AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips in Kannada : ಶುಂಠಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡುವುದೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಬೇಸಿಗೆಯಲ್ಲಿ ತರಕಾರಿಗಳು ಬೇಗನೇ ಹಾಳಾಗುತ್ತವೆ. ಈ ಋತುವಿನಲ್ಲಿ ತರಕಾರಿಗಳು ಹಾಳಾಗುವುದನ್ನು ತಡೆಗಟ್ಟಲು, ಅವುಗಳನ್ನು ರೆಫ್ರಿಜರೇಟರ್ನಲ್ಲಿ ಶೇಖರಿಸಿಡಲಾಗುತ್ತದೆ. ಆದರೆ ಈ ಶುಂಠಿಯನ್ನು ಎಷ್ಟೇ ಜಾಗರೂಕವಾಗಿ ಸಂಗ್ರಹಿಸಿಟ್ಟರೂ ಬೇಗನೆ ಒಣಗುತ್ತದೆ, ಇಲ್ಲಿದಿದ್ದರೆ ಕೊಳೆತುಹೋಗುತ್ತದೆ. ಒಣಗಿದ ಶುಂಠಿಯನ್ನು ಆಹಾರ ಪದಾರ್ಥಗಳಿಗೆ ಬಳಸಿದರೂ ರುಚಿಯನ್ನು ಹೊಂದಿರುವುದಿಲ್ಲ. ಆಹಾರದಲ್ಲಿ ರುಚಿಯನ್ನು ಹೆಚ್ಚಿಸುವ ಈ ಶುಂಠಿ ತಾಜಾವಾಗಿ ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದು.

Kitchen Tips in Kannada : ಶುಂಠಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡುವುದೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಯಿನಂದಾ
| Edited By: |

Updated on: May 01, 2024 | 5:32 PM

Share

ಭಾರತೀಯರ ಅಡುಗೆ ಮನೆಯಲ್ಲಿ ಶುಂಠಿಯಿರಲೇಬೇಕು. ಪ್ರತಿಯೊಂದು ಆಹಾರ ಪದಾರ್ಥಗಳನ್ನು ತಯಾರಿಸುವಾಗಲೂ ಘಮ್ ಎನಿಸುವ ಶುಂಠಿಯನ್ನು ಬಳಸುತ್ತಾರೆ. ಹೀಗಾಗಿ ಆಹಾರಕ್ಕೆ ಮತ್ತಷ್ಟು ರುಚಿಯನ್ನು ಈ ಶುಂಠಿಯು ನೀಡುತ್ತದೆ. ಅದಲ್ಲದೇ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಈ ಶುಂಠಿ ಉತ್ತಮವಾದ ಮನೆ ಮದ್ದಾಗಿದೆ. ಆದರೆ ರಣ ಬಿಸಿಲಿಗೆ ಈ ಶುಂಠಿಯು ಬೇಗನೇ ಹಾಳಾಗುವ ಕಾರಣ, ಇದನ್ನು ತಾಜಾವಾಗಿಡುವುದಕ್ಕೆ ಕೆಲವು ಸಲಹೆಗಳನ್ನು ಅನುಸರಿಸಿದರೆ ಉತ್ತಮ.

ಶುಂಠಿಯನ್ನು ತಾಜಾವಾಗಿ ಸಂಗ್ರಹಿಸಿಡಲು ಇಲ್ಲಿವೆ ಕೆಲ ಸಲಹೆಗಳು

  • ಮಾರುಕಟ್ಟೆಯಲ್ಲಿ ತಂದ ಶುಂಠಿಯನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಇಡಬಾರದು. ಬೇಗನೇ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಶುಂಠಿಯನ್ನು ಟಿಶ್ಯೂನಿಂದ ಒರೆಸಿ ಮತ್ತು ಹತ್ತಿ ಬಟ್ಟೆಯಲ್ಲಿ ಸುತ್ತಿಟ್ಟರೆ ತಾಜಾವಾಗಿರುತ್ತದೆ.
  • ಶುಂಠಿಯನ್ನು ತಾಜಾವಾಗಿಡಲು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಗಾಜಿನ ಬಾಟಲಿಯನ್ನು ತೆಗೆದುಕೊಂಡು ಅದಕ್ಕೆ ವಿನೆಗರ್ ಹಾಕಬೇಕು. ಈಗಾಗಲೇ ಕತ್ತರಿಸಿಟ್ಟ ಶುಂಠಿಯನ್ನು ಈ ಬಾಟಲಿಗೆ ಹಾಕಿಟ್ಟರೆ ಒಂದು ತಿಂಗಳವರೆಗೆ ಶುಂಠಿಯು ಹಾಳಾಗುವುದಿಲ್ಲ.
  • ಶುಂಠಿ ಪೇಸ್ಟ್ ಮಾಡಿಟ್ಟರೆ ಬೇಗನೇ ಕೆಡುವುದಿಲ್ಲ. ಶುಂಠಿ ಪೇಸ್ಟನ್ನು ರೆಫ್ರಿಜರೇಟರ್ನಲ್ಲಿ ಒಂದು ತಿಂಗಳು ಸಂಗ್ರಹಿಸಬಹುದು.
  • ಶುಂಠಿಯು ಹೆಚ್ಚು ದಿನಗಳ ಕಾಲ ಬಾಳಿಕೆ ಬರಬೇಕಾದರೆ ಬಿಸಿಲಿನಲ್ಲಿ ಒಣಗಿಸಬೇಕು. ಚೆನ್ನಾಗಿ ಆರಿದ ನಂತರ ನುಣ್ಣಗೆ ಶುಂಠಿಯನ್ನು ಪುಡಿ ಮಾಡಿ ಸಂಗ್ರಹಿಟ್ಟರೆ ಕೆಡುವುದಿಲ್ಲ.
  • ಶುಂಠಿಯನ್ನು ತುಂಡು ತುಂಡುಗಳಾಗಿ ಕತ್ತರಿಸಿ ಜಿಪ್ ಇರುವ ಲಾಕ್ ಬ್ಯಾಗ್‌ನಲ್ಲಿ ಹಾಕಿಟ್ಟರೆ ಕನಿಷ್ಠ ಮೂರು ವಾರಗಳವರೆಗೆ ಕೆಡುವುದಿಲ್ಲ, ತಾಜಾವಾಗಿರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್