ್ರಣವನ್ನು ತಯಾರಿಸಿ ನಿಮ್ಮ ಕೈಯಿಂದ ಸಣ್ಣ ಉಂಡೆಯನ್ನು ತೆಗೆದುಕೊಂಡು ವೃತ್ತಾಕಾರದಲ್ಲಿ ಸುತ್ತಿ. ಅದಕ್ಕೆ ಬಾದಾಮಿಯನ್ನು ಬೇಕಾದರೂ ಸೇರಿಸಬಹುದು.

ಈಗ ಗುಲಾಬ್ ಜಾಮೂನ್‌ಗಳನ್ನು ಕರಿಯಲು, ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಮತ್ತು ತಣ್ಣಗಾದ ನಂತರ, ಗುಲಾಬ್ ಜಾಮೂನ್‌ಗಳನ್ನು ಸೇರಿಸಿ ಮತ್ತು ಕಂದು ಬಣ್ಣ ಬರುವವರೆಗೆ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.

ಅದರ ನಂತರ, ಅವುಗಳನ್ನು ತೆಗೆದುಕೊಂಡು ಈಗಾಗಲೇ ಮಾಡಿಕೊಂಡಿರುವ ಸಕ್ಕರೆ ಪಾಕದೊಳಗೆ ಹಾಕಿ. ಅದೇ ರೀತಿ ಎಲ್ಲಾ ಗುಲಾಬ್ ಜಾಮೂನ್‌ಗಳನ್ನು ತಯಾರಿಸಿ. ಇದನ್ನು ಸುಮಾರು 10 ನಿಮಿಷಗಳ ಕಾಲ ಸಕ್ಕರೆ ಪಾಕದಲ್ಲಿ ಇರಿಸಿದರೆ, ನಿಮ್ಮ ರುಚಿಕರವಾದ ಪನೀರ್ ಗುಲಾಬ್ ಜಾಮೂನ್ ಸಿದ್ಧವಾಗುತ್ತದೆ. ಮನೆಗೆ ಬಂದ ಅತಿಥಿಗಳಿಗೆ ಬಿಸಿಬಿಸಿಯಾಗಿ ಬಡಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ