AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂದಲಿನ ಆರೈಕೆ ಬಗ್ಗೆ ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳಿಗೆ ಇಲ್ಲಿದೆ ಉತ್ತರ

ಕೂದಲಿನ ಆರೈಕೆ ಕುರಿತು ಸಾಕಷ್ಟು ಮಿಥ್ಯಗಳಿವೆ, ಈಗಿನ ಜೀವನಶೈಲಿಯಲ್ಲಿ ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ, ಕೂದಲಿನ ಆರೈಕೆ ಬಗ್ಗೆ ಯಾರು ಏನೇ ಹೇಳಿದರೂ ಅಲರ್ಟ್ ಆಗಿಬಿಡುತ್ತೇವೆ, ಒಮ್ಮೆ ನೀವು ಪಾಲಿಸಬೇಕಾದ ಸಲಹೆಗಳ ಬಗ್ಗೆ ತಿಳಿಯುವುದು ಅಗತ್ಯ.

ಕೂದಲಿನ ಆರೈಕೆ ಬಗ್ಗೆ ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳಿಗೆ ಇಲ್ಲಿದೆ ಉತ್ತರ
ಕೂದಲು ಆರೈಕೆ
TV9 Web
| Edited By: |

Updated on: May 08, 2022 | 12:38 PM

Share

ಕೂದಲಿನ ಆರೈಕೆ ಬಗ್ಗೆ ಒಬ್ಬೊಬ್ಬರು ಒಂದೊಂದು ಸಲಹೆಯನ್ನು ನೀಡುತ್ತಾರೆ, ಆಗಾಗ ಕೂದಲು ಕತ್ತರಿಸಿದರೆ ದಪ್ಪವಾಗಿ ಬೆಳೆಯುತ್ತದೆ. ಶ್ಯಾಂಪೂ ಹಾಕಿದ ಬಳಿಕ ಕಂಡೀಷನರ್ ಬಳಕೆ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ ಎಂಬೆಲ್ಲಾ ಸಲಹೆಗಳನ್ನು ನೀಡುತ್ತಾರೆ. ಈಗಿನ ಜೀವನಶೈಲಿಯಲ್ಲಿ ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ, ಕೂದಲಿನ ಆರೈಕೆ ಬಗ್ಗೆ ಯಾರು ಏನೇ ಹೇಳಿದರೂ ಅಲರ್ಟ್ ಆಗಿಬಿಡುತ್ತೇವೆ, ಒಮ್ಮೆ ನೀವು ಪಾಲಿಸಬೇಕಾದ ಸಲಹೆಗಳ ಬಗ್ಗೆ ತಿಳಿಯುವುದು ಅಗತ್ಯ.

ಆಯಿಲಿ ಕೂದಲಾಗಿದ್ದರೆ ಶ್ಯಾಂಪೂ ಬಳಿಕ ಕಂಡೀಷನರ್ ಬಳಕೆ ಮಾಡಬೇಡಿ ಎಂದು ಕೆಲವರು ಸಲಹೆ ನೀಡುತ್ತಾರೆ ಆದರೆ ಕೂದಲಿನ ಸಂರಕ್ಷಣೆಗೆ ಶ್ಯಾಂಪೂ ಜತೆಯಲ್ಲಿ ಕಂಡೀನರ್ ಬಳಕೆ ಮಾಡಲೇಬೇಕು.

ಒಂದು ನೆರೆ ಕೂದಲು ಕಿತ್ತರೆ ಎರಡು ನೆರೆ ಕೂದಲು ಹುಟ್ಟುತ್ತದೆ ಎಂಬುದು ನಿಜವೇ?: ಒಂದು ಕೂದಲು ಕಿತ್ತ ತಕ್ಷಣ ಎರಡು ನೆರೆ ಕೂದಲು ಹುಟ್ಟುವುದಿಲ್ಲ. ಬದಲಿಗೆ ದೇಹದಲ್ಲಿ ಕೂದಲಿಗೆ ಅಗತ್ಯವಾದ ಪೋಷಕಾಂಶದ ಕೊರತೆ ಉಂಟಾದಾಗ ಅಥವಾ ಒತ್ತಡದ ಜೀವನ ಶೈಲಿಯಿಂದ ಅಕಾಲಿಕ ನೆರೆ ಮೂಡುತ್ತದೆ. ಮೊದ ಮೊದಲು ಅಲ್ಲಲ್ಲಿ ಒಂದೊಂದು ನೆರೆ ಕೂದಲು ಕಾಣಿಸಬಹುದು. ನಂತರ ನೆರೆ ಕೂದಲು ಸಂಖ್ಯೆ ಹೆಚ್ಚಾಗುವುದು. ಆದ್ದರಿಂದ ಕೀಳುವುದರಿಂದ ನೆರೆ ಕೂದಲು ಹೆಚ್ಚಾಯಿತು ಎಂದು ಭಾವಿಸುವುದು ತಪ್ಪು. ನೆರೆಕೂದಲು ಬಂದರೆ ಅದನ್ನು ಕೀಳುವುದು ಮಾಡಬೇಡಿ. ಅದು ಕಾಣಬಾರದು ಎಂದಾದರೆ ಡೈ ಮಾಡಿ ಅಥವಾ ಹೆನ್ನಾ ಹಚ್ಚಿ.

ಕೂದಲನ್ನು ಕತ್ತರಿಸಿದರೆ ದಪ್ಪವಾಗಿ ಬೆಳೆಯುತ್ತದೆ: ಕೂದಲು ಕತ್ತರಿಸುವುದರಿಂದ ಕೂದಲು ದಪ್ಪವಾಗಿ ಬೆಳೆಯುವುದಿಲ್ಲ. ಕೂದಲು ದಪ್ಪವಾಗಿ ಬೆಳೆಯಬೇಕಾದರೆ ಕೂದಲಿನ ಬುಡದ ಆರೈಕೆ ಮಾಡಬೇಕು. ಕೂದಲು ಕವಲೊಡೆದಿದ್ದರೆ ಕತ್ತರಿಸಿದರೆ ಒಳ್ಳೆಯದು.

ಬೆಲೆ ಬಾಳುವ ಶ್ಯಾಂಪೂಗಳನ್ನು ಕೂದಲಿಗೆ ಬಳಸಿದರೆ ಕೂದಲು ದಪ್ಪವಾಗಿ ಬೆಳೆಯುತ್ತದೆ ಎಂಬುದು ಸತ್ಯವೇ?: ಕೂದಲು ದಪ್ಪವಾಗಿ ಬೆಳೆಯಲು ಆರೋಗ್ಯಕರ ಜೀವನ ಶೈಲಿ ಮತ್ತು ಆಹಾರ , ಹಾಗೂ ಪರಿಸರ ಅಗತ್ಯ ಹೊರತು ಬೆಲೆ ಬಾಳುವ ಶ್ಯಾಂಪೂ ಕಂಡೀಷನರ್‌ಗಳಲ್ಲ!

ಶ್ಯಾಂಪೂ ಹಾಕಿದ ಬಳಿಕ ಕಂಡೀಷನರ್: ಇದು ಹೆಚ್ಚಿನವರು ಮಾಡುವ ತಪ್ಪು. ಕಂಡೀಷನರ್ ಹಚ್ಚಿದ ಬಳಿಕ ಶ್ಯಾಂಪೂ ಹಚ್ಚುವುದು ಕೂದಲಿನ ಆರೈಕೆಗೆ ಒಳ್ಳೆಯದು. ಅದರಲ್ಲೂ ಮೊಟ್ಟೆಯನ್ನು ನ್ಯಾಚುರಲ್ ಕಂಡಿಷನರ್ ಆಗಿ ಬಸುವುದು ಕೂದಲಿನ ಆರೈಕೆಗೆ ತುಂಬಾ ಒಳ್ಳೆಯದು.

ಕೂದಲು ಉದುರುವಿಕೆ ಸೇರಿ ಇತರೆ ಸಮಸ್ಯೆಗಳಿದ್ದರೆ ವೈದ್ಯರನ್ನು  ಸಂಪರ್ಕಿಸಿ.

ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್