AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಾರಾತ್ಮಕ ಆಲೋಚನೆಗಳಿಂದ ಹೊರಬನ್ನಿ, ನಿಮ್ಮ ಮೇಲೆ ನಂಬಿಕೆ ಇರಲಿ

ಯಾವುದೇ ವಿಚಾರವಾಗಿರಲಿ ಅದು ನಿಮ್ಮಿಂದ ಸಾಧ್ಯವೇ ಎಂಬ ಬಗ್ಗೆ ನೂರಾರು ಬಾರಿ ಆಲೋಚನೆ ಮಾಡುತ್ತೀರಿ, ಆ ಯೋಚನೆ ಉತ್ತಮವೇ ಆದರೆ ಅಷ್ಟೆಲ್ಲಾ ಆಲೋಚಿಸಿ ಅದರಿಂದ ಹಿಂದೆ ಸರಿಯುವುದಿದೆಯಲ್ಲಾ ಅದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ.

ನಕಾರಾತ್ಮಕ ಆಲೋಚನೆಗಳಿಂದ ಹೊರಬನ್ನಿ, ನಿಮ್ಮ ಮೇಲೆ ನಂಬಿಕೆ ಇರಲಿ
Image Credit source: Healthshots.com
Follow us
ನಯನಾ ರಾಜೀವ್
|

Updated on: Aug 02, 2023 | 11:00 AM

ಯಾವುದೇ ವಿಚಾರವಾಗಿರಲಿ ಅದು ನಿಮ್ಮಿಂದ ಸಾಧ್ಯವೇ ಎಂಬ ಬಗ್ಗೆ ನೂರಾರು ಬಾರಿ ಆಲೋಚನೆ ಮಾಡುತ್ತೀರಿ, ಆ ಯೋಚನೆ ಉತ್ತಮವೇ ಆದರೆ ಅಷ್ಟೆಲ್ಲಾ ಆಲೋಚಿಸಿ ಅದರಿಂದ ಹಿಂದೆ ಸರಿಯುವುದಿದೆಯಲ್ಲಾ ಅದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ. ಏನೇ ಇರಲಿ ಮೊದಲು ನೀವು ಸಾಧಿಸಬಹುದು ಎಂಬ ಛಲ ನಿಮ್ಮಲ್ಲಿರಲಿ, ಒಂದೊಮ್ಮೆ ಪ್ರಯತ್ನ ಪಟ್ಟೂ ಯಶಸ್ಸು ಸಿಗದಿದ್ದರೆ, ನಿಮ್ಮ ಪ್ರಯತ್ನಕ್ಕೆ ಖುಷಿ ಪಡಿ. ಮೊದಲು ನಕಾರಾತ್ಮಕ ಆಲೋಚನೆಯನ್ನು ಮನಸ್ಸಿನಿಂದ ಹೊರ ಹಾಕಿ, ಎಲ್ಲವೂ ನಿಮ್ಮಿಂದ ಸಾಧ್ಯ ಎನ್ನುವ ಮನೋಭಾವ ಬೆಳೆಸಿಕೊಳ್ಳಿ.

ಯಾರಾದರೂ ನಿಮ್ಮ ವಿರುದ್ಧ ಮಾತನಾಡಿದಾಗ ಮುಖದಲ್ಲಿ ನಗು ಇರಲಿ ಯಾರಾದರೂ ನಿಮ್ಮ ವಿರುದ್ಧ ಮಾತನಾಡಿದಾಗ ಮುಖವನ್ನು ಕೆಳಗೆ ಹಾಕಿ ಅಳುಮುಂಜಿ ಮುಖಮಾಡಿಕೊಂಡು ನಿಲ್ಲಬೇಡಿ ಅಥವಾ ಅದೇ ವಿಚಾರವನ್ನು ಪದೇ ಪದೇ ಯೋಚಿಸುತ್ತಾ ಕೊರಗಬೇಡಿ, ಏನೇ ಹೇಳಿದರೂ ನಗು ಮುಖವಿರಲಿ, ಆಗ ನಿಮ್ಮ ವಿರುದ್ಧ ಮಾತನಾಡಿದವರೂ ತಲೆ ತಗ್ಗಿಸುತ್ತಾರೆ.

ಮತ್ತಷ್ಟು ಓದಿ: Yoga Tips: ಯೋಗದ ನಂತರ ಈ ತಪ್ಪುಗಳನ್ನು ತಪ್ಪಿತಪ್ಪಿಯೂ ಮಾಡಬೇಡಿ

ಆಗುವುದಿಲ್ಲ ಎಂದು ಹೇಳುವುದನ್ನು ಕಲಿಯಿರಿ ಎಲ್ಲರೂ ಹೇಳುವುದನ್ನು ಕೇಳಬೇಕೆಂದೇನಿಲ್ಲ, ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿಕೊಳ್ಳಬೇಡಿ, ನಿಮಗಿಷ್ಟವಿಲ್ಲದ್ದನ್ನು ಆಗುವುದಿಲ್ಲ ಎಂದು ನೇರವಾಗಿ ಹೇಳಿಬಿಡಿ.

ನಕಾರಾತ್ಮಕ ಚರ್ಚೆಯನ್ನು ತಪ್ಪಿಸಿ ಯಾವುದೋ ವಿಚಾರ ನಿಮ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವಂಥದ್ದಿದ್ದರೆ ಆ ಚರ್ಚೆಯನ್ನು ತಪ್ಪಿಸಿ.

ನಿಮ್ಮ ಬಗ್ಗೆ ಪ್ರೀತಿ ಇರಲಿ ನೀವು ಹಾಗೂ ನೀವು ಮಾಡುವ ಕೆಲಸದ ಬಗ್ಗೆ ಪ್ರೀತಿ ಇರಲಿ, ನಿಮ್ಮ ಖುಷಿಯಾಗಿ ಕೆಲಸವನ್ನು ಆಯ್ಕೆ ಮಾಡಿ, ಯಾವ ವಿಚಾರಗಳು ಅಥವಾ ಕೆಸಲಗಳನ್ನು ನಿಮಗೆ ದುಃಖವನ್ನುಂಟು ಮಾಡುತ್ತದೆ ಎಂದೆನಿಸಿದಾಗ ಅದರಿಂದ ಹೊರಬಂದುಬಿಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಉತ್ತರ ಕನ್ನಡ ಜಿಲ್ಲೆಯ 4 ತಾಲೂಕುಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ
ಉತ್ತರ ಕನ್ನಡ ಜಿಲ್ಲೆಯ 4 ತಾಲೂಕುಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ
ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿಯಾದ ಬಸ್, 20 ಜನ ಜಸ್ಟ್ ಮಿಸ್
ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿಯಾದ ಬಸ್, 20 ಜನ ಜಸ್ಟ್ ಮಿಸ್
ಮನಾಲಿಗೆ ಬರಲೇಬೇಡಿ, ಪಾಕ್​ಗಿಂತಾ ಕೆಟ್ಟದಾಗಿದೆ ಎಂದ ಮಹಿಳೆ
ಮನಾಲಿಗೆ ಬರಲೇಬೇಡಿ, ಪಾಕ್​ಗಿಂತಾ ಕೆಟ್ಟದಾಗಿದೆ ಎಂದ ಮಹಿಳೆ
ಕಳ್ಳತನ ಆರೋಪ, ಆರೋಪಿಯ ಶರ್ಟ್​ ಬಿಚ್ಚಿ, ಚಪ್ಪಲಿ ಹಾರ ಹಾಕಿದ ಪೊಲೀಸರು
ಕಳ್ಳತನ ಆರೋಪ, ಆರೋಪಿಯ ಶರ್ಟ್​ ಬಿಚ್ಚಿ, ಚಪ್ಪಲಿ ಹಾರ ಹಾಕಿದ ಪೊಲೀಸರು
ಶಿಗ್ಗಾಂವಿ ಗುತ್ತಿಗೆದಾರನ ಕೊಲೆ: ಆರೋಪಿ ಮನೆಗೆ ಬೆಂಕಿ ಹಚ್ಚಿದ ಸಂಬಂಧಿಕರು
ಶಿಗ್ಗಾಂವಿ ಗುತ್ತಿಗೆದಾರನ ಕೊಲೆ: ಆರೋಪಿ ಮನೆಗೆ ಬೆಂಕಿ ಹಚ್ಚಿದ ಸಂಬಂಧಿಕರು
VIDEO: ಮಗಾ... ಚೆನ್ನಾಗಿ ಹೋಗ್ತಿದೆ... ಆಂಗ್ಲರ ನಾಡಿನಲ್ಲಿ ಕನ್ನಡದ ಕಂಪು
VIDEO: ಮಗಾ... ಚೆನ್ನಾಗಿ ಹೋಗ್ತಿದೆ... ಆಂಗ್ಲರ ನಾಡಿನಲ್ಲಿ ಕನ್ನಡದ ಕಂಪು
ಮಣ್ಣೆತ್ತಿನ ಅಮಾವಾಸ್ಯೆ ಮಹತ್ವ ಹಾಗೂ ಆಚರಣೆ ಬಗ್ಗೆ ತಿಳಿಯಿರಿ
ಮಣ್ಣೆತ್ತಿನ ಅಮಾವಾಸ್ಯೆ ಮಹತ್ವ ಹಾಗೂ ಆಚರಣೆ ಬಗ್ಗೆ ತಿಳಿಯಿರಿ
Daily Horoscope: ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
Daily Horoscope: ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್