AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣ ಸಣ್ಣ ವಿಷಯಕ್ಕೂ ಜಗಳ, ಇದು ಅನಾರೋಗ್ಯಕರ ಸಂಬಂಧದ ಸಂಕೇತವೇ, ನಿವಾರಿಸುವುದು ಹೇಗೆ?

ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳಲು ಸಾಕಷ್ಟು ದಾರಿಗಳಿವೆ, ಹಾಗೆಯೇ ಯಾವುದೋ ಒಂದು ಮನಸ್ತಾಪದಿಂದ ಸಂಬಂಧಗಳು ದೂರ ಆಗಬಹುದು. ಮಾತು ಮಾತಿಗೂ ಮುನಿಸು, ನಿಮ್ಮ ಸಂಗಾತಿ ಏನೇ ಹೇಳಿದ್ದರೂ ಅದರಲ್ಲಿ ತಪ್ಪು ಕಂಡುಹಿಡಿದು ಅದೇ ವಿಚಾರವನ್ನು ಇಟ್ಟುಕೊಂಡು ವಾದ ಮಾಡುವುದು ಇದೆಲ್ಲವೂ ಅನಾರೋಗ್ಯಕರ ಸಂಬಂಧದ ಸಂಕೇತ.

ಸಣ್ಣ ಸಣ್ಣ ವಿಷಯಕ್ಕೂ ಜಗಳ, ಇದು ಅನಾರೋಗ್ಯಕರ ಸಂಬಂಧದ ಸಂಕೇತವೇ, ನಿವಾರಿಸುವುದು ಹೇಗೆ?
ಸಂಬಂಧImage Credit source: Healthshots.com
ನಯನಾ ರಾಜೀವ್
|

Updated on: Jun 15, 2023 | 9:00 AM

Share

ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳಲು ಸಾಕಷ್ಟು ದಾರಿಗಳಿವೆ, ಹಾಗೆಯೇ ಯಾವುದೋ ಒಂದು ಮನಸ್ತಾಪದಿಂದ ಸಂಬಂಧಗಳು ದೂರ ಆಗಬಹುದು. ಮಾತು ಮಾತಿಗೂ ಮುನಿಸು, ನಿಮ್ಮ ಸಂಗಾತಿ ಏನೇ ಹೇಳಿದ್ದರೂ ಅದರಲ್ಲಿ ತಪ್ಪು ಕಂಡುಹಿಡಿದು ಅದೇ ವಿಚಾರವನ್ನು ಇಟ್ಟುಕೊಂಡು ವಾದ ಮಾಡುವುದು ಇದೆಲ್ಲವೂ ಅನಾರೋಗ್ಯಕರ ಸಂಬಂಧದ ಸಂಕೇತ. ಪ್ರತಿಯೊಬ್ಬರು ಪರಸ್ಪರ ಗೌರವಿಸಲೇಬೇಕು, ಅರ್ಥಮಾಡಿಕೊಳ್ಳಬೇಕು.

ಅನಾರೋಗ್ಯಕರ ಸಂಬಂಧದ ಚಿಹ್ನೆಗಳು 1 ಸಂವಹನ ಸ್ಥಗಿತ ಏನಾದರೂ ಸಣ್ಣ ಪುಟ್ಟ ಜಗಳವಾಯಿತು ಎಂದರೆ ತಿಂಗಳುಗಳ ಕಾಲ ಮಾತನಾಡದೇ ಇರುವುದು ಅನಾರೋಗ್ಯಕರ ಸಂಬಂಧವನ್ನು ಸೂಚಿಸುತ್ತದೆ. ಮುಕ್ತವಾಗಿ ಚರ್ಚೆ ಮಾಡದಿರುವುದು, ಮನಸ್ಸಿನಲ್ಲಿ ನೀವೇ ಏನೋ ಅಂದುಕೊಳ್ಳುವುದು, ನಿಮ್ಮ ಮಾತು ನಿಮ್ಮ ಸಂಗಾತಿಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

2 ನಂಬಿಕೆಯ ಕೊರತೆ ದಿನಗಳೆದಂತೆ ನಂಬಿಕೆ ಹೆಚ್ಚಾಗಬೇಕೆ ಹೊರತು ಕಡಿಮೆಯಾಗಬಾರದು ಹಾಗಾದಾಗ ಅಸೂಯೆ, ಅನುಮಾನ ಎಲ್ಲವೂ ಸೃಷ್ಟಿಯಾಗುತ್ತದೆ. ಯಾರೊಂದಿಗೆ ಮಾತನಾಡಿದರೂ ನನಗಿಂತ ಅವರ ಬಳಿಯೇ ಹೆಚ್ಚು ಮಾತನಾಡುತ್ತಾರೆ ಅನ್ನಿಸುವುದು ಈ ರೀತಿಯ ಭಾವನೆಗಳು ಮೂಡುತ್ತವೆ. 3 ಪ್ರತಿಕ್ರಿಯೆ ಇರುವುದಿಲ್ಲ ಅನಾರೋಗ್ಯಕರ ಸಂಬಂಧದಲ್ಲಿ ಪರಸ್ಪರರ ಗಡಿ, ಆಲೋಚನೆಗಳು ಅಥವಾ ಭಾವನೆಗಳಿಗೆ ಗೌರವದ ಕೊರತೆ ಉಂಟಾಗಬಹುದು ಒಬ್ಬ ಸಂಗಾತಿ ಮತ್ತೊಬ್ಬರು ಹೇಳಿದ್ದನ್ನು ಕೇಳದೆ ಅವಮಾನಿಸಬಹುದು ಅಥವಾ ನಿರಾಕರಿಸಬಹುದು.

ಮತ್ತಷ್ಟು ಓದಿ: Relationship Tips: ಯುವ ಪೀಳಿಗೆ ದೀರ್ಘಕಾಲ ಸಂಬಂಧದಲ್ಲಿ ಆಸಕ್ತಿ ಇಲ್ಲ, ತಜ್ಞರ ಅಭಿಪ್ರಾಯ ಇಲ್ಲಿದೆ

4 ಪರಸ್ಪರ ನಿಯಂತ್ರಿಸಲು ಪ್ರಯತ್ನಿಸುವುದು ಎಲ್ಲವೂ ನಾನಂದುಕೊಂಡಂತೆ ನಡೆಯಬೇಕು ಎಂಬುದನ್ನು ಪಕ್ಕಕ್ಕಿಡಿ, ಒಮ್ಮೆ ನಿಮ್ಮ ಸಂಗಾತಿ ಹೇಳಿದಂತೆಯೂ ಕೇಳಿ ನೋಡಿ ಅದರಲ್ಲಿ ಸಿಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ, ಹಠವನ್ನು ಸ್ವಲ್ಪ ಕಡಿಮೆ ಮಾಡಿ. ನೀನು ಹೀಗೆಯೇ ಇರಬೇಕು ಹಾಗೆಯೇ ಇರಬೇಕು ಎನ್ನುವ ಬೇಲಿಯನ್ನು ಹಾಕಬೇಡಿ.

5 ಬೆಂಬಲ ನೀಡದಿರುವುದು ನಿಮ್ಮಂತೆಯೇ ನಿಮ್ಮ ಸಂಗಾತಿಗೂ ಕೂಡ ಹಲವು ಕನಸುಗಳು, ಗುರಿ, ಆಸೆಗಳಿರುತ್ತವೆ ಅದಕ್ಕೂ ಗೌರವ ನೀಡುವುದು ನಿಮ್ಮ ಕರ್ತವ್ಯ, ನೀವು ಅವರ ಪ್ರತಿಯೊಂದು ಹೆಜ್ಜೆಯನ್ನೂ ಬೆಂಬಲಿಸಬೇಕು. ಭಾವನಾತ್ಮಕ ನಿರ್ಲಕ್ಷ್ಯ ಅಥವಾ ಅಸಹಕಾರ ವರ್ತನೆಯು ಅನಾರೋಗ್ಯಕರ ಸಂಬಂಧದ ಚಿಹ್ನೆಗಳಾಗಿರಬಹುದು.

6 ಯಾವುದೋ ವಿಷಯದ ಬಗ್ಗೆ ಜಗಳವಾಡುವುದು ಸಂಘರ್ಷವು ಉಲ್ಬಣಗೊಂಡರೆ, ಎಂದಿಗೂ ಪರಿಹರಿಸದಿದ್ದರೆ ಅಥವಾ ಭಾವನಾತ್ಮಕ ಅಥವಾ ದೈಹಿಕ ನಿಂದನೆಗೆ ಕಾರಣವಾದರೆ, ಅದು ಅನಾರೋಗ್ಯಕರ ಸಂಬಂಧವನ್ನು ಸೂಚಿಸುತ್ತದೆ. ಸುರಕ್ಷತೆಗೆ ಆದ್ಯತೆ ನೀಡುವುದು ಮತ್ತು ಅಂತಹ ಸಂದರ್ಭಗಳಲ್ಲಿ ಸಹಾಯ ಪಡೆಯುವುದು ಮುಖ್ಯವಾಗಿದೆ

ಅಂತಹ ಸಂಬಂಧವನ್ನು ಸುಧಾರಿಸಲು ತಜ್ಞರ ಸಲಹೆ 1 .ಪರಸ್ಪರ ಕೂಲ್ ಆಗಿ ಮಾತನಾಡಿ ಮುಕ್ತ ಮತ್ತು ಪ್ರಾಮಾಣಿಕ ರೀತಿಯಲ್ಲಿ ಸಂವಹನವು ಆರೋಗ್ಯಕರ ಸಂಬಂಧದ ಪ್ರಮುಖ ಸೂಚಕವಾಗಿದೆ ಎಂದು ಡಾ. ಅಶುತೋಷ್ ಶ್ರೀವಾಸ್ತವ ಸಲಹೆ ನೀಡುತ್ತಾರೆ.

2.ನಿಮ್ಮನ್ನು ನಂಬಲು ಪ್ರಾರಂಭಿಸಿ ನಂಬಿಕೆಯು ಆರೋಗ್ಯಕರ ಸಂಬಂಧದ ಅಡಿಪಾಯವಾಗಿದೆ. ಸಂಗಾತಿಯು ಎಲ್ಲದರಲ್ಲೂ ಒಬ್ಬರನ್ನೊಬ್ಬರು ನಂಬುತ್ತಾರೆ. ಅವರ ಉದ್ದೇಶಗಳಲ್ಲಿ ವಿಶ್ವಾಸವಿದೆ. ಅವರು ಸುರಕ್ಷಿತವಾಗಿರುತ್ತಾರೆ ಮತ್ತು ಪರಸ್ಪರ ನಂಬಬಹುದು.

3.ಗೌರವ ಕೊಟ್ಟರೆ ನಿಮಗೂ ಸಿಗುತ್ತದೆ ನಿಮ್ಮ ಸಂಗಾತಿಗೆ ನೀವು ಗೌರವ ಕೊಟ್ಟರೆ ಅವರೂ ಕೂಡ ನಿಮಗೆ ಗೌರವ ಕೊಡುತ್ತಾರೆ. ಆಗ ಅವರು ಪರಸ್ಪರರ ಗಡಿಗಳು, ಆಲೋಚನೆಗಳು ಮತ್ತು ಸ್ವಾಯತ್ತತೆಯನ್ನು ಗೌರವಿಸುತ್ತಾರೆ.

4. ಸಮಾನತೆ ಡಾ. ಅಶುತೋಷ್ ಶ್ರೀವಾಸ್ತವ ಅವರು ಆರೋಗ್ಯಕರ ಸಂಬಂಧದಲ್ಲಿ ಇಬ್ಬರೂ ಸಮಾನವಾದ ಮಾತು ಮತ್ತು ಶಕ್ತಿಯನ್ನು ಹೊಂದಿರುತ್ತಾರೆ ಎಂದು ನಂಬುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು