Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಒಂದೇ ಕಡೆ ಬರೋಬ್ಬರಿ 28 ತರಹದ ಟೀಗಳು ಸಿಗುತ್ತೆ: ಯಾವುವು? ಎಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

ನೀವು ಟೀ ಪ್ರಿಯರಾಗಿದ್ದರೆ ದೇಸಿ, ಪಾನ್, ರೋಸ್, ವೆನಿಲಾ, ಮಸಾಲ ಹೀಗೆ ವಿಭಿನ್ನ ಫ್ಲೇವರ್​​ಗಳ ಟೀಗಳನ್ನು ಸವಿಯಬಹುದಾಗಿದೆ.

ಬೆಂಗಳೂರಿನಲ್ಲಿ ಒಂದೇ ಕಡೆ   ಬರೋಬ್ಬರಿ 28 ತರಹದ ಟೀಗಳು ಸಿಗುತ್ತೆ: ಯಾವುವು? ಎಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ
ಟೀ ಫ್ಯೊಷನ್​ ಬೆಂಗಳೂರು
Follow us
ಅಕ್ಷತಾ ವರ್ಕಾಡಿ
|

Updated on:Feb 18, 2023 | 6:03 PM

ಸಾಮಾನ್ಯ ಟೀ ಎಂದಾಕ್ಷಣ 5ರಿಂದ 6 ಬಗೆಯ ಟೀ ನೀವು ಕುಡಿದಿರುತ್ತೀರಿ. ಆದ್ರೇ 28 ಬಗೆಯ ಟೀ ಸಿಗ್ತಾ ಇದೆ ಒಂದೇ ಕಡೆ. ಟೀ ಮಾತ್ರವಲ್ಲದೇ ಇಲ್ಲಿನ ಕಾಫಿ ಹಾಗೂ ಸ್ನ್ಯಾಕ್ ಕೂಡ ಸಕ್ಕತ್ತ್ ಫೇಮಸ್. ಬೆಂಗಳೂರಿನಲ್ಲಿ ಒಂದೇ ಸೂರಿನಡಿ 28 ಬಗೆಯ ಟೀ ಸಿಕ್ತಾ ಇರೋದು ಟೀ ಪ್ರಿಯರಿಗಂತೂ ಖುಷಿಯ ವಿಚಾರ. ಬೆಂಗಳೂರಿನ ಮಲ್ಲೇಶ್ವರಂ 14th ಕ್ರಾಸ್​​ನಲ್ಲಿ ಇತ್ತೀಚೆಗಷ್ಟೇ ಪ್ರಾರಂಭವಾದ ಟೀ ಫ್ಯೊಷನ್​ ವಿಭಿನ್ನ ಬಗೆಯ ಮಟ್ಕಾ ಟೀ ಯಿಂದಲೇ ಸಕ್ಕತ್ತ್ ಆಗಿ ಫೇಮಸ್ ಆಗಿದೆ.

ನೀವು ಟೀ ಪ್ರಿಯರಾಗಿದ್ದರೆ ದೇಸಿ, ಪಾನ್, ರೋಸ್, ವೆನಿಲಾ, ಮಸಾಲ ಹೀಗೆ ವಿಭಿನ್ನ ಫ್ಲೇವರ್​​ಗಳ ಟೀಗಳನ್ನು ಸವಿಯಬಹುದಾಗಿದೆ. ಜೊತೆಗೆ ಕಾಫಿ ಹಾಗೂ ಸ್ನ್ಯಾಕ್ ಕೂಡ ಲಭ್ಯವಿದೆ. ಸ್ನ್ಯಾಕ್​ ಅಲ್ಲಿಯೂ ಕೂಡ ಪೈನಾಪಲ್ ಬಜ್ಜಿ, ಕ್ಯಾಬ್ಸಿಕಮ್ ಬಜ್ಜಿ, ಮಂಡಕ್ಕಿ ಹೀಗೆ ಸಾಕಷ್ಟು ವೆರೈಟಿಗಳನ್ನು ಕಾಣಬಹುದು. ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದರೂ ಕೂಡ ಸಕ್ಕತ್ತ್ ಆಗಿ ಫೇಮಸ್ ಆಗಿದೆ. ಇಲ್ಲಿನ ವಿಶಿಷ್ಟ ಶೈಲಿ ಹಾಗೂ ರುಚಿಯಿಂದಾಗಿ ಟೀ ಪ್ರಿಯ ತಮ್ಮ ರಿವ್ಯೂವ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಂಡಿದ್ದಾರೆ.

ಇತ್ತೀಚಿಗಷ್ಟೇ ಬೆಂಗಳೂರು ಫುಡ್​​​​ ಬಾಂಬ್ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಇಲ್ಲಿದೆ.

ಇದನ್ನೂ ಓದಿ: ​​​ಮನೆಯಲ್ಲಿ ಸುಲಭವಾಗಿ ಮಾಡುಬಹುದು ವೈನ್, ಇಲ್ಲಿದೆ ರೆಸಿಪಿ ಟಿಪ್ಸ್

ಮಂಗಳವಾರ ಒಂದು ದಿನ ಹೊರತು ಪಡಿಸಿ ವಾರದ ಉಳಿದೆಲ್ಲಾ ದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ತೆರೆದಿರುತ್ತದೆ. 28 ಬಗೆಯ ಟೀಗಳು 15 ರೂಪಾಯಿಂದ 90 ರೂಪಾಯಿಗಳ ವರೆಗಿನ ಟೀಗಳನ್ನು ಕಾಣಬಹುದು. ಜೊತೆಗೆ 8 ಬಗೆಯ ಕಾಫಿ ಹಾಗೂ ಬಜ್ಜಿ ಬೋಂಡಗಳು ಕೈಗೆಟ್ಟಕುವ ದರದಲ್ಲಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 5:45 pm, Sat, 18 February 23

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ