AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stress Relieving Food : ನಿಯಮಿತವಾಗಿ ಈ ಆಹಾರವನ್ನು ಸೇವಿಸಿ ಒತ್ತಡಕ್ಕೆ ಗುಡ್ ಬೈ ಹೇಳಿ

ಇಂದಿನ ಒತ್ತಡಭರಿತಭರಿತ ಜೀವನ ಶೈಲಿಯಿಂದಾಗಿ ಮಾನಸಿಕ ಆರೋಗ್ಯವು ಕೆಡುತ್ತಿದೆ. ಯಾರನ್ನು ಕೇಳಿದರೂ ಕೂಡ ಒತ್ತಡ ಹಾಗೂ ಚಿಂತೆ ಬಿಟ್ಟರೆ ಬೇರೇನೂ ಹೇಳುವುದೇ ಇಲ್ಲ. ಸಣ್ಣ ಪುಟ್ಟ ವಿಚಾರಗಳಿಗೂ ಒತ್ತಡವನ್ನು ಅನುಭವಿಸುತ್ತ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವವರೇ ಹೆಚ್ಚು. ಆದರೆ ಈ ಕೆಲವು ಆಹಾರಗಳನ್ನು ದಿನನಿತ್ಯವು ಸೇವಿಸುತ್ತ ಬಂದರೆ ಒತ್ತಡವು ಕಡಿಮೆಯಾಗಿ ನೆಮ್ಮದಿಯುತ ಬದುಕು ನಿಮ್ಮದಾಗುತ್ತದೆ.

Stress Relieving Food : ನಿಯಮಿತವಾಗಿ ಈ ಆಹಾರವನ್ನು ಸೇವಿಸಿ ಒತ್ತಡಕ್ಕೆ ಗುಡ್ ಬೈ ಹೇಳಿ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 01, 2024 | 5:55 PM

Share

ಇಂದಿನ ಕಾಲಘಟ್ಟದಲ್ಲಿ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವು ಅಷ್ಟೇ ಮುಖ್ಯವಾಗಿದೆ ಕಣ್ಣಿಗೆ ಕಾಣುವ ಆರೋಗ್ಯ ಸಮಸ್ಯೆಯನ್ನು ಹೇಗಾದರೂ ಗುಣಪಡಿಸಬಹುದು. ಆದರೆ ಮಾನಸಿಕ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಲು ತುಂಬಾ ಸಮಯವು ತಗಲುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರು ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಉದ್ಯೋಗ ಒತ್ತಡ, ಕೌಟುಂಬಿಕ ಒತ್ತಡ ಹೀಗೆ ಟೆನ್ಶನ್ ನಲ್ಲೇ ದಿನ ಕಳೆಯುವವರು ಆಹಾರ ಕ್ರಮಗಳಲ್ಲಿ ಬದಲಾವಣೆ ಮಾಡಿಕೊಂಡರೆ ಉತ್ತಮ.

ಒತ್ತಡವನ್ನು ದೂರ ಮಾಡುವ ಆಹಾರಗಳು:

  • ಬೆರ್ರಿ ಹಣ್ಣು : ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿರುವ ಈ ಬೆರ್ರಿ ಹಣ್ಣುಗಳು ಒತ್ತಡ ನಿವಾರಿಸುತ್ತದೆ. ಒತ್ತಡವನ್ನು ಅನುಭವಿಸಿದಾಗ ದೇಹದ ಕೋಶಗಳಲ್ಲಿ ಆಗುವ ಹಾನಿಯನ್ನು ತಡೆಯುತ್ತದೆ.
  • ಕ್ಯಾಲ್ಶಿಯಂ ಭರಿತ ಅಹಾರಗಳು : ಡೇರಿ ಉತ್ಪನ್ನಗಳು, ಪಾಲಕ್‌ ಸೊಪ್ಪು, ಬ್ರೊಕೊಲಿಗಳ ಸೇವನೆಯು ಒತ್ತಡವನ್ನು ನಿವಾರಿಸಿ ಟೆನ್ಶನ್ ಪ್ರೀಯಾಗಿಸಲು ಸಹಕಾರಿಯಾಗಿದೆ.
  • ಹಸಿರು ಸೊಪ್ಪು ಹಾಗೂ ತರಕಾರಿಗಳು : ಹಸಿರು ಸೊಪ್ಪು ಮತ್ತು ತರಕಾರಿಗಳಲ್ಲಿ ಫೋಲೇಟ್‌ ಅಂಶವು ಸಮೃದ್ಧವಾಗಿದ್ದು, ಇದು ಮೆದುಳಿನ ಸಂವಾಹಕಗಳು ಸರಿಯಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ಮೂಡ್‌ ಸುಧಾರಿಸಿ,ಒತ್ತಡವನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ.
  • ಅವಕಾಡೊ : ಎಲ್ಲರಿಗೂ ಚಿರಪರಿಚಿತವಾಗಿರುವ ಅವಕಾಡೊ ಹಣ್ಣಿನಲ್ಲಿ ಒಮೇಗಾ 3 ಕೊಬ್ಬಿನಾಮ್ಲ ಮತ್ತು ವಿಟಮಿನ್‌ ಸಿ ಹೇರಳವಾಗಿದೆ. ಅದಲ್ಲದೇ, ಇದರಲ್ಲಿರುವ ವಿಟಮಿನ್‌ ಬಿ ಅಂಶವು ಒತ್ತಡ ಮತ್ತು ಚಿಂತೆಯನ್ನು ದೂರ ಮಾಡುತ್ತದೆ.
  • ಮೊಟ್ಟೆ : ಮೊಟ್ಟೆಯಲ್ಲಿ ವಿಟಮಿನ್‌ ಡಿ ಮತ್ತು ಟ್ರಿಪ್ಟೊಫ್ಯಾನ್‌ ಅಂಶಗಳು ಅಧಿಕವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದಂತೆ ಹ್ಯಾಪಿ ಹಾರ್ಮೋನ್ ಬಿಡುಗಡೆಗೆ ಸಹಕಾರಿಯಾಗಿದೆ. ಇದರಿಂದ ಒತ್ತಡವು ದೂರವಾಗಿ ಮಾನಸಿಕ ಆರೋಗ್ಯವು ಸುಧಾರಿಸುತ್ತದೆ.
  • ಬೀಜಗಳು: ಗೋಡಂಬಿಯಲ್ಲಿ ಸತುವಿನ ಅಂಶವು ಅಧಿಕವಾಗಿದ್ದು, ಚಿಯಾ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಶಿಯಂ ಅಂಶವು ಹೇರಳವಾಗಿದೆ. ಈ ಎರಡು ಅಂಶಗಳು ಒತ್ತಡವನ್ನು ಕಡಿಮೆ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ