Sign In

By signing in or creating an account, you agree with Associated Broadcasting Company's Terms & Conditions and Privacy Policy.

Raksha Bandhan 2021: ರಾಖಿ ಕಟ್ಟುವ ಜೊತೆಗೆ ಈ ಸಿಹಿ ತಿಂಡಿಯನ್ನು ನಿಮ್ಮ ಸಹೋದರರಿಗೆ ತಿನಿಸಿ

ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದನ್ನು ಮನೆಯಲ್ಲೇ ಮಾಡಿ ತಿನ್ನಿ. ಸಂಜೆ ಹೊತ್ತಿಗೆ ಬಿಸಿ ಬಿಸಿ ಕಾಫಿ ಜೊತೆಗೆ ಇದನ್ನು ಸೇವಿಸಬಹುದು. ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಇದು ಒಂದಾಗಿದೆ.

Raksha Bandhan 2021: ರಾಖಿ ಕಟ್ಟುವ ಜೊತೆಗೆ ಈ ಸಿಹಿ ತಿಂಡಿಯನ್ನು ನಿಮ್ಮ ಸಹೋದರರಿಗೆ ತಿನಿಸಿ
ರಕ್ಷಾ ಬಂಧನ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: sandhya thejappa

Updated on:Aug 21, 2021 | 5:03 PM

ಸಿಹಿ ತಿಂಡಿಯನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ಯಾವುದೇ ಶುಭ ಸಂದರ್ಭದಲ್ಲಿ ಸಿಹಿಯನ್ನು ತಿಂದು ಆ ಕ್ಷಣವನ್ನೂ ಪ್ರತಿಯೊಬ್ಬರೂ ಆನಂದಿಸುತ್ತಾರೆ. ಹಬ್ಬ- ಹರಿದಿನ ಸೇರಿ ಯಾವುದೇ ಖುಷಿ ಸಂದರ್ಭದಲ್ಲೂ ಸಿಹಿಯನ್ನು ಸೇವಿಸುವುದು ಭಾರತದ ಸಂಸ್ಕೃತಿಯಾಗಿ ಬಿಟ್ಟಿದೆ. ಇನ್ನು ಅಣ್ಣ- ತಂಗಿಯ ಪವಿತ್ರ ಸಂಬಂಧಕ್ಕೆ ಅರ್ಥ ಕಲ್ಪಿಸುವ ದಿನವಾದ ರಕ್ಷಾ ಬಂಧನ (Raksha Bandhan) ದಿನದಂದು ಮನೆಯಲ್ಲಿ ಸಿಹಿ ಮಾಡಿ ಸವಿಯಿರಿ. ಕಡಿಮೆ ಸಮಯದಲ್ಲಿ ಯಾವ ಸಿಹಿ ತಿಂಡಿ ಮಾಡಬಹುದು ಅಂತ ನೀವು ಯೋಚಿಸುತ್ತಿದ್ದರೆ, ನಾವು ಶಂಕರಪಾಲಿ ಮಾಡುವ ವಿಧಾನವನ್ನು ತಿಳಿಸುತ್ತೇವೆ ನೋಡಿ.

ಶಂಕರಪಾಲಿ ತಿಂಡಿ ತಿನ್ನಲು ತುಂಬಾ ರುಚಿಯಿರುತ್ತದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದನ್ನು ಮನೆಯಲ್ಲೇ ಮಾಡಿ ತಿನ್ನಿ. ಸಂಜೆ ಹೊತ್ತಿಗೆ ಬಿಸಿ ಬಿಸಿ ಕಾಫಿ ಜೊತೆಗೆ ಇದನ್ನು ಸೇವಿಸಬಹುದು. ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಇದು ಒಂದಾಗಿದೆ.

ಶಂಕರಪಾಲಿಯನ್ನು ಮಾಡಲು, ಮೈದಾ ಹಿಟ್ಟು, ಎಣ್ಣೆ, ಉಪ್ಪು, ಏಲಕ್ಕಿ ಮತ್ತು ಸಕ್ಕರೆ ಬೇಕಾಗುತ್ತದೆ. ಮಾಡುವ ವಿಧಾನವನ್ನು ಈ ಕೆಳಗಂಡಂತೆ ತಿಳಿಸಲಾಗಿದೆ.

ಮೈದಾ ಹಿಟ್ಟು- ಅರ್ಧ ಕಪ್ ಸಕ್ಕರೆ – 4 ಚಮಚ ಏಲಕ್ಕಿ ಪುಡಿ- ಅರ್ಧ ಚಮಚ ಉಪ್ಪು – 1 ಚಿಟಕಿ ಎಣ್ಣೆ – 2 ಚಮಚ

ಒಂದು ಬೌಲ್​ಗೆ ಎಣ್ಣೆ ಹಾಕಿ. ಅದಕ್ಕೆ ಅರ್ಧ ಕಪ್ ಮೈದಾ ಹಿಟ್ಟು ಮತ್ತು ಸಕ್ಕರೆ ಸೇರಿಸಿ. ನಂತರ ಏಲಕ್ಕಿ ಪುಡಿ ಹಾಕಿ ಕಲಸಿ. ಸ್ವಲ್ಪ ನೀರು ಸೇರಿಸಿ ಹದವಾಗಿ ಮಿಶ್ರಣ ಮಾಡಿ. ಒಂದು ಚಿಟಕಿ ಉಪ್ಪು ಹಾಕಿ. ಬಳಿಕ ಮಿಶ್ರಣಗೊಂಡ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ದಪ್ಪವಾಗಿ ಲಟ್ಟಿಸಿ. ಚಪಾತಿ ರೀತಿ ಲಟ್ಟಿಸಿ. ಲಟ್ಟಿಸುವಾಗ ಮಿಶ್ರಣದ ಹಿಟ್ಟಿನ ಕೆಳಗೆ ಮತ್ತು ಮೇಲೆ ಸ್ವಲ್ಪ ಮೈದಾ ಹಿಟ್ಟನ್ನು ಹಾಕಿಕೊಳ್ಳಿ.

ಲಟ್ಟಿಸಿದ ನಂತರ ಡೈಮಂಡ್ ಆಕಾರದಲ್ಲಿ ಚಾಕುವಿನಿಂದ ಕತ್ತರಿಸಿ. ಕತ್ತರಿಸಿದ ತುಂಡುಗಳನ್ನು ಕಾದ ಎಣ್ಣೆಯಲ್ಲಿ ಕರಿಯಿರಿ. ಗೋಲ್ಡನ್ ಬಣ್ಣ ಬರುವವರೆಗೆ ಕರಿಯಿರಿ. ಬಿಸಿ ಬಿಸಿಯಾದ ಶಂಕರಪಾಲಿಯನ್ನು ನಿಮ್ಮ ಸಹೋದರರಿಗೆ ತಿನಿಸಿ ರಕ್ಷಾ ಬಂಧನವನ್ನು ಆಚರಿಸಿ.

ಶಂಕರಪಾಲಿ

ಇದನ್ನೂ ಓದಿ

Mehndi Designs: ರಕ್ಷಾ ಬಂಧನದ ಸಲುವಾಗಿ ಹಚ್ಚಿಕೊಳ್ಳುವ ಸುಲಭದ ಮೆಹಂದಿ ಡಿಸೈನ್​ಗಳು; ಮದರಂಗಿಯಲ್ಲಿ ಕಂಗೊಳಿಸಲಿ ನಿಮ್ಮ ಕೈಗಳು

Hair Care Tips: ನಿಮಗೆ ಉದ್ದ ಕೂದಲು ಇಷ್ಟನಾ? ಆಲಿವ್ ಎಣ್ಣೆಯನ್ನು ಹೀಗೆ ಬಳಸಿ

(Sweet shankarpali recipe for raksha bandhan)

Published On - 5:00 pm, Sat, 21 August 21

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್