AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ಬೆವರುವ ಮುನ್ನ ಈ ಅಂಶಗಳು ನೆನಪಿರಲಿ.. ನಿಮ್ಮ ಆಹಾರ ಪದ್ಧತಿ ಕೊಂಚ ಬದಲಾಗಲಿ

ಚಳಿಗಾಲಕ್ಕೆ ವಿದಾಯ ಹೇಳುವ ಸಂದರ್ಭದಲ್ಲಿ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಆರೋಗ್ಯ ಚೆನ್ನಾಗಿದ್ದರಷ್ಟೇ ಉಳಿದ ಖುಷಿಗಳನ್ನು ಅನುಭವಿಸುವುದು ಸಾಧ್ಯ ಎಂಬುದನ್ನು ಮರೆಯಬೇಡಿ.

ಬೇಸಿಗೆಯಲ್ಲಿ ಬೆವರುವ ಮುನ್ನ ಈ ಅಂಶಗಳು ನೆನಪಿರಲಿ.. ನಿಮ್ಮ ಆಹಾರ ಪದ್ಧತಿ ಕೊಂಚ ಬದಲಾಗಲಿ
ಪ್ರಾತಿನಿಧಿಕ ಚಿತ್ರ
Skanda
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jan 21, 2021 | 8:23 PM

Share

ಚಳಿಗಾಲ ಇನ್ನೇನು ತನ್ನ ಕೆಲಸ ಪೂರೈಸಿ ಹೊರಡಲಿದೆ. ಇಷ್ಟು ದಿನ ಚಳಿಯಲ್ಲಿ ನಡಗುತ್ತಾ, ಬೆಚ್ಚಗೆ ಹೊದ್ದು ಮಲಗುತ್ತಿದ್ದ ದೇಹಕ್ಕೆ ಸೆಖೆ ಬೆವರಿಳಿಸುವ ಕಾಲ ಸನ್ನಿಹಿತವಾಗುತ್ತಿದೆ. ಒಂದು ಕಾಲ ಮುಗಿದು ಇನ್ನೊಂದು ಆರಂಭವಾಗುವುದು ಪ್ರಕೃತಿ ಸಹಜವಾದರೂ ಆ ಸಂದರ್ಭದಲ್ಲಿ ನಮ್ಮ ದೇಹಕ್ಕೆ ಸಣ್ಣಮಟ್ಟದ ಆರೈಕೆಯನ್ನಾದರೂ ನೀಡಬೇಕು. ಆದರೆ, ಈಗಿನ ಒತ್ತಡದ ಬದುಕಲ್ಲಿ ನಾವು ನಮ್ಮ ಆರೋಗ್ಯವನ್ನೇ ಕಡೆಗಣಿಸಿ ಕಾಲದ ಹಿಂದೆ ಒಂದೇ ಉಸಿರಿನಲ್ಲಿ ಓಡುತ್ತಿರುತ್ತೇವೆ. ಕಾಲ ಬದಲಾದಾಗ ಅದಕ್ಕೆ ಒಗ್ಗಿಕೊಳ್ಳಲು ನಮ್ಮ ದೇಹಕ್ಕೆ ಅವಕಾಶವನ್ನು ಕೊಡಬೇಕು ಎನ್ನುವುದನ್ನು ಯೋಚಿಸುವುದೇ ಇಲ್ಲ.

ಅದಕ್ಕಾಗಿಯೇ ನಾವು ನಿಮಗಾಗಿ ಕೆಲವು ಸರಳ ಸಲಹೆಗಳನ್ನು ನೀಡುತ್ತಿದ್ದೇವೆ. ಚಳಿಗಾಲಕ್ಕೆ ವಿದಾಯ ಹೇಳುವ ಸಂದರ್ಭದಲ್ಲಿ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಆರೋಗ್ಯ ಚೆನ್ನಾಗಿದ್ದರಷ್ಟೇ ಉಳಿದ ಖುಷಿಗಳನ್ನು ಅನುಭವಿಸುವುದು ಸಾಧ್ಯ ಎಂದು ಮನದಲ್ಲಿಟ್ಟುಕೊಂಡು ಈ ಸಲಹೆಗಳನ್ನು ರೂಢಿಸಿಕೊಳ್ಳಿ.

ನಿರ್ಜಲೀಕರಣ ದೇಹಕ್ಕೆ ಅಪಾಯ.. ಬೇಸಿಗೆಯ ಬೇಗೆಯಲ್ಲಿ ದೇಹ ಒಂದೇ ಸಮನೆ ಬೆವರು ಸುರಿಸುತ್ತದೆ. ಬೆವರು ನಮ್ಮ ದೇಹದಲ್ಲಿರುವ ನೀರಿನಂಶವನ್ನು ಹೊರ ಹಾಕುವುದರಿಂದ ಆ ಸಂದರ್ಭದಲ್ಲಿ ನಿರ್ಜಲೀಕರಣದ ಅಪಾಯ ಇರುತ್ತದೆ. ಆದ್ದರಿಂದ ಹೆಚ್ಚೆಚ್ಚು ನೀರು ಕುಡಿಯುವ ಮೂಲಕ ದೇಹದ ಸಮತೋಲನತೆ ಕಾಪಾಡಿಕೊಳ್ಳಬೇಕು. ಆದರೆ, ಸೆಖೆಯಾಗುತ್ತಿದೆ ಎಂಬ ಕಾರಣಕ್ಕೆ ಅತಿ ತಂಪಾಗಿರುವ ನೀರು ಕುಡಿಯಬೇಡಿ.

ಎಳನೀರು ಕುಡಿದು ತಂಪಾಗಿರಿ.. ಸ್ವಾಭಾವಿಕವಾಗಿ ಕೈಗೆಟಕುವ ಅತ್ಯಂತ ಉತ್ತಮ ಪಾನೀಯ. ನಿಮ್ಮ ದೇಹವನ್ನು ತಂಪಾಗಿಡುವುದರ ಜೊತೆ ಜೊತೆಗೆ ಆರೋಗ್ಯವರ್ಧಕವಾಗಿಯೂ ಕೆಲಸ ಮಾಡಬಲ್ಲದು. ಕೃತಕ ಪಾನೀಯಗಳ ಮೊರೆ ಹೋಗುವುದಕ್ಕಿಂತ ಎಳನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.

ಹಣ್ಣು, ತರಕಾರಿ ತಿಂದು ಹಾಯಾಗಿರಿ.. ಅತಿ ಹೆಚ್ಚು ಕರಿದ ಪದಾರ್ಥ ಅಥವಾ ಜಂಕ್​ ಫುಡ್​ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಬೇಸಿಗೆಯಲ್ಲಿ ಅವುಗಳಿಂದ ಇನ್ನೂ ತುಸು ದೂರ ಉಳಿದರೆ ಒಳ್ಳೆಯದು. ಅವುಗಳ ಬದಲು ಹಣ್ಣು, ತರಕಾರಿ, ಸೊಪ್ಪು ಸೇವಿಸಲು ಆರಂಭಿಸಿ. ಕಲ್ಲಂಗಡಿ, ಸೌತೆಕಾಯಿ, ಪುದೀನಾ, ಹಸಿರು ತರಕಾರಿ, ನಿಂಬೆಹಣ್ಣಿನ ಪಾನಕ.. ಇವೆಲ್ಲವೂ ನಿಮಗೆ ಶಕ್ತಿಯನ್ನೂ ನೀಡುತ್ತವೆ ಮತ್ತು ಬೇಸಿಗೆಯ ಕಷ್ಟಗಳನ್ನೂ ದೂರ ಮಾಡುತ್ತವೆ.

ಮೊಸರು, ಮಜ್ಜಿಗೆ ಸೇವನೆ ಶುರುಮಾಡಿ.. ಮೊಸರು, ಮಜ್ಜಿಗೆ ನಮ್ಮ ದೈನಂದಿನ ಆಹಾರದಲ್ಲಿ ಸೇರಿಕೊಂಡಿದೆಯಾದರೂ ನಾವು ಅದಕ್ಕೆ ವಿಶೇಷ ಮಹತ್ವ ನೀಡುವುದು ಕಡಿಮೆ. ಆದರೆ, ಈ ರುಚಿಕರ ಆಹಾರ ಬೇಸಿಗೆ ಸಂದರ್ಭದಲ್ಲಿ ನಮಗರಿವಿಲ್ಲದಂತೆಯೇ ನಮ್ಮನ್ನು ಕಾಪಾಡುತ್ತವೆ. ಆದ್ದರಿಂದ ಮೊಸರು, ಮಜ್ಜಿಗೆ ಪದಾರ್ಥಗಳನ್ನು ಜಾಸ್ತಿ ಸೇವಿಸಿ. ಮೊಸರಿನಿಂದ ವಿವಿಧ ಬಗೆಯ ಅಡುಗೆ (ಪದಾರ್ಥ) ಮಾಡಬಹುದು ಅವುಗಳನ್ನು ನಿಮ್ಮ ಊಟದ ಭಾಗವಾಗಿಸಿಕೊಳ್ಳಿ. ಅಂತೆಯೇ ಮಜ್ಜಿಗೆ, ಲಸ್ಸಿಯನ್ನು ಆಗಾಗ ಕುಡಿಯುತ್ತಿರಿ.

Published On - 8:16 pm, Thu, 21 January 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ