AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ತೊಡುವ ಸ್ಟೈಲಿಶ್​ ಡ್ರೆಸ್​ಗಳು ಹೀಗಿರಲಿ; ಧರಿಸಿದ ನಿಮಗೂ ಹಿತವೆನಿಸಲಿ

ಬೇಸಿಗೆಯ ಬೆವರಿಗೆ ಮೈಗಂಟುವ ವಸ್ತ್ರದಿಂದ ಆದಷ್ಟು ದೂರವಿದ್ದು ಸಡಿಲವಾದ ಉಡುಪಿನ ಜತೆಗೆ ಸ್ಟೈಲಿಶ್​ ಆಗುವಂತಹ ಡ್ರೆಸ್​ ಬಳಸಿ.

ಬೇಸಿಗೆಯಲ್ಲಿ ತೊಡುವ ಸ್ಟೈಲಿಶ್​ ಡ್ರೆಸ್​ಗಳು ಹೀಗಿರಲಿ; ಧರಿಸಿದ ನಿಮಗೂ ಹಿತವೆನಿಸಲಿ
ಸಾಂದರ್ಭಿಕ ಚಿತ್ರ
shruti hegde
| Edited By: |

Updated on: Jun 12, 2021 | 9:48 AM

Share

ಬಿಸಿಲು ಎಂಬ ಪದ ಕೇಳಿದಾಕ್ಷಣವೇ ಮೈ ಸುಡುವಂತೆ ಭಾಸವಾಗುತ್ತದೆ. ಬೇಸಿಗೆಯಲ್ಲಂತೂ ಹೊರಬೀಳಲೂ ಸಾಧ್ಯವಿಲ್ಲ. ಹೀಗಿರುವಾಗ ಭಾರವಾದ ಉಡುಪು ಧರಿಸಲು ಸಾಧ್ಯವೇ ಇಲ್ಲ. ಬೇಸಿಗೆಯಲ್ಲಿ ಎಂತಹ ಬಟ್ಟೆ ಧರಿಸಿದರೆ ಹಿತವೆನಿಸುತ್ತದೆ. ಹುಡುಗಿಯರಂತೂ ನೋಡಲು ಸ್ಟೈಲಿಶ್​ ಆಗುವ ಬಟ್ಟೆಗಳನ್ನೇ ಹೆಚ್ಚು ಆರಿಸುವುದು ಸಾಮಾನ್ಯ. ಸುಡು ಬಿಸಿಲಿನ ಬೆವರಿನಲ್ಲೂ ಸುಂದರವಾಗಿ ಕಾಣುವ ಒಂದಷ್ಟು ಉಡುಗೆಯ ರಹಸ್ಯದ ಕುರಿತು ತಿಳಿಯೋಣ.

ಉಡುಪು ಅಂದಾಕ್ಷಣ ಒಂದಷ್ಟು ಆಲೋಚನೆಗಳು ಎದುರಾಗುತ್ತವೆ. ಧರಿಸುವ ಬಟ್ಟೆ ನಮಗೆ ಸರಿ ಹೊಂದಬೇಕು. ನೋಡಲು ಲುಕ್​​ ಅನಿಸಬೇಕು. ಬಿಸಿಲಿನಲ್ಲಿ ರಂಗು ರಂಗಿನ ಬಟ್ಟೆ ಧರಿಸಲು ಸಾಧ್ಯವೇ ಇಲ್ಲ. ಹಾಗಿದ್ದಾಗ ಯಾವ ತರಹದ ಬಟ್ಟೆ ಧರಿಸಬಹುದು ಎಂಬುದಕ್ಕೆ ಕೆಲವು ಸಿಂಪಲ್​ ಟಿಪ್ಸ್​​ಗಳು ಇಲ್ಲಿವೆ.

ಬೇಸಿಗೆಯಲ್ಲಿ ಟೀ-ಶರ್ಟ್​ಗಿಂತ ಉತ್ತಮ ಉಡುಪು ಇನ್ನೊಂದಿಲ್ಲ. ಧರಿಸಲು ಹಗುರವಾಗಿರುತ್ತದೆ. ಹಾಗೂ ಮೈಗೆ ಅಂಟಿಕೊಳ್ಳುವ ಬಟ್ಟೆಯಲ್ಲ. ಮೊದಲೆಲ್ಲಾ ಹುಡುಗರು ಮಾತ್ರ ಟೀಶರ್ಟ್​ಗಳನ್ನು ಧರಿಸುತ್ತಿದ್ದರು. ಆದರೆ ಈಗಿನ ದಿನಮಾನಗಳು ಹಾಗಿಲ್ಲ. ಹುಡುಗಿಯರೂ ಕೂಡಾ ಅಂತಹ ಬಟ್ಟೆಗಳನ್ನೂ ಧರಿಸುತ್ತಾರೆ. ಹಾಗಾಗಿ ಬೇಸಿಗೆಯಲ್ಲಿನ ಬೆವರಿಗೆ ಅಂಟಿಕೊಳ್ಳದ ಟೀ-ಶರ್ಟ್​ಗಳನ್ನು ಧರಿಸಿ.

ಹುಡುಗಿಯರು ಸ್ಕರ್ಟ್​ ಧರಿಸಬಹುದು. ಸ್ಕರ್ಟ್​ ಕೂಡಾ ಈಗಿನ ದಿನಗಳಲ್ಲಿ ಟ್ರೆಂಡ್​ ಆಗಿದೆ. ಅದೆಷ್ಟೋ ಹುಡುಗಿಯರಿಗೆ ಸ್ಕರ್ಟ್​ ಧರಿಸುವುದು ಇಷ್ಟವೂ ಕೂಡಾ. ಬೇಸಿಗೆಯಲ್ಲಿ ಹಗುರವಾದ ಸ್ಕರ್ಟ್​ ಧರಿಸುವುದು ಉತ್ತಮ. ಬೇಸಿಗೆಯಲ್ಲಿ ಸೆಕೆಯಿಂದ ದೂರವಿರಬಹುದು ಹಾಗೂ ಧರಿಸಲು ಹಗುರವಾದ ಉಡುಪು ಕೂಡಾ ಹೌದು.

ಸಡಿಲವಾದ ಉಡುಪಿನ ಜತೆಗೆ ಸ್ಲೀವ್​ಲೆಸ್​​ ಟಾಪ್​ಗಳು ಹೆಚ್ಚು ಟ್ರೆಂಡ್​ ಆಗಿಬಿಟ್ಟಿದೆ. ಹೆಚ್ಚು ಹತ್ತಿ ಬಟ್ಟೆಯ ಉಡುಪನ್ನು ಬಳಸಿ. ಧರಿಸಲು ಹಗುರವಾಗಿರುತ್ತದೆ ಹಾಗೂ ಉಡುಪು ಧರಿಸಿದಾಕ್ಷಣ ಹಿತವೆನಿಸುತ್ತದೆ. ಬೇಸಿಗೆಯ ಬೆವರಿಗೆ ಮೈಗಂಟುವ ವಸ್ತ್ರದಿಂದ ಆದಷ್ಟು ದೂರವಿದ್ದು ಸಡಿಲವಾದ ಉಡುಪಿನ ಜತೆಗೆ ಸ್ಟೈಲಿಶ್​ ಆಗುವಂತಹ ಡ್ರೆಸ್​ ಬಳಸಿ.

ಇದನ್ನೂ ಓದಿ:

ಬೇಸಿಗೆಯಲ್ಲಿ ಬೆವರುವ ಮುನ್ನ ಈ ಅಂಶಗಳು ನೆನಪಿರಲಿ.. ನಿಮ್ಮ ಆಹಾರ ಪದ್ಧತಿ ಕೊಂಚ ಬದಲಾಗಲಿ

Follow Us
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್