AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರಿಡ್ಜ್ ಇಲ್ಲದೆಯೂ ತರಕಾರಿ, ಹಣ್ಣುಗಳನ್ನು ಫ್ರೆಶ್​ ಆಗಿಡುವುದು ಹೇಗೆ?

ಬೇಸಿಗೆಯಲ್ಲಿ ಹಣ್ಣು- ತರಕಾರಿಗಳನ್ನು ತಾಜಾವಾಗಿ ಉಳಿಸಿಕೊಳ್ಳುವುದು ಬಹಳ ಕಷ್ಟ. ಬಿಸಿಲಿನ ಝಳಕ್ಕೆ ಅವು ಬೇಗ ಒಣಗಿ ಹೋಗುತ್ತವೆ. ಹೀಗಾಗಿ, ಬೇಸಿಗೆ ಕಾಲದಲ್ಲಿ ಫ್ರಿಡ್ಜ್​ನ ಅಗತ್ಯ ಬಹಳ ಇರುತ್ತದೆ. ಆದರೆ, ಫ್ರಿಡ್ಜ್​ ಇಲ್ಲದವರು ತರಕಾರಿ, ಹಣ್ಣುಗಳನ್ನು ಹೇಗೆ ಫ್ರೆಶ್ ಆಗಿಟ್ಟುಕೊಳ್ಳುವುದು?

ಫ್ರಿಡ್ಜ್ ಇಲ್ಲದೆಯೂ ತರಕಾರಿ, ಹಣ್ಣುಗಳನ್ನು ಫ್ರೆಶ್​ ಆಗಿಡುವುದು ಹೇಗೆ?
ಫ್ರಿಡ್ಜ್Image Credit source: istock
ಸುಷ್ಮಾ ಚಕ್ರೆ
|

Updated on: May 01, 2024 | 10:27 PM

Share

ಬೇಸಿಗೆಯಲ್ಲಿ ಹಣ್ಣುಗಳು (Summer Fruits) ಮತ್ತು ತರಕಾರಿಗಳ ತಾಜಾತನ ಬೇಗ ಹಾಳಾಗುತ್ತದೆ. ಅದಕ್ಕಾಗಿಯೇ ಅವುಗಳನ್ನು ಫ್ರಿಡ್ಜ್​ನಲ್ಲಿ (Fridge) ಸಂಗ್ರಹಿಸಿಡಬೇಕಾದುದು ಅನಿವಾರ್ಯ. ಆದರೆ, ಫ್ರಿಡ್ಜ್​ನಲ್ಲಿಟ್ಟು ತಿನ್ನುವುದು ಆರೋಗ್ಯಕ್ಕೆ ಹೆಚ್ಚು ಆರೋಗ್ಯಕರವಲ್ಲ. ಹೀಗಾಗಿ, ಫ್ರಿಡ್ಜ್ ಇಲ್ಲದವರು ಮತ್ತು ಫ್ರಿಡ್ಜ್ ಅನ್ನು ಹೆಚ್ಚು ಬಳಸದವರು ಹಣ್ಣುಗಳು ಮತ್ತು ತರಕಾರಿಗಳನ್ನು ಫ್ರೆಶ್ ಆಗಿಟ್ಟುಕೊಳ್ಳಲು ಏನು ಮಾಡಬೇಕು? ಇಲ್ಲಿದೆ ಉತ್ತರ.

ಪ್ರತ್ಯೇಕವಾಗಿ ಇರಿಸಿ:

ಹಣ್ಣುಗಳು ಮತ್ತು ತರಕಾರಿಗಳನ್ನು ಪ್ರತ್ಯೇಕ ಕಂಟೇನರ್‌ಗಳಲ್ಲಿ ಸಂಗ್ರಹಿಸಿಡಿ. ಪ್ರತಿ ರೀತಿಯ ತರಕಾರಿ ಮತ್ತು ಹಣ್ಣುಗಳಿಗೆ ವಿಭಿನ್ನ ಚೀಲಗಳನ್ನು ಬಳಸಿ. ಸ್ವಲ್ಪ ಗಾಳಿ ತುಂಬಿದ, ಬಿಗಿಯಾಗಿ ಮುಚ್ಚಿದ ಚೀಲಗಳನ್ನು ಬಳಸಿ.

ಇದನ್ನೂ ಓದಿ: ಈ ತರಕಾರಿಗಳನ್ನು ಮೊಸರಿನೊಂದಿಗೆ ತಿನ್ನುವುದು ಒಳ್ಳೆಯದಲ್ಲ

ಕೋಣೆಯ ಉಷ್ಣಾಂಶದಲ್ಲಿ ಕೌಂಟರ್​ಟಾಪ್​ನಲ್ಲಿ ಇರಿಸಿ:

ಶೀತ ಉಷ್ಣತೆಯು ಸೌತೆಕಾಯಿ, ಮೆಣಸಿನ ಕಾಯಿ ಮತ್ತು ಬಿಳಿಬದನೆಗಳಲ್ಲಿ ವಿಲ್ಟಿಂಗ್ ಮತ್ತು ಕೊಳೆಯುವಿಕೆಯನ್ನು ಉಂಟುಮಾಡಬಹುದು. ಅವುಗಳ ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸಲು, ಅವುಗಳನ್ನು ಕೌಂಟರ್​ಟಾಪ್​ನಲ್ಲಿ ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಿ.

ಪ್ಯಾಂಟ್ರಿಯಲ್ಲಿ ಸಂಗ್ರಹಿಸಿ:

ಸೇಬು, ಪೇರಳೆ, ಪ್ಲಮ್, ಆವಕಾಡೊ, ಕಿವಿ, ಮಾವಿನಹಣ್ಣು ಮತ್ತು ಅನಾನಸ್‌ನಂತಹ ಹಣ್ಣುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡಬೇಡಿ. ಅದರ ಬದಲು ಕೌಂಟರ್‌ನಲ್ಲಿ ಅಥವಾ ಪ್ಯಾಂಟ್ರಿಯಲ್ಲಿ ಉತ್ತಮವಾಗಿ ಸಂಗ್ರಹಿಸಿಡಬಹುದು.

ಇದನ್ನೂ ಓದಿ: Summer Fruits: ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ಬೇಸಿಗೆಯಲ್ಲಿ ಈ ಹಣ್ಣು ತಿನ್ನಿ

ಹೆಚ್ಚಿನ ಆರ್ದ್ರತೆ ಇರುವ ಸ್ಥಳದಲ್ಲಿ ಸಂಗ್ರಹಿಸಿ:

ಗೆಣಸು ಮತ್ತು ಆಲೂಗಡ್ಡೆಗಳನ್ನು ಫ್ರಿಡ್ಜ್​ನಲ್ಲಿ ಇಡಬಾರದು. ಅದರ ಬದಲು ಗಾಳಿಯಾಡುವ, ತಂಪಾದ ಪ್ರದೇಶದಲ್ಲಿ ಶೇಖರಿಸಿಡಬೇಕು.

ಹಣ್ಣುಗಳನ್ನು ತೊಳೆಯಬೇಡಿ:

ಬೆರಿ ಹಣ್ಣುಗಳು ಮತ್ತು ದ್ರಾಕ್ಷಿಗಳು ಸರಿಯಾಗಿ ಹಣ್ಣಾಗಿ, ತಿನ್ನಲು ಸಿದ್ಧವಾಗುವವರೆಗೆ ಸ್ವಚ್ಛವಾದ, ಶುಷ್ಕ ಸ್ಥಳದಲ್ಲಿ ಶೇಖರಿಸಿಡಬೇಕು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ