AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಬಂಧಗಳು ತುಂಬಾ ಸೂಕ್ಷ್ಮ, ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಪಾವನ

ಸಂಬಂಧ(Relationship)ಗಳು ತುಂಬಾ ಸೂಕ್ಷ್ಮ ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಸುಖಮಯವಾಗಿರಲು ಸಾಧ್ಯ.

Relationship: ಸಂಬಂಧಗಳು ತುಂಬಾ ಸೂಕ್ಷ್ಮ, ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಪಾವನ
RelationshipImage Credit source: Healthshots.com
ನಯನಾ ರಾಜೀವ್
|

Updated on: Jun 26, 2023 | 3:28 PM

Share

ಸಂಬಂಧ(Relationship)ಗಳು ತುಂಬಾ ಸೂಕ್ಷ್ಮ ಇಬ್ಬರೂ ಭಾವನಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಜೀವನ ಸುಖಮಯವಾಗಿರಲು ಸಾಧ್ಯ. ಹಣವಿದೆ, ಬೆಟ್ಟದಷ್ಟು ಪ್ರೀತಿ ಮಾಡ್ತೀನಿ ಇನ್ನೇನು ಬೇಕು ಎಂದೆನಿಸಬಹುದು ಆದರೆ ಕಾಳಜಿಯೂ ಕೂಡ ಮುಖ್ಯವಾಗುತ್ತದೆ. ಆಕೆ ಅಥವಾ ಆತ ಅತ್ತಾಗ ಸಂತೈಸುವ ಕೈಗಳು ಬೇಕು, ಸಂತಸದ ಸಮಯದಲ್ಲಿ ನಮ್ಮ ಜತೆಯೇ ನಗುವ ಮುಖಗಳೂ ಕೂಡ ಬೇಕು, ಬೇಸರ ಬೇಡ ನಾನಿದ್ದೇನೆ ಎನ್ನುವ ಸಾಂತ್ವನ ನೀಡುವ ಮಾತುಗಳೂ ಬೇಕು. ಹಣದಿಂದ ಇವೆಲ್ಲವನ್ನು ಖರೀದಿಸಲು ಸಾಧ್ಯವಿಲ್ಲ.

ಭಾವನಾತ್ಮಕವಾಗಿ ಹತ್ತಿರವಿಲ್ಲದ ನಿಮ್ಮ ಸಂಗಾತಿಯು ತನ್ನ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಕೂಡ ಕಷ್ಟ ಅನುಭವಿಸಬಹುದು. ಭಾವನಾತ್ಮಕವಲ್ಲದ ಸಂಗಾತಿಯು ನಿಮ್ಮ ಯಾವ ಭಾವನೆಗಳಿಗೂ ಪ್ರತಿಕ್ರಿಯಿಸುವುದಿಲ್ಲ, ಭಾವನಾತ್ಮಕ ವಿಷಯಗಳನ್ನು ಚರ್ಚಿಸಿದಾಗ ಅಥವಾ ಬೆಂಬಲವನ್ನು ಬಯಸಿದಾಗ ಸಂಗಾತಿಯ ಭಾವನೆಯನ್ನು ನಿರ್ಲಕ್ಷಿಸಬಹುದು.

ಇಂತಹ ಸಂಗಾತಿಯು ಸಾಮಾನ್ಯವಾಗಿ ಬೇರೆಯವರ ಭಾವನೆಗಳಿಗೆ ಬೆಲೆ ಕೊಡದೆ ಕೇವಲ ವೈಯಕ್ತಿಕ ಅಗತ್ಯಗಳಿಗೆ ಆದ್ಯತೆ ನೀಡುತ್ತಾರೆ. ಸಾಕಷ್ಟು ಮಂದಿ ಜತೆಗೆ ಬೆರೆಯುವುದನ್ನು ಕಲಿಯಿರಿ, ಭಾವನೆಗಳಿಗೆ ಬೆಲೆ ಕೊಡಿ ಆಗ ನಿಮ್ಮ ಮಧ್ಯೆ ಯಾವ ಕಲಹವೂ ಇರುವುದಿಲ್ಲ.

ಭಾವನೆ ಎಂಬುದು ಮನುಷ್ಯ ಜೀವನದ ಸುಂದರ ಅಂಶಗಳಲ್ಲಿ ಒಂದು ಎಂದು ಹೇಳಬಹುದು, ಅತಿಯಾದರೆ ಅಮೃತವೂ ವಿಷಯ ಎಂಬಂತೆ ನಮ್ಮ ಆಲೋಚನೆಗಳು ನಿಯಂತ್ರಣ ತಪ್ಪಿದರೆ ಹೇಗೆ ಮರುಳು ಎನಿಸಿಕೊಳ್ಳುತ್ತದೆಯೋ ಹಾಗೆಯೇ ಭಾವನೆಗಳು ಕೂಡ. ಸಮಸ್ಯೆ ಇರುವುದು ಭಾವನೆಗಳಲ್ಲಲ್ಲ.

ಮತ್ತಷ್ಟು ಓದಿ: ಒತ್ತಡ ಮತ್ತು ಆತಂಕವನ್ನು ನಿವಾರಿಸುವ ಭ್ರಮರಿ ಪ್ರಾಣಾಯಾಮದ ಬಗ್ಗೆ ಇಲ್ಲಿದೆ ಮಾಹಿತಿ

ವಿಷಾದ, ನೋವು, ಬೇಸರದ ಭಾವನೆಗಳಿರುವ ಕಾರಣದಿಂದಲೇ ನಮಗೆ ಅವು ಸಮಸ್ಯೆಗಳಂತೆ ಕಾಣುತ್ತದೆ. ಸಂತೋಷವಾಗಿದ್ದರೆ ಖುಷಿ, ಖುಷಿಯಾಗಿದ್ದರೆ ಯಾರಿಗಾದರೂ ತೊಂದರೆ ಅನಿಸುವುದಿಲ್ಲ, ಸಂತೃಪ್ತಿಯ ಭಾವ, ಸಹಾನುಭೂಮಿ ಇದ್ಯಾವುದೂ ನಮಗೆ ಕಷ್ಟವನ್ನು ಕೊಡುವುದಿಲ್ಲ.

ಭಾವನೆಗಳೇ ಬೇಡವೆಂದರೆ ಜೀವನವು ಶೂನ್ಯ ಎನಿಸುತ್ತದೆ, ಭಾವನೆಗಳಿದ್ದರಷ್ಟೇ ಮನುಷ್ಯ ಜೀವನಕ್ಕೆ ಒಂದು ಅರ್ಥ, ಭಾವನೆಗಳು ಬದುಕಿನ ಅವಿಭಾಜ್ಯ ಅಂಗ, ಅವುಗಳನ್ನು ನಿಭಾಯಿಸುವುದು, ಆಳವಾಗಿ ಅರಿತುಕೊಳ್ಳುವುದನ್ನು ನೀವು ಪ್ರಯತ್ನಿಸಬೇಕು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?