AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಒಂದೇ ಕಡೆ ಬರೋಬ್ಬರಿ 28 ತರಹದ ಟೀಗಳು ಸಿಗುತ್ತೆ: ಯಾವುವು? ಎಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

ನೀವು ಟೀ ಪ್ರಿಯರಾಗಿದ್ದರೆ ದೇಸಿ, ಪಾನ್, ರೋಸ್, ವೆನಿಲಾ, ಮಸಾಲ ಹೀಗೆ ವಿಭಿನ್ನ ಫ್ಲೇವರ್​​ಗಳ ಟೀಗಳನ್ನು ಸವಿಯಬಹುದಾಗಿದೆ.

ಬೆಂಗಳೂರಿನಲ್ಲಿ ಒಂದೇ ಕಡೆ   ಬರೋಬ್ಬರಿ 28 ತರಹದ ಟೀಗಳು ಸಿಗುತ್ತೆ: ಯಾವುವು? ಎಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ
ಟೀ ಫ್ಯೊಷನ್​ ಬೆಂಗಳೂರು
ಅಕ್ಷತಾ ವರ್ಕಾಡಿ
|

Updated on:Feb 18, 2023 | 6:03 PM

Share

ಸಾಮಾನ್ಯ ಟೀ ಎಂದಾಕ್ಷಣ 5ರಿಂದ 6 ಬಗೆಯ ಟೀ ನೀವು ಕುಡಿದಿರುತ್ತೀರಿ. ಆದ್ರೇ 28 ಬಗೆಯ ಟೀ ಸಿಗ್ತಾ ಇದೆ ಒಂದೇ ಕಡೆ. ಟೀ ಮಾತ್ರವಲ್ಲದೇ ಇಲ್ಲಿನ ಕಾಫಿ ಹಾಗೂ ಸ್ನ್ಯಾಕ್ ಕೂಡ ಸಕ್ಕತ್ತ್ ಫೇಮಸ್. ಬೆಂಗಳೂರಿನಲ್ಲಿ ಒಂದೇ ಸೂರಿನಡಿ 28 ಬಗೆಯ ಟೀ ಸಿಕ್ತಾ ಇರೋದು ಟೀ ಪ್ರಿಯರಿಗಂತೂ ಖುಷಿಯ ವಿಚಾರ. ಬೆಂಗಳೂರಿನ ಮಲ್ಲೇಶ್ವರಂ 14th ಕ್ರಾಸ್​​ನಲ್ಲಿ ಇತ್ತೀಚೆಗಷ್ಟೇ ಪ್ರಾರಂಭವಾದ ಟೀ ಫ್ಯೊಷನ್​ ವಿಭಿನ್ನ ಬಗೆಯ ಮಟ್ಕಾ ಟೀ ಯಿಂದಲೇ ಸಕ್ಕತ್ತ್ ಆಗಿ ಫೇಮಸ್ ಆಗಿದೆ.

ನೀವು ಟೀ ಪ್ರಿಯರಾಗಿದ್ದರೆ ದೇಸಿ, ಪಾನ್, ರೋಸ್, ವೆನಿಲಾ, ಮಸಾಲ ಹೀಗೆ ವಿಭಿನ್ನ ಫ್ಲೇವರ್​​ಗಳ ಟೀಗಳನ್ನು ಸವಿಯಬಹುದಾಗಿದೆ. ಜೊತೆಗೆ ಕಾಫಿ ಹಾಗೂ ಸ್ನ್ಯಾಕ್ ಕೂಡ ಲಭ್ಯವಿದೆ. ಸ್ನ್ಯಾಕ್​ ಅಲ್ಲಿಯೂ ಕೂಡ ಪೈನಾಪಲ್ ಬಜ್ಜಿ, ಕ್ಯಾಬ್ಸಿಕಮ್ ಬಜ್ಜಿ, ಮಂಡಕ್ಕಿ ಹೀಗೆ ಸಾಕಷ್ಟು ವೆರೈಟಿಗಳನ್ನು ಕಾಣಬಹುದು. ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದರೂ ಕೂಡ ಸಕ್ಕತ್ತ್ ಆಗಿ ಫೇಮಸ್ ಆಗಿದೆ. ಇಲ್ಲಿನ ವಿಶಿಷ್ಟ ಶೈಲಿ ಹಾಗೂ ರುಚಿಯಿಂದಾಗಿ ಟೀ ಪ್ರಿಯ ತಮ್ಮ ರಿವ್ಯೂವ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಂಡಿದ್ದಾರೆ.

ಇತ್ತೀಚಿಗಷ್ಟೇ ಬೆಂಗಳೂರು ಫುಡ್​​​​ ಬಾಂಬ್ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಇಲ್ಲಿದೆ.

ಇದನ್ನೂ ಓದಿ: ​​​ಮನೆಯಲ್ಲಿ ಸುಲಭವಾಗಿ ಮಾಡುಬಹುದು ವೈನ್, ಇಲ್ಲಿದೆ ರೆಸಿಪಿ ಟಿಪ್ಸ್

ಮಂಗಳವಾರ ಒಂದು ದಿನ ಹೊರತು ಪಡಿಸಿ ವಾರದ ಉಳಿದೆಲ್ಲಾ ದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ತೆರೆದಿರುತ್ತದೆ. 28 ಬಗೆಯ ಟೀಗಳು 15 ರೂಪಾಯಿಂದ 90 ರೂಪಾಯಿಗಳ ವರೆಗಿನ ಟೀಗಳನ್ನು ಕಾಣಬಹುದು. ಜೊತೆಗೆ 8 ಬಗೆಯ ಕಾಫಿ ಹಾಗೂ ಬಜ್ಜಿ ಬೋಂಡಗಳು ಕೈಗೆಟ್ಟಕುವ ದರದಲ್ಲಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 5:45 pm, Sat, 18 February 23

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ